ಕಾವ್ಯಕ್ಕೆ ಕಾರಣ ಬೇಕಿಲ್ಲ

ಕಾವ್ಯಯಾನ

ಕಾವ್ಯಕ್ಕೆ ಕಾರಣ ಬೇಕಿಲ್ಲ

ಬಿ.ಶ್ರೀನಿವಾಸ

As farmers' protest cross 40 days, children, old men battle Delhi rain,  cold wave but remain firm - India News

ದಿಲ್ಲಿಯ ಚಳಿಗೆ
ಮರಗಟ್ಟಿ ರಕ್ತ,
ಚಳುವಳಿಗಿದು ಸಕಾಲ
ಅಂತೆನಿಸಿದರೂ…
ಮಣ್ಣಿಗೆ…
ಹೊಸಿಲಾಚೆ ಕುಂತ ಮಗನ ಕಂಗಳಿಗೆ
ಸಂತಾಪದ ಕಾಲ

ಹೌದು,ಕಾವ್ಯಕ್ಕೀಗ ಕೆಲಸವಿಲ್ಲ

ಕೋಟಿ ಕೋಟಿಗಳ ಗೋರಿಯೊಳಗೆ
ಬಸವಣ್ಣ,ಅಲ್ಲಮರಂಥ ಶರಣರು !
ಪ್ರಭುತ್ವಕ್ಕಿದು ಸಂತಾನದ ಕಾಲ

ಇಂಥಾ ಹೊತ್ತಿನಲ್ಲಿ
ಕಾವ್ಯಕ್ಕೇನು ಕೆಲಸ ?
ಕೇಳುವಿರಿ ನೀವು.

Singhu Border: Commanding centre of farmers' agitation - Social News XYZ

ಮುಂಜಾನೆಯ ಇಬ್ಬನಿಗೆ
ಸೂತಕದ ಬಡರೈತನ ಮನೆಯಂಗಳದಲ್ಲಿ
ಕಿಸಾನ್ ಪರೇಡಿನ ಮೌನದಲಿ
ಕಾವ್ಯ….
ಕಂಬನಿಯಾಗುತ್ತದೆ
ಒಮ್ಮೆ ರಕ್ತವಾಗುತ್ತದೆ
ಮಗದೊಮ್ಮೆ ಉಸಿರಾಗುತ್ತದೆ

ಕಳೇಬರಗಳ ಮುಂದೆ
ಕುಂತವರ
ಮೌನಕ್ಕೆ,
ಕಣ್ಣೀರಿಗೆ
ಕಾರಣಗಳನು ಕೇಳಬಾರದು
ಕಾವ್ಯಕ್ಕೂ …..ಕೂಡ.


ಬಿ.ಶ್ರೀನಿವಾಸ

2 thoughts on “ಕಾವ್ಯಕ್ಕೆ ಕಾರಣ ಬೇಕಿಲ್ಲ

  1. ಮರಗಟ್ಟಿದ ಮೌನ
    ಹೊಟ್ಟೆಯಲ್ಲಿನ ಸಿಟ್ಟು
    ರಟ್ಟೆಗೆ ಬರದೆ ಕಮರಿದೆ
    ತುಂಬಾ ಮನ ಮುಟ್ಟುವ ಕವನ ಸರ್

Leave a Reply

Back To Top