ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೈತ ಗಜಲ್

What's Going on With All These Farmer Protests in India? | Modern Farmer

ಹೊಲದೊಳಗೆ ಉಳುವವನ ಬವಣೆ ಕಂಡವರಾರು
ಅವನ ದೇಹದಿಂದ ಸುರಿವ ಬೆವರ ಒರೆಸಿದವರಾರು

ಬೇಕು ಎಲ್ಲರಿಗೂ ಬಗೆಬಗೆಯ ಆಹಾರ ದವಸಧಾನ್ಯ
ದುಡಿದುಡಿದು ಸವೆದ ಎಲುಬುಗಳ ಎಣಿಸಿದವರಾರು

ಮಹಲುಗಳ ಮೃಷ್ಟಾನ್ನದಲಿ ಮಣ್ಣಿನ ಘಮಲಡಗಿದೆ
ಮಣ್ಣಿನ ಮಗನ ಬರಮಾಡಿ ಉಣಬಡಿಸಿದವರಾರು

ನಿಷ್ಠೆ ನೇಮದ ಯುಗಯುಗಾಂತರದ ಯೋಗಿ ಇವ
ಅನ್ನನೀಡುವ ಧಣಿಯ ದೇವರೆಂದು ಪೂಜಿಸಿದವರಾರು

ಬೆನ್ನುಮೂಳೆಯ ಹೊರತು ಬದುಕು ಬಲು ದುಸ್ತರ ಆಸೀ
ರೈತನಿಲ್ಲದಿರೆ ನಾವಿಲ್ಲವೆಂದು ಕೊರಗಿ ಮರುಗಿದವರಾರು

*****************************************

ಆಸೀಫಾ

About The Author

2 thoughts on “”

  1. ಮಹಲುಗಳ ಮೃಷ್ಟಾನ್ನದಲ್ಲಿ ಮಣ್ಣಿನ ಘಮಲಡಗಿದೆ…ಅರ್ಥಪೂರ್ಣ ಸಾಲುಗಳು ಮೇಡಂ

  2. ಕೆ.ಬಿ.ಸುಮ

    ರೈತನ ಬದುಕು ಬವಣೆ ದುಸ್ತರತೆಯ ಬಗ್ಗೆ ಚೆನ್ನಾಗಿ ವ್ಯಕ್ತಪಡಿಸಿದ್ದೀರಿ ಮೇಡಂ.

Leave a Reply

You cannot copy content of this page

Scroll to Top