ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಸುಜಾತ ಲಕ್ಷ್ಮೀಪುರ. ಕತ್ತಲೆ ಗರ್ಭ ಸೀಳಿ ಅರಿವಿನ ಬೆಳಕು ತಂದ ಈ ಭೀಮ ಅಸ್ಪರ್ಶ ಕೊಳಕು ತೊಳೆಯುವ ಜಲವಾಗಿ ಬಂದ ಈ ಭೀಮ ಬಡತನ ಹಸಿವು ನಮ್ಮ‌ನ್ನು ರೂಪಿಸುತ್ತದೆಯಂತೆ ಗುಡಿಸಿಲಿನಿಂದಲೇ ಅಸಮಾನತೆಯಲ್ಲೇ ಮೂಡಿದ ಈ ಭೀಮ ಕೊರೆತೆಯಲ್ಲೆ ಕೊರಗಿ ಕೂತವರು ಏನು ಸಾಧಿಸುವರು ಅಸಮಾನತೆ ವಿಷಗಾಳಿಯಲಿ ಸಮಾನತೆಯ ಉತ್ತಿ ಬೆಳೆದ ಈ ಭೀಮಾ ಜ್ಣಾನವೊಂದೆ‌ ಮುಕ್ತಿಗೆ ಮಾರ್ಗ ವೆಂಬುದು ಸತ್ಯವಲ್ಲವೆ ಅಜ್ಞಾನದ ಆಲಯದಿ ಬೆಳಕಿನ ಬಯಲು ಸುರಿದ ಈ ಭೀಮಾ ನನ್ನ ಜನ ನನ್ನ ನಾಡು ಎನ್ನದವರ ಎದೆ ಬೆಂಗಾಡು ಜನರ ಹಸಿವು ನೋವಿಗೆ ಮಿಡಿದು ದುಡಿದ ಈ ಭೀಮಾ ಪ್ರಜಾಪ್ರಭುತ್ವದ ಜೀವಾಳವೆ ಮತದಾನ ಅಲ್ಲವೇ ಹಕ್ಕು ಬಾಧ್ಯತೆಗಳ‌ನು ಕಾನೂನಿನ ಮೂಲಕವೆ ಕೊಡಿಸಿದ ಈ ಭೀಮಾ ಸರ್ವೋದಯ ಸಮಾನತೆ ಸಾಮಾಜಿಕ ನ್ಯಾಯ ಇದ್ದೆಡೆ ಸ್ವರ್ಗ ಎಲ್ಲರ ಅಭ್ಯದಯಕಾಗಿ ಸಂವಿಧಾನ ರೂಪಿಸಿದ ಈ ಭೀಮಾ ಶಿವೆ,ಬಾಬಾ ಸಾಹೇಬರ ಅಂಬೇಡ್ಕರ್ ಬಗೆಗೆ ಎಷ್ಟು ಹೇಳಿದರೂ ಅಪೂರ್ಣವೆ ದೇಶದ ಜನತೆಗೆ ಬದುಕು ಕೊಟ್ಟ ಭಾರತ ಭಾಗ್ಯವಿದಾತ ಆದ ಈ ಭೀಮ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೌದು ; ನಿನಗಾಗಿ… ನಾಗರಾಜ ಹರಪನಹಳ್ಳಿ ನೀ ಮನೆಯೊಳಗೆ ಹೋದ ಮೇಲೆ ನಾವಾಡಿದ ಮಾತುಗಳನ್ನೇ ನೆನಪಿಸಿಕೊಳ್ಳುತ್ತಿದ್ದೆ…. ಎಷ್ಟೊಂದು ಕನಸುಗಳು.. ನೂರಾರು ಬಯಕೆಗಳು ಸಾವಿರಾರು ರೆಕ್ಕೆ ಕಟ್ಟಿಕೊಂಡು ಹಾಡುವ, ಹಾರುವ ಮನಸುಗಳು ಒಂದೊಂದು ಮಾತಿಗೂ ಸಹಿ ಸವಿ ನೆನಪು ಪ್ರತಿಮಾತು ಒಂದೊಂದು ವರ್ಷ ನಮ್ಮ ಆಯಸ್ಸು ಹೆಚ್ಚಿ ಅದೇ ಕಾಲಕ್ಕೆ ನಾವು ಯುವ ಜೋಡಿಗಳಾಗುವ ಹುಮ್ಮಸ್ಸು … ಬರೆಯುವ ,ಓದುವ ಹೆಬ್ಬಯಕೆ ಜೊತೆಗೊಂದಿಷ್ಟು ಪ್ರೇಮ ಬದುಕಿಗೆ ಉಸಿರಿಗೂ ಈಗ ಕನಸಿನ ಕಾಲ ಬಂಧನವೂ ಬಿಡುಗಡೆಯೂ ಏಕಕಾಲಕ್ಕೆ ಇನ್ನೂ ಕಾಯುವುದೋ ಅನಿವಾರ್ಯ ಸೊಗಸು ಬೆಳಗು ಮಧ್ಯಾಹ್ನ ಅಪರಾಹ್ನ ಇಳಿಸಂಜೆ, ಮುಸ್ಸಂಜೆ ಗೋಧೂಳಿ ಸಮಯಗಳ ಬೆಸೆದ ಬೆಸುಗೆಯ ಪ್ರೇಮ ಇನ್ನೇನು ಈ‌ ಬದುಕಿಗೆ ಮುದ್ದು ; ಬಂದಾಯಿತು ಇನಿ ಇನಿಯ ರೋಮಾಂಚನಕೆ ಹೊಸ‌ ಭಾಷ್ಯ ಬರೆದಾಯಿತು ತೇರಾ ಸಹರಾ ಮಿಲ್ಗಯಾ ಯೇ ಜಿಂದಗಿ ಗಲೇ ಲಗ್ಜಾ ಯೇ ಜಿಂದಗಿ ಗಲೇ ಲಗ್ಝಾ … ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಾಹಿತ್ಯ ಶ್ವೇತಾ ಮಂಡ್ಯ ಸಾಹಿತ್ಯ, ಒಳಿತ ಉಣಿಸಿ ಕೆಡುಕ ಅಳಿಸಿ ಮನವ ಅರಳಿಸಿ ಸರ್ವರ ಹಿತ ಬಯಸುವ ಸಾಹಿತ್ಯ; ಅಂತ:ಕರಣವ ತಟ್ಟಿ ಮಾನವೀಯತೆಯ ಮುಟ್ಟಿ ಕರ್ತವ್ಯಪ್ರಜ್ಞೆಯ ಎಚ್ಚರಿಸಿ ಬದುಕಿನುದ್ದ ದಾರಿದೀಪವಾಗುವ ಸಾಹಿತ್ಯ, ಸರ್ವಜನ ಸರ್ವ ಭಾವಗಳ ಶುದ್ದೀಕರಿಸಿ ಮನುಕುಲದ ಕಲ್ಮಶಗಳ ತೊಳೆಯುವ ಸಾಹಿತ್ಯ; ನಿನ್ನ ಮೆಚ್ಚಿ ನಿನ್ನಪ್ಪಿ ಕೊಂಡವರೆಲ್ಲಾ ನಡೆಯುತ್ತಿದ್ದರೆ ನಿನ್ನಾಶಯದಂತೆಯೇ ಬದುಕುತ್ತಿದ್ದರೆ ತಾವು ಬರೆಯುವಂತೆ…..!!! