ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮಧುವಣಗಿತ್ತಿ

ಎಚ್ ಕೆ ನಟರಾಜ

ಆಕೆಗೆ ದಿನವೂ
ಸಿಂಗರೀಸುವುದೇ ಕೆಲಸ
ಅಕ್ಷರಗಳಿಗೆ ಉಡುಗೆ ತೊಡಿಸಿ
ಅಲಂಕರಿಸಿ ಬಿಳಿ ಹಾಳೆಯ ಮೇಲೇ ಚಿತ್ತಾರ
ಬಿಡಿಸಿ ಶಾಯಿಯ ರಂಗೋಲಿ
ಸೂರ್ಯ ಚಂದ್ರನ ಹೂ ಮಾಲೆ ಮಾಡಿ..
ನಕ್ಷತ್ರಗಳನ್ನು ಕೆನ್ನೆ ರಂಗಾಗಿಸಿ
ಭಾವನೆಗಳಿಗೆ ಬಣ್ಣದುಡುಗೆ ತೊಡಿಸಿ
ಕಾಮವನ್ನು.. ಕಾಮವಿಲ್ಲದ ಹೃದಯ
ಭತ್ತಳಿಕೆಯ ಬಾಣವಾಗಿಸಿ
ಪದಪುಂಜದರಮನೆಗೆ ಲಗ್ಗೆ
ಹೀಗೆ ಈ ಮಧುವಣಗಿತ್ತಿ.. ಅಲ್ಲಿಂದ ಇಲ್ಲಿ
ಇಲ್ಲಿಂದ ಅಲ್ಲಿ ಶಭ್ಧಗಳ ನರ್ತನ.

ಆಡಂಭರದಾಟಕೂ ಅಂಕುಶ ತೊಡಿಸಿ
ಪ್ರೇಮನಿವೇದನೆ.
ಕನಸುಗಳ ಬಗೆದು ಅಲ್ಲೊಂದಷ್ಟು ಹೆಕ್ಕಿ
ಮನದಾಳದಿ ಕುಕ್ಕಿ…. ದುಃಖದಲ್ಲಿ ಬಿಕ್ಕಿ..
ನಗುವಿನಾಳದಲಿ ಒಲವ ಬಿತ್ತಿ.. ನಾಚಿ
ನೀರಾದ ರಂಗಿನೋಕುಳಿಯಲಿ..
ಮತ್ತೊಂದಷ್ಟು ಪದಗಳ ಮಾಲೆಕಟ್ಟಿ..
ಜೋಡಿಸಿ.. ಕಾಡಿಸೀ.. ಕೂಡಿಸಿ.. ತೊಡಿಸಿ
ಅಂತೂ.. ಒಂದು ಅಂತಿಮ ಸ್ಪರ್ಶ..
ಭಾವದೊಲುಮೆಗೆ ಆಕರ್ಷಕ..
ತೂರಲಿ ಕಣ್ಣೋಳೊಗೆ.. ಕವಿಭಾವಕೆ
ಕವನದ ದೃಶ್ಯ
ಹೀಗೆ ಮಧುವಣಗಿತ್ತಿ ಮೆರವಣಿಗೆಯಲಿ
ಅಕ್ಷರ ಸೃಷ್ಟಿಯ ಭಾಷ್ಯ

****************************

About The Author

Leave a Reply

You cannot copy content of this page

Scroll to Top