ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಜ್ಞಾನಪೀಠ ಪ್ರಶಸ್ತಿ ವಿಜೇತರು

ದ.ರಾ.ಬೇಂದ್ರೆ ಕೆ.ಶಿವು ಲಕ್ಕಣ್ಣವರ ವರ ಕವಿ ದ. ರಾ. ಬೇಂದ್ರೆಗೆ ಅಂಬು ತಾಯಿಯೇ ಬದುಕಿನ ಮೊದಲ ಪ್ರೇರಕ ಶಕ್ತಿ..! ಈ ಅಂಬು ತಾಯಿಯ ನೆನಪಿನಲ್ಲಿ ದ.ರಾ.ಬೇಂದ್ರೆಯವರು ‘ಅಂಬಿಕಾತನಯದತ್ತ’ವಾದರು… ಈ ಅಂಬಿಕಾತನಯದತ್ತ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿರುವ ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು 31ನೆ ಜನವರಿ 1896ರಂದು ಧಾರವಾಡದ ಪೋತನೀಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಹುಟ್ಟಿದರು. ಅವರ ತಂದೆ ರಾಮಚಂದ್ರ ಪಂತರು. ತಾಯಿ ಅಂಬೂ ತಾಯಿ. ತಂದೆಯವರು ತೀರಿಕೊಂಡ ಮೇಲೆ ತನ್ನ ಇನ್ನೊಬ್ಬ ಚಿಕ್ಕಪ್ಪ ಬಂಡೋಪಂತರ ಆಶ್ರಯದಲ್ಲಿ ಬೇಂದ್ರೆಯವರ ಬಡ ಕುಟುಂಬ ಆಸರೆ ಪಡೆಯಿತು. ಚಿಕ್ಕಪ್ಪನ ಆಶ್ರಯದಲ್ಲಿಯೇ ಬಿ.ಎ. ವರೆಗಿನ ಅಭ್ಯಾಸ, ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ನಡೆಯಿತು… ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಮೂರು ವರ್ಷ, ಮುಂದೆ ರಾಷ್ಟ್ರೀಯ ಶಾಲೆಯಲ್ಲಿ ಉದ್ಯೋಗ, ತಮ್ಮ 28ನೆಯ ವಯಸ್ಸಿನಲ್ಲಿ ಮಾತೃವಿಯೋಗ, ಮಧ್ಯೆ ಸೊಂಡೂರು ಸಂಸ್ಥಾನದಲ್ಲೂ ಸ್ವಲ್ಪಕಾಲದ ನೌಕರಿ. ಒಂದು ವರ್ಷ ಅಲೆದಾಟ, 1925ರಿಂದ 1932ರವರೆಗೆ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ವಿವಿಧ ಕ್ಷೇತ್ರಗಳ ದುಡಿಮೆ. ನರಬಲಿ ಕವನದ ಕಾರಣವಾಗಿ 3 ತಿಂಗಳು ಹಿಂಡಲಗಿ ಕಾರಾಗೃಹ ವಾಸ ಶಿಕ್ಷೆ. ಮತ್ತೆ ಅಲೆದಾಟ, 1935ರಿಂದ 1940ರವರೆಗೆ 5 ವರ್ಷಗಳ ಕಾಲ ನಿರುದ್ಯೋಗ. ಅನಂತರ ಅಣ್ಣ ಮಾಸ್ತಿ ಅವರ ಬೆಂಬಲದಿಂದ ‘ಜೀವನ’ ಪತ್ರಿಕೆಯ ಸಂಪಾದಕನೆಂಬ ಗೌರವ ವೃತ್ತಿ. ಒಂದು ವರ್ಷ ಗದಗಿನ ಚೌಹಾನ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ. ಮತ್ತೆ ಒಂದು ವರ್ಷ ಹುಬ್ಬಳ್ಳಿಯ ಇಂಗ್ಲಿಷ್ ಸ್ಕೂಲಿನಲ್ಲಿ ಅಲ್ಪಾವಧಿ ವೃತ್ತಿ. 1942-43ರಲ್ಲಿ ಪೂನಾದ ಕಾಮರ್ಸ್ ಕಾಲೇಜಿನಲ್ಲಿ ಅರ್ಧಕಾಲಿಕ ಕನ್ನಡ ಅಧ್ಯಾಪಕ ವೃತ್ತಿ. ಅನಂತರ 1944ರಲ್ಲಿ ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ವೃತ್ತಿ. ಸುಮಾರು 12ವರ್ಷಗಳ ಕಾಲ ಆ ಹುದ್ದೆಯಲ್ಲೇ ಇದ್ದ ಇವರಿಗೆ 60 ಆಯಿತೆಂದು ಅಲ್ಲಿ ನಿವೃತ್ತಿಯಾಯಿತು. 1956ರಲ್ಲಿ ಆಕಾಶವಾಣಿಯಲ್ಲಿ ಮೊದಲು ಪ್ರೊಡ್ಯೂಸರ್ ಆಗಿ, ಆಮೇಲೆ ಸಲಹೆಗಾರರಾಗಿ ಧಾರವಾಡದಲ್ಲಿ ಮತ್ತೆ ಒಂದು ಉದ್ಯೋಗ. ಸರ್ಕಾರಕ್ಕೆ ಆಕಾಶವಾಣಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಪಿ.ಎಂ. ಲಾಡ್ ಅವರ ಮೂಲಕ ದೊರೆತ ಉದ್ಯೋಗ ಅದು. ಇಡೀ ಬದುಕಿನ ತುಂಬಾ ಉದ್ಯೋಗ ನಿರುದ್ಯೋಗಗಳ ಚೆಲ್ಲಾಟ. ಈ ಮಧ್ಯೆಯೂ ಧೃತಿಗೆಡದ ಕವಿಚೇತನ ಬೇಂದ್ರೆಯವರದು… ಬೇಂದ್ರೆಯವರ ವಿವಾಹವಾದದ್ದು 1919ರಲ್ಲಿ, ಹುಬ್ಬಳ್ಳಿಯಲ್ಲಿ. ನರಗುಂದದಲ್ಲಿ ಸಾರ್ವಜನಿಕ ಸೇವಾ ಇಲಾಖೆಯಲ್ಲಿ ನೌಕರರಾಗಿದ್ದ ಶ್ರೀ ಜೋಗಳೇಕರ ವಾಸುದೇವರಾಯರ ಮಗಳಾದ ರಂಗೂತಾಯಿಯೇ ಇವರ ಮಡದಿ. ಬೇಂದ್ರೆ ಮನೆತನಕ್ಕೆ ಬಂದ ಮೇಲೆ ಅವರ ಹೆಸರು ಲಕ್ಷ್ಮೀಬಾಯಿ. ಲಕ್ಷ್ಮೀಬಾಯಿ ಹಾಗೂ ಬೇಂದ್ರೆಯವರ ಸಂಸಾರ ಕಂಡದ್ದು ಹೆಚ್ಚಾಗಿ ಕಷ್ಟದ ದಿನಗಳು. ಅದರಲ್ಲಿಯೂ ಹುಟ್ಟಿದ 9 ಮಕ್ಕಳಲ್ಲಿ 6 ಮಕ್ಕಳು ಕಣ್ಣ ಮುಂದೆಯೇ ಇಲ್ಲವಾಗಿ ಉಳಿದವರು 2 ಗಂಡು ಮಕ್ಕಳು (ವಾಮನ ಬೇಂದ್ರೆ ಮತ್ತು ಪಾಂಡುರಂಗ ಬೇಂದ್ರೆ) ಮತ್ತು ಒಬ್ಬಳು ಮಗಳು ಶ್ರೀಮತಿ ಮಂಗಳ. ಬಡತನದ ಕುಲುಮೆಯಲ್ಲಿ ಬೇಯುತ್ತಿದ್ದಂತೆಯೇ ಕರುಳ ಕುಡಿಗಳು ಕಣ್ಣಮುಂದೆ ಬಾಡಿಹೋದಾಗ ಆ ದುಃಖದ ಅನುಭವವನ್ನೂ ಎದೆಯಲ್ಲಿ ತುಂಬಿಕೊಂಡವರು ಅವರು… ಇಷ್ಟಾದರೂ ಬೇಂದ್ರೆಯವರ ದೃಷ್ಟಿ ‘ಬಡತನ ಸಿರಿತನ ಕಡೇತನಕ ಉಳಿದಾವೇನ’ ಎಂಬುದು. ಅಲ್ಲದೆ ಅವರ ಕಾವ್ಯದ ಮೂಲದೃಷ್ಟಿ – ಎನ್ನಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ – ಎಂಬ ರಸಯೋಗಿಯ ಸಂಕಲ್ಪದಿಂದ ಪ್ರಚೋದಿತವಾದದ್ದು. ರಸವೆ ಜನನ ವಿರಸ ಮರಣ ಸಮರಸವೇ ಜೀವನ ಎಂದು ಬದುಕನ್ನು ಎದೆಗಪ್ಪಿಕೊಂಡು ಅರಳಿದ ಕಾವ್ಯಚೇತನ ಅವರದ್ದು… ಬೇಂದ್ರೆ ಅಥವಾ ‘ಬೇನ್’ರೆ ಅಂದರೆ ದೇವಾಲಯಗಳಲ್ಲಿ ಋಕ್ ಮಂತ್ರಗಳನ್ನು ಪಠಿಸುವವರು ಎಂಬ ಅರ್ಥ ಇದೆಯಂತೆ. ಇವರ ಮೂಲ ವಂಶಜರು ಮಹಾರಾಷ್ಟ್ರದ ರತ್ನಗಿರಿಯಿಂದ ಬಂದು ಕರ್ನಾಟಕದ ಶಿರಹಟ್ಟಿಯಲ್ಲಿ ನೆಲೆಸಿದರು. ಇವರ ಮುತ್ತಜ್ಜ ರಾಮಭಟ್ಟ ಎಂಬುವರು ಕೊನೆಗೆ ಸಂನ್ಯಾಸ ದೀಕ್ಷೆ ಪಡೆದು ಸಮಾಧಿಸ್ತರಾದರೆ, ಬೇಂದ್ರೆಯವರ ಅಜ್ಜ ಅಪ್ಪಾಭಟ್ಟ ತಪಃಶಕ್ತಿಯ ಜೊತೆಗೆ ಕಾವ್ಯಶಕ್ತಿಯನ್ನೂ ಪಡೆದಿದ್ದರಂತೆ. ಇವರು ಸತ್ಯನಾರಾಯಣ ಕಥೆಯನ್ನು ರಚಿಸಿದ್ದರೆಂದು ಹೇಳುತ್ತಾರೆ… ಬೇಂದ್ರೆಯವರ ಬದುಕಿನಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳ ಹೆಸರುಗಳನ್ನು ಹೇಳುವುದು ಅಷ್ಟು ಸುಲಭದ ಮಾತಲ್ಲ. ಅಂಬೂ ತಾಯಿಯೇ ಅವರ ಬದುಕಿನ ಮೊದಲ ಪ್ರೇರಕ ಶಕ್ತಿ. ಅವರ ಸಂಕೇತವಾಗಿಯೇ ತಮ್ಮ ಕಾವ್ಯನಾಮವನ್ನು ಅಂಬಿಕಾತನಯದತ್ತ ಎಂದು ಮಾಡಿಕೊಂಡರು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯ ಕವಿ ಹುಯಿಲಗೋಳ ನಾರಾಯಣರಾಯರು ಇವರ ಶಿಕ್ಷಕ ವರ್ಗದಲ್ಲಿ ಒಬ್ಬರಾಗಿದ್ದರು. ಇನ್ನೊಬ್ಬ ಮಹತ್ವದ ವ್ಯಕ್ತಿಯೆಂದರೆ ಪುಣೆಯ ಫರ್ಗೂಸನ್ ಕಾಲೇಜಿನ ಆಂಗ್ಲಭಾಷೆಯ ಪ್ರಾಧ್ಯಾಪಕರಾದ ಪಟವರ್ಧನ ಅವರು. ಬಾಲ್ಯದುದ್ದಕ್ಕೂ ಆಸರೆಯಾಗಿದ್ದವರು ಅವರ ಕಕ್ಕ ಬಂಡೋಪಂತರು. ಅಧ್ಯಯನ ಬೇಂದ್ರೆಯವರ ಬದುಕಿನ ಒಂದು ಅವಿಭಾಜ್ಯ ಅಂಗ. ಸಂಸ್ಕೃತ, ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಸಾಹಿತ್ಯಗಳನ್ನು ಅಧ್ಯಯನ ಮಾಡಿದವರು ಅವರು. ಎಲ್ಲಕ್ಕಿಂತ ಅತಿ ಮುಖ್ಯವಾದ ವಿಷಯ ಎಂದರೆ ಇವರ ಬದುಕು ಮರಾಠಿ, ಕನ್ನಡ ದ್ವಿಭಾಷಾ ವಾತಾವರಣದಲ್ಲಿದ್ದುದು. ಕನ್ನಡದಲ್ಲಿ ಇಂಥ ದ್ವಿಭಾಷಾ, ದ್ವಿಸಂಸ್ಕೃತಿಗಳ ವಾತಾವರಣದಲ್ಲಿ ಮಾಸ್ತಿ, ಡಿ.ವಿ.ಜಿ., ಪು.ತಿ.ನ ಅವರೂ ಇದ್ದವರೇ ಎಂದರೂ ಬೇಂದ್ರೆಯವರ ಕಾವ್ಯದಲ್ಲಿ ಮರಾಠಿ, ಕನ್ನಡ ಭಾಷಾ ಸಂಸ್ಕೃತಿಗಳ ಸಂಗಮದ ಫಲಸಮೃದ್ಧಿಯನ್ನು ಕಾಣಬಹುದಾಗಿದೆ. ಮರಾಠಿಯ ಜ್ಞಾನೇಶ್ವರಿ, ರಾಮಾಯಣ, ಮಹಾಭಾರತ, ಭಾಗವತ, ವಚನಗಳು, ಕೀರ್ತನ ಸಾಹಿತ್ಯ, ತತ್ವಜ್ಞಾನ, ಸಂಖ್ಯಾಶಾಸ್ತ್ರ, ಖಗೋಳಶಾಸ್ತ್ರ, ಜೋತಿಷ್ಯ ಶಾಸ್ತ್ರ, ಕಾವ್ಯಮೀಮಾಂಸೆ, ಅಲಂಕಾರ, ಉಪನಿಷತ್ತು, ಪಾಣಿನಿಯ ವ್ಯಾಕರಣ, ಕನ್ನಡ ಸಾಹಿತ್ಯ-ಹೀಗೆ ಬಹು ಮುಖ್ಯವಾದ ಅಧ್ಯಯನದಿಂದ ಸಮೃದ್ಧಗೊಂಡ ಚೇತನ ಬೇಂದ್ರೆಯವರದು. ವಿಶ್ವದ ಮಹಾಕವಿಗಳು, ಹಾಗೆಯೇ ಖಲಿಲ್ ಜಿಬ್ರಾನ್, ಜಾರ್ಜ್ ರಸೆಲ್, ಜೆ. ಕೃಷ್ಣಮೂರ್ತಿ, ಅರವಿಂದರು, ಸ್ವಾಮಿ ರಾಮದಾಸ್, ಮಾರಿಸ್ ಮೇಟರ್ಲಿಂಕ್ ಇಂಥ ದಾರ್ಶನಿಕರ ಅನುಭವ ಚಿಂತನ ಸಮುದ್ರಗಳನ್ನು ಕುಡಿದ ಅಗಸ್ತ್ಯ ಇವರು. ಇಂಗ್ಲಿಷ್, ಕನ್ನಡ ಸಂಸ್ಕೃತ ಮತ್ತು ಮರಾಠಿ ಸಾಹಿತ್ಯಗಳ ಅತ್ಯಂತ ಆತ್ಮೀಯವಾದ ಒಡನಾಟ ಪಡೆದಿದ್ದ ಈ ವ್ಯಕ್ತಿತ್ವದಲ್ಲಿ ಎರಡು ಭಾಷಾ ಸಂಸ್ಕೃತಿಗಳ ಸಂಗಮವಾಗಿದ್ದಂತೆಯೇ ನಗರ ಹಾಗೂ ಜಾನಪದ ಸಂಸ್ಕೃತಿಗಳು ಸಂಗಮಗೊಂಡಿದ್ದವು… ಅವರ ಮೊದಲನೇ ಕವನ ಸಂಕಲನವಾದ ‘ಗರಿ’ಯಲ್ಲಿ “ಕನ್ನಡದ ಅಶರೀರವಾಣಿಯು ಸಾವಿರ ಬಾಯಿಗಳಿಂದ ತನ್ನ ಕನಸನ್ನು ಕನ್ನಡಿಸುತ್ತಿದೆ. ಆ ಸಾವಿರ ಬಾಯಿಗಳಲ್ಲಿ ನನ್ನದೊಂದು. ಅದೇ ನನ್ನ ಧನ್ಯತೆ” ಎಂದು ಸಹೃದಯರಿಗೆ ನಿವೇದಿಸಿಕೊಳ್ಳುವ ಮಾತು ಬೇಂದ್ರೆಯವರ ಪ್ರತಿಭೆಯ ದ್ಯೋತಕವಾಗಿದೆ. ಹೀಗಾದುದರಿಂದಲೇ ಕನ್ನಡದ ಎಲ್ಲ ಒಳ್ಳೆಯ ಕಾವ್ಯವು ತನ್ನದೇ ಎನ್ನುವ ನಿರ್ಮತ್ಸರದ ಅಭಿಮಾನ ತಾನೇ ತಾನಾಗಿ ಮೂಡಿತು. ‘ಗೆಳೆಯರ ಬಳಗ’ ಎಂಬ ವಿ.ಕೃ. ಗೋಕಾಕ, ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ರಂ. ಶ್ರೀ ಮುಗಳಿಯಂಥ ಕವಿಗಳ ಬಳಗವನ್ನೇ ಕಟ್ಟಿದರು. ಆ ಗುಂಪು ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಇತಿಹಾಸದ ಒಂದು ಜೀವಂತ ಭಾಗವಾಗಿ ಉಳಿದಿದ್ದಷ್ಟೇ ಅಲ್ಲ ಕವಿಗೆ ಕವಿ ಮುನಿವ ಎಂಬ ಗಾದೆಯನ್ನು ಸುಳ್ಳಾಗಿಸಿತು. ಅದಕ್ಕಿಂತ ಮುಖ್ಯವಾದ ಮಾತು ಎಂದರೆ ಕನ್ನಡದ ತಮ್ಮ ಸಮಕಾಲೀನ ಕವಿಗಳನ್ನು ಕುರಿತ ಅವರ ಧೋರಣೆ. ಯುಗದ ಕವಿಗೆ, ಜಗದ ಕವಿಗೆ ನಮಸ್ಕಾರ ಎಂದು ಕುವೆಂಪು ಅವರನ್ನು ಅಭಿನಂದಿಸುತ್ತ ಅವರ ಚಿತ್ರಾಂಗದಾ ಕಾವ್ಯವನ್ನು ಕುರಿತು ಹೇಳುವಾಗ ಹಿಂದಿನ ಮಹಾಕಾವ್ಯವನ್ನು ಮೀರಿಸಲಿದೆ ಎಂದು ಅಭಿಮಾನಪಟ್ಟಿದ್ದು ಬೇಂದ್ರೆಯವರ ಮುಕ್ತ ಪ್ರಶಂಸೆಯ ಕವಿಹೃದಯವನ್ನು ಪರಿಚಯಿಸುತ್ತದೆ. ಬೇಂದ್ರೆಯವರ ಸನಿಹಕ್ಕೆ ಹೋದ ಹೆಚ್ಚು ಕನ್ನಡ ಕವಿಗಳ ಭಾವನೆ ಇದೇ ತೆರನಾದದ್ದಾಗಿದೆ… ರಸ ಋಷಿ, ಶ್ರೇಷ್ಠ ಕವಿ ಹೀಗೆ ಬಹುವಿಧವಾಗಿ ರಸಿಕರಿಂದ ಗೌರವಿಸಲ್ಪಟ್ಟ ಬೇಂದ್ರೆಯವರ ಕಾವ್ಯ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ಶ್ರೀಮಂತಗೊಳಿಸಿದೆ. ಬೆಳಗು, ರಾಗರತಿ, ಶ್ರಾವಣ, ಯುಗಾದಿ, ಸಣ್ಣ ಸೋಮವಾರ, ಹಕ್ಕಿ ಹಾರುತಿದೆ ನೋಡಿದಿರಾ, ಪಾತರಗಿತ್ತಿ ಪಕ್ಕ, ಹೋತದ ಹುಣಸಿ, ಶ್ರಾವಣ ವೈಭವ, ಚಿತ್ತಿಯ ಮಳೆಯ ಸಂಜೆ ಇಂಥ ನಿಸರ್ಗವನ್ನು ಕುರಿತ ಕವಿತೆಗಳಾಗಲಿ; ಮಾಯಾಕಿನ್ನರಿ, ಹುಬ್ಬಳ್ಳಿಯಾಂವಾ, ಮನಸುಖರಾಯನ ಮಗಳು ಇಂತಹ ಮಾಂತ್ರಿಕ ಕವಿತೆಗಳಾಗಲಿ; ಪುಟ್ಟ ವಿಧವೆ, ನರಬಲಿ, ತುತ್ತಿನಚೀಲ, 33 ಕೋಟಿ, ಕನಸಿನೊಳಗೊಂದು ಕನಸು ಇಂಥ ಸಾಮಾಜಿಕ ಕವಿತೆಗಳಾಗಲಿ; ಕೇಳಿರೊಂದು ಸೋಜಿಗದಂಥ ಬದುಕಿನ ಗಹನತೆಯ ಕಡೆಗೆ ಮನಸೆಳೆಯುವ ಕವಿತೆಯಾಗಲಿ; ಗೆಳೆಯ ಶಂಕರದೇವ, ಗುರುದೇವರಂಥ ವ್ಯಕ್ತಿತ್ವಗಳನ್ನು ಕುರಿತು ಬರೆದ ಕವಿತೆಗಳಾಗಲಿ; ಅನಂತ ಪ್ರಣಯ, ಪ್ರೀತಿ ಇಂಥ ಪ್ರೇಮದ ವಿವಿಧ ಮುಖಗಳನ್ನು ಕುರಿತ ಕವಿತೆಗಳಾಗಲಿ ಬೇಂದ್ರೆಯವರ ಕವಿತೆ ತನ್ನ ಸಾಚಾತನದಿಂದ ಮೆರೆಯುತ್ತದೆ… ಬೇಂದ್ರೆಯವರ ಕಾವ್ಯದ ಮತ್ತೊಂದು ವೈಶಿಷ್ಟ್ಯ ಎಂದರೆ ಬದುಕೇ ಕಾವ್ಯವಾಗುತ್ತ ಹೋಗುವ ಪವಾಡಸದೃಶ ಶಕ್ತಿ. ನೀ ಹಿಂಗ ನೋಡಬ್ಯಾಡ ನನ್ನ, ನಾನೊಂದು ನೆನೆದರೆ, ಸಖೀಗೀತ, ನಾದ ಲೀಲೆ, ಪಾಡು, ಹೋದ ಬುಧವಾರ – ಇಂಥ ಕವಿತೆಗಳು ಅವರ ಬದುಕಿಗೆ ತೀವ್ರವಾದ ಆಘಾತವುಂಟು ಮಾಡಿದ ಮಗನ ಸಾವು, ಸಂಸಾರದ ವಿರಸ, ತನ್ನ ಬದುಕಿನ ಕಥೆ-ವ್ಯಥೆಗಳು, ಮಡದಿ ತನ್ನನ್ನು ಬಿಟ್ಟು ಹೋದದ್ದು, ಇಂಥ ಘಟನೆಗಳಿಂದ ಮೂಡಿದವುಗಳಾಗಿವೆ. ಬದುಕೇ ಕಾವ್ಯವಾಗುವ ಸಹಜ ಕವಿ ಹೃದಯವನ್ನು ಇಂಥ ಕಡೆ ಗುರುತಿಸಬಹುದು. ಬದುಕಿಗೆ ತೀವ್ರವಾಗಿ ಸ್ಪಂದಿಸುವ ಕವಿಚೇತನವಾದದ್ದರಿಂದಲೇ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಪಾತರಗಿತ್ತಿ ಪಕ್ಕಗಳ ವೈಭವಗಳನ್ನು ನವಿಲು ಗರಿಗೆದರಿದಂತೆ ಮೈತೆರೆಯುತ್ತಾ ಹೋಗುತ್ತದೆ. ಶ್ರಾವಣವಾಗಲಿ, ಧಾರವಾಡದ ಚೆಲುವಾಗಲಿ ಬದುಕಿನ ಕಾವ್ಯ ಅಥವಾ ಸುಂದರ ಮುಖವಾಗಲೀ ಈ ಪ್ರತಿಭೆಗೆ ಸದಾ ಆಹ್ವಾನವಾಗಿರುತ್ತದೆ. ಕನ್ನಡದಲ್ಲಿ ಬೇಂದ್ರೆಯವರಷ್ಟು ವಿಫುಲವಾಗಿ ಹಾಗೂ ಕಾವ್ಯಮಯವಾಗಿ ಕೌಟುಂಬಿಕ ಗೀತೆಗಳನ್ನು ರಚಿಸಿದ ಕವಿಯನ್ನು ಕಾಣುವುದು ಕಷ್ಟ. ಗಂಡು ಹೆಣ್ಣಿನ ಪ್ರೀತಿ ಹಾಗೂ ವಿರಸ ವಿಕೋಪಗಳನ್ನು ತುಂಬಾ ಕಾವ್ಯಮಯವಾಗಿಸಿದ ಪ್ರತಿಭೆ ಇವರದ್ದು… ಬೇಂದ್ರೆಯವರ 27ಕವನ ಸಂಕಲನಗಳು ಪ್ರಕಟವಾಗಿವೆ. ಈ ಕವನ ಸಂಕಲನಗಳನ್ನು ಅವಲೋಕಿಸಿದಾಗ ಬದುಕನ್ನು ಅದರ ಆಳ, ವಿಸ್ತಾರ ಹಾಗೂ ವೈವಿಧ್ಯದಲ್ಲಿ ಕಂಡಿರಿಸಿದ ಮಹಾ ಪ್ರತಿಭೆಯೊಂದು ನಮಗೆದುರಾಗುತ್ತದೆ. ವಚನ ಪರಂಪರೆಯಲ್ಲಿ ರಚಿತವಾದ ವಿನೂತನ ಕಾಂತಿಯ ಕರುಳಿನ ವಚನಗಳು, ಮಾಂತ್ರಿಕತೆಯಿಂದ ಕಳಕಳಿಸುವ ಸುನೀತಗಳು ಅಲ್ಲದೆ ಕನ್ನಡದ ಅನುಭಾವ ಪರಂಪರೆಯನ್ನು ಮುಂದುವರೆಸಿರುವುದು ಬೇಂದ್ರೆಯವರ ವೈಶಿಷ್ಟ್ಯವಾಗಿದೆ. ಬೆಳಗು ರೀತಿಯ ನಿಸರ್ಗ ಗೀತೆಯಿಂದ ಆರಂಭಿಸಿದ ಜೋಗಿ, ಓಂ ಸಚ್ಚಿದಾನಂದ ಇಂಥ ಕವಿತೆಗಳವರೆಗೆ ಇದರ ಹರವಿದೆ. ಕನ್ನಡದ ಪರಂಪರೆಯನ್ನು ಹಾಡಿ ಕರ್ನಾಟಕದ ಏಕೀಕರಣದ ಸಂಘಟನೆಯನ್ನು ಇವರ ಕಾವ್ಯ ನಡೆಸಿದ ರೀತಿ ಮುಖ್ಯವಾದದ್ದು. ಮಾನವನನ್ನು ಸದಾ ಕಾಡುವ ಹಸಿವು, ಬಡತನಗಳು ಕೂಡ ಅನ್ನದೇವರು, ಅನ್ನಬ್ರಹ್ಮದ ದೇಗುಲದಲ್ಲಿ ಇಂಥ ಕವಿತೆಗಳಿಗೆ ಕಾರಣವಾಗಿವೆ. ಬಂಗಾಳದಲ್ಲಿ ನಡೆದ ಮಾರಣ ಹೋಮವನ್ನು ಕುರಿತು ಬರೆದ ‘ನರಬಲಿ’ ಕವಿಯನ್ನು ಅಂದಿನ ಸರ್ಕಾರದ ಕೋಪಕ್ಕೂ ಗುರಿಯಾಗಿಸಿ ಸೆರೆಮನೆಗೆ ತಳ್ಳಿದ್ದು ಐತಿಹಾಸಿಕ ಘಟನೆ. ಬದುಕಿನ ಬಡತನ, ಕಷ್ಟ-ಕಾರ್ಪಣ್ಯದ ಮಧ್ಯೆಯೂ ನಿಸರ್ಗದ ಹಾಗೂ ಬದುಕಿನ ಸೌಂದರ್ಯವನ್ನು ಬೊಗಸೆ ಬೊಗಸೆಯಾಗಿ ಸವಿದ, ಹಾಗೆಯೇ ಬದುಕಿದ ಧೀಮಂತ ಪ್ರತಿಭೆ ಬೇಂದ್ರೆಯವರದು. ನಾದದ ನದಿಯೊಳು ಮಿಂದಾಗ ಸೂಜಿ ಹಿಂದ ದಾರದಾಂಗ ಇಂಥ ಅತ್ಯುತ್ತಮವಾದ ಅನೇಕ ಕಾವ್ಯಪಂಕ್ತಿಗಳನ್ನು ಬೇಂದ್ರೆಯವರ ಕಾವ್ಯದ ತುಂಬಾ ಕಾಣಬಹುದು. ಅದಕ್ಕೆ ಕಾರಣ ಈ ಪ್ರತಿಭೆ ವಿಶೇಷವಾಗಿ ರೂಪಕಗಳ ಮೂಲಕವೇ ಕ್ರಿಯಾತ್ಮಕವಾಗತೊಡಗುವುದು. ಉದಾಹರಣೆಗೆ ಅತ್ಯಂತ ಸರಳ ಎಂಬಂತೆ ಕಾಣುವ ಬಡವ ಬಡವಿ ಕವನವನ್ನೇ ನೋಡಬಹುದು… ಜೋಗಿಯಂಥ ಹೆಚ್ಚು ಸಂಕೀರ್ಣವೂ, ಕಿಂಚಿದ್ ಸ್ಪಷ್ಟವೂ ಹಾಗೂ ಅಧ್ಯಾತ್ಮಿಕವೂ ಆದ ಕವಿತೆಯನ್ನು ಬಿಟ್ಟು ಇಡೀ ಸಂಜೆಯೇ ಒಬ್ಬ ಸುಂದರ ಪ್ರಣಯಿನಿಯಾಗಿ ಎದ್ದು ಮೂಡಿಬರುವಂತೆ ಚಿತ್ರಿತವಾಗಿರುವ ಮಾಂತ್ರಿಕವಾದ, ರಾಗರತಿಯಂಥ ಕವಿತೆಯನ್ನು ಬಿಟ್ಟು ಸರಳವೂ, ಸಹಜವೂ ಆದರೆ ಬೇಂದ್ರೆಯವರ ಕಾವ್ಯ ಪಡೆಯುವ ಸಾರ್ಥಕ್ಯದ ರೀತಿಯನ್ನು ವ್ಯಂಜಿಸುವಂಥದ್ದು ಆಗಿದೆ ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಎಂದು ಸುಂದರವಾಗಿ ಮೂಡುವ’ ಬಡವ ಬಡವಿ ಕವನ. ಬೇಂದ್ರೆಯವರು ಅನೇಕ ಕವಿತೆಗಳನ್ನು ಅನುವಾದಿಸಿದ್ದಾರೆ. ಅವುಗಳಲ್ಲಿ ನಮ್ಮ ಕೊನೆಯ ಶರಣು ಹಾಗೂ ಮೇಘದೂತ ಕವಿತೆಗಳು ಅನುವಾದಗಳು. ಅರವಿಂದರ ಸಾವಿತ್ರಿಯನ್ನು ಮತ್ತೆ

