ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಕ್ಕಮಹಾದೇವಿ ಜಯಂತಿ ವಿಶೇಷ

ಲಲಿತಾ ಪ್ರಭು ಅಂಗಡಿ

ವೈರಾಗ್ಯದ ತವನಿಧಿ
ಮೋಹವೆಂಬ ಮಾಯೆಯ ದಿಕ್ಕರಿಸಿ
ಹಿತಮಿತ ಆಹಾರದ ಅರಿವು ತಿಳಿಸಿ
ಜಪತಪಗಳ ಧ್ಯಾನಕೆ ತಲೆಬಾಗಿಸಿ
ಅರಿವು ಅಂತಸತ್ವಗಳ ಅನುಸರಿಸಿ
ಜ್ಞಾನದ ಚೊಕ್ಕ ಚಿನ್ನ ನೀನು
ನೀನು ನೀನಾಗಿ ಲೋಕದ ಚೇಷ್ಟೆಗೆ
ಮನದ ಕೊಳೆಯ ಶುಭ್ರಗೊಳಿಸಿ
ವೈರಾಗ್ಯ ಶಿಖರದ ಮೆಟ್ಟಿಲೇರಿ
ಆಧ್ಯಾತ್ಮ ಕಳಸಕೆ ಸ್ತ್ರೀ ರತ್ನ
ಮಿಕ್ಕ ಹೋಹನ ಬೆಂಬತ್ತಿ
ಕೈ ಹಿಡಿದ ಕಾಂತೆ
ಕಂಕಣ ಕೈಗೆಕಟ್ಟಿ ಸ್ಥಿರಸೇಸೆನಿಟ್ಟು
ಮಲ್ಲಿಕಾರ್ಜುನನ ಮನದೊಡತಿ ನೀ
ಅಸನದಿಂದ ವ್ಯಸನದಿಂದ
ಅತಿಅಸೆಯಿಂದ ಬಳಲಿದ
ಹುಟ್ಟು ಸಾವಿನ ಗಂಡರಿಂದ ದೂರಾಗಿ
ಸಾವು ಕೇಡಿಲ್ಲದ ಚೆಲುವನ ಚೆಲುವೆ
ಅಳಿ ಸಂಕುಲ ಮಾಮರ
ಕೋಗಿಲೆಗಳ ಒಡನಾಡಿ
ಚೆನ್ನನ ಸುಳಿವು ಕೇಳಿದ ಚೆನ್ನಿ ನೀ
ಕಾಮ ಕ್ರೋಧ ಮೋಹಕೆ ತೆರೆ ಎಳೆದು
ಸೀರೆಯ ಸೆರಗು ತೊರೆದು ದಿಗಂಬರೆಯಾಗಿ
ಕೇಶಾಂಬರವ ಹೊದ್ದು ಅನುಭವ ಮಂಟಪದಲಿ
ಯೌವ್ವನದ ಸತಿಗೆ ಪತಿಯ ಕರುಹು
ಕೇಳಿದ ಅಲ್ಲಮನಿಗೆ
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ
ಚೆನ್ನನ ಸಂಗಾತಿಳೆಂದ ನೀ
ಬಸವಣ್ಣನ ಮಗಳಾಗಿ
ಚೆನ್ನಬಸವಣ್ಣನ ಜ್ಞಾನಕೆ ಶರಣಾಗಿ
ಕದಳಿಯ ವನ ಹೊಕ್ಕು ಕರ್ಪೂರ
ಬೆಳಗಿದ ವೈರಾಗ್ಯದ ತವನಿಧಿ ನೀ.


About The Author

Leave a Reply

You cannot copy content of this page

Scroll to Top