ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ಕವಿತೆ

ಅರುಣಾ ರಾವ್

ಗಡಿಯಾರ

ಅಯ್ಯೋ ಪಾಪ ಗಡಿಯಾರ
ಕಾಲಿಗೆ ಮುಳ್ಳು ಚುಚ್ಚಿದೆಯಾ?
ಕುಂಟುತ ಕುಂಟುತ ಸಾಗುತ್ತಿದ್ದರೆ
ಗಮ್ಯವ ಎಂದಿಗೆ ಸೇರುವೆಯಾ?

ಮುಳ್ಳು ತೆಗೆಯೋ ಚಿಮುಟಾ ಮರೆತು
ಬೇರೆಡೆ ಎಲ್ಲೋ ಇಟ್ಟಿಹೆಯಾ?
ನೋವಿನ ನೆಪವನು ಬದಿಯಲ್ಲಿಟ್ಟು
ಅವಿರತ ಕಾಯಕ ಮಾಡಿಹೆಯಾ?

ಹಗಲೂ ಇರುಳೂ ಒಂದೇ ಸಮನೆ
ಓಡುತ ಸುತ್ತುತ ಬಳಲಿಹೆಯೇ?
ಮ್ಯಾರಥಾನಿನ ಸ್ಪರ್ಧೆಗೆ ಹೋದರೆ
ಗೆಲುವು ಖಂಡಿತ ನಿನದಯ್ಯಾ!

ಏನೇ ಅಗಲಿ ಏನೇ ಹೋಗಲಿ
ತಡೆಯಿಲ್ಲದ ದುಡಿಮೆ ನಿನದಯ್ಯಾ
ಕಾಯಕವೇ ಕೈಲಾಸ ಎನ್ನುವ
ಛಲವಂತನು ನೀನೇ ನಿಜವಯ್ಯಾ!


About The Author

Leave a Reply

You cannot copy content of this page

Scroll to Top