ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ. ನಾಗರತ್ನ ಅಶೋಕ ಭಾವಿಕಟ್ಟಿ

ಗಜಲ್

ಜೊತೆಯಾಗಿ ನಡೆದ ಪಯಣ
ನಿಲ್ಲಿಸದಿರು ವಿನಂತಿ ಮೇರೆಗೆ
ನಿಲ್ದಾಣ ಬರುವ ಮುಂಚೆ
ಇಳಿಯದಿರು ವಿನಂತಿ ಮೇರೆಗೆ

ಬದುಕಿನ ತವಕಗಳ ದಾಟಿರುವೆ
ಏರುಪೇರಿನ ದಾರಿಗೆ ಹಿಂಜರಿಯುವೆಯೇಕೆ
ಮೌನದಲಿ ನೋವ ನುಂಗುತ
ನಡೆಯದಿರು ವಿನಂತಿ ಮೇರೆಗೆ

ಕಣ್ಣ ಅಂಚಿನ ಕುಡಿನೋಟದ
ಮರುಳುತನವ ಮರೆತು ಬಿಡು
ಕಲಕಿದ ಉದಕ ತಿಳಿಯಾದೀತು
ಅವಸರಿಸದಿರು ವಿನಂತಿ ಮೇರೆಗೆ

ಉಸಿರಿನ ಕಣಕಣದಲೂ ಅಳಿದುಳಿದ
ಒಲುಮೆಯ ಉಸುರಿ ಬಿಡು
ನೀಡಿದ ವಚನವ ಮೀರಿದೆನೆಂದು
ಕೊರಗದಿರು ವಿನಂತಿ ಮೇರೆಗೆ

ಅಪ್ಪಳಿಸುತಿಹ ಅಲೆಗಳ ಹೊಡೆತದಲೂ
ಅರುಣೋದಯವ ಆಸ್ವಾದಿಸುತಿಹ ರತುನಳ
ಜೀವದ ತುಡಿತವನು ಅರಿತು
ಮರುಗದಿರು ವಿನಂತಿ ಮೇರೆಗೆ


ಡಾ. ನಾಗರತ್ನ ಅಶೋಕ ಬಾವಿಕಟ್ಟಿ

About The Author

1 thought on “ಡಾ. ನಾಗರತ್ನ ಅಶೋಕ ಭಾವಿಕಟ್ಟಿ ಗಜಲ್”

Leave a Reply

You cannot copy content of this page

Scroll to Top