ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹರಾಜಾದ ಪ್ರೀತಿ

ಶಂಕರಾನಂದ ಹೆಬ್ಬಾಳ

ಹರಾಜಾಗುತ್ತಿದೆ ಪ್ರೀತಿಯ ತೇರು
ಗೋಳಿನಲಿ ಸುಯ್ಯೆಂದು,
ಬೊಬ್ಬೆಯಿಟ್ಟಿದೆ ಒಲವಿನ
ಪ್ರೇ‌ಮಸಿಂಹಾಸ‌ನ..!!

ಹೃದಯದಲ್ಲಿ ನಿನ್ನ ಹಾಜರಿಯಿಲ್ಲ
ಕಣ್ಣಲ್ಲಿ ತೇವ ಒಸರಿ
ಆಲಿಂಗನದ ಅಮೃತಗಳಿಗೆಯ
ಸವಿಚಣಗಳ ನೆನೆಪಿಸುತ್ತಿದೆ…!!

ನಿರಸವಾದ ರಜನಿಯಲಿ ಶಶಿಯ
ಬೆಳಕು ಮಂದವಾಗುತ್ತಿದೆ
ನಿಸ್ತೇಜ ಕಾಂತಿಯಲಿ ವಧುವಿಲ್ಲದ
ಕಲ್ಯಾಣಮಂಟಪ ಬೀಕೊ ಎಂದಿದೆ

ಸುಡುವ ಸೂರ್ಯ ತಂಪಾಗಿದ್ದಾನೆ
ಕನಸುಗಳು ಕಮರಿಹೋಗಿವೆ
ನಿನ್ನ ನೋಟಗಳು ಸೂಜಿಯ ಮೊನೆಯಿಂದ
ಇರಿಯುತ್ತಿವೆ ಕಣ್ಣಿನಲಿ

ಸದ್ದುಗದ್ದಲವಿಲ್ಲದ ಸಂತೆಯಲಿ
ನಿನ್ನದೆ ನೆನಪಿನ ಅಲೆ
ತನುವ ಬಾಚಿ ತಬ್ಬಲು ಮತ್ತೊಮ್ಮೆ
ಬರುವೆಯಾ ಬಾಲೆ


About The Author

Leave a Reply

You cannot copy content of this page