ಜ್ಞಾನಪೀಠ ಪ್ರಶಸ್ತಿ ವಿಜೇತರು Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ದೌರ್ಬಲ್ಯದ ಸಾಮರ್ಥ್ಯ ಅವ್ಯಕ್ತ ದೌರ್ಬಲ್ಯದ ಸಾಮರ್ಥ್ಯ ಇವತ್ತಿನ ಕಥೆಯ ವಿಶೇಷವೇ ಹೆಚ್ಚಿನ ಮಕ್ಕಳಲ್ಲಿ ಕಂಡುಬರುವ ತಳಮಳ, ನೋವು-ನಲಿವುಗಳಿಗೆ ಕಾರಣವಾಗುವುದು. ನಾನು ಗಮನಿಸಿದ ಹಾಗೆ ಈ ಸಮಸ್ಯೆ ಎಂಟನೇ ಕ್ಲಾಸಿನ ಪ್ರೌಢ ಮಕ್ಕಳಲ್ಲಿ ಶುರುವಾದರೆ ಎಲ್ಲಿಯವರೆಗೆ ಬೇಕಿದ್ದರೂ ಹೋಗಬಹುದು. ಇವತ್ತಿನ ದಿನ ನಾನೊಂದು ಸಹಜವಾದ ಸಮಸ್ಯೆಯನ್ನು ತೆಗೆದುಕೊಂಡು ಮಕ್ಕಳಲ್ಲಿ ಮಾತನಾಡುವ ಎಂದು ಶುರುಮಾಡಿದೆ. ಅಲ್ಲಿ ಕ್ಲಾಸಲ್ಲಿದ್ದ ಎಲ್ಲ ಮಕ್ಕಳಿಗೂ ಒಂದು ಅಸೈನ್ಮೆಂಟ್ ಕೊಟ್ಟೆ.. ಎಲ್ಲರೂ ಒಂದು ಚೀಟಿ ತೆಗೆದುಕೊಂಡು ನಿಮಗೆ ಸಹಜವಾಗಿ ನೋವುಂಟುಮಾಡುವ ಬೇರೆಯವರ ಟೀಕೆ ಟಿಪ್ಪಣಿಗಳನ್ನು 4 ಪಾಯಿಂಟ್ಗಳಲ್ಲಿ ಬರೆಯಿರಿ ಅಂದೆ. ಮೊದಲು ಎಲ್ಲರೂ ಹಿಂದು-ಮುಂದು ನೋಡಿದರು, ಸ್ವಲ್ಪ ನಾಟಕದ ನಗೆ ಹೊನಲು ಹರಿಸಿದರು…. ನಾನು ಹೇಳಿದೆ ‘ಇದನ್ನು ಬರೆದರೆ ನಿಮಗೆ ಒಂದು ಹೊಸ ವಿದ್ಯೆ ಕಲಿಸುತ್ತೇನೆ ನಿಮ್ಮ ದೌರ್ಬಲ್ಯವನ್ನು ನಿಮ್ಮಸಾಮರ್ಥ್ಯವನ್ನಾಗಿ ಮಾಡುತ್ತೇನೆ. ಸ್ವಲ್ಪ ಪ್ರಯತ್ನ ಮಾಡಿ…’ನಂತರ ಒಂದೊಂದೇ ಮಗು ಬರಿಲಿಕ್ಕೆ ಶುರು ಮಾಡ್ತು…ಬರದ್ರು 3 4 5 ಇತರ ಹಲವು ವಿಷಯ, ಹಲವು ನೋವುಗಳ ಪಟ್ಟಿ ರೆಡಿಯಾಯಿತು. ಒಬ್ಬೊಬ್ಬರಾಗಿಯೇ ಓದಿ ಈಗ ಎಂದೆ.. ‘ಮಿಸ್ ನನಗೆ ನೀನು ಕಪ್ಪಗಿದ್ದೀಯ ನಿನ್ನ ಸ್ನೇಹ ಬೇಡ ಎಂದಿದ್ದಾರೆ. ಮನಸ್ಸಿಗೆ ತುಂಬಾ ನೋವಾಗುತ್ತದೆ’ ಎಂದು ಅವಳ ಕಥೆ ಹೇಳಿ ಮರುಗಿದಳು. ಇನ್ನೊಬ್ಬ ಎದ್ದು ‘ಮಿಸ್ ನೀನು ದಪ್ಪಗಿದ್ದೀಯಾ, ನಮ್ಮ ಜೊತೆ ಸರಿಹೊಂದುವುದಿಲ್ಲ, ಬೇರೆ ಕಡೆ ಇರು ಎಂದು ನನ್ನನ್ನು ಎಲ್ಲರೂ ದೂರ ಮಾಡುತ್ತಾರೆ ಮನಸ್ಸಿಗೆ ನೋವಾಗುತ್ತದೆ’ ಎಂದು ಅವನ ಕಥೆ ಹೇಳಿದ…ಮತ್ತೊಬ್ಬಳು ಎದ್ದುನಿಂತು ‘ಮಿಸ್ ನಾನು ಕುಳ್ಳಗಿರುವುದರಿಂದ ನನ್ನನ್ನು ಎಲ್ಲರೂ ಕುಳ್ಳಿ ಕುಳ್ಳಿ ಎಂದು ಕರೆಯುತ್ತಾರೆ. ನನಗೆ ತುಂಬಾ ಕಿರಿಕಿರಿಯಾಗುತ್ತದೆ’ ಅಂತ ಅವಳ ಕಥೆ…ಹೀಗೆ ಒಬ್ಬರಾದ ಮೇಲೊಬ್ಬರು ಕುಳ್ಳಗಿರುವುದು, ಹೆಚ್ಚು ಉದ್ದ ಇರೋದು, ಕರ್ರಗೆ ಇರುವುದು, ತುಂಬಾನೇ ಬೆಳ್ಳಗಿರುವುದು, ದಪ್ಪಗಿರುವುದು, ಸಣ್ಣಕ್ ಇರುವುದು, ಉಗ್ಗುವುದು, ಹುಬ್ಬುಗಳು ಕೂಡಿರುವುದು, ಇತ್ಯಾದಿಗಳು… ಎಲ್ಲ ಮಕ್ಕಳಲ್ಲೂ ಒಂದು ಅಥವಾ ಇನ್ನೊಂದು ಮನಸ್ಸಿಗೆ ಕೂಡಿದ ಸಮಸ್ಯೆಗಳಿವೆ ಎಂದು ನನಗೆ ಗೊತ್ತಿತ್ತು ಅದು ಇವತ್ತು ಸ್ವಲ್ಪ ಮಟ್ಟಿಗೆ ಹೊರಗೆ ಬಂದಂತಾಯಿತು,.. ನಾನೇ ಹೇಳಿದೆ ‘ಎಲ್ಲರೂ ಈಗ ಐದು ನಿಮಿಷ ಸುಮ್ಮನೆ ಕೂತ್ಕೊಳ್ಳಿ. ಮತ್ತೆ ನಿಮ್ಮ ನಿಮ್ಮ ಚೀಟಿಯಲ್ಲಿರುವ ಘಟನೆಗಳನ್ನು ತಾಳ್ಮೆಯಿಂದ ಓದಿ. ಅದರಲ್ಲಿ ಸತ್ಯ ಯಾವುದು ನೋಡಿ ಹೇಳಿ. ನನ್ನನ್ನು ಕೇಳಿದರೆ,ನಾನು ಸಣ್ಣವನಿದ್ದಾಗ, ನನ್ನನ್ನು ಹೆಚ್ಚಿನ ಮಕ್ಕಳು ಶಾಲೆಯಲ್ಲಿ ಕುಳ್ಳಿ ಕುಳ್ಳಿ ಎನ್ನುತ್ತಿದ್ದರು, ಆದರೆ ಸತ್ಯವೆಂದರೆ ನಾನು ಹೆಚ್ಚಿನ ಮಕ್ಕಳಿಗೆ ಹೋಲಿಸಿದರೆ ಕುಳ್ಳಗೆ ಇದ್ದೇನೆ ಎಂದು ನಾನು ತಿಳಿದಿದ್ದೆ. ಹಾಗಾಗಿ ನನ್ನ ಪ್ರಕಾರ ಕುಳ್ಳಿ ಎಂದರೆ ಅದು ನನ್ನಲ್ಲಿರುವ ಒಂದು ಸಾಮರ್ಥ್ಯವೇ ಹೊರತು ದೌರ್ಬಲ್ಯವಲ್ಲ, ಮತ್ತೆ ಯಾಕೆ ಬೇಸರ ಮಾಡಿಕೊಳ್ಳಬೇಕು’ ಎಂದು ಹೇಳಿದೆ. ‘ನೀವು ನಾನು ಹೇಳಿದ್ದನ್ನು ಮಾಡಿ’ಎಂದು ಹೇಳಿದೆ. 10 ನಿಮಿಷ ಬಿಟ್ಟು ಕೇಳಿದೆ…. ‘ನಿಮಗೆ ಆ ಪಟ್ಟಿಯಲ್ಲಿ ಇರುವ ನೋವಾಗುವ ವಿಷಯಗಳ ಗುಣವು ನಿಮ್ಮಲ್ಲಿವೆಯೆ????’ ಅನಿಸಿಕೆಗಳು ಮಿಶ್ರಿತವಾಗಿ ಬಂದದ್ದು ನೋಡಿ ಸಂತೋಷವಾಯಿತು. ಸತ್ಯವನ್ನು ಸತ್ಯದಂತೆ ತೆಗೆದುಕೊಂಡವರು ಕೆಲವರು, ಹೇಳಿದ ಮಾತಲ್ಲಿ ಸಾಧ್ಯತೆಗಳನ್ನು ವಿಶ್ಲೇಷಿಸಿದವರು ಕೆಲವರು. ‘ಹೌದು ನಿಜ! ನಾನು ನಿಜವಾಗಲೂ ದಪ್ಪಗಿದ್ದೇನೆ,ಕುಳ್ಳಗಿದ್ದೇನೆ, ಕರ್ರಗಿದ್ದೇನೆ,’ ಇತ್ಯಾದಿ,ಇತ್ಯಾದಿ,ಹೇಳುವ ಗುಂಪೊಂದಾದರೆ; ‘ಇಲ್ಲ,ಇಲ್ಲ ನನ್ನ ಹುಬ್ಬುಗಳೇನು ಅಷ್ಟು ದಪ್ಪನಾಗಿಲ್ಲ, ಅಷ್ಟು ಕೆಟ್ಟದಾಗಿಲ್ಲ, ಸ್ವಲ್ಪ ಕೂಡಿದೆ ಅಷ್ಟೇ….’ಇಂತಹ ಅಭಿಪ್ರಾಯವು ಹಳ್ಳಿ ಗುಂಪು ಇನ್ನೊಂದು…… ನಂತರ ನಾನು ಹೇಳಿದೆ ‘ಸಾಮಾನ್ಯವಾಗಿ ನಾವೆಲ್ಲರೂ ನಮ್ಮ ನಿಜ ಗುಣಗಳನ್ನು ಒಪ್ಪಿಕೊಳ್ಳುವುದಿಲ್ಲ. ನಾವು ಒಪ್ಪಿಕೊಂಡು ಬಿಟ್ಟರೆ ಅದು ಎಂದಿಗೂ ನಮ್ಮ ದೌರ್ಬಲ್ಯವಾಗಿ ಉಳಿಯುವುದಿಲ್ಲ. ಹಾಗಾಗಿ ನೀವೆಲ್ಲರೂ ಇನ್ಮೇಲೆ ಯಾರೇ ನಿಮ್ಮ ಬಗ್ಗೆ ಏನೇ ಹೇಳಿದರೂ ಮೊದಲು ಅದು ನೀವು ಅಹುದೇ ಎಂದು ಆಲೋಚಿಸಿ, ಹೌದಾದರೆ ಒಪ್ಪಿಕೊಂಡು ಬಿಡಿ, ಅಲ್ಲವಾದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ….’ ಮಕ್ಕಳಿಗೆ ಇನ್ನೂ ಸರಿಯಾಗಿ ಅರ್ಥ ಮಾಡಿಸಲು ಅಷ್ಟಾವಕ್ರ ಎಂಬ ಪಂಡಿತೋತ್ತಮನ ಕತೆಯನ್ನು ಮಕ್ಕಳಿಗೆ ಹೇಳಿದೆ. ಇದರಲ್ಲಿ ಇಡೀ ಸಭೆ ಅವನನ್ನು ನೋಡಿ ನಗುವಾಗ ಅಷ್ಟಾವಕ್ರ ಒಂದು ಮಾತನ್ನು ಹೇಳುತ್ತಾನೆ, “ ನಾನು ದೈಹಿಕವಾಗಿ ವಕ್ರವಾಗಿರಬಹುದು,ಆದರೆ ನೀವುಗಳು ಮಾನಸಿಕವಾಗಿ ವಕ್ರ ವಕ್ರವಾಗಿದ್ದೀರ”. ಕತೆ ಮುಗಿಯುವಷ್ಟರಲ್ಲಿ ಈ ವಿಷಯವು ಮಕ್ಕಳ ಮನಸ್ಸನ್ನು ಮುಟ್ಟಿತ್ತು.ಅದೇ ಒಂದು ನೆಮ್ಮದಿ. ನಮ್ಮ ಸಮಾಜದಲ್ಲಿ ಮಕ್ಕಳ ನ್ಯೂನ್ಯತೆಗಳನ್ನು ಅವರ ಸಾಮರ್ಥ್ಯವನ್ನಾಗಿ ಮಾಡಲು ಯಾವುದೇ ಪುಸ್ತಕವಿಲ್ಲ, ಪರೀಕ್ಷೆಯಿಲ್ಲ,ಶಾಲೆಯೂ ಇಲ್ಲ.ಅಂಕಗಳು ಮಾತ್ರವಲ್ಲ,ಅವರ ವ್ಯಕ್ತಿತ್ವವೂ ವಿಕಸನವಾಗುವುದು ಮುಖ್ಯ. “ನಮ್ಮ ಜೀವನದ ಅಂಕಪಟ್ಟಿಯನ್ನು ಅನುಭವಗಳಿಂದ ತುಂಬಿಸಿದರೆ, ಹೊಸ ವ್ಯಕ್ತಿತ್ವ ಹೊರಹೊಮ್ಮುವುದು ಖಂಡಿತ “ ************

