Day: January 14, 2022

ಹಾಯ್ಕುಗಳು

ಕಾವ್ಯ ಸಂಗಾತಿ ಹಾಯ್ಕುಗಳು ಸಂತೋಷ ಅಂಗಡಿ ನಿನ್ನುಸುರಿನ ಉಗಿತಾಗಿದ ಗಾಳಿಅಂಡಲೆಯುತಿದೆ ತಣ್ಣಗಾಗಲು ನೋವುಂಡಎದೆಗೆ ಸದ್ದಿಲ್ಲದೆಕಲ್ಲಾದ ಸಂಭ್ರಮ ವಿಷಾದದ ಕಣ್ಣುಗಳಲಿಸಂತ್ವಾನದಹನಿಗಳು ಹಾಡೊಂದುಜಾರಿತುಕಣ್ಣೊಳಗೆ ಕರಗಿ ಕಡಲ ದಂಡೆನಿನ್ನ ಒಲವುಅಲೆಯಾಗಿ ಅಪ್ಪಳಿಸುತಿದೆ ವಿರಹ ಕಲ್ಲಿನ ಬಂಡೆದುಬ್ಬದ ಮೇಲೆ ನಿದಾನಹೊತ್ತು ನಡೆಯುತ್ತಿದೆ ಆಮೆ ತೂಗು ಸೇತುವೆಯ ಕನಸುಕೆಳಗೆ ಹರಿಯುತಿರುನೀನು ನದಿಯಂತೆ ದುಗುಡವೆಲ್ಲಾ ದುಂಡುಗೂಡಿಸಿಬೊಗಸೆಯಲಿ ನುಂಗುವೆವಸಂತ ಬರಲಿ ಬಾಗಿಲಿಗೆ ಗರಿಕೆಯ ಮೊನಚಿಗೆತುಂಡಾಗದೆಅಪ್ಪಿದೆ ಇಬ್ಬನಿ ದಂಡೆಯಲಿತೆರೆಗಳ ಬುರುಗುಶಾಂತವೀಗ ಕಡಲು ಮತ್ತು ಒಡಲು.………………

ಗಜಲ್

ಚಾವಣಿಯ ಚಂದ್ರನಿಗೂ ಅಕಾಲಿಕ ಗ್ರಹಣವಂತೆ…ನಿಜವೇ?
ಕಣ್ಣಗಲದ ಬೆಳದಿಂಗಳಿಗೂ ಅದೆಷ್ಟೋ ಮುಪ್ಪಡರುತ್ತಲೇ ಇವೆ ನೀನಿಲ್ಲದೆ

ಸವಿ ಸವಿ ಸಂಕ್ರಮಣ

ಕಾವ್ಯ ಸಂಗಾತಿ ಸವಿ ಸವಿ ಸಂಕ್ರಮಣ ಅರುಣಾ ರಾವ್ ಇರುವೆಗಳು ಸಾಲಾಗಿ ಬರುತಲಿವೆಯಿತ್ತಲೆಕಣದಲ್ಲಿ ಗೋಪುರದ ಬೆಳೆ ರಾಶಿಯತ್ತಲೇ ತಲೆ ಮೇಲೆ ಗಂಗಮ್ಮನ ಹೊತ್ತ ಭೂಮಿ ಒಕ್ಕಲುಕೋಲೆ ಬಸವಣ್ಣನನ್ನು ಹಿಡಿದಿರುವ ಹೈಕಳು ಕರಡಿಯನು ಬೀದಿಗಳಲಿ ಕುಣಿಸುತ್ತ ತಕತಕಬರುತಲಿದೆ ಸುಗ್ಗಿ ಕಾಲ ನಲಿವೀನ ಥೈತಕ ಕಣಿ ಹೇಳುವ ಕೊರವಂಜಿ ಬಾಗಿಲಲ್ಲಿ ನಿಂತಿರೆಬಳೆಗಾರ ಚೆನ್ನಯ್ಮ ಮಲ್ಹಾರವ ಇಳುಕಿರೆ ಕಣಗಳಲಿ ಕೋಲಾಟ ಬಯಲಾಟದ ಸಂಭ್ರಮಗೆಣಸು ಕಬ್ಬು ಸೊಗಡವರೆ ಕಂಪದು ಘಮಘಮ ಕಡಲೆ ಕಾಳು ಎಳ್ಳು ರಾಗಿ ಧಾನ್ಯಗಳ ರಾಶಿಪ್ರಸವದಲ್ಲೂ ನಗುವ ಇಳೆಯು ನಿತ್ಯ […]

ಬದುಕೊಂದು ಖಾಲಿ ಹಾಳೆ

ಕಾವ್ಯ ಸಂಗಾತಿ ಬದುಕೊಂದು ಖಾಲಿ ಹಾಳೆ ಒಲವು ಬದುಕೊಂದುಬರಿದೆ ಖಾಲಿ ಹಾಳೆಬರೆಯದೇ ಬಿಟ್ಟಖಾಲಿ ಹಾಳೆ ಇಷ್ಟದ ಹೂ ಒಂದನುಚಿತ್ರಸಬಹುದುಮೆಚ್ಚುಗೆಯ ಬಣ್ಣವನ್ನೇಅದರಕ್ಕೆ ತುಂಬಬಹುದು ಒಲವಿನ ಅಕ್ಷರಗಳನ್ನೇಪೋಣಿಸಬಹುದುಹಿಡಿಸಿದ ಕವಿತೆಗಳಿಗಷ್ಟೇಜೀವ ನೀಡಬಹುದು ನಿಲುವಿನ ದಾರಿಗಳಲ್ಲೇನಡೆಯಬಹುದುಬೇಕೆಂದ ಗುರಿಗಳಿಗಷ್ಟೇಗರಿ ಮೂಡಿಸಬಹುದು ಆದರಿಲ್ಲಿ,ಮಾಯಾವಿ ಚಿತ್ರವೊಂದುಮೈದಳೆಯಬಹುದುಬೇಡದ ಕವಿತೆಯೊಂದುಕಾಡಬಹುದುಕಾಣದ ದಾರಿಯೊಂದುಕೈ ಹಿಡಿಯಬಹುದು ಬದುಕೊಂದು ಬರಿದೆಖಾಲಿ ಹಾಳೆಬರೆಯದೇ ಬಿಟ್ಟಖಾಲಿ ಹಾಳೆ….

ಗಾಂಧೀಜಿಯ ರಾಮರಾಜ್ಯದ ಕಲ್ಪನೆ, ಸರ್ವೋದಯ ತತ್ವ, ಪ್ರಗತಿಪರ ಚಿಂತನೆ, ಸಮನ್ವಯ ಸಿದ್ಧಾಂತಗಳು ಭೂಗತವಾಗಿ ಎಲ್ಲೆಡೆ ಸ್ವಾರ್ಥ, ಭ್ರಷ್ಟಾಚಾರ, ತಾಂಡವಾಡುತ್ತಿದೆ ಎಂಬುದನ್ನು ಸಾಬೀತುಪಡಿಸುವ ಕವಿಯ ಹೋರಾಟ ಆಶಾದಾಯಕವಾಗಿದೆ.

ಸುಗ್ಗಿಕಾಲ…

ಬಣ್ಣದ ಬದುಕೊಂದು ನವಿಲಂತೆ
ಜಗದ ಸುಂದರತೆಗೊಂದು ರಂಗು
ಮೂಡಲ ಮನೆಯ ಕದ ತೆರೆದಂತೆ
ಹೊಂಗಿರಣ ಚಿಮ್ಮಿದ ಹಬ್ಬದ ತೇರು

Back To Top