ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳರವರ ಗಜಲ್

ನೋವನ್ನು ಸಹಿಸಿಕೊಂಡು ಇರುವೆಯಲ್ಲ ನೀ ಮಾತಾಡಬಹುದಿತ್ತು
ಸಾವನ್ನು ಅರಸಿಕೊಂಡು ಹೋಗುವೆಯಲ್ಲ ನೀ ಮಾತಾಡಬಹುದಿತ್ತು

ಗಗನ ಕುಸುಮವಾಯಿತಲ್ಲ ಈ ಮಧುರವಾದ ಪ್ರೀತಿಯ ತೇರು
ದೃಗುಜಲ ಸುರಿಸಿಕೊಂಡು ಅಳುವೆಯಲ್ಲ ನೀ ಮಾತಾಡಬಹುದಿತ್ತು

ಸಾರಸಗಟವಾಗಿ ಹರಿದು ಬಂತು ಒಲವಕಾವ್ಯ ವಾರಿಧಿಯ ಅಲೆ
ಭಾರವನು ಹೇರಿಸಿಕೊಂಡು ನಡೆವೆಯಲ್ಲ ನೀ ಮಾತಾಡಬಹುದಿತ್ತು

ಚಿತ್ತಚಾಂಚಲ್ಯದಿ ಮುಳುಗಿ ವಿರಹದುರಿಯಲ್ಲಿಬೆಂದಿರುವೆಯಲ್ಲ ಸಖಿ
ಮತ್ತೆಮತ್ತೆ ಮುನಿಸಿಕೊಂಡು ಬೆರೆವೆಯಲ್ಲ ನೀ ಮಾತಾಡಬಹುದಿತ್ತು

ಮೌನಿಯಾಗಿ ಮನದಲ್ಲಿ ಕೊರಗುವೆ ಅಭಿನವನ ನೆನೆಯದೆ ಇದ್ದೆ

ಯಾನದಲಿ ದುಃಖಿಸಿಕೊಂಡು ನೋಡುವೆಯಲ್ಲನೀ ಮಾತಾಡಬಹುದಿತ್ತು


About The Author

Leave a Reply

You cannot copy content of this page

Scroll to Top