ಅವ್ಯಕ್ತಳ ಅಂಗಳದಿಂದ Read Post »

ಅಂಕಣ ಸಂಗಾತಿ

ಜ್ಞಾನಪೀಠ ಪ್ರಶಸ್ತಿ ವಿಜೇತರು

ವಿಶ್ವ ಮಾನವ” ಬರಹಗಾರ ಕುವೆಂಪು..! ಕೆ.ಶಿವು ಲಕ್ಕಣ್ಣವರ ವಿಶ್ವ ಮಾನವ” ಬರಹಗಾರ ಕುವೆಂಪು..! ಮಲೆನಾಡಿನ ಹಿಂದುಳಿದ ವರ್ಗದಿಂದ ಹುಟ್ಟಿ ಬಂದ ಕುವೆಂಪು ಅವರು ತಾವೇ ಹೇಳಿಕೊಂಡಂತೆ ಮಲೆನಾಡಿನ ಕವಿ. ಕುವೆಂಪು ಅವರು ಈ ದೇಶದ ಸಮಕಾಲೀನ ಸೃಜನಶೀಲತೆಯ ಉತ್ಕರ್ಷದ ನಿಜವಾದ ಪ್ರತಿನಿಧಿಯಾಗಿದ್ದಾರೆ. ಅವರ ಸಾಹಿತ್ಯದ ಹರಹು, ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ “ಪರ್ವತಾರಣ್ಯ ಪ್ರಪಂಚ”ದಂತೆ ಬೆರಗು ಹುಟ್ಟಿಸುತ್ತದೆ. ಅವರ ಮಹಾಕಾವ್ಯ , ಕಾದಂಬರಿ, ನಾಟಕ, ಕವಿತೆ ಈ ಅರಣ್ಯಾನುಭವಗಳೇ ಮೂಲದ್ರವ್ಯದಂತೆ ಸರ್ವವ್ಯಾಪಿಯಾಗಿದೆ. ಅವರ ಬಹುತೇಕ ಎಲ್ಲ ಪಾತ್ರಗಳು ಈ ಅರಣ್ಯ ಸಂಸ್ಕೃತಿಯ ಪ್ರತೀಕಗಳೇ… ಕುವೆಂಪು ಅವರಲ್ಲಿ ಪ್ರಕಟವಾಗುವ ಅದಮ್ಯವಾದ ನಿಸರ್ಗ ಪ್ರೀತಿ ಮೂಲತಃ ಜೀವನಪ್ರೀತಿಯ ವಿಸ್ತರಣೆ. ಈ ನಿಸರ್ಗದ ಕುರಿತ ಉತ್ಕಟವಾದ ಹಂಬಲ ಕೇವಲ ಸೌಂದರ್ಯನಿಷ್ಠವಾದುದು ಮಾತ್ರವಲ್ಲ, ಅದನ್ನು ಮೀರಿದ ಆಧ್ಯಾತ್ಮಿಕ ಅನ್ವೇಷಣೆಯ ಪರಿಣಾಮ ಕೂಡ ಆಗಿದೆ. ಮಲೆನಾಡಿನ ನಿಸರ್ಗದ ಚೆಲುವಿನ ಜೊತೆಗೆ ಅದರ ಒಡಲಿನ ಸಾಮಾಜಿಕ ಬದುಕನ್ನು, ಅದರ ಸಾಮಾಜಿಕ ಸ್ಥಿತ್ಯಂತರಗಳನ್ನು ದಾಖಲಿಸುತ್ತ ಬಂದಿದ್ದಾರೆ ಕುವೆಂಪುರವರು… ಈ ಅರಣ್ಯ ಕೇಂದ್ರಿತ ಸಾಮಾಜಿಕ ಬದುಕಿನ ಮೂಲಕ ಇಡೀ ಭಾರತೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದ ಪಲ್ಲಟಗಳೂ, ತಲ್ಲಣಗಳೂ ಅವರ ಗ್ರಹಣ ಶಕ್ತಿಯಿಂದ ವ್ಯಕ್ತವಾಗಿದೆ. ಅವರ ಸೃಜನಶೀಲ ಪ್ರತಿಭೆ ಪೂರ್ವ ಪಶ್ಚಿಮಗಳ ಚಿಂತನಗಳಿಂದ ಶ್ರೀಮಂತವಾಗಿದೆ. ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಗೌರವ ಸ್ಥಾನವನ್ನು ತಂದುಕೊಟ್ಟಿದೆ. ರಸಋಷಿಯ ಸಾಹಿತ್ಯವೆಲ್ಲವೂ ಒಂದರ್ಥದಲ್ಲಿ ಸ್ವಾತಂತ್ರ್ಯ ಪೂರ್ವದ ಆಶೋತ್ತರಗಳ ಅಭಿವ್ಯಕ್ತಿಯಾಗಿ ಮತ್ತು ಸ್ವಾತಂತ್ರ್ಯ ಭಾರತದ ವಾಸ್ತವವನ್ನು ಕುರಿತ ವಿಮರ್ಶೆಯಾಗಿ ತೋರುತ್ತದೆ. ಹಾಗೆಯೇ ಸಾಹಿತ್ಯ ನಿರ್ಮಿತಿಯ ನೆಲೆಯಲ್ಲಿ ಈ ದೇಶದ ಪರಂಪರೆಗೆ ಅವರು ತೋರಿದ ಸೃಜನಾತ್ಮಕ ಪ್ರತಿಕ್ರಿಯೆಗಳು ಮತ್ತು ಜಾಗತಿಕ ಪ್ರಜ್ಞೆಯನ್ನು ಅವರನ್ನು ಅರಗಿಸಿಕೊಂಡ ಕ್ರಮಗಳು ಹಾಗೂ ಯುಗ ಪರಿವರ್ತನೆಯ ಸೂಕ್ಷ್ಮತೆಗಳಿಗೆ ಸ್ಪಂದಿಸುತ್ತ ಅವುಗಳನ್ನು ಗುರುತಿಸಿ ತಮ್ಮ ಬರಹದ ಮೂಲಕ ಅದಕ್ಕೆ ಹೊಂದುವಂತೆ ಜನಮನವನ್ನು ಸಜ್ಜುಗೊಳಿಸಿದ ಪ್ರಯತ್ನಗಳು ಕುವೆಂಪು ಅವರನ್ನು ಈ ಯುಗಮಾನದ ಮಹತ್ವದ ಲೇಖಕರನ್ನಾಗಿ ಮಾಡಿವೆ… ಆಧ್ಯಾತ್ಮ, ವ್ಯೆಚಾರಿಕತೆ, ಗಾಢವಾದ ನಿಸರ್ಗ ಪ್ರೀತಿಗಳಲ್ಲಿ ಬೇರೂರಿರುವ ಅವರ ಸಾಹಿತ್ಯ ನಮ್ಮ ಪರಂಪರೆಯನ್ನು, ಸಾಮಾನ್ಯ ಜನರ ಬದುಕನ್ನು ನಿರ್ದೇಶಿಸಿದಂತೆಯೇ ಶೋಷಣೆಗೂ ಒಳಗು ಮಾಡಿದ ಪರಂಪರೆಯನ್ನು ತೀಕ್ಷ್ಣ ಹಾಗು ಚಿಕಿತ್ಸಕ ದೃಷ್ಠಿಯಿಂದ ಕಂಡಿದೆ. ಅಲ್ಲದೆ, ಸರ್ವೋದಯ, ಸಮನ್ವಯ ಮತ್ತು ಪೂರ್ಣ ದೃಷ್ಟಿಯ ಬೆಳಕಿನಲ್ಲಿ ಮನುಷ್ಯನ ವ್ಯಕ್ತಿತ್ವದ ಮುಕ್ತ ಬೆಳವಣಿಗೆಯ ಕಾಳಜಿಯನ್ನೂ ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ಕುವೆಂಪು ಅವರ ಚಿಂತನೆ, ಅವರ ಕೊನೆಯ ವರ್ಷದಲ್ಲಿ, ದ್ವೇಷ, ಭಾಷೆ, ಜಾತಿ, ಮತ ಸಿದ್ಧಾಂತಗಳ ಹಾಗೂ ತಮಗೆ ಅತ್ಯಂತ ಪ್ರಿಯವಾದ ಸಾಹಿತ್ಯದ ಮೇರಯನ್ನು ದಾಟಿತ್ತು. ವಿಶ್ವದೃಷ್ಟಿಯನ್ನು ಹೊಂದಿತ್ತು. ಅದರ ಫಲವೇ ವಿಶ್ವಮಾನವ ಸಂದೇಶ, ಇದರ ಗೌರವಾರ್ಥವಾಗಿ ಕುವೆಂಪುರವರಿಗೆ ‘ವಿಶ್ವಮಾನವ’ ಎಂಬ ಬಿರುದಿದ್ದು ಪ್ರಖರ ಬೆಳಕಿನಷ್ಟೇ ಸತ್ಯ… ಕುವೆಂಪು ಅವರ ಕೃತಿಗಳು– ಶ್ರೀ ರಾಮಾಯಣದರ್ಶನಂ-ಮಹಾಕಾವ್ಯ. (ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ) ಕಾನೂರು ಹೆಗ್ಗಡಿತಿ (ಕಾದಂಬರಿ) ಮಲೆಗಳಲ್ಲಿ ಮದುಮಗಳು (ಕಾದಂಬರಿ) ನೆನಪಿನ ದೋಣಿಯಲ್ಲಿ (ಆತ್ಮಚರಿತ್ರೆ) ಕವನ ಸಂಗ್ರಹಗಳು. ನಾಟಕಗಳು. ಕಾವ್ಯ ಮೀಮಾಂಸೆ ಹಾಗೂ ವಿಮರ್ಶಾ ಕೃತಿಗಳು. ವೈಚಾರಿಕ ಲೇಖನಗಳು. ಮಲೆನಾಡಿನ ಚಿತ್ರಗಳು (ಲಲಿತ ಪ್ರಬಂಧಗಳು) ಕಥಾಸಂಕಲನಗಳು. ಜೀವನ ಚರಿತ್ರೆಗಳು. ಕುವೆಂಪುರವರಿಗೆ ಸಂದ ಗೌರವ ಪ್ರಶಸ್ತಿಗಳು ಮಾನವ ಲೆಕ್ಕಕ್ಕೆ ಸಿಗದಷ್ಟು… 1956ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕವಾದರು ಅವರು. 1957ರಲ್ಲಿ ಧಾರವಾಡದಲ್ಲಿ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯ್ಕಕ್ಷ ಪದವಿಯನ್ನು ಅಲಂಕರಿಸಿದರು. 1964ರಲ್ಲಿ ರಾಜ್ಯ ಸರ್ಕಾರದಿಂದ ರಾಷ್ಟ್ರ ಕವಿ ಬಿರುದಿನ ಗೌರವವೂ ಅವರನ್ನು ಹುಡುಕಿಕೊಂಡು ಬಂದಿತು. 1968ರಲ್ಲಿ ಶ್ರೀ ರಾಮಾಯಣದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿವು ಲಭಿಸಿದ್ದು ಸಹಜವಾಗೇ ಇತ್ತು. 1968ರಲ್ಲಿ ರಾಷ್ಟ್ರಪತಿಗಳಿಂದ ಪದ್ಮವಿಭೂಷಣ ಪ್ರಶಸ್ತಿ ಪ್ರದಾನವಾಗಿದ್ದು, ಆ ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿತು. 1988ರಲ್ಲಿ ಕರ್ನಾಟಕ ಸರ್ಕಾರದ ಪ್ರಥಮ ಪಂಪ ಪ್ರಶಸ್ತಿ ಪ್ರದಾನ ಮಾಡಿದ್ದು ಸಹಜವಾಗಿತ್ತು. 1992ರಲ್ಲಿ ಕರ್ನಾಟಕ ಸರ್ಕಾರದ ಪ್ರಥಮ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನವಾಗಿದ್ದು ವಿಶ್ವಮಾನವನ ಸ್ಮರಣೆಯಾಗಿತ್ತು. 1956 ರಿಂದ 95- ೮ ಬೇರೆ-ಬೇರೆ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಬಂದಿದ್ದು ಆ ಡಾಕ್ಟರೇಟ್ ಪ್ರಶಸ್ತಿಗಳ ಘನತೆಯನ್ನು ಎತ್ತಿ ಹಿಡಿದವು. ಕುವೆಂಪುರವರ ಕವಿ ಮನೆ-– ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಹುಟ್ಟಿ ಬೆಳದದ್ದು ಶಿವಮೊಗ್ಗ ಜಿಲ್ಲೆಯ ತೀಥಹಳ್ಳಿ ತಾಲುಕಿನ ಕುಪ್ಪಳ್ಳಿ ಎಂಬ ಗ್ರಾಮದಲ್ಲಿ. ರಾಷ್ಟ್ರಕವಿ ಹುಟ್ಟಿ ಬೆಳದದ್ದು ಕುಪ್ಪಳ್ಳಿ ಮನೆಯಲ್ಲಿ , ಅದು ಈಗ “ಕವಿ ಮನೆ “ಎಂದೇ ಪ್ರಸಿದ್ದವಾಗಿದೆ. ಕ್ರಿ.ಸ ೨೦೦೧ರಲ್ಲಿ ಕವಿ ಮನೆಯನ್ನು ಪುನರ್ ನಿರ್ಮಿಸಿ ಪ್ರತಿಷ್ಟಾಪಿಸಲಾಯಿತು. ೧೫೦ ವರ್ಷಗಳಿಂದ ಕುವೆಂಪುರವರ ಅಜ್ಜ, ಮುತ್ತಜ್ಜಂದಿರು ಬಾಳಿ ಬದುಕಿದ ಮನೆ,ಇದು ಮಲೆನಾಡಿನ ಹಸಿರಲ್ಲಿ ಕಂಗೊಳಿಸುತ್ತ ಇಂದು ಕೂಡ ಪ್ರವಾಸಿಗರ ಕಣ್ಣು ಸೆಳೆಯುತ್ತಿದೆ… “ಕಾಡು ಮತ್ತು ಕೊಡತಲಿರುವ ಸೊಬಗವೀಡು ನನ್ನ ಮನೆ” — ಕುವೆಂಪು… ಇಂತಹ ೧೫೦ ವರ್ಷಗಳ ಹಳೆಯ ಮನೆಯನ್ನು ಈಗ ನವೀಕರಿಸಲಾಗಿದೆ. ಎರಡು ಮಹಡಿಗಳು, ಮದ್ಯ ಒಳ ಅಂಗಳ ಇರುವ ಈ ಮನೆ, ಆ ಕಾಲದ ಮಲೆನಾಡಿನ ಜಮೀನುದರರ ಮನೆಯ ಮಾದರಿಯಾಗಿದೆ. ಭೀಮ ಗಾತ್ರದ ಮುಂಡಿಗೆಗಳು ಕೆತ್ತನೆ ಕೆಲಸದಿಂದ ಕೂಡಿದ್ದು, ಮಲೆನಾಡಿನ ಪ್ರಾಚೀನ ಕಾಷ್ಠ ಶಿಲ್ಪ ವೈಭವವನ್ನು ನೆನಪಿಸುವಂತಿದೆ. ಕುವೆಂಪು ಅವರು ಕುಪ್ಪಳ್ಳಿಯಲ್ಲಿದ್ದಾಗ ಬಳಸುತ್ತಿದ್ದ ಅಧ್ಯಯನ ಕೊಠಡಿ, ಅವರು ಸೂರ್ಯೋದವನ್ನು ವೀಕ್ಷಿಸುತ್ತಿದ್ದ ಪೂರ್ವ ದಿಕ್ಕಿಗೆ ತೆರೆದುಕೊಂದಿರುವ ಮಹಡಿ, ‘ಮನೆಯ ಶಾಲೆ’ ನೆಡುಸುತ್ತಿದ್ದ ಸ್ಥಳ, ‘ಅಜ್ಜಯ್ಯನ ಅಭ್ಯಂಜನದ’ ಬಚ್ಚಲು ಮನೆ, ಕೊಳ,ಮನೆಯ ಸಮೀಪದ ಕೆರೆ ಇವು ಸಂದರ್ಶಕರನ್ನು ಭಾವ ಪರವಶವನ್ನಾಗಿಸುತ್ತವೆ. ಕುವೆಂಪು ಅವರ ವಿವಾಹ ನಡೆದ ಮರದ ಮಂಟಪ, ಮೈಸೂರಿನ ಮನೆಯಲ್ಲಿ ಕುವೆಂಪುರವರು ಬಳಸುತ್ತಿದ್ದ ದಿನನಿತ್ಯದ ಬಳುಸುತ್ತಿದ್ದ ವಸ್ತುಗಳು ಮತ್ತು ಅವರಿಗೆ ಬಂದ ಪ್ರಶಸ್ತಿಗಳನ್ನು ಮಹಡಿಯಲ್ಲಿ ಪ್ರದರ್ಶಿಸಲಾಗಿದೆ. ಅವರ ವಸ್ತುಗಳ ಮೊದಲ ಆವೃತ್ತಿಗಳೂ, ಕೆಲವು ಹಸ್ತ ಪ್ರತಿಗಳೂ ಇಲ್ಲಿವೆ. ಕೆಳ ಅಂತಸ್ತಿನ ಹಿಂಬದಿಯ ಹಜಾರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಸಂಗ್ರಹಿಸಿರುವ ಕುವೆಂಪು ಅವರ ಚಿಕ್ಕವಯಸ್ಸಿನ ಫೋಟೋಗಳು, ಅವರ ಮಕ್ಕಳು, ಮೊಮ್ಮಕ್ಕಳು, ಬಂದುಗಳ ಛಾಯಚಿತ್ರಗಳು, ಕವಿಯ ಬದುಕಿನ ಕೆಲವು ಅವಿಸ್ಮರಣೀಯ ಘಳಿಗೆಗಳ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಕುವೆಂಪು ಅವರ ಕಾಲದಲ್ಲಿ ಮಲೆನಾಡಿನ ಮನೆಗಳಲ್ಲಿ ಬಳಸುತ್ತಿದ್ದ ಗೃಹ ಉಪಯೋಗಿ ವಸ್ತುಗಳನ್ನು, ವ್ಯವಸಾಯದ ಸಲಕರಣೆಗಳನ್ನು ಸಹಾ ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ… ಕುವೆಂಪು ಬಳಸಿದ ಕೆಲವು ವಸ್ತುಗಳು– ಕುವೆಂಪು ಅವರು ಬಳಸುತ್ತಿದ್ದ ಎಲ್ಲಾ ದಿನಚರಿ ವಸ್ತುಗಳನ್ನು ಒಂದು ಮರದ ಶೋಕೇಸಿನಲ್ಲಿ ಇರಿಸಲಾಗಿದೆ. ಇದರಲ್ಲಿ ಕುವೆಂಪು ಅವರು ಉಪಯೋಗಿಸುತಿದ್ದ ಪಂಚೆ, ಚಪ್ಪಲಿ, ಬಿಳಿಯ ನಿಲುವಂಗಿ, ಶಾಲು, ಲೋಟ, ಕೊಡೆ, ಕೊಡೆಯಲ್ಲಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ ಕೊಡೆ. ಆ ಕೊಡೆಯನ್ನು ಊರುಗೋಲಾಗಿ ಕೂಡ ಬಳಸುತಿದ್ದರು. ಜರಿಯ ರುಮಾಲು, ಕೈವಸ್ತ್ರವನ್ನು ಕಾಣಬಹುದು. ಆ ಶೋಕೇಸಿನ ಮೇಲ್ಬಾಗದಲ್ಲಿ ರಸಕವಿಯ ಪುತ್ತಳಿಕೆ, ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆಯುವಾಗ ಧರಿಸಿದ ವಸ್ತ್ರಗಳನ್ನು ಸಂಗ್ರಹಿಸಿ ಇಡಲಾಗಿದೆ. ಈ ಶೋಕೇಸಿನಲ್ಲಿ ಕವಿಯ ಕೂದಲು ಕೂಡ ಇರುವುದು ವಿಶೇಷವಾಗಿದೆ… ಅವರ ಸ್ಮರಣಿಕೆಗಳು ಮತ್ತು ಪ್ರಶಸ್ತಿಗಳು-– ಈ ಶೋಕೇಸಿನಲ್ಲಿ ವಿಶ್ವಮಾನವನಿಗೆ ಸಂದ ಪ್ರಶಸ್ತಿಗಳು ಹಾಗೂ ನೆನಪಿನ ಕಾಣಿಕೆಗಳನ್ನು ಪ್ರದರ್ಶಿಸಲಾಗಿದೆ. ಇದು ಕುವೆಂಪುರವರ ಜೀವನಮಾನ ಸಾಧನೆ, ಸಾಹಿತ್ಯ ಕೃಷಿಯಲ್ಲಿ ಸಂದ ಗೌರವಗಳ ಪ್ರತೀಕವಾಗಿದೆ. ಇಲ್ಲಿ ಹಲವು ನೆನಪಿನ ಕಾಣಿಕೆಗಳು ಕರ್ನಾಟಕದ ಉಚ್ಚ ಪ್ರಶಸ್ತಿ ಕರ್ನಾಟಕ ರತ್ನವನ್ನು ಕಾಣಬಹುದು. ಇದು ನೋಡುಗರ ಬಹು ಮುಖ್ಯ ಕೇಂದ್ರ ಬಿಂದು ಎಂದರೆ ತಪ್ಪಾಗಲಾರದು… ಹೀಗೆ ಕುವೆಂಪು ಅಜರಾಮರ ವಿಶಿಷ್ಟ ಚೇತನ ವಿಶ್ವ ಮಾನವ ಬರಹಗಾರ… ************

