ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಂಕ್ರಾಂತಿ

ಎಸ್ ವಿ ಹೆಗಡೆ

ನಿರಂತರವಾಗಿ ಒಂದೇ
ದಾರಿಯಲ್ಲಿ ನೇರವಾಗಿ
ನಡೆಯಲಾರದೆ ಸುಸ್ತಾದ ರವಿ
ನೇರವಾಗಿರದ ಹೆದ್ದಾರಿಯಲ್ಲಿ
ಅಲ್ಲಲ್ಲಿ ತಿರುವು ಬಂದಾಗಲೆಲ್ಲ
ಪಥವ ಬದಲಿಸಿದ ಗುರುತೇ
ಸಂಕ್ರಾಂತಿ॥

ಹರಿವ ನೀರಿಗೆ ಗುರಿ ಒಂದೇ
ಎಲ್ಲಿ ಬಿದ್ದರೂ ದಾರಿಯುದ್ದಕ್ಕೂ
ಸುರಿವ ವಿಷವನ್ನೂ ಸಹಿಸಿ
ತನ್ನನ್ನ ಉಪಯೋಗಿಸಿದ
ಯಾರನ್ನೂ ನಿಂದಿಸದೆ
ಸೇರಿ ಸಾಗರವ ವಿಶ್ರಾಂತಿ॥

ಗುರಿಯಿಲ್ಲದ ಜೀವನ ಭ್ರಾಂತಿ
ದಾರಿಯಲ್ಲಿ ಎಷ್ಟೊಂದು
ಸಂಕ್ರಾಂತಿಯ ಬೇವು ಬೆಲ್ಲ
ಸವಿದರೂ ಮನದಲ್ಲಿ
ದಿನ ನಿತ್ಯ ನಡೆಯುವ ಕ್ರಾಂತಿ
ಹುಡುಕುತಿದೆ ಶಾಶ್ವತ ಶಾಂತಿ॥


About The Author

Leave a Reply

You cannot copy content of this page

Scroll to Top