ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ 

ಮಕ್ಕಳನ್ನು ಅವರು ಇದ್ದಂತೆ ಸ್ವೀಕರಿಸೋಣ

ಇಂದು ನಿಜವಾಗಿ ತಪ್ಪು ಮಾಡುವವರು ಚಿಕ್ಕ ಮಕ್ಕಳೋ ಅಥವಾ ಹಿರಿಯರೋ ಎಂಬ ಜಿಜ್ಞಾಸೆ. ಕರೋನ ವೈರಸ್ ಸಮಾಜವನ್ನು ಬಾಧಿಸಿತು. ಕಷ್ಟ ಪಟ್ಟು ಸಾಲ ಮಾಡಿ ಎಮ್ಮೆ , ದನ, ಚಿನ್ನ ಮಾರಿ ಆದ್ರೂ ಲಾಕ್ ಡೌನ್ ಸಮಯದಲ್ಲಿ ಮಕ್ಕಳ ಕೈಗೆ ಆನ್ಲೈನ್ ಕ್ಲಾಸ್ ಗೆ ಮೊಬೈಲ್ ಕೊಟ್ಟು ಅವರಿಗೆ ಅದಕ್ಕೆ ನೆಟ್ ರೀಚಾರ್ಜ್ ಮಾಡಿಸಿ ಮೊಬೈಲ್ ಫೋನಿನ ಹುಚ್ಚು ಹಿಡಿಸಿದ್ದು ಸರಕಾರ, ಹಿರಿಯರಾದ ಶಿಕ್ಷಕರು! ತೆಗೆದು ಕೊಟ್ಟವರು ಪೋಷಕರು! ಈಗ ಪ್ರತಿ ತಿಂಗಳೂ ಅದಕ್ಕೆ ಕರೆನ್ಸಿ ಹಾಕಿ ಕೊಡುತ್ತಿರುವವರು ಯಾರು?

    ಇಂದು ನಮ್ಮ ಮಕ್ಕಳು ಮೊಬೈಲ್ ಬಿಟ್ಟಿರಲು ಸಾಧ್ಯ ಆಗದೆ ಮಾನಸಿಕವಾಗಿ ಖಿನ್ನಾರಾಗುತ್ತಿದ್ದಾರೆ. ಮೊಬೈಲ್ ಗೀಳಿಗೆ ಬಿದ್ದ ಯುವಕ ಯುವತಿಯರು ತಮ್ಮ ಅಮೂಲ್ಯ ಸಮಯವನ್ನು ಅದರ ಜೊತೆ ಕಳೆಯುತ್ತಿರುವ ಕಾರಣದಿಂದ ಒಂಟಿತನ ಇಷ್ಟ ಪಡುತ್ತಾರೆ. ಕುಟುಂಬದ ಜನರ ನಡುವೆ ಮಾತುಕತೆ ಕಡಿಮೆ ಆಗಿದೆ. ಸಣ್ಣ ಮಕ್ಕಳ ತಾಯಂದಿರೂ ಮೊಬೈಲ್ ಗೀಳಿಗೆ ಬಿದ್ದ ಕಾರಣ ಅವರ ಮಕ್ಕಳ  ಮೇಲೆ ನಿಗಾ ಕಡಿಮೆ ಆಗಿ, ಅವರು ಬೇಕಾಬಿಟ್ಟಿ ಬೆಳೆಯುತ್ತಿದ್ದಾರೆ. ದೇಶದಲ್ಲಿ ಕೆಲಸ ಕಡಿಮೆ ಆಗಿರುವ ಕಾರಣ ದೇಶದ ಪ್ರಗತಿಗೂ ಅದು ಮಾರಕ.  ಕನಸುಗಳು ಸಾಕಾರಗೊಳ್ಳಲು ಪ್ರಾರಂಭಿಸುವ ಪ್ರೌಢ ವಿಭಾಗ, ಕಾಲೇಜು ಮತ್ತು ಪದವಿಯ ವಯಸ್ಸಿನ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಿದ್ದು ಅವರ ಓದು ಕುಂಠಿತವಾಗಿದೆ. ಬೇಡದ ವಿಡಿಯೋಗಳ ವೀಕ್ಷಣೆ ಅವರ ಕಾಮನೆಗಳನ್ನು ಉತ್ತುಂಗಕ್ಕೆ ಏರಿಸಿ ಇಂದಿನ ಹೆಣ್ಣು ಮಕ್ಕಳಿಗೆ ಸೆಕ್ಯೂರಿಟಿ ಇಲ್ಲವಾಗಿದೆ. ಇದು ಅವರ ಬದುಕಿಗೂ, ಜ್ಞಾನಕ್ಕೂ ಪೆಟ್ಟು ಕೊಡುತ್ತದೆ. ಮುಂದೆ ಒಳ್ಳೆಯ ಕೆಲಸಕ್ಕೆ ಸಮಸ್ಯೆ ಆಗಬಹುದು.

