ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬುದ್ಧನಾಗಲಾರೆ….

Buddha Statue

ನಾಗರಾಜ ಹರಪನಹಳ್ಳಿ

 ಗಾಳಿಯ ಮುಗಿಲಲ್ಲಿ

ತೇಲಿದ ಮೋಡಗಳು

ಒಲವಿನ ಸರಿಗಮ ಹಾಡಿದವು

ದೂರದಲ್ಲಿದ್ದು ನೀನಾಡಿದ ಮಾತುಗಳು

ಮನದಲ್ಲಿ ಪ್ರೇಮ ಪಲ್ಲವಿಯಾದವು

ಸಿದ್ಧಾರ್ಥನಾಗಿಯೇ ಉಳಿಯುವೆ

ಬುದ್ಧನಾಗಲಾರೆ….

ನೀ ನಿದ್ರಿಸಿ ನನ್ನ ಕನಸು ಕಾಣುವಾಗ

ಕಾರಣ ಹೇಳದೇ ಹೋಗಲಾರೆ

ಮೋಕ್ಷದ ಬೆನ್ನು ಹತ್ತಲಾರೆ

ಬುದ್ಧನಾಗಲಾರೆ

ನಿನ್ನೊಲವೇ ನನಗೆ ಬೋಧಿವೃಕ್ಷವಾಗಿರುವಾಗ!!

ಬಗೆಹರಿಯದ ಪ್ರಶ್ನೆಗಳಿಗೆ

ಉತ್ತರ ಹುಡುಕ ಹೊರಡುವುದೆಂದರೇನು?

ಸಿದ್ಧಾರ್ಥ ಮೋಕ್ಷವ ಹುಡುಕ ಹೊರಟಂತೆಯೇ ?

ಗರ್ಭದಲ್ಲಿ ಕೋಶ ಬೆಳೆದಂತೆ

ತನ್ನದೇ ಜೀವಕೋಶದ ಆಶ್ರಯದಿ ರಕ್ತಮಾಂಸವ

ಪ್ರೀತಿಯ ತಾಯ್ತನವನುಂಡು ಬೆಳೆದಂತೆಯೇ?

ಮೋಕ್ಷದ ಬೆನ್ನು ಹತ್ತಲಾರೆ

ಪ್ರೀತಿಯ ಹುಡುಕುತ್ತ…

*******

…..

About The Author

Leave a Reply

You cannot copy content of this page

Scroll to Top