ಮಹಾವೀರ ಜಯಂತಿ ವಿಶೇಷ
ಈರಪ್ಪ ಬಿಜಲಿ
ಶಾಂತಿದೂತ..ಸುಜ್ಞಾನಧಾತ
![](https://sangaati.in/wp-content/uploads/2023/04/WhatsApp-Image-2023-04-04-at-12.05.24-766x1024.jpeg)
ಮನೋ ನಿಗ್ರಹಿ ಪೂಜ್ಯ ವಿಗ್ರಹಿ
ತನ್ನ ತಾನು ಜೈಸಿದ ಮಹಾವೀರರ
ಜನಾನುರಾಗಿ ದಿವ್ಯ ವಿರಾಗಿ
ಮನುಕುಲ ಭೈರಾಗಿ ಮಹಾವೀರ ||
ಸಿದ್ದಾರ್ಥ ತ್ರಿಶಲಾ ದೇವಿ ಸುತರು
ಲೋಕ ಮಾನ್ಯ ವರ್ಧಮಾನರು |
ಅಹಿಂಸಾ ಪರಮೋ ಧರ್ಮವೆಂದು
ಸಾರಿದ ಗುರುಗಳ ಮೆಚ್ಚಿನ ಶಿಷ್ಯರು ||
ಇಪ್ಪತ್ತನಾಲ್ಕನೇ ಜೈನ ತೀರ್ಥಂಕರರು
ಜಗವ ಬೆಳಗಿದ ಸನ್ಮತಿನಾಯಕರು
ರಪ್ಪಂತ ಎರಗುವ ಕಷ್ಟನಷ್ಟವನು
ನೀಗಿಸಿ ಹರಸಿರಿ ಸೌಭಾಗ್ಯಧಾತರೆ ||
ರಾಜಾವೈಭವ ತೊರೆದು ಲೋಕಕೆ
ಅಷ್ಟಸೋಪಾನ ಬೋಧನೆ ಮಾಡಿ
ಶಾಂತ ಚಿತ್ತವೀರ ವಿಶ್ವಶಾಂತಿದೂತ
ಅಜ್ಞಾನ ಅಳಿಯೋ ಹೇ ಸುಜ್ಞಾನಧಾತ ||
![](https://sangaati.in/wp-content/uploads/2022/04/erappa.jpg)