ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೈತ ಗಜಲ್

Govt forms society to run centre-funded farmer schemes - The Economic Times

ಬಿರಿದ ಭೂಮಿ ಉರಿಯುವ ನೇಸರ ಮರಗಳು ತಲೆಬಾಗಿ ನಿಂತಿವೆ
ಆಗೊಮ್ಮೆ ಈಗೊಮ್ಮೆ ಹಕ್ಕಿಗಳ ಇಂಚರ ಮೌನ ಮುರಿಯುತಿವೆ

ನೆತ್ತಿಯ ಮೇಲೆ ಕೆಂಡಕಾರುವ ಸೂರ್ಯ ಪಾದದಡಿ ಕಾದ ಬುವಿ
ಸವೆದ ದೇಹ ಕಳೆದುಹೋದ ಯೌವನದ ಕನಸುಗಳು ಕಾಡುತಿವೆ

ಕರಿಮುಗಿಲು ಕೂಡಲು ಬಾನಲಿ ಆಸೆಯ ಮಿಂಚು ಕಣ್ಣಲಿ ಮೂಡಿತು
ಬಾರದ ಮಳೆ ಬರದ ಛಾಯೆ ನೀರಿಗಾಗಿ ಜೀವಿಗಳು ಬಿಕ್ಕುತಿವೆ

ಎಡೆ ಬಿಡದೆ ಮುನಿಯುವ ಪ್ರಕೃತಿಯ ವಿಕೋಪ ರೈತನನು ಕಂಗೆಡಿಸಿತು
ಸರಿದವು ವರ್ಷಗಳು ಬ್ಯಾಂಕಿನ ಸಾಲದ ಶೂಲಗಳು ಇರಿಯುತಿವೆ

ಹಸಿವು ಸಂಕಟ ದಾಹ ಅನ್ನದ ಬೆಲೆ ಹಸಿದವನಿಗೆ ಗೊತ್ತು”ಪ್ರಭೆ”
ಎಲುಬಿನ ಹಂದರ ಹೊತ್ತ ಜೀವಿಗಳು ನೇಣಿಗೆ ಶರಣಾಗುತ್ತಿವೆ

*******************************************

ಪ್ರಭಾವತಿ ಎಸ್ ದೇಸಾಯಿ

About The Author

Leave a Reply

You cannot copy content of this page

Scroll to Top