ಜ್ಞಾನಪೀಠ ಪ್ರಶಸ್ತಿ ವಿಜೇತರು Read Post »

ಅಂಕಣ ಸಂಗಾತಿ

ಮಾಸದ ನೆನಪು

ನಾನು ಕಂಡ ಹಿರಿಯರು ಅರ್ಥವಿದ:ಎಚ್ಚೆಸ್ಕೆ ಡಾ.ಗೋವಿಂದ ಹೆಗಡೆ ಅರ್ಥವಿದ:ಎಚ್ಚೆಸ್ಕೆ (೧೯೨೦-೨೦೦೮) ಮೈಸೂರಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದೆ.೧೯೮೭ರಲ್ಲಿ ಇರಬಹುದು,’ಗ್ರಾಮಾಂತರ ಬುದ್ಧಿಜೀವಿಗಳ ಯುವ ಬಳಗ,ಭೇರ್ಯ’ ಎಂಬ ಸಂಘಟನೆ ಕವಿಗೋಷ್ಠಿಯನ್ನು ಏರ್ಪಡಿಸಿತ್ತು.’ಕವನ ತನ್ನಿ,ಓದಿ!”ಎಂಬ ಕೋರಿಕೆಯೂ ಇತ್ತು.ಸರಿ,ನಾನೂ ಭಾಗವಹಿಸಿದೆ. ಹಿರಿಯ ಬರಹಗಾರರಾದ ಸಿ.ಭೈರವಮೂರ್ತಿ ಸಭೆಯಲ್ಲಿ ಇದ್ದ ನೆನಪು. ಮರು ತಿಂಗಳ ಕಾರ್ಯಕ್ರಮಕ್ಕೆ ಪತ್ರ ಮೂಲಕ ಆಹ್ವಾನ ಬಂತು. ಹಿರಿಯ ಲೇಖಕ ಎಚ್ಚೆಸ್ಕೆ ಇರುತ್ತಾರೆ ಎಂಬ ಮಾತಿತ್ತು. ಸರಿ, ನಾನು ಹೋದೆ. ಹಳೆಯ ಕಾಲದ ಮನೆ. ಈಗ ಶಿಶುವಿಹಾರವೋ ಏನೋ ಆಗಿತ್ತು. ಸುಮಾರು ೨೫ × ೨೫ ಅಡಿ ವಿಶಾಲವಾದ ಹಾಲ್. ಹೆಚ್ಚು ಎತ್ತರವಿರದ ಛಾವಣಿ.ಸೆಖೆ. ಒಂದೆಡೆ ನಾಲ್ಕು ಕುರ್ಚಿ ಮೇಜು ಇಟ್ಟು ವೇದಿಕೆಯನ್ನು ಕಲ್ಪಿಸಿದ್ದರು. ಎದುರಿಗೆ ಇಪ್ಪತ್ತೈದು  ಮೂವತ್ತು ಜನ  ಕವಿಗಳು – ಕಿವಿಗಳು ! ಮೊದಲಲ್ಲೇ ನನಗೆ ಕವನ ವಾಚನದ ಅವಕಾಶ ಸಿಕ್ಕಿತೆಂದು ನೆನಪು. ಓದುತ್ತಿದ್ದವನು ಹಾಗೆಯೇ ಎಚ್ಚೆಸ್ಕೆ ಅವರತ್ತ ಕಣ್ಣು ಹಾಯಿಸಿದೆ. ನನ್ನತ್ತಲೇ ತಿರುಗಿ ತುಂಬಾ ಆಸ್ಥೆಯಿಂದ ಆಲಿಸುತ್ತಿದ್ದರು! ಬರೆದದ್ದು ಸಾರ್ಥಕವಾಯಿತು ಅಂದುಕೊಂಡೆ. ಅಂದು ನಾನು ಓದಿದ ಕವಿತೆ”ದಾರಿಯೊಂದರ ಇತಿ-ವೃತ್ತ”. ಅಂದು ಎಚ್ಚೆಸ್ಕೆ ಏನು ಮಾತನಾಡಿದರೋ ನೆನಪಿಲ್ಲ ಆದರೆ ಹಿರಿಯರ ಎದುರು ಕವಿತೆ ಓದಿದ ಧನ್ಯತೆ ನನ್ನದಾಗಿತ್ತು. ಅದಾಗಿ ಒಂದೆರಡು ವರ್ಷಗಳಲ್ಲಿ ಅವರ ‘ದವನದ ಕೊನೆ’ ಕವನ ಸಂಕಲನ ಓದಲು ಸಿಕ್ಕಿತು. ಅವರೊಬ್ಬ ಗಮನಾರ್ಹ ಕವಿ ಎಂದು ನನಗೆ ತಿಳಿದದ್ದು ಆಗ. ಅದೇ ಸುಮಾರಿನಲ್ಲಿ ಗೆಳೆಯ ಸುದರ್ಶನ ಅವರ ‘ಎತ್ತರದ ವ್ಯಕ್ತಿಗಳು’ ಸಂಕಲನವನ್ನು ಕೊಟ್ಟು  ವ್ಯಕ್ತಿಚಿತ್ರಗಳನ್ನು ಓದಲು ಹಚ್ಚಿದ. ಎಲ್ಲಾ ನುಡಿಚಿತ್ರಗಳನ್ನು ಓದದಿದ್ದರೂ ಅಪೂರ್ವ ಕನ್ನಡ ಪ್ರೇಮಿ ‘ಅನಂತಪದ್ಮನಾಭ ಸೋಗಾಲ’ರ ಬಗ್ಗೆ ನಾನು ತಿಳಿದದ್ದು ಅಲ್ಲಿ.ಅಲ್ಲಿ ಮಾತ್ರ. ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ, ಕನ್ನಡ ವಿಶ್ವಕೋಶದ ಸಂಪಾದಕರಾಗಿ, ತಮಗೆ ವಿಶಿಷ್ಟವಾದ ಶೈಲಿಯ ಅಂಕಣ ಬರಹಗಳಿಗಾಗಿ ಎಚ್ಚೆಸ್ಕೆ ಸದಾ ಸ್ಮರಣೀಯರು. ದೇಶಬಂಧು, ವಿಶ್ವಕರ್ನಾಟಕ, ಛಾಯಾ, ಕನ್ನಡನುಡಿ, ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಐದಾರು ದಶಕಗಳ ಕಾಲ ಅಂಕಣ ವ್ಯವಸಾಯ ಮಾಡಿದವರು ಅವರು. ವಾರದಿಂದ ವಾರಕ್ಕೆ, ವಾರದ ವ್ಯಕ್ತಿ, ವ್ಯಕ್ತಿ, ವಿಷಯ, ಆರ್ಥಿಕ ನೋಟ, ದುರ್ಬೀನು ತರಂಗ, ಮುಂತಾದವು ಇವರ ಅಂಕಣ ಶೀರ್ಷಿಕೆಗಳು.ಸ್ಟಾರ್ ಆಫ್ ಮೈಸೂರು ಇಂಗ್ಲೀಷ್ ಪತ್ರಿಕೆಯಲ್ಲಿ ಅವರು ಇಂಗ್ಲಿಷ್ ನಲ್ಲಿ ಅಂಕಣ ಬರೆಯುತ್ತಿದ್ದರು ಎಂದು ಕೇಳಿದ್ದೇನೆ. ‘ಸಮದರ್ಶಿ’,’ವಿಚಾರ ಪ್ರಿಯ’ ಅವರ ಲೇಖನ ನಾಮಗಳು. ಅರವತ್ತು ವರ್ಷಗಳಿಗೂ ಮಿಕ್ಕಿದ ಲೇಖನ ವ್ಯವಸಾಯ ಅವರದು. ಬ್ಯಾಂಕಿಂಗ್ ಸೇವೆಯಲ್ಲಿ ಕನ್ನಡ ಬಳಕೆಗೆ ಭದ್ರ ಬುನಾದಿ ಹಾಕಿದ ಆಚಾರ್ಯ ಪುರುಷರು ಅವರು. ಬ್ಯಾಂಕ್ ಉದ್ಯೋಗಿಗಳಿಗಾಗಿ 25ಕ್ಕೂ ಹೆಚ್ಚು ಕನ್ನಡ ಕಮ್ಮಟಗಳನ್ನು ನಡೆಸಿಕೊಟ್ಟವರು. ವಾಣಿಜ್ಯ ಕನ್ನಡ,ಆಡಳಿತ ಕನ್ನಡ,ಕಾನೂನು ಕನ್ನಡ, ವ್ಯವಹಾರಿಕ ಕನ್ನಡ, ಕನ್ನಡ ಬಳಕೆ, ಸಿದ್ಧರು ಪ್ರಸಿದ್ಧರು,ಹೊಂಗನಸು ಕಂಡವರು,ಮಿಂಚಿನ ಹುಡಿ,ವಿಚಾರ ವಿಹಾರ, ಬಿ ಆರ್ ಅಂಬೇಡ್ಕರ್, ರಾಮಾನುಜ:ಜೀವನ ಚರಿತ್ರೆ ಮೊದಲಾದವು ಅವರ ಗ್ರಂಥಗಳು. ಅವರ ಸಮಗ್ರ ಪ್ರಬಂಧಗಳ ಸಂಕಲನ ಪ್ರಕಟವಾಗಿದೆ. ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದವರು ಕನ್ನಡ ವಿಶ್ವಕೋಶದ ಸಂಪಾದನೆಯ ಕಾರ್ಯಕ್ಕಾಗಿ ವಿಶ್ವವಿದ್ಯಾಲಯಕ್ಕೆ ಎರವಲು ಸೇವೆಗೆ ತೆರಳಿ ಅಲ್ಲಿಯೇ ನಿವೃತ್ತಿ ಹೊಂದಿದರು. ಪಿಂಚಣಿಯನ್ನು ಯಾರು ನೀಡಬೇಕು ಎಂಬ ವಿಷಯ ಮೂರು ದಶಕಗಳಾದರೂ ತೀರ್ಮಾನವಾಗದೇ ಎಚ್ಚೆಸ್ಕೆ ಅವರಿಗೆ ಅನ್ಯಾಯವಾಯಿತು ಎಂದು ಕೇಳಿದ್ದೇನೆ. ವಾರದ ವ್ಯಕ್ತಿ, ವ್ಯಕ್ತಿ ವಿಷಯಗಳ ಮೂಲಕ ಸಾವಿರಾರು ವ್ಯಕ್ತಿಗಳ ಬಗ್ಗೆ ಬರೆದ ಎಚ್ಚೆಸ್ಕೆ ಅವರ ಬಗ್ಗೆ ಅಂತರ್ಜಾಲದಲ್ಲಿ,ವಿಕಿಪೀಡಿಯಾದಲ್ಲಿ ಒಂದು ಸರಿಯಾದ ಪರಿಚಯಾತ್ಮಕ ಲೇಖನ ಇಲ್ಲದಿರುವುದು ವಿಷಾದನೀಯ. ಇದು ಎಚ್ಚೆಸ್ಕೆ ಅವರ ಜನ್ಮ ಶತಮಾನೋತ್ಸವ ವರ್ಷ. ಈ ಸಂದರ್ಭದಲ್ಲಿ ಅವರ ಕೊಡುಗೆಯನ್ನು ಸ್ಮರಿಸುವಂತಹ ಕೆಲಸಗಳು ಆಗಬೇಕಾಗಿವೆ. ತಮ್ಮ ವೈವಿಧ್ಯಮಯ ಬರಹಗಳಿಂದ ಕನ್ನಡವನ್ನು ಶ್ರೀಮಂತಗೊಳಿಸಿದ ಧೀಮಂತ ಎಚ್ಚೆಸ್ಕೆ ಅವರಿಗೆ ನಮನ. ————– ಪೂರಕ ಮಾಹಿತಿ– (ಎಚ್ಚೆಸ್ಕೆ ಬೆಳಕು )   ಐದನೆಯ ಸಂಚಿಕೆ  ಎಚ್ಚೆಸ್ಕೆ ಜನ್ಮ ಶತಮಾನೋತ್ಸವ ವರ್ಷ ಎಚ್ಚೆಸ್ಕೆ ಎಂದೇ ಪ್ರಸಿದ್ಧರಾದ ಡಾ ಎಚ್ ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್ ( ೧೯೨೦-೨೦೦೮) ಅವರು ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳ ಸಮನ್ವಯ ಸಮಿತಿಗೆ ಆಚಾರ್ಯ ಸ್ವರೂಪರು. ೧೯೮೦ ರಿಂದ ಸಮಿತಿ, ಎಲ್ಲ ಬ್ಯಾಂಕುಗಳ ಕನ್ನಡ ಸಂಘಗಳು ಹಾಗೂ ಕನ್ನಡ ಕಾರ್ಯಕರ್ತರುಗಳಿಗೆ ಅರಿವು ಮತ್ತು ಸ್ಪೂರ್ತಿಯ ನಿರಂತರ ಚಿಲುಮೆಯಾಗಿದ್ದಾರೆ. ಬ್ಯಾಂಕಿಂಗ್ ಅನ್ನು ಕನ್ನಡದಲ್ಲಿ ಅಭಿವ್ಯಕ್ತಿಸಬೇಕೆಂಬ ನಮ್ಮ ಆಸೆಯನ್ನು ಪೋಷಣೆ ಮಾಡಿದವರು ಎಚ್ಚೆಸ್ಕೆ. ೧೯೮೦ ರಲ್ಲಿ ಸಮನ್ವಯ ಸಮಿತಿ ಪ್ರಕಾಶಿಸಲು ಆರಂಭಿಸಿದ ಬ್ಯಾಂಕಿಂಗ್ ಪ್ರಪಂಚ ಅರ್ಧವಾರ್ಷಿಕ, ನಂತರ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಬ್ಯಾಂಕನ್ನಡ ವಾಙ್ಮಯಕ್ಕೆ , ಹಣ ಮತ್ತು ಬ್ಯಾಂಕಿಂಗ್ ಶಾಸ್ತ್ರ ಕ್ಕೆ ಅಪಾರ ಕೊಡುಗೆಯನ್ನು ನೀಡಿದರು. ಹೊರಗಿನ ಲೇಖಕರ ಮೇಲೆ ಬ್ಯಾಂಕಿಂಗ್ ಪ್ರಪಂಚ ಅಲಂಬಿತವಾಬಾರದು ಎಂದು ಕನ್ನಡದಲ್ಲಿ ಬ್ಯಾಂಕಿಂಗ್ ಬರಹಗಾರರ ಪಡೆಯನ್ನು ನಿರ್ಮಾಣ ಮಾಡಲು ಸಮನ್ವಯ ಸಮಿತಿಯು  ಪ್ರತಿ ಆರು ತಿಂಗಳಿಗೊಮ್ಮೆ ಸಂಘಟಿಸಿದ ೨೭ ಬ್ಯಾಂಕಿಂಗ್ ಕಮ್ಮಟ ಗಳ ನಿರ್ದೇಶಕರಾಗಿ ಕನ್ನಡ ಕಟ್ಟಿದರು . ೧೯೮೫ ರಲ್ಲಿ  ಅವರ ಸಂಪಾದಕತ್ವದಲ್ಲಿ ಬ್ಯಾಂಕಿಂಗ್ ನಿಘಂಟು ಅನ್ನು ಬಿಡುಗಡೆ ಮಾಡಲಾಯಿತು. ಹಲವಾರು ವಿಚಾರ ಸಂಕಿರಣಗಳು, ಭಾಷಣಗಳು, ಬ್ಯಾಂಕಿಂಗ್ ಪ್ರತಿಷ್ಠಾನ, ಪ್ರಕಟಣೆಗಳು ಎಲ್ಲವೂ ಅವರ ನಿರ್ದೇಶನದಲ್ಲಿ ನಡೆಯಿತು. ಕನ್ನಡ, ಬ್ಯಾಂಕಿಂಗ್, ಬದುಕು, ಸೃಜನಾತ್ಮಕ ಬರಹ, ಸಂಘಟನೆ,  ಮಾತುಗಾರಿಕೆ ಎಲ್ಲದರಲ್ಲೂ ಎಚ್ಚೆಸ್ಕೆ ನಮ್ಮನ್ನು ಪಳಗಿಸಿದರು. ಈಗ ಸಮನ್ವಯ ಸಮಿತಿಯ ಕಾರ್ಯಕರ್ತರಿಂದ ನಡೆಯುತ್ತಿರುವ ಸಾಹಿತ್ಯ ದಾಸೋಹ ,” ಸಮನ್ವಯ ಸಮಿತಿ# ಕನ್ನಡವೇ ಸತ್ಯ  ವಾಟ್ಸಪ್ ವೇದಿಕೆಗಳಿಗೆ ಶ್ರೀ ಎಚ್ಚೆಸ್ಕೆ ಅವರೇ ಸ್ಪೂರ್ತಿ. ೨೦೧೬ ರಿಂದ ವೇದಿಕೆಯ ಮೂಲಕ ಸಮನ್ವಯ ಸಮಿತಿಯು ಎಚ್ಚೆಸ್ಕೆ ಬೆಳಕು ಎಂಬ ಒಂದು ದಿನದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಬ್ಯಾಂಕಿಂಗ್, ಸಾಹಿತ್ಯ ಮತ್ತು ಸಂಸ್ಕೃತಿಗಳ ರಸದೌತಣವದು. ೨೦೨೦ ರ ಎಚ್ಚೆಸ್ಕೆ ಬೆಳಕು ಕಾರ್ಯಕ್ರಮವನ್ನು ಫೆಬ್ರುವರಿ ೧೬ ರಂದು ಆಯೋಜಿಸಲಾಗಿದೆ. ಬೆಳಗ್ಗೆ ೧೦.೩೦ ರಿಂದ ಸಂಜೆ ೫.೦೦ ಗಂಟೆಯವರೆಗೆ. ಕಾರ್ಯಕ್ರಮ ದಲ್ಲಿ ಮುಖ್ಯವಾಗಿ ನಾಲ್ಕು‌ಗೋಷ್ಠಿಗಳು ಇರುತ್ತದೆ. ಸಾಹಿತ್ಯ, ಬ್ಯಾಂಕಿಂಗ್ , ಸಾಂಸ್ಕೃತಿಕ ಮತ್ತು ಕವಿಗೋಷ್ಠಿ. ಕವಿಗೋಷ್ಠಿಯು ಫೆ ೧೬ ರ ಮಧ್ಯಾನ್ಹ ೩ ಗಂಟೆಗೆ ಇರುತ್ತದೆ. ‘ಎಚ್ಚೆಸ್ಕೆ ಬೆಳಕು’ ಕಾರ್ಯಕ್ರಮದ ಕವಿಗೋಷ್ಠಿ ಯ ಅಧ್ಯಕ್ಷತೆಯನ್ನು ಡಾ. ಗೋವಿಂದ ಹೆಗಡೆ ಇವರು ವಹಿಸಲಿದ್ದಾರೆ ಎಂದು ಸಂಚಾಲಕ ಬೆಂ ಶ್ರೀ ರವೀಂದ್ರ ತಿಳಿಸಿದ್ದಾರೆ.) ***************