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಮ್ಮ ಅಂತರಂಗ ವೀಣಾ ರಮೇಶ್ ಮೌನದಲಿ ಅದೆಷ್ಟೋ ಮಾತುಗಳನು ಕಟ್ಟಿ ಹಾಕಿದ್ದೇನೆ ಗೆಳತಿ ಏಕಾಂತದಲ್ಲಿ ಒಂದಷ್ಟು ಪದಗಳಿಗೆ ಮೌನದಲ್ಲೆ ತಿವಿದಿದ್ದೇನೆ ಗೆಳತಿ ಕಣ್ಣುಗಳು ಹೊಳೆಯಾಗಿವೆ ಹರಿದು ಬಿಡಲೆ ದೋಣಿ ನಿನ್ನ ನೆನಪಿನ ಹುಟ್ಟು ಹಾಕಿ ಉಸಿರು ಕಟ್ಟಿದೆ ಪ್ರೀತಿ ಎದೆಯ ಪಂಜರದಲಿ, ಉಸಿರು ಬಿಡಲು ತತ್ವಾರ ಎದೆಯ ಬಡಿತವೊಂದೇ ಉಳಿದಿದೆ ಮೌನ ಪರದೆಯ ಹಿಂದೆ ನಿನ್ನ ತುಂಟ ನಗು ಅಣಕಿಸುತ್ತಿದೆ ಈ ಕತ್ತಲೆಯ ನೀರಸ ಮೌನ ಒಂದಷ್ಟು ನಕ್ಷತ್ರಗಳ ನುಂಗ ಬಾರದೆ ಒಂದು ಸಿಹಿಮುತ್ತು, ಒಂದು ಸಿಹಿ ನಗುವಿಗೆ ಬಾಚಿ ತಬ್ಬಿಕೊಳ್ಳಲು, ನೆನಪಿನ ಕಂಬಳಿ ಯೊಳಗೆ ಬಚ್ಚಿಟ್ಟು ಕೊಳ್ಳಲು ಯಾವ ಅಂತರದ ಗೊಡವೆಯು ಇದು? ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕಾಡಿಗೆಯ ಹೆಜ್ಜೆ ಪೂರ್ಣಿಮಾ ಸುರೇಶ್ ಹುಣ್ಣಿಮೆಯಂತಹ ಹೆಣ್ಣೊಂದು ಶುಕ್ಲ-ಕೃಷ್ಣ ಪಕ್ಷಗಳಲಿ ಹೊರಳಿ ತುಸುತುಸುವೇ ಅರಳಿ ಒಂದಿಷ್ಟು ಬಾಡಿ,ಕರಗಿ ಮತ್ತೆ ಹುಡುಹುಡುಕಿ ಅಮಾವಾಸ್ಯೆಯಂತಹ ಗಂಡನ್ನು ಪ್ರೇಮಿಸಿದಳು! ಕಪ್ಪು- ಎಲ್ಲಿರಿಸುವೆ ಕುಹಕಕೆ ಉತ್ತರಿಸುವಂತೆ ಬಚ್ಚಿಟ್ಟುಕೊಂಡಳು ಕಣ್ಣೊಳಗೆ ಅವನನ್ನು ಕಾಡಿಗೆಯಾಗಿಸಿ! ಅವನೀಗ ಅವಳ ನಗುವಿಗೆ ನೀಲ ಆಗಸವಾಗುತ್ತಾನೆ. ಅವಳ ನೋವಿಗೆ ಕರಿನೀರಾಗಿ ಧುಮುಕಿ ಜಲಪಾತವಾಗುತ್ತಾನೆ ಕಡಲಾಗಿ ಸುಯ್ಲಿಟ್ಟು ಆವಿಯಾಗಿ ಮಳೆಯಾಗಿ ಅವಳ ತೋಯಿಸುತ್ತಾನೆ. ಜಗಕೆ ಕಾಣುವ ಕಣ್ಣಿನ ಬೆಳಕು, ಮೊರೆವ ಕಡಲಲೆಯ ಸುಯ್ಲು ಸುರಿವ ಮಳೆ ಹನಿಗಳು ಅರ್ಥವಾಗುವುದೇ ಇಲ್ಲ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬೋನ್ಸಾಯ್. ಶಶಿಕಲಾ ವೀ ಹುಡೇದ. ಈ ಮಣ್ಣ ಕಣಕಣದ ಶಕ್ತಿಯೆಲ್ಲವೂ ನನ್ನ ಒಡಲಾಳದಲಿ ಮೈಮನಗಳಲಿ ವಸಂತನ ಪ್ರೀತಿಯ ಗಾಯದ ಗುರುತುಗಳು ಒನಪಿಲ್ಲದ ವೈಯ್ಯಾರದಲಿ ಒಡ್ಡು ಮುರಿಯುವ ಗಿಡ್ಡ ಮೈ ನೆತ್ತರೆಲ್ಲವೂ ಹರಿತ್ತಾಗಿ ಎಲೆಎಲೆಯೂ ಮಿಂಚು ಚಳಿಗಾಳಿಗೆ ಅದರುವ ಮೈ ನಾನು ಬದುಕಿರುವೆನೆಂಬುದಕೆ ಪುರಾವೆ ಬುಡದಡಿಯಲಿ ತಟ್ಟೆಯಲಿ ನಾಕೇ ನಾಕಿಂಚಿನ ನೆಲವೇ ಸಾಕ್ಷಿ ನಿಡುಸುಯ್ಯುವ ನನ್ನ ಪ್ರತಿ ಉಸುರಿಗೆ ನನ್ನ ಸುತ್ತಲೂ ಹೆಣೆದಿರುವ ನನ್ನದೇ ಬೇರುಗಳು ಶೋಕಿಸುವ ಬಿಳಲುಗಳು ಎಂಟ್ಹತ್ತು ಎಲೆಗಳು ಬೋನ್ಸಾಯ್ ಹೆಸರಲಿ ಕುಬ್ಜ ಬದುಕು ವರುಷಗಳುರುಳಿದರೂ ಬೆಳೆಯಲಾರೆ ಬೀಗಲಾರೆ ತೂಗಲಾರೆ ತೊನೆಯಲಾರೆ ಹೂತು ಹಣ್ಣಾಗಬೇಕೆಂದವಳು ಚಾಚಿ ನೆರಳಾಗಬೇಕೆಂದವಳು ಇಂತು