ಸ್ಮಿತಾಭಟ್ ಕವಿತೆ, ಎದ್ದು ನಡೆದವರೆಲ್ಲ….

ಕಾವ್ಯ ಸಂಗಾತಿ

ಎದ್ದು ನಡೆದವರೆಲ್ಲ….

ಸ್ಮಿತಾ ಭಟ್

ಹಂಬಲವೋ ಹುಟುಕಾಟವೋ
ಕಾಡುತ್ತಲೇ ಇರುವ ಓಟ
ಅವ ಯಾರು ಇವ ಯಾರು
ಯಾರಂತೆ ಯಾರು

ಬೆನ್ನು ಬಿದ್ದಿದ್ದು ಆಸೆಗಳೋ ಪಾಶಗಳೋ
ಬಿಡಿ ಯಾಗುವ ಇಡಿಯಾಗುವ
ದಾಹಗಳನಡುವೆ
ಗೆದ್ದೆ ಎಂಬುದು ಎದ್ದು ನಡೆದಾಗಿನ
ಅನಿಸಿಕೆ ಅಷ್ಟೇ

ಕಾವು, ಕಣ್ಣೀರು, ಮೌನ ಮರ್ಮರ,
ಎದೆಗೆ ತಾಕದ ಯಾವ
ಪ್ರೇಮವೂ ಉಳಿಯುವುದಿಲ್ಲ
ಉಳಿಸಿಕೊಳ್ಳುವವನ ಕಷ್ಟ ಸುಖ
ಅಳಿಸಿಹೋಗುವವನ
ನಾಡಿಗೆ ದಕ್ಕುವುದಿಲ್ಲ.

ಅನುಸರಣೆ, ಅನುನಾಯಿ
ಇವೆಲ್ಲ ಪದಗಳಷ್ಟೇ
ಯಾರಂತೆ ಯಾರೂ ಆಗುವುದಿಲ್ಲ
ಎದ್ದು ನಡೆದವರೆಲ್ಲ ಬುದ್ದರಲ್ಲ


Leave a Reply

Back To Top