ಮಾಸದ ನೆನಪು Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತಳ ಅಂಗಳದಿಂದ ಅವ್ಯಕ್ತ ಎಲ್ಲಾ ಮಕ್ಕಳ ರಿಸಲ್ಟ್ ಗಳು ಒಂದಾದಮೇಲೊಂದು ಮೆಸೇಜ್ ಗಳಾಗಿ ನನ್ನ ಬಳಿ ಬರುತ್ತಿವೆ, ಕೆಲವು ಮೆಸೇಜ್ ಗಳು, ಕೆಲವು ಮುಖಗಳು, ಪ್ರಸನ್ನತೆಯ ಅಲೆಗಳು, ಸ್ವೀಟಿನ ಡಬ್ಬಗಳು, ಕೃತಜ್ಞತೆಗಳು,ಕಥೆಗಳು ಒಂದಾದಮೇಲೊಂದು ಸಿಹಿ ಸುದ್ದಿಗಳು ಎಳೆ ಎಳೆಯಾಗಿ ಹರಿದುಬಂದರೆ ನನಗೆ ಮಾತ್ರ ಮನಸ್ಸಿನಲ್ಲೊಂದು ಆತಂಕ! ಮುಖದಲ್ಲಿ ನಗುವಿದ್ದರೂ ಬಾಯಿ ತುಂಬಾ ಆಶೀರ್ವಾದಗಳಿದ್ದರೂ ಅವಳ ರಿಸಲ್ಟ್ ಏನಾಯ್ತು?! ಇನ್ನೂ ವಿಷಯ ಬರಲಿಲ್ಲವಲ್ಲ ಎಂಬುದು ಮಾತ್ರ ಮನಸಲ್ಲಿ ಬೇರೂರಿತ್ತು. ಬರುವ ಮಕ್ಕಳನ್ನೆಲ್ಲಾ ಕೇಳುವುದು “ಅವಳ ರಿಸಲ್ಟ್ ಏನಾಯ್ತು?” “ಯಾರಿಗಾದರೂ ಸಿಕ್ಕಿ ದ್ಲಾ.?”. “ಅವಳ ರಿಜಿಸ್ಟರ್ ನಂಬರ್ ಏನು……?”  ಮಧ್ಯಾಹ್ನದೊತ್ತಿಗೆ ಅವಳಮ್ಮ ಫೋನ್ ಮಾಡಿದರು, ಕೆಲವೊಂದರಲ್ಲಿ ಬಹಳ ಒಳ್ಳೆ ಅಂಕ ಬಂದಿದೆ ಕನ್ನಡ ಮಾತ್ರ ಉಳಿದಿದೆ, ಧನ್ಯವಾದಗಳ ಒಂದು ಅಲೆ. ನನ್ನ ಮನದಲ್ಲಿ ಎಲ್ಲಿಲ್ಲದ ಸಂತೋಷ ಸದ್ಯ ಈ ಮಗು ಪಾರಾಗಿಬಿಟ್ಟಳು. ನಾನು ಮನೆಯೊಳಗೆ ಹೋಗಿ ಎರಡು ದ್ರಾಕ್ಷಿಗಳನ್ನು ಬಾಯಿಗೆ ಹಾಕಿ ಕೃಷ್ಣನಿಗೆ ಒಂದು ನಮಸ್ಕಾರ ಹಾಕಿ ಅಲ್ಲಿದ್ದ ಮಕ್ಕಳಿಗೆ ಪಾಠ ಮಾಡುವ ಕೆಲಸ ಮುಂದುವರಿಸಿದೆ. ಅವಳು ನನ್ನ ಬಳಿ ಬಂದ ದಿನ ಇನ್ನೂ ಹಸನಾಗಿ ಮನದಲ್ಲಿ ನನಗಿದೆ. 10ನೇ ತರಗತಿಗೆ ನನ್ನ ಬಳಿ ಕಲಿಯಲು ಬಂದವಳು ಒಂದೇ ಒಂದು ಸಾಲು ಓದಲೂ ಬಹಳ ಕಷ್ಟ.. ಅತೀ ಮುಗ್ದೆ. ತುಂಬಾ ಭಯ. ಮುಖದಲ್ಲಿ ನಗು ಇದ್ದರೂ ಕಣ್ಣಲ್ಲಿ ಏನೋ ಭಯ. ಮಾತೇ ಆಡುತ್ತಿರಲಿಲ್ಲ. ‘ಹೃದಯವನ್ನೇ ಯಾರೋ  ಹಿಸುಕಿ ಬಿಟ್ಟಿದ್ದಾರೆ’ ಅನ್ನಿಸಿಬಿಟ್ಟಿತ್ತು.. ಓದಲು ಬರುವುದಿಲ್ಲ, ಬರೆಯುವ ಶೈಲಿ ಅರ್ಥವೇ ಆಗುತ್ತಿಲ್ಲ, ಹೆದರಿಕೆ ಮಿತಿಮೀರಿದ್ದು…. ಏನು ಮಾಡಲಿ ಈ ಹುಡುಗಿಗೆ ಎಂದು ಆಲೋಚಿಸುತ್ತಿದ್ದೆ. ದಿನಾ ನನ್ನ ಬಳಿ ಕೂಡಿಸಿಕೊಂಡು ಅವಳಲ್ಲಿ ಏನು ಕತೆಗಳಿವೆ ಎಂದು ವಿಶ್ಲೇಷಣೆ ಮಾಡುವುದು ನನ್ನ ಕೆಲಸವಾಗಿತ್ತು. ನನಗೆ ಸಹಕಾರ ಕೊಡಲು ಇನ್ನೂ ಮೂರು ಅದೇ ಮನೋಭಾವನೆ ಇರುವ ಹುಡುಗಿಯರು ನನ್ನ  ಬಳಿ ಬರುತ್ತಿದ್ದರು ಅವರ ಸಹಾಯದಿಂದ ಹುಡುಗಿಯ ಎಲ್ಲಾ ಲಕ್ಷಣಗಳನ್ನು ಪದರಪದರವಾಗಿ ಬಿಚ್ಚತೊಡಗಿದೆ. ಆಶ್ಚರ್ಯವೆಂದರೆ ಓದಲೇ ಬರದ ಹುಡುಗಿ ಅದು ಹೇಗೆ ಯಾವ ಮೆಂಟಲ್ ಎಬಿಲಿಟಿ ಪುಸ್ತಕದಲ್ಲಿಯೂ ವಿವರಣೆ ಇಲ್ಲದೆ ಹಾಗೆ ಬರೆಯುತ್ತಿದ್ದಾಳೆ. ನನಗೆ ಒಂದು ಕುತೂಹಲ… ಓದಲು ಬರದವಳು ಹೇಗೆ ಬರೆಯುತ್ತಾಳೆ?!  ಕೇಳಿದರೆ ಹೇಳುತ್ತಾಳೆ…. “ನನಗೆ ಬೇರೆ ಶಿಕ್ಷಕಿಯೊಬ್ಬಳು ಬೆತ್ತದಲ್ಲಿ ಬಿಡುತ್ತಿದ್ದಳು, ನನ್ನನ್ನು ಗಮನಿಸುತ್ತಲೇ ಇರಲಿಲ್ಲ…ಜಗತ್ತಿನ ಭಯಕ್ಕೆ ನಾನು ಹೇಗೋ ಬರೆಯುವುದನ್ನು ಕಲಿತೆ” ಎನ್ನುತ್ತಾಳೆ. ತನ್ನ ಮೊದಲ ಕ್ಲಾಸಿನಿಂದ ಹತ್ತನೇ ಕ್ಲಾಸಿನವರೆಗೆ ಒಂದು ಹುಡುಗಿಗೆ …..ನಿನಗೆ ಓದಲು ಬರೆಯಲು ಬರುವುದಿಲ್ಲ ಆಗೋದಿಲ್ಲ ಎಂದರೆ ಯಾರಿಗೂ ಹೇಳಿಕೊಳ್ಳಲಾಗದ ಎಷ್ಟು ಕಸಿವಿಸಿ ಪಟ್ಟಿರಬಹುದು. ನಮ್ಮ ಶೈಕ್ಷಣಿಕ ಸಮಾಜದಲ್ಲಿ ಮಕ್ಕಳು ಓದುತ್ತಿಲ್ಲ, ಬರೆಯುತ್ತಿಲ್ಲ, ಅಂಕಗಳಿಸುತ್ತಿಲ್ಲ, ಪಾಠ ಕೇಳುತ್ತಿಲ್ಲ, ಓದುತ್ತಿಲ್ಲ, ಬರೆಯುತ್ತಿಲ್ಲ, ಇತ್ಯಾದಿ, ಇತ್ಯಾದಿ…… ಕಾರಣಗಳನ್ನು ಕೊಡುವವರೇ ಹೊರತು ಕಾರಣದ ಮೂಲ ಸಮಸ್ಯೆಯನ್ನು ಹುಡುಕುವವರು ಬಹಳ ವಿರಳ . ತಂದೆ-ತಾಯಿಯೂ ಅಸಹಾಯಕರಂತೆ ಒದ್ದಾಡುವರು. ಇಲ್ಲವಾದರೆ ಮಕ್ಕಳನ್ನು ಶಿಕ್ಷಿಸುವರು…….  ಈ ಹುಡುಗಿಗೆ ಇದ್ದ ಸಮಸ್ಯೆ ‘ಅಕ್ಷರ ಜ್ಞಾನವೇ ಇಲ್ಲ’. ಅಕ್ಷರಗಳನ್ನು ಚಿತ್ರಗಳಂತೆ ಜೋಡಿಸಿ ಜೋಡಿಸಿ ಬರೆಯುತ್ತಿದ್ದಳು ಅಕ್ಷರ ಜ್ಞಾನವಿಲ್ಲದವರು ಚಿತ್ರಗಳಂತೆ ಜೋಡಿಸಿ ಅಂಕಗಳನ್ನು ಹೇಗೆ ತೆಗೆಯಬಲ್ಲರು…..ಬರುತ್ತಿದ್ದದ್ದು ಮೂರು-ನಾಲ್ಕು ಅಂಕ. ಆದರೂ ನನಗೆ ಅದು ಬಹಳ ಹೆಮ್ಮೆಯ ವಿಷಯ. ಅಕ್ಷರ ಜ್ಞಾನವಿಲ್ಲದೆ ಅಂಕ ಪಡೆದವಳು, ಅಕ್ಷರಗಳು ಬಂದಮೇಲೆ ಅಕ್ಷರಗಳನ್ನು ಜೋಡಿಸಿ ಪದಗಳನ್ನು ಜೋಡಿಸಿ ಸ್ವಚ್ಛವಾಗಿ ವಾಕ್ಯ ಮಾಡಲಿಕ್ಕೆ ಕಲಿತರೆ ಅವಳು ಇನ್ನಷ್ಟು ಒಳ್ಳೆಯ ಅಂಕ ಪಡೆಯಬಹುದು…… ಒಳ್ಳೆ ಚಿತ್ರಗಾರಳು ಹಾಗಾಗಿ ಬದುಕುಳಿದಳು, ಕೂಡುವುದು- ಕಳೆಯುವುದು- ಗುಣಿಸುವುದು- ಬಾಗಿಸೋದು, ಅದೆಲ್ಲ ಆರಾಮಾಗಿ ಮಾಡ್ತಿದ್ಲು. ಹಾಗಾಗಿ, ಈ ಜನಗಳ ಮಧ್ಯದಲ್ಲಿ ಹೇಗೋ ಒಂದು ಹಂತದವರೆಗೆ ಜಸ್ಟ್ ಪಾಸ್ ಆಗಿದ್ಳು.ನನ್ನ ಮುಂದೆ ಒಂದಲ್ಲ ಹಲವಾರು ಚಾಲೆಂಜ್ ಗಳು…. ಅವಳಲ್ಲಿದ್ದ ಭಯ ಹೋಗಿಸಬೇಕು, ಅಷ್ಟೇ ಅಲ್ಲ ಹತ್ತಾರು ಜನರ ಎದುರು ಧೈರ್ಯವಾಗಿ ಸ್ಪಂದಿಸುವ ವ್ಯಕ್ತಿತ್ವ ರೂಪಿಸಬೇಕು, ಅವಳು ಸರಿಯಾದ ರೀತಿಯಲ್ಲಿ ಓದುವುದು ಬರೆಯುವುದು ಕಲಿಯಬೇಕು, ಮುಂದಿನ ಭವಿಷ್ಯಕ್ಕೆ ಒಂದು ದಾರಿ ಮಾಡಬೇಕು, ಅವಳ ನಗುವಿನ ಹಿಂದೆ ಇದ್ದ ನೋವುಗಳನ್ನು ಶಮನ ಮಾಡಬೇಕು . “ಮನಸ್ಸು ಮೆದುಳಿನ ಸರಿಯಾದ ಸ್ಪಂದನ ವಿದ್ದರೆ ಸಮಸ್ಯೆಗಳ ಅರಿವು ಅದರ ಶಮನಕ್ಕೆ ನಾಂದಿ ಯಾಗುವುದು.” **********

