ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸತ್ಯ ಹೇಳುವವ

ಸತ್ಯ ಹೇಳುವವ
ಸಿಟ್ಟಿಗೆಳುತ್ತಾನೆ
ಸಿಟ್ಟಿಗೆದ್ದಾಗ
ತಿವಿಯುತ್ತಾನೆ
ಚುಚ್ಚುತ್ತಾನೆ
ಮತ್ತೆ ಮೌನದ ಉಸಿರು
ಒಂಟಿಯಾಗುತ್ತಾನೆ
ಒಳಗೊಳಗೆ ನೋವು
ದುಃಖ ಕಳವಳ
ಏಕಾಂಗಿಯ ಕಹಿ ದಿನಗಳು
ಅವಮಾನ ಟೀಕೆಗೆ
ಗುರಿಯಾಗುತ್ತಾನೆ
ಮರಗುತ್ತಾನೆ
ಬದಲಾಗದ ಸಮಾಜ
ಕಣ್ಣೀರು ಹಾಕುತ್ತಾನೆ
ಹೀಗೆ ಒಬ್ಬಂಟಿಗ
ಸರಕಾರಿ ಶವ ವಾಹನದಿ
ಪಯಣ
ಮುಖದ ಮೇಲೆ
ನಿರ್ಲಿಪ್ತತೆ ನಗೆಯು
ವಿದಾಯ ಹೇಳುತ್ತಾನೆ

ಸತ್ಯದ ಮೂಟೆಯ ಹೊತ್ತು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಸತ್ಯ ಹೇಳುವವ”

  1. ಡಾ ಶರಣಮ್ಮ ಗೋರೆಬಾಳ

    ವಾವ್ ಅತ್ಯಂತ ಸಮಂಜಸ ಮತ್ತು ವೈಚಾರಿಕ ಕವನ ಸರ್

  2. ಡಾ ವೀಣಾ ಹೂಗಾರ

    ಹೃದಯ ಕಲಕುವ ಕವನ ನಿಜ ಸತ್ಯ ಯಾವಾಗಲೂ ಒಂಟಿ
    ಇಂತಹ ಅನೇಕ ಒಂಟಿ ಬದುಕು ಈಗ ಮತ್ತೆ ಒಂದಾಗಿ ಬೇಕು

  3. ಡಾ ಬಸಮ್ಮ ಗಂಗನಳ್ಳಿ

    ಹೃದಯ ಸ್ಪರ್ಶ ಕವನ
    ಇಂತಹ ಭಾವ ಪ್ರಜ್ಞೆ
    ಮತ್ತೆ ಮತ್ತೆ ಪ್ರಕಟ ಗೊಳ್ಳಲೀ

  4. ದೀಪಾ ಜಿಗಬಡ್ಡಿ

    ಸತ್ಯ ಸಮತೆ ಎಂಬ ಅಸ್ತ್ರ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ ನಮ್ಮ ಹಿರಿಯರು
    ತಮ್ಮ ಕವನ ವಾಸ್ತವಿಕ

  5. ಸತ್ಯವನ್ನು ಹೇಳುವವನು ಯಾವಾಗಲೂ ಒಂಟಿ….. ಬದಲಾಗದ ಸಮಾಜವನ್ನು ನೋಡಿ ನಿರ್ಲಿಪ್ತ ಭಾವನೆಯಿಂದ ವಿದಾಯ ಹೇಳುವ… ಕಟುಸತ್ಯವನ್ನು ನಿಮ್ಮ ಕವನದ ಸಾಲುಗಳ ಮೂಲಕ ಬಿಂಬಿಸಿದ್ದೀರಿ ಸರ್

Leave a Reply

You cannot copy content of this page

Scroll to Top