ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ

ವೈಶಾಖ ಹುಣ್ಣಿಮೆ ರಾತ್ರಿ

Hotei statue surrounded of t rees

ಶಾಲಿನಿ ಆರ್.

ಮನುಕುಲದ ಭಾಗ್ಯ
ನಮ್ಮ ಸರ್ವಾಥ ಸಿದ್ಧ/
ಲೋಕದ ಜನರ ದುಃಖ
ನಿವಾರಿಸಲರಿತು ಎದ್ದ//

ವೈಶಾಖ ಹುಣ್ಣಿಮೆಯ ರಾತ್ರಿ
ಹಳೆನೆನಪುಗಳ ಕಳಚಿತು/
ದಿವ್ಯಚಕ್ಷುವಿನಿಂದಾದ ಯೋಗ
ಜ್ಞಾನಜ್ಯೋತಿ ಬೆಳಗಿತು//

ದೇದೀಪ್ಯಮಾನ ಬೆಳಗದು
ಮನುಕುಲದ ತಮವ ಕಳಚಿತು/
ಧ್ಯಾನದೊಳಿದ್ದರು ಎಚ್ಚರವಾಗಿರುವ ಮನದ ನೇತ್ರ ಅರಳಿತು//

ಬಿಂದುವೊಂದು ಸಿಂಧುವಾದ
ಆನಂದದಾ ಮೊಗ/
ಅನಿರ್ವಚನೀಯ ಕಲ್ಮಷರಹಿತ
ಪರಮಾನಂದದಾ ಯೋಗ//

ಮಾನವ ಕುಲ ಒಂದು
ಆಸೆಯೇ ದುಃಖಕ್ಕೆ ಕಾರಣ ಎಂದ/
ಸಮ್ಯಕ್ ಬೋಧಿ’ ಸಿದ
ಅಷ್ಟಾಂಗ ಮಾರ್ಗ ಅರುಹಿದ//

ಬಹುಜನ ಹಿತಾಯ
ಬಹುಜನ ಸುಖಾಯ ಬೋಧಿಸಿದ /
ಮರಣ ಜನನದ ಅನಿವಾರ್ಯವೆಂದು
ನಿರ್ವಣದ ದಾರಿ ತೋರಿಸಿದ//

ಜಗದ ಅಮರಜ್ಯೋತಿಯಾಗಿ
ಅಮೃತಧಾರೆ ಹರಿಸಿದ/
ಧನ್ಯನಾದ ಗುರು
ನಮ್ಮ ಸರ್ವಾಥಸಿದ್ಧ ಬುದ್ಧನಾದ//

******

Leave a Reply

Back To Top