ಅವ್ಯಕ್ತಳ ಅಂಗಳದಿಂದ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಕನ್ನಡದ ಪ್ರಸಿದ್ಧ ಗಜಲ್ ಕೃತಿಕಾರ ಶಾಂತರಸ ಹೆಂಬೆರಳುರರೂ..! ಕೆ.ಶಿವು ಲಕ್ಕಣ್ಣವರ ಕನ್ನಡದ ಪ್ರಸಿದ್ಧ ಗಜಲ್ ಕೃತಿಕಾರ ಶಾಂತರಸ ಹೆಂಬೆರಳುರರೂ..! ಹಾಗೂ ಅಪ್ಪನ ಕುರಿತ ಇವರ ಮಗಳು ಭಾರತಿ ಮೋಹನ ಕೋಟಿಯವರ ಆಲಾಪನೆಯೂ..!! ಕನ್ನಡದ ಪ್ರಸಿದ್ಧ ಗಜಲ್ ಕವಿ. ಇವರು ಕನ್ನಡದ ಹೆಸರಾಂತ ಸಾಹಿತಿ. ಇವರು ೧೯೯೨ರಲ್ಲಿ ತಮಗೆ ನೀಡಲಾಗಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಭ್ರಷ್ಟ ಸರಕಾರ, ಜನೋಪಯೋಗಿಯಗಿಲ್ಲದ ಸರಕಾರದಿಂದ ಪ್ರಶಸ್ತಿ ಪಡೆಯುವುದಿಲ್ಲವೆಂದು ಹೇಳಿ ತಿರಸ್ಕರಿಸಿದ್ದರು. ಇವರು ೨೦೦೬ರಲ್ಲಿ ಬೀದರದಲ್ಲಿ ಜರುಗಿದ ೭೩ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ಶಾಂತರಸ ಹೆಂಬೆರಾಳರು…. ಸೆಪ್ಟೆಂಬರ್ ೭, ೧೯೨೪ ರಲ್ಲಿ ರಾಯಚೂರು ಜಿಲ್ಲೆಯ ಹೆಂಬೇರಾಳು ಹಳ್ಳಿಯಲ್ಲಿ ಜನಿಸಿದರು ಶಾಂತರಸರು… ಇವರ ತಂದೆ ಚನ್ನಬಸಯ್ಯ ಹಿರೇಮಠ ಕನ್ನಡ ಮತ್ತು ಸಂಸ್ಕೃತ ಪಂಡಿತರಾಗಿದ್ದರು… ಶಾಂತರಸ ಹಮ್‍ದರ್ದ್ ಸೊಸೈಟ್ ಆಫ್ ರಾಯಚೂರು ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ೧೯೮೧ರಲ್ಲಿ ಅದೇ ಸಂಸ್ಥೆಯ ಜೂನಿಯರ್ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾದರು. ೧೯೪೨ರ ‘ಬ್ರಿಟಿಷರೆ, ಭಾರತ ಬಿಟ್ಟು ತೊಲಗಿ’ ಅಭಿಯಾನ ನಡೆಯುತ್ತಿರುವಾಗ ಇವರು ಕವನ, ಕಥೆ ಬರೆಯಲು ಪ್ರಾರಂಭಿಸಿದ್ದು… ಇವರು ರಾಯಚೂರಿನಲ್ಲಿ “‘ಪ್ರಕಾಶನವನ್ನು ಪ್ರಾರಂಭಿಸಿದ್ದರು. ಹಲವು ಗಝಲ್, ರುಬಾಯಿ, ಫರ್ದ್ ಗಳನ್ನು ಉರ್ದುವಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.ಶಾಂತರಸರು.. ಶಾಂತರಸ ೪೬ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರು ೧೯೯೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದವರು. ಪಠ್ಯ ಪುಸ್ತಕ ಕಮಿಟಿಯಲ್ಲೂ ಸೇವೆ ಸಲ್ಲಿಸಿದವರು… ಇವರ ಕೃತಿಗಳು ಹೀಗಿವೆ– ೧) ಕವನ ಸಂಕಲನಗಳು– ಮಾನಸಗಳ್ಳಿ ಬಯಲು ಗಜಲ್ ಮತ್ತು ದ್ವಿಪದಿ ಸಮಗ್ರ ಕಾವ್ಯ ೨) ಕಥಾ ಸಂಕಲನಗಳು– ಬಡೇಸಾಬು ಪುರಾಣ ನಾಯಿ ಮತ್ತು ಪಿಂಚಣಿ ಸ್ವಾತಂತ್ರ್ಯ ವೀರ ಮತ್ತು ಇತರ ಕಥೆಗಳು ಉರಿದ ಬದುಕು (ಆಯ್ದ ಕಥೆಗಳು) ಸಮಗ್ರ ಕಥೆಗಳು ೩) ಕಾದಂಬರಿ– ಸಣ್ಣ ಗೌಡಸಾನಿ ೪) ಇವರು ರಚಿಸಿದ ನಾಟಕಗಳು– ಸತ್ಯಸ್ನೇಹಿ ನಂಜು ನೊರೆವಾಲು ಮರೆಯಾದ ಮಾರಮ್ಮ ಶರಣ ಬಸವೇಶ್ವರ (ರೇಡಿಯೊ ನಾಟಕ) ೫) ಜೀವನ ಚರಿತ್ರೆ– ಸಿದ್ಧರಾಮ (ಅಮರಾನಂದರೊಡನೆ ಸಹಲೇಖನ) ಆಯ್ದಕ್ಕಿ ಮಾರಯ್ಯ ದಂಪತಿಗಳು ನಾರದಗಡ್ಡೆ ಚೆನ್ನಬಸವ ಸ್ವಾಮಿಗಳು ಬಸರೀಗಿಡದ ವೀರಪ್ಪ ಕಲಬುರ್ಗಿಯ ದೊಡ್ಡಪ್ಪ ಅಪ್ಪ ೬) ಪ್ರಬಂಧಗಳು– ಬಹುರೂಪ ಉಲಿವ ಮರ ೭) ಇವರ ಸಂಶೋಧನೆಗಳು– ಬಸವಪೂರ್ವ ಯುಗದ ಶರಣರು ಮೊದಲ ವಚನಕಾರ ಮಾದಾರ ಚನ್ನಯ್ಯ ಎಡದೊರೆ ನಾಡಿನ ಅನುಭಾವಿ ಕವಿಗಳು ಬಳ್ಳಾರಿ ಜಿಲ್ಲೆಯ ಶಿವಶರಣರು ೮) ಇವರು ಸಂಪಾದಿಸಿದ ಕೃತಿಗಳು— ಸಂಗವಿಭು ವಿರಚಿತ ಮೂರು ಶತಕ ವೀರಭದ್ರ ಕವಿ ವಿರಚಿತ ಅರವತ್ತುಮೂರು ಪುರಾಣ ಕೂಡಲೂರು ಬಸವಲಿಂಗ ಶರಣರ ಸ್ವರವಚನಗಳು ಕಲ್ಲೂರು ಲಿಂಗಣ್ಣವೊಡೆಯ ವಿರಚಿತ ಬಾರಮಾಸ ೯) ಇತರೆ ಸಂಕಲನಗಳ ಸಂಪಾದನೆ– ಮುಸುಕು ತೆರೆ (ವಿವಿಧ ಲೇಖಕರ ಕಥೆ,ಕವನ, ಪ್ರಬಂಧ ಸಂಕಲನ) ಕಲ್ಯಾಣದೀಪ (ಪ್ರಬಂಧಗಳು : ಅಮರಾನಂದರೊಡನೆ) ಬೆನ್ನ ಹಿಂದಿನ ಬೆಳಕು (೨೭ ಕವಿಗಳ ಕವನ ಸಂಕಲನ) ರಸಿಕ ಚಕ್ರಿ ಹರಿಹರದೇವ (ವಿಮರ್ಶಾತ್ಮಕ ಲೇಖನಗಳು : ಡಾ|ಬಿ.ಸಿ.ಜವಳಿಯವರೊಡನೆ) ನಮನ (ಎ.ಸಿ.ದೇವೇಗೌಡರ ಸಂಭಾವನಾ ಗ್ರಂಥ : ಡಿ.ಆರ್.ಬಳೂರಗಿಯವರೊಡನೆ) ೧೦) ಇವರ ಅನುವಾದ– ಉಮರಾವ ಜಾನ ಅದಾ (ಉರ್ದು ಕಾದಂಬರಿಯ ಅನುವಾದ) ಹೀಗಿದ್ದ ಇವರಿಗೆ ಸಂದ ಪುರಸ್ಕಾರ– ಇವರ ಸತ್ಯಸ್ನೇಹಿ ನಾಟಕಕ್ಕೆ ಕರ್ನಾಟಕ ಸರಕಾರದ ಪುರಸ್ಕಾರ ಲಭಿಸಿದೆ… ಇಂತಹ ಶಾಂತರಸರು ೧೩ ಎಪ್ರಿಲ ೨೦೦೮ರಂದು ನಿಧನರಾದರು..! ಇಂತಹ ಶಾಂತರಸರ ಬಗ್ಗೆ ಅವರ ಮಗಳು ಭಾರತಿ ಮೋಹನ ಕೋಟಿಯವರ ಆಲಾಪನೆ ಹೀಗಿದೆ — ನನ್ನ ಅಪ್ಪ ಶಾಂತರಸ..! ‌ ಮಕ್ಕಳನ್ನು ಕೂಡಿಸಿಕೊಂಡು ದಿನಾ ರಾತ್ರಿ ಅರೇಬಿಯನ್‌ ನೈಟ್‌, ಶರಣರ ವಚನ, ಜೀವನ ಚರಿತ್ರಾ ಕತೆ ಹೇಳುತ್ತಾ, ಅವರು ಕೇಳುವ ಹಲವು ಪ್ರಶ್ನೆಗಳಿಗೆ ತಾಳ್ಮೆಯಿಂದ, ಪ್ರೀತಿಯಿಂದ ಉತ್ತರಿಸುತ್ತಿದ್ದ ಕವಿ ಶಾಂತರಸ ಮಕ್ಕಳೊಂದಿಗೆ ಮಕ್ಕಳಾಗಿ ಗೋಲಿ, ಬುಗರಿ, ಗಿಲ್ಲಿ ದಾಂಡು, ಕೇರಂ ಆಡತಿದ್ದರು. ತಂದೆಯೊಂದಿಗಿನ ನೆನಪುಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ ಭಾರತಿ ಮೋಹನ್‌ ಕೋಟಿ… ನನ್ನ ಅಪ್ಪ ಓಹ್‌! ಆತನ ಬಗೆಗೆ ಹೇಳೂದಂದ್ರೆ ನಾನು ಚಿಕ್ಕವಳಿದ್ದಾಗ ಆಡಲು… ಬುದ್ಧಿ ತಿಳಿದಮೇಲೆ ನನ್ನ ಪ್ರಶ್ನೆಗಳಿಗೆ ಉತ್ತರಿಸಲು… ಮತ್ತ ಹದಿಹರಯದ ಹಸಿಬಿಸಿ ವಿಚಾರಗಳ ವಯೋಮಾನದಲ್ಲಿ ಮನಸ್ಸಿನಗೆ ನೂರೆಂಟು ಗೊಂದಲಗಳಿಗೆ ಉತ್ತರ ಹೇಳಲು ಪಕ್ಕದಲ್ಲಿ ಅಪ್ಪನಿದ್ದ… ಅಷ್ಟೇ ಅಲ್ಲ ಬೆಳೆದು ದೊಡ್ಡವಳಾಗಿ ನೌಕರಿ, ಸಂಸಾರ ಜಂಜಾಟದಾಗ ಇದ್ದಾಗೂ ಕೌಟುಂಬಿಕ, ಆರೋಗ್ಯ, ವೈಯಕ್ತಿಕ, ಸಾಹಿತ್ಯಿಕ ಯಾವುದೇ ವಿಷಯಗಳ ಬಗ್ಗೆ ಚರ್ಚಿಸಲು, ಸಾಂತ್ವನ ಹೇಳಲು ಅಪ್ಪ ಸದಾ ಜೊತೆಯಲ್ಲಿ ಇದ್ದ. ನನಗೆ ಆತ ಅಪ್ಪ ಅಷ್ಟೇ ಅಲ್ಲ ತೀರ ಆತ್ಮೀಯ ಸ್ನೇಹಿತ. ನನ್ನ ಆತನ ನಡುವೆ ಯಾವುದೇ ಗುಟ್ಟುಗಳಿರಲಿಲ್ಲ. ಗೊಂದಲಗೊಂಡಾಗ ಒಮ್ಮೆಮ್ಮೊ ಆತನೇ ನನ್ನ ಸಲಹೆ ಕೇಳುತಲಿದ್ದ. ಆಗ ಆತನದು ಮಗುವಿನ ಮುಗ್ಧತೆ… ನನ್ನ ಅಪ್ಪ ಅಮ್ಮನ ಅತ್ಯಂತ ಆದರ್ಶ ಗುಣ ಅಂದ್ರೆ ಅವ್ರು ಯಾವತ್ತೂ ಮಕ್ಕಳ ನಡುವೆ ತಾರತಮ್ಯ ಮಾಡಲಿಲ್ಲ. ಅಪ್ಪ ಅಂತೂ ಗಂಡು ಹೆಣ್ಣು ಅಂತ ಯಾವ ಭೇದಭಾವ ಮಾಡದೆಯೇ ನಮ್ಮನ್ನ ಬೆಳೆಸಿದರು… ನಮ್ಮನ್ನೆಲ್ಲ ಕೂಡಿಸಿಕೊಂಡು ದಿನಾ ರಾತ್ರಿ ಅರೇಬಿಯನ್‌ ನೈಟ್, ಶರಣರ ವಚನ ಜೀವನ ಚರಿತ್ರಾ ಕತೆ ಹೇಳುತ್ತಿದ್ದರು. ನಾವು ಕೇಳುವ ಹಲವು ಪ್ರಶ್ನೆಗಳಿಗೆ ತಾಳ್ಮೆಯಿಂದ ಪ್ರೀತಿಯಿಂದ ಉತ್ತರಿಸ್ತಿದ್ದ. ಊಟ, ಉಡಿಗಿ ತೊಡಿಗಿ, ವಿದ್ಯಾಭ್ಯಾಸ ಯಾವುದರಲ್ಲೂ ನಮ್ಮ ನಡುವೆ ತಾರತಮ್ಯ ಮಾಡಲಿಲ್ಲ. ನಮ್ಮ ಜೊತಿ ಗೋಲಿ, ಬುಗರಿ, ಗಿಲ್ಲಿ ದಾಂಡು, ಕೇರಂ ಆಡತಿದ್ದ. ಅಪ್ಪ ಯಾವುದೇ ಊರಿಗೆ ಹೋದ್ರೂ ಹೊರೆಯಷ್ಟು ಕಥಿ ಪುಸ್ತಕ ತರ್ತಿದ್ದ… ಮತ್ತ ಅವನ್ನ ಓದಿದ ಮ್ಯಾಲೆ ಅವುಗಳ ಬಗ್ಗೆ ನಮ್ಮ ಜೊತೆ ಚರ್ಚಿಸುತ್ತಿದ್ರು. ಭಾಳ ಅಂದ್ರ ಭಾಳ ಪ್ರೀತಿ ಮಾಡತಿದ್ದ. ಯಾವತ್ತೂ ನಮ್ಮನ್ನ ಗದರಿಸಿ ಜಬರಿಸಿ ಮಾತಾಡ್ಸಿಲ್ಲ. ಹೊಡಿಯೂದಂತೂ ದೂರವೇ ಉಳೀತು… ಸಣ್ಣ ಅಣ್ಣ ಸೆಕೆಂಡ್‌ ಪಿಯುಸಿ ಒಂದ ಪೇಪರ್‌ ಫೇಲ್‌ ಆಗಿದ್ದ. ಅಪ್ಪ ಆತನ ಕೈಯಾಗ ರೊಕ್ಕ ಕೊಟ್ಟು ‘ಹೋಗು ಎಲರೆ ನಾಲ್ಕು ದಿನ ಊರು ಅಡ್ಡಾಡಿ ಬಾ ಆಮ್ಯಾಲೆ ಮತ್ತೆ ಪರೀಕ್ಷೆ ಬರೆದು ಪಾಸು ಮಾಡ್ಕೊ’ ಅಂತ ಕಳಿಸಿದ. ಓದವ ವಿಷಯಕ್ಕ ಸ್ಟ್ರಿಕ್‌್ಟ ಇದ್ದ, ಆದ್ರ ಒತ್ತಡ ಹೇರತಿರಲಿಲ್ಲ… ಅಪ್ಪ ನಮ್ಮನ್ನ ಸಾಲೀ ಕಾಲಸೂದ್ರಾಗ ಯಾವದು ತಾರತಮ್ಯ ಮಾಡಲಿಲ್ಲ. ಏನ ಓದತೀವಿ ಅದನ್ನೇ ಓದಿಸಿದರು. ಅಪ್ಪ ಅಮ್ಮನ ಗುರಿ ನಮ್ಮನ್ನು ಓದಿಸಿ, ನೌಕರಿಗೆ ಹಚ್ಚಬೇಕು ಅಂತಿತ್ತು. ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು. ಆತ್ಮಗೌರವದಿಂದ ಬದುಕಬೇಕು ಅನ್ನೂದು ಅವರ ಉದ್ದೇಶವಾಗಿತ್ತು… ಅವರ ಆ ಸ್ವಾಂತಂತ್ರ್ಯ ಜವಾಬ್ದಾರಿ ಎರಡನ್ನೂ ಒಟ್ಟೊಟ್ಟಿಗೆ ನೀಡಿದರು ಎಂದೇ ನಾವೆಲ್ಲ ಇವೊತ್ತು ಆತ್ಮಾಭಿಮಾನದಿಂದ ಬದುಕುವಂತಾಗಿದೆ. ನಮ್ಮ ಸ್ವತಂತ್ರ ವ್ಯಕ್ತಿತ್ವ ಬೆಳೆಸಿಕೊಳ್ಳುವಲ್ಲಿ ಅವರ ಸರಳತನವೇ ಹೆಚ್ಚು ಸಹಾಯಕವಾಯಿತು… ಅವರ ಜನಪ್ರಿಯತೆಯ ನೆರಳಿನಲ್ಲಿ ನಾವ್ಯಾರೂ ಬೆಳೆಯದಂಥ ಎಚ್ಚರ ವಹಿಸಿದ್ದರು. ಸಾಹಿತ್ಯ, ಸಂಗೀತ ಕಲೆಗಳ ಬಗ್ಗೆ ಪ್ರೀತಿ ಬೆಳೆಸಿದ ಅಪ್ಪನ್ನ ಎಷ್ಟು ಸ್ಮರಿಸಿದರೂ ಸಾಲದು. ನಮ್ಮನ್ನ ಓದಿಸಬೇಕೆಂಬ ಹಟಕ್ಕೆ ಬಿದ್ದಿದ್ದರಿಂದಲೂ ಅವರು ಯಾವತ್ತೂ ಐಷಾರಾಮಿ ಜೀವನ ಆಡಲಿಲ್ಲ. ಒಂದು ಸ್ವಂತ ಮನೀನೂ ಕಟ್ಟಿಕೊಳ್ಳಲಿಲ್ಲ. ಆದ್ರೆ ನಾವು ನಾಲ್ಕು ಜನ ಮಕ್ಕಳು ಮನೆ ಕಟ್ಟಿಕೊಳ್ಳುವಂತೆ ಮಾಡಿದರು… ಶಾಲಾ ಕಾಲೇಜುಗಳಲ್ಲಿ ಸರಳತನದ ಪಾಠ ತಾವು ಬದುಕುವ ಮೂಲಕವೇ ತಿಳಿಸಿಕೊಟ್ಟರು. ಸ್ಪರ್ಧೆ ಉಡುಗೆ ತೊಡುಗೆಗಳಲ್ಲಿ ಅಲ್ಲ, ಓದು ಬರೆಯುವುದರಲ್ಲಿರಬೇಕು. ಒಮ್ಮೆ ಶಾಲೆಯಲ್ಲಿ ಮುಂದಿದ್ದರೆ ಜಾಣ್ಮೆಯ ಮುಂದೆ ಎಲ್ಲವೂ ನಗಣ್ಯವಾಗುತ್ತದೆ ಎನ್ನುವುದು ಅವರ ಅನಿಸಿಕೆಯಾಗಿತ್ತು… ನಾನು ಐದು–ಆರನೇಯ ತರಗತಿಯಲ್ಲಿದ್ದಾಗಿನಿಂದ ಅಪ್ಪನ ಪುಸ್ತಕಗಳ ಪ್ರೂಫು ತಿದ್ದುವುದು ಕಲಿತೆ . ‘ಉಮ್ರಾವ್‌ ಜಾನ್‌ ಅದಾ’ ಉರ್ದು ಕಾದಂಬರಿ ಅಪ್ಪ ಕನ್ನಡಕ್ಕೆ ಭಾಷಾಂತರಿಸಿದ್ದರ ಹಸ್ತಪ್ರತಿಯನ್ನು ನಾನು ನನ್ನ ಸಣ್ಣ ಅಣ್ಣ ಅಪ್ಪನ ಜೊತೆ ಸೇರಿ 2 ತಿಂಗಳು ಪ್ರೂಫು ನೋಡಿದ್ದೆವು. ಅಕ್ಕ ಅದನ್ನ ಫೇರ್‌ ಬರೆದಿದ್ಲು. ಚಿಕ್ಕಂದಿನಿಂದಲೇ ಪುಸ್ತಕದ ಹಸ್ತಪ್ರತಿ, ಪ್ರೂಫು ತಿದ್ದುವುದು ಭಾಷಾಜ್ಞಾನ ಪ್ರಕಟಣೆ ಇವುಗಳ ಪರಿಚಯವಾಯಿತು. ಒಂದು ಪುಸ್ತಕ ಹೊರತರುವ ಕಷ್ಟ ಸುಖಗಳ ಅನುಭವವೂ ಆಯಿತು… ಅಪ್ಪ ತಾನು ಬರೆದ ಕಥೆ, ಕವನ ಏನೇ ಇರಲಿ ಮೊದಲು ನಮ್ಮೆದುರು ಓದುತ್ತಿದ್ದ. ನಮ್ಮ ಸಲಹೆಗಳನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದ. ಅದರಿಂದ ನಮಗೊಂದು ವ್ಯಕ್ತಿತ್ವವಿದೆ. ನಮ್ಮ ಮಾತಿಗೆ ಮನ್ನಣೆ ಇದೆ ಎಂಬ ಭಾವ ಬಿತ್ತಿದರು… ಅಪ್ಪನ ಜೊತೆ ಮಾತಾಡುವುದೇ ಒಂದು ಸೊಗಸು. ನೂರಾರು ವಿಷಯಗಳ ಚರ್ಚೆ, ಹರಟೆ, ಜೋಕ್‌್ಸ ಎಲ್ಲ ನಡೀತಿತ್ತು. ಅಪ್ಪನ ಜೀವನೋತ್ಸಾಹ ಮೆಚ್ಚುವಂಥದು… ಪ್ರವಾಸ ಹೋದರಂತೂ, ಹರಟೆ, ತಮಾಷೆ, ಚರ್ಚೆ ನಡು ನಡುವೆ ಚಹಾ ಬ್ರೇಕ್‌… ಓಹ್‌ ಅವಿಸ್ಮರಣೀಯ ಘಳಿಗೆಗಳು. ಅಪ್ಪ, ಅಮ್ಮ ನಮ್ಮ ಧಾರ್ಮಿಕ ನಿಲುವು, ಬಾಳಸಂಗಾತಿಯ ಆಯ್ಕೆ ಇವುಗಳಲ್ಲಿ ಕೂಡ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ನಮ್ಮ ಮೇಲೆ ತಮ್ಮ ನಿರ್ಧಾರಗಳನ್ನು ಎಂದೂ ಹೇರಲಿಲ್ಲ. ಬಹಳ ‘ಡೆಮೊಕ್ರಟಿಕ್‌’ ನಿಲುವು ಅವರದು… ಕಿರಿಯ ಮಗಳು ಅಂತ ಅಪ್ಪನಿಗೆ ನನ್ನ ಮೇಲೆ ಹೆಚ್ಚೇ ಪ್ರೀತಿ ಎನ್ನಬಹುದು. ಅಪ್ಪ ನನ್ನ ಮನೆಯಲ್ಲಿಯೇ ಹೆಚ್ಚು ದಿನ ಕಳೆದಿರುವುದು ನನ್ನ ಹೆಮ್ಮೆಯೂ ಹೌದು. ಅಮ್ಮ ಇರುವವರೆಗೆ ಅಮ್ಮನೇ ಅಪ್ಪನ ಬರವಣಿಗೆ ಫೇರ್‌ ಮಾಡುವುದು ಪ್ರೂಫ್‌ ನೋಡುವುದು ಮಾಡತಿದ್ಲು… ಅಮ್ಮ ಹೋದ ಮೇಲೆ ನಾನೇ ಅಪ್ಪನ ಪರ್ಸನಲ್‌ ಸೆಕ್ರೆಟರಿ ಆದೆ. ‘ಸಿದ್ಧರಾಮ ಜಂಬಲದಿನ್ನಿ ಅವರ ಜೀವನ ಚರಿತ್ರೆ’, ‘ಮದಿರೆ ಮತ್ತು ಯೌವನ’, ‘ಗಝಲ್‌ ದ್ವಿಪದಿಗಳ ಸಂಕಲನ’ ಇಲ್ಲಿ ಗದುಗಿನ ನಮ್ಮ ಮನೆಯಲ್ಲಿ ಒಂದು ಸ್ವರೂಪ ಕಂಡಿದ್ದು. ನಾನೇ ಅಪ್ಪ ಹೇಳಿದಂತೆಲ್ಲ ಬರೆದು ಪ್ರಕಟಣೆಗೆ ಸಿದ್ಧ ಮಾಡಿದ್ದು, ಇವೆಲ್ಲ ನನ್ನ ಜೀವನದ ಅಮೃತ ಘಳಿಗೆ… ಅಪ್ಪನಿಗೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ. ಆಸ್ಪತ್ರೆಗೆ ಹೋಗುವುದೆಂದರೆ ಅವರಿಗೆ ಇಷ್ಟದ ಕೆಲಸವಾಗಿತ್ತು. ಯಾವುದೋ ಸಮಾರಂಭಕ್ಕೆ ಹೋಗುವಂತೆ ಡಾಕ್ಟರ್‌ ಭೇಟಿಗೆ ಶಿಸ್ತಾಗುತ್ತಿದ್ದರು. ಎಲ್ಲಿಯೇ ಹೋದರೂ ಬಣ್ಣ ಬಣ್ಣದ ಜುಬ್ಬಾ ಹಾಕ್ಕೊಂಡು ಛಂದಗೆ ತಯಾರಾಗುತ್ತಿದ್ದರು… ಅಪ್ಪ ಸುಂದರಾಂಗ, ಗ್ರೀಕ್‌ ಶಿಲ್ಪದಂತೆ ಮೂಗು, ಗುಲಾಬಿ ವರ್ಣದ ತುಂಬುತುಟಿ, ಪ್ರೀತಿ ತುಂಬಿದ ಬಟ್ಟಲುಗಣ್ಣು, ಆ ಹೊಳೆವ ಬೆಳ್ಳಿ ಕೂದಲು… ನಾವು ಅಪ್ಪನಿಗೆ ‘ನಿನಗs ಯಾರರೇ ಲೈನ ಹೊಡಿತಾರ?’ ಅಂತ ಕೇಳ್ತಿದ್ವಿ ಅಷ್ಟು ಸಲುಗೆ… ಅಷ್ಟು ಆಪ್ತ ಸ್ನೇಹಿತನಂಥ ಭಾವ ಕೊಟ್ಟಿದ್ದರು ಅಪ್ಪ… ‘ತೆರೆದ ಹೃದಯ ಶಾಸ್ತ್ರಚಿಕಿತ್ಸೆ’ ಒಂದು ಸ್ವಲ್ಪವೂ ಹೆದರಿಕೆ ಇಲ್ಲದೇ ಅಳುಕಿಲ್ಲದೇ ಮಾಡಿಸಿಕೊಂಡರು. 1997ರಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಆದ ಮ್ಯಾಲ 11 ವರುಷ ಅಪ್ಪ ಆರೋಗ್ಯಕರ ಹೃದಯದ ಜೊತೆಗೆ ಜೀವನ ನಡೆಸಿದ… ಗ್ಯಾಸ್ಟ್ರಿಕ್‌ ಸಮಸ್ಯೆ ಕಾರಣ ಅಪ್ಪ ಸುಮಾರು 25 ವರುಷಗಳ ಕಾಲ ಖಾರ, ಹುಳಿ ಇಲ್ಲದ ಸಪ್ಪನೆಯ ಊಟ ಮಾಡತಿದ್ದ. ಅಪ್ಪನಿಗಂತಲೆ ನಾನು ಸಪ್ಪನ ಪಲ್ಯೆ, ಬಿಸಿ ರೊಟ್ಟಿ ಮಾಡಿ ಕೊಡತಿದ್ದೆ. 25 ವರ್ಷ ಆತನ ಬೆಳಗಿನ ನಾಷ್ಟಾ ಅಂದ್ರ ‘ಉಪ್ಪಿಟ್ಟು’ ಅದೂ ಖಾರ ಇಲ್ದ ಇದ್ದದ್ದು… ಆತನ ಜೊತೆಗೆ ನಾವು ಮೃಷ್ಠಾನ್ನ ಭೋಜನ ಉಂಡರೂ ಅಪ್ಪ ಆ ಕಡಿ ಹೊಳ್ಳಿ ನೋಡದೆ ತನ್ನ ಪಥ್ಯದ ಊಟವನ್ನೇ ಸೇವಿಸುತ್ತಿದ್ದ. ‘ಮನುಷ್ಯಾನ ಜನ್ಮ ಭಾಳ ಪುಣ್ಯದಿಂದ ಪಡಕೊಂಡು ಬಂದದ್ದು. ಇದನ್ನ ಜತನದಿಂದ ಕಾಪಾಡಿಕೊಂಡು ಏನಾದ್ರೂ ಸಾಧನಾ ಮಾಡಿ ಹೋಗಬೇಕಮ್ಮಾ’ ಅಂತಿದ್ದ… ಕವಿ, ಕಥೆಗಾರ, ಲೇಖಕ, ಪ್ರಕಾಶಕ, ಸಹೃದಯ ಓದುಗ, ಕೇಳುಗ– ಹೀಗೆ ಅಪ್ಪ ವೈವಿಧ್ಯಮಯ ವ್ಯಕ್ತಿತ್ವದವ.

