ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ನಶ್ವರ ಜೀವನವಿದು ಬದುಕಬೇಕಿಲ್ಲಿ ಜೀವವು ಹೋಗುವತನಕ ನೀನು
ಯಮಧರ್ಮ ಸಂತಸದಲಿ ಬಾಯೆಂದು ಪ್ರೇಮದಿ ಕೂಗುವತನಕ ನೀನು

ಸತಿಸುತರ ಮೋಹದ ಬಲೆಯೊಳಗೆ ಇಲಿಯಂತೆ ಒದ್ದಾಡುತಿರುವೆ ಏಕೆ
ಅರಿಷಡ್ವರ್ಗಗಳ ಕಾಯವು ಅನುಭವದ ಮೂಸೆಯಲಿ ಮಾಗುವತನಕ ನೀನು

ಒಬ್ಬಂಟಿಯಾಗಿ ಹುಟ್ಟಿ ಜಗದೊಳು ಜಂಟಿಯಾದೆ ಸಖನೇ
ನಾನೆಂಬ ಮತ್ಸರವು ಮಸ್ತಕವೇರಿ ಅಹಂಕಾರದಿ ಬೀಗುವತನಕ ನೀನು

ಪಾಪಪುಣ್ಯದ ಬಡ್ಡಿಸಾಲದ ಲೆಕ್ಕವನು ಮುಗಿಸದೆ ಹೊರಟೆಯಲ್ಲ
ಧರಿಸಿದ ಅಧಿಕಾರದಿಂದ ಇಹಲೋಕ ಯಾತ್ರೆಯುಆಗುವತನಕ ನೀನು

ಅಭಿನವನ ನುಡಿಗಳನು ಆಲಿಸುತ ಸನ್ಮಾರ್ಗದಲಿ ನಡೆವೆಯಲ್ಲ
ಮರಣದ ತೊಟ್ಟಿಲಿನ ಮಗುವಾಗಿ ಕಂಬನಿದುಂಬಿ ತೂಗುವತನಕ ನೀನು


ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top