ಬಾಪು ಖಾಡೆ ಕವಿತೆ-ಸುಗ್ಗಿ ಸಂಕ್ರಾಂತಿ

ಕಾವ್ಯ ಸಂಗಾತಿ

ಸುಗ್ಗಿ ಸಂಕ್ರಾಂತಿ

ಬಾಪು ಖಾಡೆ

ಪಥ ಬದಲಿಸಿ ರಥವೇರಿದ
ರವಿತೇಜನ ಹೊಸ ಪಯಣ
ಮಾಗಿ ಚಳಿಯ ಮಾಘ ಮಾಸ
ಭುವಿಗೆ ಮಕರ ಸಂಕ್ರಮಣ

ನದ – ನದಿಯಲಿ ಮಿಂದು ಜನರು
ಪಡೆದು ದೇವ ದರುಶನ
ಎಳ್ಳು ಬೆಲ್ಲ ನಗುತ ಹಂಚಿ
ಹರುಷಗೊಂಡ ಜನಮನ

ಭೂ ತಾಯಿಯ ಮಡಿಲಿನಲ್ಲಿ
ಒಕ್ಕಲಿಗನ ಸಡಗರ ದವಸ – ಧಾನ್ಯ ಪೈರು ಪಚ್ಚೆ
ಸುಗ್ಗಿ ಸಂಭ್ರಮದ ಝೇಂಕಾರ

ಕಿಚ್ಚಾಯಿಸಿದ ದನ – ಕರುವಿಗೆ
ಸಿರಿ ಸಿಂಗಾರದ ಅಲಂಕಾರ
ನೋಡಲ್ಲಿ ನೀಲ ನಭದಿ
ಗಾಳಿಪಟಗಳ ಚಿತ್ತಾರ

ಮಧುರ ಬಾಂಧವ್ಯದ ಭಾವೈಕ್ಯದ
ಸಂಕ್ರಾಂತಿಯ ಪರ್ವಕಾಲ ಹಳ್ಳಿಯಿಂದ ದಿಲ್ಲಿವರೆಗೆ
ಹೊಸ ಫಸಲಿನ ಸುಗ್ಗಿ ಕಾಲ


Leave a Reply

Back To Top