ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಒಂಟಿ ಹಕ್ಕಿಯ ಸ್ವಗತ

ಶಂಕರಾನಂದ ಹೆಬ್ಬಾಳ

ಮುರಿದ ರೆಕ್ಕೆಯ ಹಕ್ಕಿಯ ಅಳಲಿದು
ಹರಿದ ಗಾಳಿಯ ಪಟದ ಚಿತ್ರವಿದು
ನುಡಿಯಲ್ಲಿ ಸಾಂತ್ವನವಿಲ್ಲ
ಕನಸುಗಳು ಕೊನರಲಿಲ್ಲ
ಮುಳುಗುವ ವಹಿತ್ರವಾದ ಬದುಕಿದು

ಸಂತೆಯೂರಿನಲ್ಲಿನ ಚಿಂತೆಯಿದು
ಕಂತೆ ಪುರಾಣಗಳ ಕಥೆಯಿದು
ಕೊರೆವ ಆರ್ತನಾದ
ಅಂತರಾಳದ ಬೋಧ
ಉರಿಯುವ ಜ್ವಾಲಾಮುಖಿ ಕುಂಡವಿದು

ಬಣ್ಣ ಬದಲಾಯಿಸುವ ಸಮಾಜವಿದು
ಕಣ್ಣಿದ್ದು ಕುರುಡರಂತಿರುವ ಕಾಯವಿದು
ಕಿನಿಸುಗಳ ಮೂಟೆಯಲಿ
ಕ್ರೋಧಗಳ ದಾರಿಯಲಿ
ಬೆರೆಯುವ ಪಾಪಿಷ್ಠರ ದುರ್ಮಾರ್ಗವಿದು

ಅವಿವೇಕಿಗಳ ಗೊಂದಲದ ಗೂಡಿದು
ನೊಂದಮನಸುಗಳ ಮುಗಿಯದ ಹಾಡಿದು
ಹೇಳತೀರದ ಆಲಾಪ
ಹುಚ್ಚರಂತೆ ಪ್ರಲಾಪ
ಯಕ್ಷಪ್ರಶ್ನೆಯಾಗಿ ಉಳಿದ ಕರಾಳ ನೆನಪಿದು


About The Author

Leave a Reply

You cannot copy content of this page

Scroll to Top