ಸಂಕ್ರಾಂತಿಕಾವ್ಯ ಸುಗ್ಗಿ

ಉರಿಯುವ ಬದಲು ಬೆಳಗಬೇಕು

ಸಂಗೀತ ರವಿರಾಜ್

Macro shots of diyas being lit by hand or candle for the hindu religious festival of Diwali. These colorful earthern pots hold oil and a cotton wick to light Macro shots of diyas being lit by hand or candle for the hindu religious festival of Diwali. These colorful earthern pots hold oil and a cotton wick to light Beauty Stock Photo

ಸಮಾಜ ಅಭಯದ ಮುಖವಾಡ ಹಾಕಿ
ನಲುಗಿಸುತ್ತಿದೆ ಗಳಿಸಿದ ಸ್ವಾತಂತ್ರ್ಯ ವನ್ನೇ….
ಜಾತಿ ವರ್ಗಗಳಿಗೆ ಕೀಳರಿಮೆ ತೊಲಗಿಂದ ಮೇಲೆ
ಭಯ ಮುಕ್ತ ಭಾವನೆಗೆಲ್ಲಿ ಎಲ್ಲೆ ?

ಮಲ ತೆಗೆಯಲು ಒಂದು
ಮನುಷ್ಯ ವರ್ಗವ ಸೃಷ್ಠಿಸಿ
ಅದಕ್ಕೊಂದು ಜಾತಿಯ ಹೆಸರು ಕೊಟ್ಟ
ಇನ್ನೊಂದು ಮನುಷ್ಯ ಜಾತಿಗೆ ನಮ್ಮ ವಿರೋಧವಿರಲಿ
ದೇವ ಸ್ವರೂಪ ತೋಟಿಗಳ
ಒಳತೋಟಿಯ ಅರಿವಾಗಿ
ಒಂದು ತೊಟ್ಟು ಕಣ್ಣೀರು ಹಾಕಿದರೆ
ಈ ಜನ್ಮ ಸಾರ್ಥಕ.

ಜಗದಲ್ಲಿ ಜಲಗಾರ ಜಾಡಮಾಲಿಯ
ಒಡಲ ಬೇಗುದಿಯ ಉರಿಗೆ
ತ್ಯಾಜ್ಯವೆಲ್ಲ ಉರಿದು ಬೂದಿಯಾಗುತ್ತಿದೆ!
ಗುಡಿಸೆತ್ತಿ ಸ್ವಚ್ಛಗೊಳಿಸುವ ಒಂದ್ವರ್ಗವಿಲ್ಲದಿದ್ದರೆ
ಶೋಚನೀಯ ಸ್ಥಿತಿಯ ಗತಿಗಳು
ಶುಭ್ರತೆ ಇರಬೇಕಾದ್ದು ಮನಸ್ಸಿನಲ್ಲಿ , ವಾಸಿಸುವಲ್ಲಿ
ಜಲಗಾರನೆ ಜ್ವಲಂತ ಉದಾಹರಣೆಯಿಲ್ಲಿ

ಸೂಟುಗಳ ಜೇಬಿನಲ್ಲಿ ಇವರ ಕನಸುಗಳೆಲ್ಲ ಬಿಕರಿಗಿವೆ!
ಕೊಳ್ಳುವರಿಲ್ಲ ಕೇಳುವರಿಲ್ಲ
ಅಲ್ಲಿಗೆ ಕನಸುಗಳು ಕಮರಿವೆ
ಈ ಕುಲದ ದೀಪಗಳ ಬೆಳಕು ಪಸರಿಸಲು
ನಾವೆಲ್ಲ ದೀಪದಂತೆ ಉರಿಯುವುದಲ್ಲ ಬೆಳಗಬೇಕು !
ಕನಿಷ್ಠ ಸಂಪಾದನೆಯ ಕೆಲಸಗಳಿಗೆ
ಜಾತಿ ವರ್ಗಗಳ ನಿರ್ಮಿಸಿಟ್ಟ
ಮಗದೊಂದು ಮನುಷ್ಯ ವರ್ಗಕ್ಕೆ ಸಹಮತವಿಲ್ಲ.


2 thoughts on “

  1. “ಉರಿಯುವ ಬದಲು …ಬೆಳಗಬೇಕು…”
    ಎಂತಹಾ ಹ್ರದಯಸ್ಪರ್ಶಿ ಕವನದ ಶೀರ್ಷಿಕೆ…
    ಕವಯಿತ್ರಿ ಶ್ರೀಮತಿ ಸಂಗೀತಾ ಗುರುರಾಜ್ ರವರ ಈ ಕವನ ಪ್ರಚಲಿತ ವಿದ್ಯಮಾನಕ್ಕೊಂದು ಸವಾಲಾಗಿದೆ.
    ಅಭಿನಂದನೆಗಳು….

  2. ವರ್ತಮಾನಕ್ಕೆ ‌ಮುಖಾಮುಖಿಯಾದ ಕವಿತೆ.
    ಕವಿ ಮನದ ಕಾಣ್ಕೆ ದೊಡ್ಡದು…

Leave a Reply

Back To Top