Day: September 8, 2021

ಓದುಗನು ಮಾಡಿದ ಸತ್ಕಾರ.

ಕುರ್ಚಿಯಿಂದ ಎದ್ದು ಒಮ್ಮೆ ಮೈ ಮುರಿದುಕೊಂಡೆ. ಎರಡು ಹೆಜ್ಜೆ ಆಚೆ ಈಚೆ ನಡೆದರೆ ಮೈ ಹಗುರವಾಗುತ್ತದೆ ಎನಿಸಿ ಎರಡು ಹೆಜ್ಜೆ ಹಾಕಿ ಕಿಟಿಕಿಯ ಹತ್ತಿರ ನಿಂತುಕೊಂಡೆ. ದೂರದ ಕಡಲ ಮೇಲಿಂದ ಗಾಳಿ ಬೀಸುತ್ತಿತ್ತು. ವಿಶಾಖ ಸುಂದರಿ ವಜ್ರವೈಢೂರ್ಯಗಳಿಂದ ಅಲಂಕರಿಸಿಕೊಂಡವಳ ಹಾಗೆ, ಬೀದಿ ದೀಪಗಳ ತೋರಣಗಳಿಂದ ಮೆರೆಯುತ್ತಿದ್ದಳು

ಭಾವ ಜೀವಿ ಕಂಡ ಬಾಲ್ಕನಿಯ ನೋಟ- ಬಾಲ್ಕನಿ ಕಂಡ ಕವಿತೆಗಳು

ಪ್ರತಿಯಿರುಳು ಬೆಳದಿಂಗಳಾತ” ಈ ನುಡಿಯಲ್ಲಿ ತನ್ನೊಲವ ಪಡೆದ ಅವನನ್ನು ತಂಪು ಬೆಳದಿಂಗಳಿಗೆ ಹೋಲಿಸಿ ತನ್ನೆದೆಯ ಶುಭ್ರ ಮುಗಿಲನ್ನು ಆತ ಆವರಿಸಿಕೊಂಡ ಬಗೆಯನ್ನು ರಮ್ಯವಾಗಿಸಿದ್ದಾರೆ ವಿಭಾ. ಇಂತಹ ಮೋಹಕ ಕವಿತೆಗಳ ಜೊತೆಗೆ ಜೀವನದ ನೈಜ ವಾಸ್ತವತೆಯನ್ನು ಕಟ್ಟಿಕೊಡುವ ಕೆಲವು ಕವಿತೆಗಳು ಈ ಸಂಕಲನದಲ್ಲಿ ಕಾಣಸಿಗುತ್ತವೆ.

ಕೆಲವೊಮ್ಮೆ ವೈಯಕ್ತಿಕ ದ್ವೇಷಕ್ಕೂ ಸಾಕು ಪ್ರಾಣಿಗಳು ಬಲಿಯಾಗುತ್ತವೆ. ವಿಷ ಉಣಿಸಿಯೋ, ಅಪಘಾತ ಮಾಡಿಸಿಯೋ ಕೊಲ್ಲುವುದು ಮನುಷ್ಯರಾದವರು ಮಾತ್ರ ಮಾಡಬಹುದಾದ ನೀಚ ಕ್ರಿಯೆ. ಮತ್ತೆ ಕೆಲವು ಕಡೆ ತಮಗೆ ಆಗದವರ ಮೇಲೆ ನಾಯಿಗಳನ್ನು ‘ಚೂ..’ ಬಿಟ್ಟು ಕಚ್ಚಿಸುವುದೂ ಉಂಟೆಂಬ ವಿಷಯ ಗೊತ್ತಾದಾಗ ಭಯವಾಗುತ್ತದೆ.

Back To Top