ಈರಪ್ಪ ಬಿಜಲಿ-ರೈತರ ಜೀವನಾಡಿ..

ಕಾವ್ಯ ಸಂಗಾತಿ

ಈರಪ್ಪ ಬಿಜಲಿ

ಜೀವನಾಡಿ..

ದಣಿದು ಬರುವ ದಾರಿ ಹೋಕರ
ದಾಹ ತೀರಿಸು ನಮ್ಮಮ್ಮ
ಮಣಿಯಬೇಕು ಸರ್ವಜೀವಿ
ನಿನ್ನ ಮುಂದೆ ಕೇಳಮ್ಮ ||೧||

ಮನದ ದಂಗೆ ನೀಗು ಗಂಗೆ
ಕರವ ಮುಗಿವೆ ತಾಯಿಯೇ
ದಾಹ ತಣಿಸಿ ಮನಸ ಕುಣಿಸು
ಪಾದ ಕಮಲಕೆರಗುವೇ ||೨||

ನೀಲಿ ಗಗನ ಪ್ರತಿಫಲನ
ಕಿರಣ ನಿನ್ನಲಿ ಸಮ್ಮಿಲನ
ಗಾಳಿಗಲೆಯು ತೇಲಿ ಬರಲು
ಶುದ್ಧ ಜಲದ ಸಂಕಲನ ||೩||

ಭೂಮಿಪುತ್ರನೊಲಕೆ ಹರಿದು
ಜಗದ ಹಸಿವು ದೂಡಮ್ಮ
ಕಾಮಿ ಮನುಜನೆದೆಯ ಕೊಳೆಯ
ತೊಳೆದು ಹರಸು ದೊಡ್ಡಮ್ಮ ||೪||

ಪಾಪ ಕರ್ಮ ಕಳೆಯೊ ಗಂಗೆ
ಪಾನಯೋಗ್ಯ ತುಂಗೆಯೇ
ಶಕ್ತಿ ನೀನೇ ಮುಕ್ತಿ ನೀನೇ
ಕಾವೇರಿ ಜೀವನಾಡಿಯೇ ||೫||

————————-

ಈರಪ್ಪ ಬಿಜಲಿ ಕೊಪ್ಪಳ

ಕಾವ್ಯ ಸಂಗಾತಿ

ಈರಪ್ಪ ಬಿಜಲಿ

ಜೀವನಾಡಿ..

Leave a Reply

Back To Top