ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಸಾವು ಮಾತಾದಾಗ

ವಿಶಾಲಾ ಆರಾಧ್ಯ

ಭಯವೆನ್ನದಿರು ಕೊನೆಯೆನ್ನದಿರು
ಮೈಲಿಗೆ ಎನ್ನದಿರು ನನ್ನನು
ಹಗುರಾಗುವಿ ಮೃದುವಾಗುವಿ
ಕೂಡಿದ ಕ್ಷಣದೊಳು ನನ್ನನು

ಭವದೊಳು ಮಾಡಿದ ಪಾಪವ
ತೊಳೆಯುವ ಹೊನಲು ನಾನು
ತರತರ ಮುಖವಾಡ ಹೊತ್ತವರಿಗೆ
ಹೊಸ/ಕಳೆಯನು ಕೊಡುವೆ ನಾನು

ಬಂಧು ಬಳಗವೇ ಹಿರಿದೆನ್ನದಿರು
ಎನಗಿಂ ಹಿರಿಯರ ನಾ ಕಾಣೆ
ಸತಿ ಪತಿ ಸಂಸಾರ ಜೊತೆ ಮಮಕಾರ
ನಾ ಬಂದರೆ ಅಲ್ಲಿಯೆ ಮಾಯೇ

ಅಮ್ಮ ಅಪ್ಪ ಅಣ್ಣಾ ಅಕ್ಕಾ
ಎನ್ನುವುದೆಲ್ಲಾ ಮೋಹಕೆ
ಬಂದೊಡನೆಯೆ ನಾ ಕ್ಷಣ
ಕರೆವರು ಹೆಣವೆಂದಾ ದೇಹಕೆ

————-

About The Author

1 thought on “ಸಾವು ಮಾತಾದಾಗ”

  1. ರಮೇಶ್ ಮೇಗರವಳ್ಳಿ

    ವಿಶಾಲಾ ಆರಾಧ್ಯ ಅವರ ಕವಿತೆ ಮಾರ್ಮಿಕವಾಗಿದೆ. ಅಭಿಸಾರಿಕೆಯ ಅಂತರಂಗದ ದಿಟ್ಟ ಮಾತಿಗಳು ಕಾವ್ಯದ ಲಯದಲ್ಲಿ ಸುಂದರವಾಗಿ ಮೂಡಿದೆ. ಅಬಿನಂದನೆಗಳು.

Leave a Reply

You cannot copy content of this page

Scroll to Top