ಸ್ವಾತ್ಮಗತ Read Post »

ಅಂಕಣ ಸಂಗಾತಿ

ನಾನು ಕಂಡ ಹಿರಿಯರು

ನಂಜುಂಡು ನಗು ಹಂಚಿದ ಪರಮೇಶ್ವರ: ಎಸ್. ವಿ. ಪಿ. ಡಾ.ಗೋವಿಂದ ಹೆಗಡೆ ಇಂದು ಫೆಬ್ರವರಿ ೮, ಹಲವು ರೀತಿಗಳಲ್ಲಿ ಕನ್ನಡದ ತೇರನ್ನು ಕಟ್ಟಿದ ಪ್ರೊ ಎಸ್ ವಿ ಪರಮೇಶ್ವರ ಭಟ್ಟರ ಜನ್ಮದಿನ. ಆ ಪ್ರಯುಕ್ತ ಕನ್ನಡದ ಕಟ್ಟಾಳುವಿಗೆ ನಮನಗಳನ್ನು ಸಲ್ಲಿಸುತ್ತ ಅವರ ನೆನಪಿನ ಈ ಬರಹ. ನಂಜುಂಡು ನಗು ಹಂಚಿದ ಪರಮೇಶ್ವರ: ಎಸ್. ವಿ. ಪಿ. (೧೯೧೪-೨೦೦೦) ೧೯೮೫-೮೯ರವರೆಗೆ , ಮೈಸೂರಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದಾಗ ಅಲ್ಲಿನ ತಾತಯ್ಯನವರ ವಿದ್ಯಾರ್ಥಿನಿಲಯ ‘ಅನಾಥಾಲಯ’ದಲ್ಲಿ ವಾಸವಾಗಿದ್ದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಊಟ-ವಸತಿಯ ಸೌಲಭ್ಯ ಕೊಡುವ ವಿದ್ಯಾರ್ಥಿ ನಿಲಯ ಅದು. ೧೯೮೮ರಲ್ಲಿ ಇರಬೇಕು, ಆಲಯದ ವಿದ್ಯಾರ್ಥಿ ಸಂಘದ-ಇದಕ್ಕೆ ಸಾಹಿತ್ಯ ಸಂಘ ಎಂದು ಹೆಸರು- ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳ ಕೊನೆಯಲ್ಲಿ ವಾರ್ಷಿಕೋತ್ಸವಕ್ಕೆ ಅತಿಥಿಗಳನ್ನು ಹುಡುಕುವ ಕೆಲಸದಲ್ಲಿ ನಿರತನಾಗಿದ್ದೆ. ಎಸ್ ವಿ ಪರಮೇಶ್ವರ ಭಟ್ಟರನ್ನು ಕರೆಯಬಹುದು ಎಂದು ಯಾರೋ ಸೂಚಿಸಿದರು. ಒಂದು ಸಂಜೆ ಸ್ನೇಹಿತ ಸುದರ್ಶನ್ ಜೊತೆಗೆ ಕೃಷ್ಣಮೂರ್ತಿಪುರಂ ನ ಗಣೇಶ ಟಾಕೀಸ್ ನ ಪಕ್ಕದ ರಾಮಯ್ಯರ್ ರಸ್ತೆಯಲ್ಲಿದ್ದ ಭಟ್ಟರ ಮನೆಗೆ ಹೋದೆ. ಕುಳ್ಳನೆಯ ಆಳು, ಮುಖದ ತುಂಬ ತುಂಬಿದ ನಗು, ಬಿಳಿಯ ಪಂಚೆ ಜುಬ್ಬ.. ಬಂದ ಕೆಲಸವನ್ನು ವಿಚಾರಿಸಿದ ಭಟ್ಟರು ತಮ್ಮ ಅನಾರೋಗ್ಯದ ದೆಸೆಯಿಂದಾಗಿ ಅತಿಥಿಯಾಗಿ ಬರಲು ಒಪ್ಪಲಿಲ್ಲ. ಆದರೆ ಅವರ ಪುಸ್ತಕಗಳತ್ತ ನಾವು ಕಣ್ಣು ಹಾಯಿಸಿದ್ದೇ ತಡ, ಭಟ್ಟರಿಗೆ ಹರಯ ಹಿಂದಿರುಗಿ ಬಂತು! ಅವರು ಅನುವಾದಿಸಿದ ಕಾಳಿದಾಸ ಮಹಾಸಂಪುಟ,ಹರ್ಷ ಮಹಾಸಂಪುಟ, ಭಾಸ ಮಹಾಸಂಪುಟಗಳು ಸೇರಿದಂತೆ,ಅವರು ರಚಿಸಿದ ಹೆಚ್ಚಿನ ಪುಸ್ತಕಗಳ ಬಹಳಷ್ಟು ಪ್ರತಿಗಳು ಅಲ್ಲಿದ್ದವು.. ಪುಸ್ತಕದಂಗಡಿಯಲ್ಲಿ ನಾವು ನಿಂತ ಹಾಗಿತ್ತು. ಒಂದೊಂದು ಗ್ರಂಥವನ್ನೂ ಕೈಗೆತ್ತಿಕೊಂಡು ಆ ಬಗ್ಗೆ ಕೆಲವು ವಿವರಗಳನ್ನು ನೀಡಿದರು. ಕೊನೆಯಲ್ಲಿ ಅವರು ಹೇಳಿದ ಒಂದು ಮಾತು ಈಗಲೂ ನೆನಪಿದೆ- “ಒಂದು ಶಾಕುಂತಲವನ್ನು ಅನುವಾದಿಸಿದ್ದಕ್ಕೆ ಬಸಪ್ಪ ಶಾಸ್ತ್ರಿಗಳು ‘ಅಭಿನವ ಕಾಳಿದಾಸ’ ಎನ್ನಿಸಿಕೊಂಡರು. ಕಾಳಿದಾಸನ ಎಲ್ಲ ಕೃತಿಗಳನ್ನು ಹಾಗೆಯೇ ಹರ್ಷ, ಭಾಸನ ಎಲ್ಲ ಕೃತಿಗಳ ಸಂಪುಟಗಳನ್ನು ನಾನು ಅನುವಾದಿಸಿ ಪ್ರಕಟಿಸಿದ್ದೇನೆ. ಹಾಗಾದರೆ ನಾನು?” ಕೇವಲ ಅನುವಾದ ಎಸ್ ವಿ ಪಿ ಅವರ ಕೊಡುಗೆಯಲ್ಲ. ಕಾವ್ಯದಲ್ಲಿ ಭಟ್ಟರ ಕೊಡುಗೆ ಅಮೂಲ್ಯ. ಒಂದು ಸಾಲಿನ ಕಾವ್ಯದ ರಚನೆಯಿಂದ ಹಿಡಿದು ಎರಡು ಸಾಲಿನ ಏಳೆ , ಮೂರು ಸಾಲುಗಳ ತ್ರಿಪದಿ, ನಾಲ್ಕರ ಸಾಂಗತ್ಯ ಹೀಗೆ ವಿವಿಧ ಛಂದಸ್ಸುಗಳಲ್ಲಿ ಪ್ರಯೋಗ ಮಾಡಿದವರು ಭಟ್ಟರು. ಭಾವಗೀತೆ ವಚನಗಳಲ್ಲಿಯೂ ಅವರ ಕೊಡುಗೆ ಮೌಲಿಕವಾದದ್ದು. ಸೀಳುನೋಟ, ಮುದ್ದಣ ಕವಿಯ ಶ್ರೀರಾಮಪಟ್ಟಾಭಿಷೇಕ, ಅಕ್ಕಮಹಾದೇವಿ, ಇಂದ್ರಚಾಪ, ಗಗನಚುಕ್ಕಿ, ಉಪ್ಪುಕಡಲು,ಕಂಬಾರ, ರಾಗಿಣಿ, ಗಾಥಾಶಪ್ತಶತಿ, ಅಮರಶತಕ, ಸುರಗಿ, ಭಾವಗೀತೆ, ಅದ್ಭುತ ರಾಮಾಯಣ ಕತೆ, ಕಣ್ಣಾಮುಚ್ಚಾಲೆ, ಗೀತಗೋವಿಂದ ಮೊದಲಾದ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಅವರು ನೀಡಿದ್ದಾರೆ. ಅವರೊಬ್ಬ ಮಾದರಿ ಅಧ್ಯಾಪಕ. ಸ್ನಾತಕೋತ್ತರ ಕೇಂದ್ರದ ಪ್ರಥಮ ನಿರ್ದೇಶಕರಾಗಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಅಸ್ತಿಭಾರ ಹಾಕಿದವರು ಅವರು. ಅವರ ಸಾಂಸಾರಿಕ ಜೀವನ (ಪತ್ನಿಯ ಮಾನಸಿಕ ತೊಂದರೆಯಿಂದಾಗಿ) ಸಂಕಷ್ಟಮಯವಾಗಿತ್ತು ಎಂದು ಕೇಳಿದ್ದೇನೆ. ಎಲ್ಲ ನೋವು ನುಂಗಿ ಕಾವ್ಯದ ಅಮೃತವನ್ನು ಹಂಚಿದ ನಂಜುಂಡ ಅವರು. ‘ಶಾರದೆಯ ನೆಲದಲ್ಲಿ ನನ್ನದೂ ಸಣ್ಣ ಹೊಲವಿದೆ. ನನ್ನ ಕೈಲಾದಷ್ಟು ಮಟ್ಟಿಗೆ ಕೃಷಿ ಮಾಡಿದ್ದೇನೆ’ ಎಂದ, ನಿಜ ಅರ್ಥದ ಈ ನುಡಿ ಸೇವಕನನ್ನು ಕಂಡ ಭಾಗ್ಯ ನನ್ನದು. ‘ಸದಾಶಿವ ಗುರು’ವಿಗೆ ನಮನಗಳು. (ಸದಾಶಿವ ಗುರು-ಎಸ್.ವಿ.ಪಿ. ಅವರು ತಮ್ಮ ವಚನಗಳಲ್ಲಿ ಬಳಸಿದ ಅಂಕಿತ) *********************************

