ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಆದಿಯೋ-ಅಂತ್ಯವೋ

ಚಂದ್ರು ಪಿ ಹಾಸನ್

CHANDRU HASSAN

silhouette photo of man on cliff during sunset

ಯುಗಯುಗದ ಆದಿ ಯುಗಾದಿ
ಹೊಸವರ್ಷದ ಹುಟ್ಟಿಗೆ ಸಂತಸವೆಲ್ಲಿದೆ
ಕೇವಲ ಸಾವಿನ ನೋವಿನ ಹಾದಿ
ಹೊಸ ಭಯ ಭೀತಿಯ ಹಾದಿ

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತವೆಲ್ಲಿದೆ
ಎಲ್ಲೆಲ್ಲೂ ಸಾವಿನ ಆರ್ತನಾದ
ಕೆಮ್ಮಿನ ಕರ್ಕಶ ಸಂಕಟ ಕೂಗು

ಯಾರು ಹೊಣೆಯಾಗಿದ್ದಾರೆ ಇದಕ್ಕೆ?
ಎಲ್ಲಾ ಮಾನವನ ಆಸೆಯೇ ಮೂಲ
ಪ್ರಕೃತಿಯ ವಿರುದ್ಧ ಬದುಕುವ ಬೆಳವಣಿಗೆಯ ಹುಚ್ಚು ಹಂಬಲ

ತನ್ನ ಸಂತತಿಯ ಬೆಳೆಸುವುದಕ್ಕಾಗಿ
ವನ ಸಂತತಿಯ ನಾಶ ಮಾಡಿದ ವಾತಾವರಣ ಬದಲಾವಣೆಯಾಗಿ

ಬದಲಾವಣೆಯ ಹೆಸರಿನಲ್ಲಿ
ಹಸಿರ ಬಸಿರಿಗೆ ಮಾರಕನಾಗಿ
ಪ್ರಕೃತಿಯ ಬದಲಾಯಿಸುತ್ತಿರುವುದು
ಹೊಸಜೀವಿಗಳ ಉಗಮದ ಕಾರಣ

ಒಂದೆಡೆ ಹಬ್ಬ ಆಚರಿಸುವುದೋ
ಇಲ್ಲವೇ ಭಯದಭೀತಿಯಲ್ಲಿ
ಕಾಲಕಳೆಯುವುದೋ ಅರಿಯೇ
ಕಾಲವೇ ಇದಕ್ಕೆ ಉತ್ತರಿಸಬೇಕು

****

About The Author

Leave a Reply

You cannot copy content of this page

Scroll to Top