ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೆತ್ತರಿನ ಮಳೆ ಬಿದ್ದು….

ಅಲ್ಲಾಗಿರಿರಾಜ್ ಕನಕಗಿರಿ

Farmers Suicide - Manmohan Singh Tour to Vidarbha - Agriculture - Fields - Farmer - Shravan Katrat at Wardha.

ನೆತ್ತರಿನ ಮಳೆ ಬಿದ್ದು
ಮೈ ಮನಸು ಕೆಂಪಾದವೋ.

ಕಪ್ಪಾದ ಮೋಡದಲ್ಲಿ
ಕೆಂಪಾದ ಮಿಂಚೊಂದು ಹರಿದು.
ಊರು ಕೇರಿ ಕೆಂಪಾದವೋ.

ಬಿಸಿಲುಂಡ ನೆಲದಾಗ ನದಿಯೊಂದು
ಕೆಂಪಾಗಿ ಕಾಡು ಮೇಡು ಕೆಂಪಾದವೋ.

ಬರಗಾಲಕ್ಕೆ ಹುಟ್ಟಿದ ಕೂಸು
ಎದೆಯ ರಕುತ ಕುಡಿದು
ತೊಟ್ಟಿಲೊಳಗಿನ ಹಾಸಿಗೆ ಕೆಂಪಾದವೋ.

ದಿಲ್ಲಿ ಗಡಿಗಳಲ್ಲಿ
ಕೊರೆಯುವ ಚಳಿ ಬಿಸಿಯಾಗಿ
ರೈತರ ಹೊಲಗದ್ದೆಗಳು ಕೆಂಪಾದವೋ.

ಬಿಳಿ ಹಾಳೆಯ ಮೇಲೆ ಕವಿಯ
ಅಕ್ಷರದ ಸಾಲುಗಳು ಹಸಿದವರ
ದನಿ ಕೇಳಿ ಕೆಂಪಾದವೋ
ಎಲ್ಲ ಕೆಂಪಾದವೋ………

**********************************

About The Author

Leave a Reply

You cannot copy content of this page

Scroll to Top