ನಿಂತಿದ್ದೇನೆ ವಾಮನಳಾಗಿ ಸುಡುವ ದೈತ್ಯ ನೆರಳುಗಳ ನಡುವೆ ಇದೆಂಥ ಬದುಕ ಕೊಟ್ಟಿರಿ ನನಗೆ ಓ ನೆತ್ತರು ನೀರಾದವರೆ! ಇನ್ನಿರಲಾರೆ ಕುಲಾವಿ ಕಟ್ಟಿಕೊಂಡು ಸಾವಿನ ಈ ತೊಟ್ಟಿಲಲಿ ಹಸಿರಾದರೂ ಹೊನ್ನಲ್ಲ ನೆರಳಿಲ್ಲ ಗೂಡಿಲ್ಲ ಸರ್ಕಸ್ಸಿನ ಜೋಕರನಂತೆ ನನ್ನ ಮೈಯ ಪೆಟ್ಟುಗಳೆಲ್ಲ ನಿಮ್ಮ ಮೋಜಿನ ಸರಕು ಮೈ ಚಾಚಿ ಮಲಗಲೂ ಮರ್ಜಿ ಕಾಯಬೇಕು ಪುರುಷ ಹುನ್ನಾರಗಳಿಗೆಂದು ಪ್ರಕೃತಿಯೆಷ್ಟು ಬಲಿಯಾಗಬೇಕೊ ಇನ್ನೂ ಓ ನೆತ್ತರು ನೀರಾದವರೆ ಇನ್ನಾದರೂ ಕರಗಿ ಹರಿಯಿರಿ ನಮ್ಮಂತೆ ಉಸುರಿ ಹಸುರಿ ನೆರಳಾಗಲು ಕಲಿಯಿರಿ ನಿಂತ ನೆಲವನು ಯಾರೂ ಕಸಿಯಲಾಗದು ಅದೋ ನೋಡಿ! ಬೀಳುತಿದೆ ನನ್ನ ಬೀಜ ಈ ನೆಲದಲಿ ಬಿದ್ದು ಮೊಳತೇ ತೀರುವುದು ಮುಗಿಲಗಲ ಮಿಗೆಯಗಲ ಇನ್ನು ನಿಮ್ಮ ಕಣ್ಣಿಗೆ ಬೀಳದ ಅಂತರಿಕ್ಷದ ಒಂದು ಚುಕ್ಕೆ ಮಾತ್ರ ನಾನು. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಾರಯ್ಯ ಸಂಭವಿಸು ಮದ್ದೂರು ಮಧುಸೂದನ್ ಕೇಡುಗಾಲಕೆ ನಾಯಿ ಮೊಟ್ಟೆ ಇಕ್ಕಿದೆ ಮೊಟ್ಟೆ ಇಕ್ಕಿದ್ದು ದಿಟವೇ ? ಪ್ರಶ್ನಿಸುವ ಬಾಯಿಗಳಿಗೆ ಈಗಾಗಲೇ ಕರ್ಪ್ಯೂ ಜಾರಿಯಾಗಿದೆ ಹುತ್ತವೇ ಹಾವನ್ನು ನುಂಗುವ ದುರಿತ ಕಾಲವಿದು ಭುಸಗುಡುವ ಬಾಯಿಗೆ ಬಾಂಬಿಕ್ಕುವ ಭಯ ಚಾಲು ಇದೆ ಬಣ್ಣ ಬಣ್ಣದ ಪ್ರಣಾಳಿಕೆಗಳೆಂಬ ಟಿಕಳಿಗಳನ್ನು ಈಗಾಗಲೇ ಕುಂಡಿ ಮೇಲೆ ಅಂಟಿಸಿಯಾಗಿದೆ ಶಬ್ದಕೆ ನಾಚಿಕೆಯಾಗುವಷ್ಟು ಮೈಕಾಸುರ ಅಬ್ಬರಿಸುತ್ತಿದ್ದಾನೆ ಕಾಶ್ಮೀರದೀ ಕನ್ಯಾಕುಮಾರಿವರೆಗೆ ಚಾಲ್ತಿಯಲ್ಲಿದೆ. ಸಗಣಿ ತಿಂದವರ ಭಕ್ತಿಯ ಮಾರಾಟ ಜೋರಿದೆ ಕಾವಿ ಮರೆಯಲಿ ತ್ರಿಶೂಲಗಳಿಗೂ ನಾಚಿಕೆ ಸಂಭವಿಸಿದೆ ಪ್ರಜಾಪ್ರಭುತ್ವದ ಸಿಂಹಾಸನಕೆ ಇನ್ನುಷ್ಟು ಮೊಳೆ ಬಡಿದು ಬಿಗಿ ಮಾಡಲಾಗುತ್ತಿದೆ ಸಿಂಹಾಸನದಡಿಯಲಿ ಸಿಲುಕಿದ ನಿನ್ನ ಕಿರು ಬೆರಳು ಈಚೆ ಬಾರಲಾರದೆ ಒಳಗೊಳಗೆ ಮಿಡುಕುತ್ತಿದೆ ಬಾರಯ್ಯ ಬಾರೋ ಸಂಭವಿಸು ಶುದ್ದೋದನನ ಮೊಮ್ಮಗನೇ.. ಎಂದು.. *******

ಕಾವ್ಯಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ (ಭಾಗ-1) ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಕಾಣಿಸದೇ ಕಾಡುತಿದೆ ವೈರಾಣು ಕರೋನಾ… ಕಳವಳದಿ ಕಂಗಾಲು ಮನುಜಕುಲ ಸಂಪೂರ್ಣ.. ‍ ಮಾರ್ಚ ತಿಂಗಳಿಂದ ಕರೋನಾ ಎನ್ನುವ ಪದವೇ ಎಲ್ಲರ ಸ್ಥಾಯಿ ಭಾವವಾಗಿದೆ. ಎಲ್ಲಾ ಮುಗಿತು. ಕಲಿತಾಯ್ತು ಮದುವೆಯಾಯ್ತು ಮಕ್ಕಳನ್ನು ಓದಿಸಿ, ಉದ್ಯೋಗಕ್ಕೆ ಸೇರಿಸಿ, ಮದುವೆ ಮಾಡಿ ಸೆಟಲ್ ಮಾಡಿದ್ದಾಯ್ತು ಇನ್ಯಾವಾಗ ದೇವರು ಕರೆಸಿಕೊಂಡರು ಹೋಗಲು ಸಿದ್ಧ ಎಂದು ದಿನಾ ಡೈಲಾಗ್ ಹೇಳುತ್ತಿದ್ದ ಸುತ್ತಮುತ್ತಲ ಮನೆಗಳ ಅಂಕಲ್ ಆಂಟಿಗಳೆಲ್ಲ ನಗು ಮಾತು ಮರೆತು ಜೀವಭಯದಲ್ಲಿ ಮಾಸ್ಕ ಧರಿಸಿ ಅಂಗಳಕ್ಕಿಳಿಯಲು ಭಯಪಡುವುದನ್ನು ನೋಡುವಾಗ ಸಾವು ಯಾರಿಗೂ ಸ್ವೀಕಾರಾರ್ಹ ಸಂಗತಿಯೇ ಅಲ್ಲ ಎನ್ನುವ ಸರ್ವಕಾಲಿಕ ಸತ್ಯ ಸುತ್ತೆಲ್ಲ ಗೋಚರವಾಗುತ್ತಿದೆ. ಬಂದ ಕಷ್ಟವನ್ನು ಎದುರಿಸಲಾರದೇ ಕಂಗಾಲಾದವರು, ಬಂದಿದ್ದನ್ನು ಸ್ವೀಕರಿಸಿದವರು, ಅದನ್ನು ಧೈರ್ಯದಿಂದ ಎದುರಿಸಿದವರು, ತಮ್ಮ ಕಷ್ಟವನ್ನು ಕಟ್ಟಿಟ್ಟು ಇತರರಿಗಾಗಿ ತುಡಿಯುವವರು…ಹೀಗೆ ಹಲವು ಬದುಕುಗಳು,ಕೆಲವು ಘಟನೆಗಳು ಕಾಡುತ್ತವೆ.. ಕೆಲವಷ್ಟನ್ನು ನಿಮ್ಮೆದುರಿಗಿಡುವ ಯತ್ನ ನನ್ನದು. ಇದೇ ಸಮಾಜದ ಭಾಗವೇ ಆದ ನನಗೂ ಮೊದಲೆರಡು ದಿನ ಕರೋನಾ ಲಾಕ್ ಡೌನ್ ಶಿಕ್ಷೆ ಎನಿಸಿತು. ಶಿಕ್ಷೆ ಎಂದುಕೊಂಡಾಗ ಬಾಲ್ಯದ ಒಂದು ಘಟನೆಯೂ ನೆನಪಾಯ್ತು. ಮಲೆನಾಡಿನ ಪುಟ್ಟ ಹಳ್ಳಿಯೊಂದರಲ್ಲಿ ನಾಲ್ಕನೆಯ ತರಗತಿ ಓದುತ್ತಿದ್ದೆ. ಏಕೋಪಾಧ್ಯಾಯ ಶಾಲೆಯಾಗಿತ್ತು ಅದು. ಒಂದೊಂದು ತರಗತಿಯವರಿಗೆ ಒಂದೊಂದು ವಿಷಯವನ್ನು ಕಲಿಸುತ್ತ, ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದ ನಾಯ್ಕ ಮಾಸ್ತರರ ತಾಳ್ಮೆ ದೊಡ್ಡದಿತ್ತು. ಒಂದು ದಿನ ನಾಲ್ಕು ಗಂಟೆಯ ಹೊತ್ತಿಗೆ ಉಳಿದ ಕ್ಲಾಸಿನವರಿಗೆ ಕಲಿಸಿ ನಮಗೆ ಅವರಿಗೆ ವಿವಿಧ ಚಟುವಟಿಕೆ ಕೊಟ್ಟು ಅವರ ಮೇಜಿನ ಸುತ್ತ ನಿಲ್ಲಿಸಿ ನಮಗೆ ಪಾಠ ಮಾಡುತ್ತಿದ್ದರು. ಅಷ್ಟರಲ್ಲಿ ಬಂದ ಶಾಲಾ ಕಮೀಟಿಯ ಅಧ್ಯಕ್ಷರು ‘ಮಾಸ್ತರೇ ಐದು ನಿಮಿಷ ಬನ್ನಿ ಮಾತನಾಡೋದಿದೆ’ ಎಂದರು. ಇವತ್ತಿಗೆ ಪಾಠ ಸಾಕು. ನೀವು ಇಪ್ಪತ್ತರವರೆಗೆ ಮಗ್ಗಿ ಬರೆಯಿರಿ. ಯಾರೂ ಗಲಾಟೆ ಮಾಡಬೇಡಿ ಅಧ್ಯಕ್ಷರು ಬಂದಿದ್ದಾರೆ. ಎಂದು ಮಕ್ಕಳಿಗೆ ಹೇಳಿ ಶಾಲೆಯ ಕದ ಎಳೆದುಕೊಂಡು ಹೋದರು. ಇಪ್ಪತ್ತಾರು ಜನರಿದ್ದ ಶಾಲೆಯಲ್ಲಿ ಮೂರು ಜನ ಮಾಸ್ತರರು ಹೇಳಿದಂತೆ ಬರೆಯುತ್ತ ಕುಳಿತರು. ಉಳಿದಂತೆ ಕೆಲವರು ಗುಸು ಕುಸು ಮಾತು, ಪಿಸು ಪಿಸು ನಗು ಶುರು ಮಾಡಿದರು, ಕ್ರಮೇಣ ಕೆಲವರು ಕುಳಿತ ಬೇಂಚ ಬಡಿದರು. ಯಾವ್ಯಾವಾಗಿನದೋ ಸಿಟ್ಟನ್ನು ನೆನಪಿಸಿಕೊಂಡು ಕೆಲವರು ಜಗಳ ಆಡಲಾರಂಭಿಸಿದರು. ಕೆಲವರು ಸಣ್ಣ ಹೊಡೆದಾಟ ಶುರು ಮಾಡಿದರು, ಅನೇಕರು ಪ್ರೇಕ್ಷಕರಾದರು. ಕೂಗಾಟ, ಕಿರುಚಾಟ ಎಲ್ಲವೂ ಜೋರಾಯ್ತು. ಮಾನಿಟರ್ ಸುಮಂಗಲಾ ರೂಲ್ ಕಟ್ಟಿಗೆ ಹಿಡಿದು ಕೀರಲು ದ್ವನಿಯಲ್ಲಿ ಎಲ್ಲರನ್ನೂ ಸುಮ್ಮನಿರಿಸಲು ಯತ್ನಿಸಿ ಸೋತು ಒಂದೆಡೆ ಕುಕ್ಕರಿಸಿದಳು. ಅಷ್ಟರಲ್ಲಿ ಒಬ್ಬ ಹುಡುಗ ‘ಇದು ಆಟದ ಸಮಯ’ ಎಂದು ಕಟ್ಟಿಗೆಯಿಂದ ಬೆಲ್ ಮೇಲೊಂದು ಬಾರಿಸಿದರು. ನಾವೆಲ್ಲ ಪಾಟಿ ಪುಸ್ತಕಗಳನ್ನು ಪಾಟೀಚೀಲದೊಳಗೆ ತುರುಕಿ ಮಾಸ್ತರರ ಎಚ್ಚರಿಕೆಯ ಮಾತು ಮರೆತು ಆಟದ ಮೈದಾನಕ್ಕೆ ಧಾವಿಸಬೇಕೆಂದು ಮುಚ್ಚಿದ ಬಾಗಿಲಿನತ್ತ ನಡೆದೆವು *******. ಮುಂದುವರೆಯುವುದು..

