ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಲಕ್ಷ್ಮೀದೇವಿ ಪತ್ತಾರ

ಯಾವುದು ಹೌದು ಅದು ಅಲ್ಲ

ನೀತಿಗೆಟ್ಟವರು ನೀತಿ ನಿಯಮಗಳ ಪಾಠ ಮಾಡುವಾಗ ಖೇದವಾಗುವುದು
ದಾರಿ ಬಿಟ್ಟವರು ಸರಿ ದಾರಿ ಇದೆಂದು ಹೇಳುವಾಗ ರೋಷ ಉಕ್ಕಿ ಬರುತ್ತದೆ .

ಕಲಿಮಲಗೊಂಡವರು ಮಡಿ ಮೈಲಿಗೆಯ
ಬಗ್ಗೆ ಬೀಗುವಾಗ ಬೇಸರವೆನಿಸುವುದು

ಕೆಲಸ ಮಾಡದ ಮೈಗಳ್ಳರು ಕರ್ತವ್ಯ ಪ್ರಜ್ಞೆಯ ಬಗ್ಗೆ ಜಾಗೃತಿ ಮೂಡಿಸಲು ಬಂದರೆ
ಮೈ ಉರಿದೇಳುವುದು

ಸದಾ ಸ್ವಾರ್ಥ ಚಿಂತನೆಯಲ್ಲಿ ಮೈ ಮರೆತವರಿಗೆ
ಪ್ರೀತಿ, ಸ್ನೇಹ ,ಸೇವೆ ಕುರಿತು ಭಾಷಣ
ಮಾಡುವಾಗ ಕೇಳುಗರ ಮೇಲೆ ಜಿಗುಪ್ಸೆ ಬರುವುದು

ದೇಶ ಪ್ರೇಮ ಇಲ್ಲದೆ ದೇಶದ ಐಕ್ಯತೆ, ಸಮೃದ್ಧಿ ಗಾಗಿ ಬಡಿದಾಡದೆ, ಸವಲತ್ತುಗಳನ್ನು
ಪಡೆಯಲು ಹಂಬಲಿಸುವವರ ಕಂಡು ಕ್ರೋದಾಗ್ನಿ ಪುಟಿದೇಳುವದು.


ಲಕ್ಷ್ಮೀದೇವಿ ಪತ್ತಾರ

About The Author

6 thoughts on “ಲಕ್ಷ್ಮೀದೇವಿ ಪತ್ತಾರ ಕವಿತೆ-ಯಾವುದು ಹೌದು ಅದು ಅಲ್ಲ”

  1. Pavithra.m Mruthunjayaswamy.

    ವಿಷಯ ವಸ್ತು ಚೆನ್ನಾಗಿದೆ. ಗದ್ಯ ಕಾವ್ಯಮಯವಾಗಿದೆ. ಕ್ರಿಯಾ ಪದಗಳು ಆಯ್ಕೆ ಬಗ್ಗೆ ಗಮನ ಹರಿಸಬೇಕಿತ್ತು

  2. ಅರ್ಥ ಗರ್ಭಿತ ಸಾಲುಗಳು. ನೂರಕ್ಕೆ ನೂರು ಸರಿ. ಧನ್ಯವಾದಗಳು.

Leave a Reply

You cannot copy content of this page

Scroll to Top