ಬುದ್ಧ ಗಜಲ್ ಸಿದ್ದರಾಮ ಹೊನ್ಕಲ್

ಕಾವ್ಯ ಸಂಗಾತಿ

ಬುದ್ಧ ಗಜಲ್ ಸಿದ್ದರಾಮ ಹೊನ್ಕಲ್

ಬುದ್ಧ ಗಜಲ್

ಆಸೆಯೇ ದು:ಖಕ್ಕೆ ಮೂಲ ಅಂತ ಅದೇಕೆ ಹೇಳಿದೆ ? ನೀ ಹೇಳು ಬುದ್ಧ
ಆಸೆಯೇ ಇರದಿರೆ ಈ ಜಿಂದಗಿಯೇಕೆ ಬೇಕಿದೆ ? ನೀ ಹೇಳು ಬುದ್ಧ

ಸಾವು ನೋವು ನೋಡಿ ಸಾಮ್ರಾಜ್ಯವ ತೊರೆದು ಜ್ಞಾನದಾಸೆಯನರಸಿ ನೀ ಹೋದಿ
ಇಲ್ಲಿ ಉಳಿದ ನಮ್ಮ ಹುಲುಮಾನವರ ಗತಿ ಏನಾಗಿದೆ ? ನೀ ಹೇಳು ಬುದ್ಧ

ಬದುಕಲಿ ಏನಿಲ್ಲದವರೇ ಕೋಟಿ ಕೋಟಿ ಜನ ನಾಳೆಯ ಭರವಸೆಯ ಮೇಲೆ ಬದುಕಿಹರು
ಬಯಕೆಗಳೇ ಬೇಡವೆಂದರೆ ಬದುಕುವದಕೆ ಅರ್ಥವೆನಿದೆ ನೀ ಹೇಳು ಬುದ್ಧ

ಬದುಕಿನ ಸವಿ ಸವಿಯದವರೇ ತುಂಬಿಹರಿಲ್ಲಿ ನಾಳೆ ಬರಬಹುದೆಂಬ ಕನಸಲಿಹರು
ಸಂಸಾರಿಗರಿಗೆ ಆಸೆಗಳು ಸಹಜವಲ್ಲವೆ ? ಬೇರೆನಿದೆ ನೀ ಹೇಳು ಬುದ್ಧ

ಎಲ್ಲರೂ ನಿನ್ನಂತೆ ಸಿದ್ಧ ಆಗಲಾಗುವದೇ ಬುದ್ಧ ಆದರೆ ಈ ಸೃಷ್ಟಿಯ ಗತಿ ಏನಾದಿತು
ಹೊನ್ನಸಿರಿ”ಆಸೆಯಲ್ಲ ದುರಾಸೆಯೇ ದು:ಖಕ್ಕೆ ಮೂಲವಿದೆ ನೀ ಹೇಳು ಬುದ್ಧ.


ಸಿದ್ಧರಾಮ ಹೊನ್ಕಲ್

One thought on “ಬುದ್ಧ ಗಜಲ್ ಸಿದ್ದರಾಮ ಹೊನ್ಕಲ್

  1. ಆಸೆಯನ್ನು ತೀರಿಸಲೆಂದು ಕೆಲಸ
    ಕೆಲಸಕ್ಕೆ ಪ್ರತಿಫಲದ ನಿರೀಕ್ಷೆ
    ನಿರೀಕ್ಷೆಯಂತೆ ಫಲ ಸಿಗದರೆ ನಿರಾಸೆ
    ನಿರಾಸೆಯ ದಮನಕ್ಕೆ ಯುದ್ಧ

    ಯುದ್ಧದಲ್ಲಿ ಗೆದ್ದರೆ ರಾಜ್ಯ
    ರಾಜ್ಯ ವಿಸ್ತರಣೆಗೆ ಮತ್ತೆ ಮತ್ತೆ ಯತ್ನ
    ಜೀವನವೆಲ್ಲಾ ಈ ವಿಷ ವರ್ತುಲದಲ್ಲಿ
    ಸಿಲುಕಿ ನಲುಗುವುದು ಯಾವ ಪುರುಷಾರ್ಥ ಸಾಧನೆಗಾಗಿ?

    However good thinking

Leave a Reply

Back To Top