ಉತ್ತಮ ಎ ದೊಡ್ಮನಿ-ಸ್ವಾಭಿಮಾನಿ ದಂಗೆ

ಕಾವ್ಯ ಸಂಗಾತಿ

ಸ್ವಾಭಿಮಾನಿ ದಂಗೆ

ಉತ್ತಮ ಎ ದೊಡ್ಮನಿ

ಈಗ ಸ್ವಾಭಿಮಾನ ಬಿಟ್ಟು
ಚಮಚಗಳಂತೆ ಬದುಕುತ್ತಿರುವರಿಗೆ
ನಿಮ್ಮ ವೀರತ್ವದ ಪಾಠ ಹೇಳಬೇಕಾಗಿದೆ
ನೀವು ಸಿದ್ಧನಾಯಕ ವಂಶಸ್ಥರೆಂದು

ಮರೆತು ಹೋದ ಇತಿಹಾಸ ಹುಡುಕಿ,
ಈ ನೆಲದ ಮೊದಲ ಶೋಷಿತರ
ಸ್ವಾಭಿಮಾನ ಸ್ವತಂತ್ರ ಸಂಗ್ರಾಮವನ್ನು
ಅರಿಯಲು ಮರೆತ ಜನರಿಗೆ

ಐನೂರು ಜನ ಒಟ್ಟು ಗೂಡಿ ಸಾವಿರಾರು
ಸೈನಿಕರ ಹೆಡೆಮುರಿ ಕಟ್ಟಿದವರ ಗುಟ್ಟನ್ನು
ಒಗ್ಗಟ್ಟಿನಿಂದ ಎಲ್ಲವೂ ಸಾಧ್ಯವೆಂದು
ಮನುಕುಲಕ್ಕೆ ತೋರಿಸಿ ಕೊಟ್ಟವರ ಇತಿಹಾಸವ

ಪೇಶ್ವೆಗಳ ಸೊಕ್ಕನ್ನು ಅಡಗಿಸಿ
ಕೋರೆಗಾವ್ ಸೂರರ ಬದುಕನ್ನು
ಇಂದಿನ ಯುವಕರಿಗೆ ತಿಳಿ ಹೇಳಬೇಕಾಗಿದೆ
ಯುದ್ದವಲ್ಲ ಅದು, ಸ್ವಾಭಿಮಾನದ ದಂಗೆ ಎಂದು


Leave a Reply

Back To Top