ಶಂಕರಾನಂದ ಹೆಬ್ಬಾಳ-ಗಜಲ್

ಕಾವ್ಯ ಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

d

ಕಾಯುವ ಗಳಿಗೆಗಳು ಹಿತವ ನೀಡಲಿಲ್ಲ
ನೊಂದ ಮನವಿದು ಸುಖವ ಬೇಡಲಿಲ್ಲ

ಉದಧಿಯ ಮುತ್ತಂತೆ ಪ್ರೀತಿಯ ಮುಚ್ಚಿಟ್ಟೆ
ವದನದಿ ಸಂತಸದ ನಗುವು ಮೂಡಲಿಲ್ಲ

ಒಡಲ ನುಡಿಗಳು ಪ್ರಕ್ಷುಬ್ದವಾಗಿವೆ ಇಂದು
ನಡೆವ ಹಾದಿಯಲ್ಲಿ ಕಣ್ತೆರೆದು ನೋಡಲಿಲ್ಲ

ತೋಳಿನ ಆಸರೆಯನು ಬಯಸಿ ಬಂದಿದ್ದೆ
ನಾಳೆಯ ಕನಸುಗಳ ನನಸು ಮಾಡಲಿಲ್ಲ

ಅಭಿನವನ ಮೃದುಭಾವಗಳ ಅರಿತುಬಿಡು
ರಭಸದಿ ಪ್ರೇಮಧಾರೆ ಉಕ್ಕಿದರೂ ಕೂಡಲಿಲ್ಲ


Leave a Reply

Back To Top