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಕಾನ್ಮನೆಯ ಕಾಲುದಾರಿ ಪಶ್ಚಿಮ ಘಟ್ಟದೊಳೆಗೇ ಹುದುಗಿರುವ ದಿನೇಶ ಹಲಿಮನೆಯವರ ಸುತ್ತಲಿನ ಪ್ರದೇಶಗಳಲ್ಲೇ ಹರಿದಾಡುವ ‘ಕಾನ್ಮನೆಯ ಕಾಲುದಾರಿ’ ಎಂಬ ಕಾದಂಬರಿಯೂ..! ದಿನೇಶ ಹಲಿಮನೆಯವರು ನನಗೆ ‘ಸಿರ್ವಂತೆ ಕ್ರಾಸ್‌’‌ ಕಥಾಸಂಕಲನ ಮತ್ತು ‘ಕಾನ್ಮನೆಯ ಕಾಲುದಾರಿ’‌ ಕಾದಂಬರಿ ಕಳುಹಿಸಿ ಎರಡು-ಮೂರು ತಿಂಗಳಾಗಿತ್ತು. ಇವುಗಳಲ್ಲಿ ‘ಸಿರ್ವಂತೆ ಕ್ರಾಸ್’ ಕಥಾಸಂಕಲನದ‌ ಬಗೆಗೆ ನನ್ನ ಅನಿಸಿಕೆ ಬರೆದು ಬಹಳ ದಿನವಾಯಿತು.‌ ಆದರೆ ಈ ‘ಕಾನ್ಮನೆಯ ಕಾಲುದಾರಿ’ ಕಾದಂಬರಿ ಬಗೆಗೆ ಇಷ್ಟು ದಿವಸ ನನ್ನ ಅನಿಸಿಕೆ ಬರೆಯಲಾಗಿರಲಿಲ್ಲ. ಈ ಕಾದಂಬರಿ ಓದಿದ್ದೆನಾದರೂ ಈ‌‌‍ ಕುರಿತು ಬರೆಯಲಾಗಿರಲಿಲ್ಲ. ಹಾಗಾಗಿ ಇಂದು ಅವಡುಗಚ್ಚಿ ಕುಳಿತು ಬರೆದೆನು. ಇದು ನನ್ನ ವ್ಯಯಕ್ತಿಕ ಅನಿಸಿಕೆ ಈ ಕಾದಂಬರಿ ಕುರಿತು ಎಂದು ಹೇಳುತ್ತಾ ನೋಡೋಣ ಬರ್ರಿ ಈ ‘ಕಾನ್ಮನೆಯ ಕಾಲುದಾರಿ’ ಕಾದಂಬರಿ ಬಗೆಗೆ… ಅದು ಹೀಗಿದೆ… ಶಿವರಾಮ ಕಾರಂತರಂತೆ‌ ಪಶ್ಚಿಮ ಘಟ್ಟದೊಳಗೆ ಹುದುಗಿರುವ ದಿನೇಶ ಹಲಿಮನೆಯವರ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಹರಿದಾಡುತ್ತದೆ ಈ ಕಾದಂಬರಿಯ ಕಥಾಹಂದರ. ಅದೇ ಕಾರಣಕ್ಕೇ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಕಾಂಬರಿಕಾರರಾದ ದಿನೇಶ ಹುಲಿಮನೆ ಅವರು ಮೂಲತಃ ಅವರ ಹತ್ತಿರದವರೇ ಎಂಬುದು ಕಾದಂಬರಿಯ ಆಪ್ತತೆಯನ್ನು ಹೆಚ್ಚಿಸುತ್ತದೆ. ಕಾದಂಬರಿಕಾರರು ಪ್ರಾರಂಭದಲ್ಲೇ ಹೇಳುವ ಸಮಾಜದಲ್ಲಿ ಕೆಲವರು ಜೀವನದ ರಥವೇರಿ ಸಾಗಿದರೆ ಮತ್ತೆ ಕೆಲವರು ಬದುಕಿನ ಬಂಡಿಯನ್ನು ಎಳೆಯುತ್ತಾರೆ. ಎಳೆಯುವುದೂ ಕಷ್ಟವಾದಾಗ ತಳ್ಳುವುದು ಸಹಜ. ಆಧುನೀಕರಣ, ಸಂಪ್ರದಾಯ, ಸಂಬಂಧ, ಇತ್ಯಾದಿಗಳ ನಡುವೆ ಸಂಸಾರ ನಡೆಸುವ, ಎಳೆಯುವ ಅಥವಾ ತಳ್ಳುವ ಸಮಾಜದಲ್ಲಿ, ಸಾಂದರ್ಭಿಕವಾಗಿ ನಡೆಯುವ ಎಷ್ಟೋ ಘಟನೆಗಳನ್ನು ನೇರವಾಗಿ ಸರಿ ಅಥವಾ ತಪ್ಪು ಎಂದು ತೀರ್ಮಾನಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗೆಂಬ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಈ ಕಾದಂಬರಿಯನ್ನು ಓದಲೇಬೇಕು… ಈ ಕಾದಂಬರಿ ದಿನೇಶ ಹಲಿಮನೆಯವರ ಮೊದಲ ಕಾದಂಬರಿ ಎಂದರೆ ಒಂದು ಕ್ಷಣ ಬೆರಗಾಗಬೇಕು ನಾವು ಅಷ್ಟು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ..! ಬರವಣಿಗೆ ಎಲ್ಲರಿಗೂ ಒಲಿಯುವುದಲ್ಲ. ಅದೂ ಕಾದಂಬರಿಯನ್ನು