ರೂಪಶ್ರೀ ಎಂ.ಅವರ ಕವಿತೆ-ಭೇಟಿಯ ಕೊನೇ ದಿನ….

ಕಾವ್ಯ ಸಂಗಾತಿ

ರೂಪಶ್ರೀ ಎಂ.

ಭೇಟಿಯ ಕೊನೇ ದಿನ….

ಇಂದೇ ಕೊನೆ !
ಹೃದಯದ ಕದ
ಶಾಶ್ವತವಾಗಿ
ಮುಚ್ಚಿಬಿಡುವೆನೆಂದಿದ್ದೆ

ಪ್ರತಿ ಬಾರಿ
ಹೃದಯ ಬಡಿತದ ಸದ್ದು ಕೇಳಿ
ನೀನೇ ಬಂದೆಯೆಂದು
ಎದೆ ಕದ ತೆರೆದು ನೋಡುವೆ
ಹೋದರೆ ಹೋಗು ಪುಣ್ಯಾತ್ಮ
ನೆನಪನ್ನಾದರೂ ಉಳಿಸಿದೀಯಲ್ಲ
ನನ್ನ ಪುಣ್ಯ !

ಸಮಯ ಕೈ ಜಾರಿ
ಬದುಕು ಬರಿದಾಗಿ
ಚಿತ್ತವಿರದೆ ಗಂಜಿ
ಕುದಿಸುವಾಗಲೂ
ನಿನ್ನ ಮುಖ ಕಂಡಂತಾಗಿ
ಗಂಜಿಯೊಡನೆ
ಹಳೆಯ ಭಾವಗಳು ಉಕ್ಕುಕ್ಕಿ
ಮತ್ತೆ ಮರುಜನ್ಮ ಪಡೆವವು
ಕೊನೆ ಎಲ್ಲಿ ನಿರೀಕ್ಷೆಗೆ
ಸಿದ್ಧತೆ ಇಲ್ಲದ ಪರೀಕ್ಷೆಗೆ !


ರೂಪಶ್ರೀ ಎಂ

Leave a Reply

Back To Top