ಮಕ್ಕಳ ಮಾತಿಗೆ ಬೆಲೆ ಇರಬೇಕು. ದೈರ್ಯ ತುಂಬುವ ಕೆಲಸ ಸರಿ ಇರುವ ನಾವೇ ಮಾಡಬೇಕು. ಅಲ್ಲವೇ? ಪೋಷಕರ ಮಾತನ್ನು ಮಕ್ಕಳು ಕೇಳುವ ಹಾಗೆ ಇರಬೇಕು. ಅದು ಆಗದೆ ಇದ್ದರೆ ಗಿಡವಾಗಿ ಬಗ್ಗದ್ದು ಎಂದು ಅರ್ಥ. ಅದೆಷ್ಟೋ ಪೋಷಕರು ನಮ್ಮ ಮಕ್ಕಳು ನಮ್ಮ ಮಾತು ಕೇಳುವುದಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ತಂದು ಹಾಸ್ಟೆಲ್, ಆಶ್ರಮ ಶಾಲೆಗಳಲ್ಲಿ ಕಳಿಸಿ ಓದಲು ಬಿಟ್ಟಿರುತ್ತಾರೆ. ಒಂದಿಬ್ಬರು ಮಕ್ಕಳನ್ನು ಮನೆಯಲ್ಲಿ ಹತ್ತಿರದಿಂದ ಕೂಡಿಸಿ ಓದಿಸಲು ಸಾಧ್ಯ ಆಗದ ನಮ್ಮ ಪರಿಸ್ಥಿತಿಯ ಜೊತೆಗೆ ನೂರಾರು ಮಕ್ಕಳನ್ನು ಒಂದೆಡೆ ಸೇರಿಸಿ ಓದಿಸುವ ಹಾಸ್ಟೆಲ್ ವಾರ್ಡನ್ ಬಗ್ಗೆ ನಾವು ಯೋಚನೆ ಮಾಡುವುದೇ ಇಲ್ಲ.

ಅವರವರ ಮನಸ್ಥಿತಿ ಅವರು ಬದುಕಲ್ಲಿ ಎದುರಿಸಿದ ಕಷ್ಟಗಳನ್ನು ಆವರಿಸಿ ಇದೆ. ನಾನು ಕಷ್ಟಗಳನ್ನು ಎದುರಿಸಿದ್ದರೆ ಮಾತ್ರ ನನಗೆ ಕಷ್ಟಗಳ ಬಗ್ಗೆ, ಕಷ್ಟ ಪಡುವವರ ಬಗ್ಗೆ ತಿಳಿದಿರುತ್ತದೆ. ಇಲ್ಲದೇ ಇದ್ದರೆ ನಾನು ಪರರ ಕೆಲಸಗಳನ್ನು ದೂರಿಕೊಂಡೆ ಬದುಕುತ್ತಿರುತ್ತೇನೆ. ಬದುಕಿನ ದೃಷ್ಟಿ ಬದಲಾಗಬೇಕು ಎಂದಾದರೆ ಪರರ ಮಾತನ್ನು ಕೇಳಿ ತಲೆಕೆಡಿಸಿಕೊಳ್ಳ ಬಾರದು. ನಮ್ಮ ಸ್ವಂತ ಬುದ್ದಿಯಿಂದ ನಮ್ಮ ಬಾಳು ನಡೆಸಲು ಕಲಿಯಬೇಕು. ಹೇಳಿಕೊಟ್ಟ ಮಾತು, ಕಟ್ಟಿಕೊಟ್ಟ ಬುತ್ತಿ ಜೀವನಪೂರ್ತಿ ಇರಲಾರದು. ನಮ್ಮ ಮಕ್ಕಳನ್ನು ಅವರು ಇದ್ದಂತೆ ಸ್ವೀಕರಿಸೋಣ. ಪರರ ಮಕ್ಕಳ ಸಾಧನೆ ನೋಡಿ ಕರುಬದೆ ಇರೋಣ. ನೀವೇನಂತೀರಿ?


ಹನಿಬಿಂದು

ಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ  ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154

One thought on “

  1. ನಿಜ, ಅವರಂತೆ ಬಿಡೋದು ಒಳ್ಳೇದು, ಆದ್ರೆ ಪೋಷಕರು ನಿರ್ಲಕ್ಷ ಮಾಡಬಾರದು ಅಲ್ಲವೇ?

Leave a Reply

Back To Top