ಬರೆಯಲು ಬಹಳ ತಾಳ್ಮೆ ಬೇಕು. ತಮ್ಮ ಮೊದಲ ಪ್ರಯತ್ನದಲ್ಲಿಯೇ ದಿನೇಶ‌ ಹಲಿಮನೆಯವರು ಗೆದ್ದಿದ್ದಾರೆ. ಹೌದು, ಈ ಕಾದಂಬರಿಯಲ್ಲಿ ತೇಜಸ್ವಿಯವರ ಬರವಣಿಗೆಯ ಛಾಯೆ ದಟ್ಟವಾಗಿದೆ ಎಂಬುದೂ ನಿಜ. ಓದುತ್ತಿರುವಾಗ ಹಲವೆಡೆ ಚಿದಂಬರ ರಹಸ್ಯದ ಮುಂದುವರಿದ ಭಾಗವೇ ಇದು ಎಂದು ಎನ್ನಿಸಿದ್ದು ನಿಜವೂ ಹೌದು. ಆದರೆ ಕಾದಂಬರಿಯ ಉತ್ತರಾರ್ಧದಲ್ಲಿ ಆ ನೆರಳಿನಿಂದ ಹೊರಬಂದು ನಾಗಾಲೋಟದಲ್ಲಿ ಮುಂದೆ ಸಾಗಿದ್ದಾರೆ ದಿನೇಶ ಹಲಿಮನೆಯವರು. ನಡುನಡುವೆ ಬರುವ ನಾಗಜ್ಜಿಯ ಪಾತ್ರ ನನಗೆ ಕಾರಂತರ ಮೂಕಜ್ಜಿಯನ್ನೊಮ್ಮೆ ನೆನಪಿಸಿತು ಎಂದರೆ ಅತಿಶಯೋಕ್ತಿಯೇನಲ್ಲ ಎಂಬುದು ನನ್ನ ಭಾವನೆ..! ಎತ್ತು ಕಾಣೆಯಾದಾಗ ಬೈರ ಕಾಡಿನ ನಡುವಿನಲ್ಲಿರುವ ಹುಲಿದೇವರ ಬನಕ್ಕೆ ಬಂದು ಹುಲಿದೇವರ ಕಲ್ಲಿಗೆ ದೂರದಿಂದಲೇ ಕೈಮುಗಿಯುವ ಸನ್ನಿವೇಶ, ಜನರ ನಂಬಿಕೆ, ಹಾಗೂ ಭಯ ಎರಡರ ಪ್ರತಿರೂಪವೂ ಹೌದು. ಹಿಂದೆಲ್ಲ ಹುಲಿಗಳ ಸಂಖ್ಯೆ ಜಾಸ್ತಿ ಇದ್ದಾಗ, ಅಲ್ಲಲ್ಲಿ ಹುಲಿಗಳ ತಾಣವನ್ನು ಗುರುತಿಸುವುದಕ್ಕಾಗಿಯೇ ಹುಲಿದೇವರ ಕಟ್ಟೆ, ಹುಲಿಮನೆ, ಹುಲಿಗುಡಿ, ಹುಲೇಕಲ್ ಅಥವಾ ಹುಲಿಕಲ್ಲು, ಹುಲಿಕಟ್ಟೆ, ಹುಲಿಯೂರು, ಇತ್ಯಾದಿ ಹೆಸರುಗಳು ಜನಿಸಿದ್ದು. ಅಂತಹ ಹೆಸರುಗಳು ಅಸಂಖ್ಯ. ಇಲ್ಲಿ ಬೈರ ಹುಲಿಯಪ್ಪ ದೇವರ ಬಳಿ ಬಂದು ಕೆಂಪನಿಗೆ ಏನೂ ಆಗದೆ ಇರಲಿ, ದೊಡ್ಡ ಹಬ್ಬಕ್ಕೆ ಒಂದು ಬಾಳೆಕೊನೆ ಒಪ್ಪಿಸಿಕೊಡ್ತೀನಿ ಎಂದು ಹರಕೆ ಹೊರುತ್ತಾನೆ. ಅದೂ, ಹುಲಿದೇವರ ಕಲ್ಲಿನ ಬಳಿಗೆ ಹೋಗದೇ..! ಕೆಂಪ ಎಂಬ ಎತ್ತನ್ನು ಒಂದು ಪ್ರಾಣಿ ಎಂದು ನೋಡದೇ ತನ್ನ ಮನೆಯ ಸದಸ್ಯನೇನೋ ಎಂದು ಭಾವಿಸುವ ಬೈರ, ಹುಲಿದೇವರ ಕಲ್ಲಿನ ಬಳಿ ಹೋದರೆ ಮೈಲಿಗೆ ಆಗುತ್ತದೆ ಎಂದೂ ಯೋಚಿಸುತ್ತಾನೆ..! ಹುಲಿಯನ್ನೂ ಒಂದು ಪ್ರಾಣಿ ಎಂದು ಭಾವಿಸದೇ ಒಂದು ದೇವರಾಗಿ ಕಾಣುತ್ತಾನೆ. ಕೊಲ್ಲುವ ಹುಲಿಯೂ ದೇವರೇ… ಸಾಯುವ ಎತ್ತೂ ದೇವರೇ ಎಂಬುದು ಭಾರತೀಯ ಜೀವನ ದರ್ಶನ. ಇಂತಹ ಹಲವು ಘಟನೆಗಳು ಈ ಕಾದಂಬರಿಯಲ್ಲಿ ಸುಂದರವಾಗಿ ವೈಬವಿಕರಿಸಲ್ಪಟ್ಟಿದೆ… ದೊಡ್ದಬ್ಬ ಅಥವಾ ದೀಪಾವಳಿ ಹಬ್ಬದ ಸಡಗರ, ಸೊಬಗು, ಆಚರಣೆಗಳು, ಹಸುಗಳಿಗೆ ಬೇಕಾದ ದಂಡೆ ಹುರಿ ಹೊಸೆಯುವಂತಹ ಪದ್ದತಿಗಳು ಕಾದಂಬರಿಯ ಮೊದಲಲ್ಲಿ ಸೊಗಸಾಗಿ ಚಿತ್ರಿತವಾಗಿವೆ. ಇದೇ ಆಚರಣೆಗಳನ್ನು ಕಾದಂಬರಿಯ ಅಂತ್ಯದಲ್ಲಿ, ನಿರುತ್ಸಾಹದಿಂದ, ಯಾಂತ್ರಿಕವಾಗಿ ಚಿತ್ರಿಸುವ ಮೂಲಕ ಕಾದಂಬರಿಕಾರ ಕಾದಂಬರಿ ಸಾಗಿ ಬಂದ ಕಾಲಘಟ್ಟವನ್ನು ಹಾಗೂ ನಮ್ಮ ಇಂದಿನ ಬದುಕು ಸಾಗಿಬಂದ ಕಾಲಘಟ್ಟವನ್ನೂ ಚಿತ್ರಿಸಿದ್ದಾರೆ. ಬೂರೆ ಹಬ್ಬ, ಬೂರ್ಗಳು, ಬಿಂಗಿಪದ, ಕಹಿ ಸವತೆಯನ್ನು ತಂದು ಹಂಡೆಗೆ ಕಟ್ಟಿದ್ದು, ಹಬ್ಬದ ದಿನ ಒಬ್ಬರ ಮನೆಯಲ್ಲಿ ಜಾಗಟೆ ಸದ್ದು ಮುಗಿಯುತ್ತಿದ್ದಂತೆ ಮೊತ್ತೊಂದು ಮನೆಯಿಂದ ಕೇಳಿಬರುವುದು, ದನ-ಕಾರುಗಳನ್ನು ಬೆಚ್ಚುವುದು ಇತ್ಯಾದಿ ವಿವರಗಳನ್ನು ಓದುತ್ತಿರುವಾಗ, ಹಬ್ಬದ ಸೊಗಸು ಮೊತ್ತೊಮ್ಮೆ ನಮ್ಮ ಕಣ್ಣು-ಮನಸುಗಳಲ್ಲಿ ತುಂಬಿಕೊಳ್ಳುತ್ತದೆ. ವಿಳ್ಯದ ಎಲೆಯಿಂದ ದೃಷ್ಟಿ ತೆಗೆಯುವ ನಂಬಿಕೆ, ಕೊಟ್ಟೆ ಕಡುಬು ಮಾಡುವ ಬಗೆ, ಬಿಂಗಿ ಪದ ಹಾಡಲು ಬರುವವರಿಗೆ ಹೋಳಿಗೆ-ಕಡುಬು ಕೊಡುವ ಸಂಪ್ರದಾಯ ಇತ್ಯಾದಿಗಳನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಕಾದಂಬರಿಕಾರ… ಕುರಿ ಕಡಿದು ಬಾಡೂಟ ಮಾಡುವುದೇ ಆಗಿದ್ದರೂ ಅಲ್ಲಿ ಹಿಂಸೆ ಆಗಬಾರದು ಎಂಬ ಒಂದು ನಂಬಿಕೆ ಹಳ್ಳಿಗಳಲ್ಲಿ ಈಗಲೂ ಇದೆ. ಅದನ್ನೇ ಮಾದಿ ಈರನಿಗೆ “ಥೂ! ಹುಚ್ಚು ಮುಂಡೇಗಂಡಾ, ನಾಲ್ಕೈದು ಕೊಚ್ಚು ಹಾಕಿ ಕಡದ್ಯಂತಲ್ಲೋ, ಎರಡು ಕೊಚ್ಚಿಗೂ ತುಂಡಾಗ್ದೆ ಕುರಿ ಬಿದ್ದು ಒದ್ದಾಡ್ತಂತೆ, ಹಂಗೆಲ್ಲಾ ಮಾಡಿದ್ರೆ ಪಾಪ ಬತೈತೆ, ಕುರಿನಾ ಒಂದೇ ಕೊಚ್ಚಿಗೆ ಕಡಿದ್ರೆ ಸರಿ, ಅದಿಲ್ಲಾ ಅಂದ್ರೆ ನನ್ನ ಕೈಯಾಗೆ ಆಗಲ್ಲಾ ಅಂತ ಸುಮ್ನೇ ಇರಬೇಕಪ್ಪ. ಅದು ಬಿಟ್ಟು ಪರ ಊರೋರ ಮುಂದೆ ಹಿರೇತನ ಎಂತಾಕೆ ಮಾಡೋದು“ ಎಂದು ತಾರಾಮಾರಾ ಬೈದು ಹೇಳುತ್ತಾಳೆ. ಕಾದಂಬರಿಕಾರರು ಈ ತರಹದ ಸಣ್ಣಸಣ್ಣ ವಿವರಗಳನ್ನೂ, ಸೂಕ್ಷ್ಮ ವಿಚಾರಗಳನ್ನೂ ಕಟ್ಟಿಕೊಡುವ ಮೂಲಕ ಭವಿಷ್ಯದಲ್ಲಿ ಇನ್ನೂ ಸೊಗಸಾದ ಕೃತಿಗಳನ್ನು ಬರೆಯಬಲ್ಲರು ಎಂಬ ನಂಬಿಕೆ ಮೂಡಿಸಿದ್ದಾರೆ… ಬೈರ ನಿಧನನಾಗಿದ್ದಾನೆ ಎಂಬುದನ್ನು ತಿಳಿದ ನಾಯಿ, ಕೊಟ್ಟಿಗೆಯಲ್ಲಿದ್ದ ಎತ್ತುಗಳೂ ನೀರು, ಆಹಾರ ಮುಟ್ಟದೇ ಇದ್ದವು ಎಂದು ಚಿತ್ರಿಸುವ ಕಾದಂಬರಿಕಾರರು ಮಾನವನಿಗಿಂತ ಮೂಕ ಪ್ರಾಣಿಗಳೇ ಮೇಲು ಎಂಬ ಒಂದು ಝಲಕ್ ನೀಡುತ್ತಾರೆ. ಹಳ್ಳಿಗಳಲ್ಲಿ ಜಾತಿ ಜಾತಿಗಳು ಅಸ್ತಿತ್ವದಲ್ಲಿದ್ದರೂ ಅವರ ನಡುವೆ ಇರುವ ಸಾಮರಸ್ಯ ಹೇಗೆ ಕೆಲವರ ಕುತಂತ್ರ, ಸ್ವಾರ್ಥ, ದುರಾಸೆ, ನೀಚತನಗಳಿಂದ ಹಾಳಾಗುತ್ತದೆ, ಹಾಳಾಗುತ್ತಿತ್ತು ಎಂಬ ವಿಷಯ ಪ್ರಸ್ತಾಪಿಸುತ್ತಾ ಕಾದಂಬರಿ ಬೆಳೆಸುತ್ತಾ ಹೋಗಿದ್ದಾರೆ. ಪ್ರೀತಿ, ಪ್ರೇಮ, ಬದುಕು ಕಟ್ಟಿಕೊಳ್ಳಲು ಪಟ್ಟಣಕ್ಕೆ ವಲಸೆ ಹೋಗುವುದು, ಮುಂದುವರಿದು ವಿದೇಶಕ್ಕೂ ಹೋಗುವುದು, ಅವುಗಳಿಂದ ಕುಟುಂಬ ಮಟ್ಟದಲ್ಲಿ ಆಗುತ್ತಿರುವ ಸಂಕಷ್ಟಗಳು, ತಂದೆ, ಅಣ್ಣ ತೀರಿದರೂ ವಿಷಯ ತಿಳಿಸಲಾಗದ ಪರಿಸ್ಥಿತಿ ಇಂತಹ ಹಲವಾರು