ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ತಣಿಯಬೇಕು ಮಣಿಪುರ

ಇಳೆಯ ಮಳೆಯ
ಚೆಲುವ ನಾಡು
ಹಸಿರ ಉಸಿರ
ಅರುಣೋದಯ ಬೀಡು

ನಿತ್ಯ ರೋಷ ದ್ವೇಷ
ರಾಗ ರುಧಿರ ಬಾಳು
ಮಣಿಯ ರೋದನ
ನೋವ ಗೂಡು

ವೇದನ ಆವೇದನ
ಸಂವೇದನವಿರದ
ರಕ್ಕಸರ ಕಾಡು
ಹೂವ ಹೊಸೆವ ಸೇಡು..

ಸುಸ್ಮಿತೆಯ ಅಸ್ಮಿತೆ
ಅಳಿಸುವ ಹುನ್ನಾರದ
ಕರುಳ ಬಗೆವ ಇರುಳ
ನೋವ ಹಾಡು….

ಹೊತ್ತಿ ಉರಿವ ಎದೆ
ಬಾನಲಿ ಮತ್ತೆ ಮೂಡಿ
ಬರಲಿ ಶಾಂತಿ ಚಂದಿರ
ಕೆಂಪಳಿದು ತಂಪಾಗಲಿ ಮಂದಿರ..

ತಣಿದು ಮಣಿಪುರ
ನುಡಿಯಬೇಕು ಸುಸ್ವರ
ಒಡಲ ದಳ್ಳುರಿ ನೀಗಿ
ಚಿಗುರಿ ಶಾಂತಿ ಮಾಮರ…

ಅನುಮಾನದ ಅಗ್ನಿಕುಂಡದಿ
ನಿರಪರಾಧಿ ಸೀತೆಯ ಬಲಿ…
ರೋಷದ ಕುಲುಮೆಯಲ್ಲಿ
ಬೆತ್ತಲಾದ ಬೆಟ್ಟದ ಮಣಿಗಳ ದನಿ.

ನಾರಿ ಮೊಗದ ಮೇಲೆ
ನಗು ನವಿಲು ನಲಿದು
ಕುಣಿದು ತಣಿದು
ಹಾಲ ಹಳ್ಳ ಹರಿಯಲಿ…

ಗುಳೆ ಹೋದ ಕನಸುಗಳು
ಮತ್ತೆ ಮರಳಿ ಬಂದು
ಕಟ್ಟಲಿ ಗೂಡು
ಗುಲ್ಮೊಹರ್ ಬನದ ನಾಡಲಿ…


ಇಂದಿರಾ ಮೋಟೆಬೆನ್ನೂರ.

About The Author

2 thoughts on “ಇಂದಿರಾ ಮೋಟೆಬೆನ್ನೂರ-ತಣಿಯಬೇಕು ಮಣಿಪುರ”

  1. ಮೇಡಂ, ನಿಮ್ಮ ಸುಂದರ ಮನಸ್ಸಿನ ಪ್ರತಿರೂಪದಂತೆ ಈ ಕವನವು ಸುಂದರವಾಗಿದೆ.. ಸಾಹಿತ್ತಿಕವಾಗಿ ಅಲ್ಲದೆ ತಮ್ಮ ವಸುದೈವ ಕುಟುಂಬಕಂ ಮನೋಭಾವನೆ ಕವನದ ತುಂಬಾ ಕಾಣುತ್ತದೆ.. ಆ ನಮ್ಮ ಜನವೆಲ್ಲ ನೋವಿನಿಂದ ಹೊರ ಬಂದು.. ಸುಂದರವಾಗಿ ಬಾಳಲೆಂದು ಹಾರೈಸುವ, ಬೇಡಿಕೊಳ್ಳುವ ತಮ್ಮ ಸುಂದರ ಮನಸ್ಸಿಗೊಂದು ನಮನ.. ಧನ್ಯವಾದಗಳು..

  2. Indira motebennur

    ಕವನದ ಆಶಯಕ್ಕೆ ಸ್ಪಂದಿಸಿದ ತಮ್ಮ ಕವಿ ಹೂ ಮನಸಿಗೆ
    ವಂದನೆಗಳು……

Leave a Reply

You cannot copy content of this page

Scroll to Top