ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಮೀದಾ ಬೇಗಂ ದೇಸಾಯಿ

ಗಜಲ್

ಸ್ವತಂತ್ರ ದೇಶದ ಅಮೃತ ಮಹೋತ್ಸವ ಸಂಭ್ರಮಿಸಿದೆ ನೋಡು ಸಖಿ
ತ್ರಿವರ್ಣ ಧ್ವಜದಲಿ ಅಶೋಕ ಚಕ್ರವು ಕಂಗೊಳಿಸಿದೆ ನೋಡು ಸಖಿ

ಹರುಷ ಉಲ್ಲಾಸ ಸಂತಸ ಮನದಲಿ ಹೊನಲಾಗಿ ಹರಿಯುತಿದೆ ಸುತ್ತ
ಕಳೆದ ಕಾಲದ ಕರಾಳ ದಿನಗಳ ಮರೆಯಿಸಿದೆ ನೋಡು ಸಖಿ

ಜಾತಿ ಮತ ಪಂಥಗಳ ಸಂಕೋಲೆಯು ಕಳಚಿ ಬೀಳುತಿದೆ ಇಲ್ಲಿ
ಬಡವ ಬಲ್ಲಿದ ಭೇದವ ತೊರೆದು ಒಂದಾಗಿಸಿದೆ ನೋಡು ಸಖಿ

ಗುಲಾಮ ದಾಸ್ಯದ ಬಂಧನ ಹರಿದ ಮಹಾತ್ಮರ ಸ್ಮರಿಸಬೇಕು ಎಂದೂ
ಸ್ವಾತಂತ್ರ್ಯದ ಗೆಲುವಿನ ಧೀರ ಹುತಾತ್ಮರ ನೆನಪಿಸಿದೆ ನೋಡು ಸಖಿ

ಸಮೃದ್ಧಿಯ ಹಸಿರು ತ್ಯಾಗದ ಕೇಸರಿ ಶಾಂತಿಯ ಬಿಳಿಯು ಬೇಗಂ
ದೇಶದ ಪ್ರಜೆಗಳ ಪ್ರಗತಿಯ ನಡೆಗೆ ಸೊಗಯಿಸಿದೆ ನೋಡು ಸಖಿ.


About The Author

Leave a Reply

You cannot copy content of this page

Scroll to Top