ವಿಷಯಗಳು, ನಮ್ಮ ಇಂದಿನ ಬದುಕಿನ ಪ್ರತಿಫಲನವೇ ಸರಿ, ಮತ್ತು ಕಾದಂಬರಿರಕಾರು ಅವುಗಳನ್ನು ಎಲ್ಲೂ ಕೃತಕವೆನ್ನಿಸುವಂತೆ ಬರೆದಿಲ್ಲ. ಬಲಿಷ್ಟರಾದವರು ತಮ್ಮ ಸ್ವಾರ್ಥಕ್ಕೆ ಈ ಕುಟುಂಬಕ್ಕೆ ಕಟ್ಟಿ ಕೊಡಲು ಹೊರಟಾಗ ಬರುವ ಒಂದು ವಾಕ್ಯ “ಕಾನ್ಮನೆಯ ಕಾಲುದಾರಿಯಲ್ಲಿ ಹುಲ್ಲು ಬೆಳೆಯದಿರಲಿ“ ಎಂಬುದು ಇಷ್ಟವಾಯಿತು. ನಮ್ಮ ಮನದ ದಾರಿಯಲ್ಲೂ ಹುಲ್ಲು ಬೆಳೆಯದಿರಲಿ, ಅಂದರೆ ನಮ್ಮ ಮನದಲ್ಲೂ ಉತ್ತಮ ವಿಚಾರಗಳು ಪದೇಪದೇ ಓಡಾಡುತ್ತಾ ಇರಲಿ… ಹೇಗೆ ಹಿಂದುಳಿದವರನ್ನು ಕೆಲವು ಸ್ವಾರ್ಥಿಗಳು ಬಳಸಿಕೊಳ್ಳುತ್ತಾರೆ, ಹೇಗೆ ಕೆಲವು ತತ್ವಗಳು ಜನರನ್ನು ಹಾಳುಮಾಡುತ್ತವೆ. ಅನ್ಯಧರ್ಮದ ಸಂಘಟನೆಗಳ ಮುಖವಾಡ ಹೇಗೆ ನಿಧಾನವಾಗಿ ಬಯಲಾಗುತ್ತದೆ, ಹೇಗೆ ಅನ್ಯಾಯವಾಗಿ ಪಾಪದ ಜನರು ತಮ್ಮದಲ್ಲದ ತಪ್ಪಿಗೆ ನಷ್ಟ, ಸಂಕಟ ಅನುಭವಿಸುತ್ತಾರೆ ಎಂಬ ವಿವರಗಳನ್ನೂ ಕಾದಂಬರಿಕಾರರು ಸೊಗಸಾಗಿ ಸೇರಿಸಿದ್ದಾರೆ… ಕಾದಂಬರಿ ಮೊದಮೊದಲು ತೇಜಸ್ವಿಯವರ ಬರಹಗಳಂತೆ ಆಪ್ತವಾದರೆ, ನಂತರ ನಮ್ಮನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ ಕೂಡಾ..! ವಿವಾಹದ ಬಗ್ಗೆ “ಮೇದಿನಿ ಮಠ“ ದ ಸ್ವಾಮಿಗಳ ನಿಲುವು, ಅವರನ್ನು ತಮ್ಮೆಡೆಗೆ ಸೆಳೆಯಲು ಹೋಗಿ ತಾವೇ ಕಕ್ಕಾಬಿಕ್ಕಿಯಾಗುವ ದೊಡ್ಡೇಗೌಡ ಮತ್ತು ಮಹಾಬಲ, ಅಲ್ಲಿನ ಚರ್ಚೆಗಳು ನಮ್ಮನ್ನು ವಿಚಾರ ಮಾಡಲು ಪ್ರಚೋದಿಸುವುದೂ ನಿಜ… ಆದರೆ ಅಂತ್ಯ ನನಗೆ ತೃಪ್ತಿ ತರಲಿಲ್ಲ. ಅಂತ್ಯವನ್ನು ಓದುಗರ ಕಲ್ಪನಾಶಕ್ತಿಗೇ ಬಿಡುವುದು ಒಂದು ಕಥನ ತಂತ್ರ ಹೌದಾದರೂ, ಇನ್ನಷ್ಟು ಮುಂದುವರಿಸಬಹುದಿತ್ತೇನೋ ಎನ್ನಿಸಿದ್ದಂತೂ ನಿಜ… *********** ಕೆ.ಶಿವು.ಲಕ್ಕಣ್ಣವರ

ಪುಸ್ತಕ ಪರಿಚಯ Read Post »

ಕಾವ್ಯಯಾನ

ಕಾವ್ಯಯಾನ

ಮೌನಗೀತೆ ವಿಶಾಲಾ ಆರಾಧ್ಯ ನೀನಂದು ಬಳಿ ಸರಿದು ಒಲವಿಂದ ನಗು ತಂದು ಬೀಸುವ ಗಾಳಿಯೊಲು ಹಿತವೆನಿಸಿದೇ ನಾನದನು ಹೇಳದಲೆ ಗುಟ್ಟಾಗಿ ಬದಿಗಿಟ್ಟು ಎದೆಯ ಗೂಡಲಿ ಒಂದು ಗುಡಿ ಮಾಡಿದೆ ಗುಡಿಯ ಗರ್ಭದಿ ಅಲ್ಲಿ ಮೂರುತಿಯು ನೀನಾದೆ ಕಣ್ಣ ಭಕುತಿಗೆ ತಾನೇ ಪ್ರತಿಧ್ವನಿಸಿದೆ ವನವೆಲ್ಲಾ ಓಡಾಡಿ ಪತ್ರೆಯದು ಸಿಗದಾಗಿ ಮನದೊಲವ ಪತ್ರೆ ಯನೇ ನಿನಗಿರಿಸಿ ನೀನಾರೋ ನಾನಾರೋ ಒಂದು ನೋಟದಿ ಒಲಿದು ಹೃದಯದಂಗಳವೆಲ್ಲ ಬೆಳಕಾಗಿದೆ ಮತ್ತೊಮ್ಮೆ ನೀ ಸುಳಿದು ಮನದ ಭಾವವ ಉಲಿದು ಚಿತ್ತದಲಿ ದಿಟವನ್ನು ಅನುಗೊಳಿಸಿಡು || ******

ಕಾವ್ಯಯಾನ Read Post »

You cannot copy content of this page

Scroll to Top