ನಾನು ಕಂಡ ಹಿರಿಯರು Read Post »

ಅಂಕಣ ಸಂಗಾತಿ

ಅಂಕಣ

ಅವ್ಯಕ್ತಳ ಅಂಗಳದಿಂದ ಅವ್ಯಕ್ತ ಸಹಾನುಭೂತಿ, ತಳಮಳಗಳನ್ನು ತಿಳಿಗೊಳಿಸುತ್ತದೆ… ನಂಬಿಕೆ ಸತ್ಯವನ್ನು ಹೊರತರುತ್ತದೆ… ಸ್ವಾತ್ಮಾರೂಪ ಧರ‍್ಯದ ಬೀಜವನ್ನು ಬಿತ್ತುತ್ತದೆ… ನರ‍್ಭಯತೆ ಸ್ವಾತಂತ್ರ‍್ಯವನ್ನು ಪೋಷಿಸುತ್ತದೆ…. ಪ್ರೀತಿ-ವಿಶ್ವಾಸ, ಹಾದಿಯಲ್ಲಿ ದಾರಿದೀಪ ವಾಗುತ್ತದೆ… ಇದನ್ನರಿತ ನಾನು, ಹಂತಹಂತವಾಗಿ ಇವೆಲ್ಲವನ್ನೂ ಪೂರೈಸ ತೊಡಗಿದೆ..ಮೊದಲನೆಯದಾಗಿ ಅವಳ ಭಯ ಕಡಿಮೆಯಾಗಿ ನನ್ನ ಮೇಲೆ ನಂಬಿಕೆ ಹೆಚ್ಚಿಸಿದರೆ ಮಾತ್ರ, ಓದುವುದನ್ನು ಬರೆಯುವುದನ್ನು ಸರಿಪಡಿಸಬಹುದು. ಏಕೆಂದರೆ 10ನೇ ಕ್ಲಾಸಲ್ಲಿ ಅವಳು ಪಾಸಾಗುವುದು ಅವಳ ಪೋಷಕರಿಗೆ ಅಗತ್ಯವಾಗಿತ್ತು.ಅದಕ್ಕೆ ಪೀಠಿಕೆಯಂತೆ ಅವಳ ಚಿತ್ರಗಳನ್ನು, ಬರಹಗಳನ್ನು ಹೊಗಳಲು ಹಾಗೂ ಅದಕ್ಕೆ ಸೂಕ್ತವಾದ ಮಾರ್ಗದರ್ಶನ ನೀಡಲು ಶುರುಮಾಡಿದೆ…. ಮೆಲ್ಲನೆ ನನ್ನ ಮಾತುಗಳನ್ನು ನಂಬಲು ಪ್ರಾರಂಭಿಸಿದಳು…ನಂತರ ಪಕ್ಕದಲ್ಲಿ ಕುಳ್ಳಿರಿಸಿ ಅಕ್ಷರಗಳ ಜೋಡಣೆ, ಪದಗಳ ಉಚ್ಚಾರಣೆ ಹೀಗೆ ಕಲಿಸತೊಡಗಿದೆ. ನನ್ನ ಜೊತೆಗೆ ಅವಳ ಕ್ಲಾಸಿನಲ್ಲಿದ್ದ ಇನ್ನೆರಡು ಹುಡುಗಿಯರು ತಾಳ್ಮೆಯಿಂದ ನಾನು ಹೇಳಿಕೊಟ್ಟಂತೆ ಅವಳಿಗೆ ಸಹಾಯ ಮಾಡತೊಡಗಿದರು….ಸಹಜವಾಗಿ ಅವಳ ಮಾತುಗಳನ್ನು ಆಲಿಸುವುದು, ಅದನ್ನು ಗೌರವಿಸುವುದು, ಅದನ್ನು ಸರಿ ತಪ್ಪುಗಳಲ್ಲಿ ತುಲನೆ ಮಾಡದಿರುವುದು, ಅವಳ ಮನಸ್ಸಿನಲ್ಲಿ ಧೈರ್ಯ ತುಂಬಿತು.ಹಂತಹಂತವಾಗಿ ಓದಲು-ಬರೆಯಲು ಪ್ರಯತ್ನಿಸ ತೊಡಗಿದಳು. ನಗುನಗುತ್ತಲೇ ದಿನದಿಂದ ದಿನ ಓದಿನಲ್ಲಿ ತನ್ನ ಹಿಡಿತವನ್ನು ಜಾಸ್ತಿ ಮಾಡಿಕೊಂಡಳು ತಾನೇ ಸ್ವಂತ ಪ್ರಯತ್ನಿಸಲು ಶುರುಮಾಡಿದಳು.ಮುಖದ ಮೇಲೆ ಅಲ್ಲದೆ ಮನದ ಒಳಗು ಸಂತೋಷದಿಂದ ಇದ್ದಾಳೆ ಎಂದು ಭಾಸವಾಗುತ್ತಿತ್ತು… ಒಂಟಿಯಾಗಿರುವುದು ಅವಳ ಅಭ್ಯಾಸ, ಅಲ್ಲದೆ ಅವಳ ಅನಿವಾರ್ಯತೆ ಆಗಿದ್ದರಿಂದ ಹೆಚ್ಚುಕಡಿಮೆ ಅದಕ್ಕೆ ಒಗ್ಗಿ ಹೋಗಿದ್ದಳು. ಅಲ್ಲಿಂದ ಹೊರತಂದು ಮಕ್ಕಳೊಂದಿಗೆ ಬರೆಯುವುದನ್ನು, ಆತ್ಮವಿಶ್ವಾಸದಿಂದ ಮಾತನಾಡುವುದನ್ನು ಪ್ರೋತ್ಸಾಹಿಸಿದೆ. ವರ್ಷದ ವಾರ್ಷಿಕೋತ್ಸವದಲ್ಲಿ ಅವಳ ಪಕ್ಕದಲ್ಲಿ ನಿಂತು ಪೋಷಕರನ್ನುದ್ದೇಶಿಸಿ ಒಂದು ನಿಮಿಷ ಮಾತನಾಡಲು ಹುರಿದುಂಬಿಸಿದೆ…  ಸಾಮಾನ್ಯವಾಗಿ ಮಕ್ಕಳನ್ನು ನಾನು ಗಟ್ಟಿ ಸ್ವರದಲ್ಲಿ ಮಾತನಾಡಿಸುವುದೇ ಅಭ್ಯಾಸ. ಆದರೆ ಈ ಹುಡುಗಿಯನ್ನು ಬಹಳ ಮೃದು ಸ್ವರದಲ್ಲಿ ಮಾತನಾಡಿಸಬೇಕಿತ್ತು. ನನಗೆ ಅದೊಂದು ಕಷ್ಟದ ಕೆಲಸವಾಗಿತ್ತು… ನಾನೇನಾದರೂ ಚೂರು ಸ್ವರ ಏರಿಸಿದರೆ ಸಾಕು ಇಡೀ ಮೈ ನಡುಗಿಸಿಬಿಡುವಳು ಅಷ್ಟು ಭಯ ಅವಳಲ್ಲಿ ತುಂಬಿಹೋಗಿತ್ತು. ಕತ್ತಲು, ಜಿರಳೆ, ಸಣ್ಣ ದೊಡ್ಡ  ಪ್ರಾಣಿಗಳು,ನಾಯಿ ಕಂಡರೆ ಭಯ, ಹಸು ಕಂಡರೆ ಭಯ, ದಷ್ಟಪುಷ್ಟವಾದವರನ್ನು ಕಂಡರೆ ಭಯ ಜೋರಾಗಿ ಕಿರುಚಿ ಭಯಪಡುತ್ತಿದ್ದಳು.ಅವಳಲ್ಲಿ ಆತ್ಮವಿಶ್ವಾಸವನ್ನು ನಿಧಾನವಾಗಿ ತುಂಬಿಸಿ ಒಬ್ಬಳೇ ಓಡಾಡುವ ಹಾಗೆ ಮಾಡಲಿಕ್ಕೆ ಒಂದು ವರ್ಷವೇ ಬೇಕಾಯಿತು. ಸ್ವಲ್ಪ ಮುಗ್ದೆ ಇದ್ದಿದರಿಂದ ಸುಲಭವಾಗಿ ಹೇಳಿದ ಮಾತು ಕೇಳುತ್ತಿದ್ದಳು…ಮೊದಲು ಅವಳ ಜೊತೆ ಸ್ನೇಹಿತರನ್ನು ಕಳಿಸುತ್ತಿದ್ದೆ ನಂತರ ಅವಳೊಬ್ಬಳೆ ಬಂದಾಗ ಬೇಕೆಂದೇ ಹೊಗಳುತ್ತಿದ್ದೆ.  ಕ್ಲಾಸಿನಲ್ಲಿ ಇರುವವರಿಗೆ ಪ್ರಶಂಸಿ ಎಂದು ಹೇಳಿಕೊಟ್ಟಿದ್ದೆ. ಅವಳಿಗೆ ಹೊಸ ಹೊಸ ಚಾಲೆಂಜ್ ಗಳನ್ನು ಕೊಟ್ಟೆ ಅಲ್ಲಿ ಹಸುಗಳು ನಿಂತಿವೆಯಲ್ಲ ಅಲ್ಲಿಂದ ನಡೆದುಕೊಂಡು ಬಾ, ನಿಮ್ ಮನೆಯಿಂದ ನೀನೊಬ್ಬಳೆ ನಡೆದುಕೊಂಡು ಬಾ, ಸಂತೆಗೆ ಹೋಗಿ ಸಾಮಾನು ತೆಗೆದುಕೊಂಡು ಬಾ ಅಂತ ಹೊಸ ಹೊಸ ಚಾಲೆಂಜ್… ಅವಳಲ್ಲಿ ದೈರ್ಯ ಹೆಚ್ಚಾಗುತ್ತಾ ಹೋಯಿತು.ಅಂತೂ ಒಂದು ದಿನ ಕತ್ತಲಲ್ಲಿ ಅವಳೊಬ್ಬಳೇ ನನ್ನ ಮನೆಯವರೆಗೂ ಬಂದಳು. ಅವಳಲ್ಲಿ, ‘ನಾನು ಏನೋ ಸಾಧಿಸಿದೆ!’ ಎಂಬ ಸಂತೋಷ ನೋಡಿ ನನಗೂ ಸಂತೋಷವಾಗಿತ್ತು. “ಆತ್ಮ ಸ್ಥೈರ್ಯದ ಜೊತೆ ನಂಬಿಕೆ ಸೇರಿದಾಗ ಅಸಾಧ್ಯವಾದದ್ದು ಏನೂ ಇಲ್ಲ ” ************

ಅಂಕಣ Read Post »

ಅಂಕಣ ಸಂಗಾತಿ

ಅಂಕಣ

ಹೊತ್ತಾರೆ ಅಮ್ಮನೂರಿನ ನೆನಪುಗಳು ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ಅಮ್ಮ…  ಅಜ್ಜಿಯನ್ನು ನಾನು ಅಮ್ಮ ಅಂತ ಕರೆಯುತ್ತಿದ್ದುದು. ನನ್ನ ಬಾಲ್ಯದ ಮುಕ್ಕಾಲು ಪಾಲಿಗಿಂತಲೂ ಹೆಚ್ಚು ಅಮ್ಮನ ಜೊತೆಯಲ್ಲೇ ಕಳೆದಿದ್ದರಿಂದ ನೆನಪುಗಳ ರಾಶಿಯೇ ಇದೆ. ಹಾಗಾಗಿ ನಾನು ನಿಧಾನವಾಗಿ ಸಂದರ್ಭಗಳನ್ನೆಲ್ಲ ಪೋಣಿಸುತ್ತಾ ಒಂದೊಂದೇ ಬರಹ ಬರೆಯುತ್ತಿರುತ್ತೇನೆ. ಮುಂದೆ ಎಲ್ಲವನ್ನೂ ಕ್ರೋಢೀಕರಿಸುವುದೂ ಆಗುತ್ತದೆ. ಒಂದಂತೂ ನಿಜ ಇದುವರೆಗಿನ ನನ್ನ ಬದುಕಿನ ಎಂತಹದ್ದೇ ಮುಖ್ಯ ಸಂದರ್ಭವಾದರೂ ಅಲ್ಲಿ ಅಮೂರ್ತವಾಗಿ ಅಮ್ಮ ಇದ್ದೇ ಇರುತ್ತಾರೆ. ನನಗಿನ್ನೂ ನೆನಪಿದೆ. ನನಗೆ ಬುದ್ಧಿ ತಿಳಿಯುವಾದಾಗಿಂದಲೂ, ಅಮ್ಮ ನಿತ್ಯವೂ ಕೋಳಿ ಕೂಗುವ ಹೊತ್ತಿಗೆ ಎದ್ದು ತನ್ನ ಕೆಲಸದಲ್ಲಿ ತಲ್ಲೀನರಾಗಿಬಿಡುತ್ತಿದ್ದರು. ಸುಮಾರು ಐದುಮುಕ್ಕಾಲಿಗೆ ಅಮ್ಮನ ಕೆಲಸಗಳ ಧಡಬಡ ಸದ್ದು ಕೇಳಲು ಶುರುವಾಗುತ್ತಿತ್ತು. ಸುಮಾರು ನೂರೈವತ್ತು ಅಡಿ ಉದ್ದ ಹದಿನೈದು ಅಡಿ ಅಗಲದ ಮನೆಯ ಅಂಗಳವನ್ನು ಗುಡಿಸಿ ನೀರು/ಗಂಜಲ ಹಾಕಿ ಸಾರಿಸಿ ರಂಗೋಲಿಯಿಟ್ಟು, ಹೊಸ್ತಿಲು ತೊಳೆದು ಅರಿಶಿನ ಕುಂಕುಮಗಳಿಂದ ಅಲಂಕಾರ ಮಾಡಿ, ಬಿಸಿನೀರಿನ ಒಲೆ ಹಚ್ಚುತ್ತಿದ್ದರು. ಆಮೇಲೆ ಕೊಟ್ಟಿಗೆಯಿಂದ ದನಗಳನ್ನೆಲ್ಲ ಹೊರಗೆ ಕಟ್ಟಿ ಕೊಟ್ಟಿಗೆ ಕಸ ಗುಡಿಸಲು ಅಣಿಯಾಗುತ್ತಿದ್ದರು.  ಇವೆಲ್ಲವೂ ನಡೆಯುವಾಗ ನನ್ನ ನಿದ್ರೆ ಸಾಂಗವಾಗಿ ಸಾಗುತ್ತಲೇ ಇರುತ್ತಿತ್ತು. ಹಬ್ಬದ ದಿನಗಳಲ್ಲಿ ಮಾತ್ರ ಮಾತಿನಲ್ಲೇ ತಿವಿದು ತಿವಿದು ಏಳುವವರೆಗೆ ಬಿಡುತ್ತಲೇ ಇರಲಿಲ್ಲವಾದ್ದರಿಂದ ಆ ದಿನಗಳಲ್ಲಿ ಅಮ್ಮನ ನಿತ್ಯದ ಕೆಲಸಗಳನ್ನು ಗಮನಿಸುವುದು ಸಾಧ್ಯವಿತ್ತು. ಮಿಕ್ಕ ದಿನಗಳಲ್ಲಿ ಅಮ್ಮ ಕೆಲಸಗಳನ್ನೆಲ್ಲ ಮುಗಿಸಿ ನಮ್ಮ ಮನೆಯಲ್ಲಿದ್ದ ಪುಟ್ಟ ಫಿಲಿಪ್ಸ್ ರೇಡಿಯೋ ಹೊತ್ತಿಸಿದಾಗಲೇ ನನಗೆ ಬೆಳಗಾಗುತ್ತಿದ್ದುದು. ಅದರಲ್ಲೂ, ಇಯಂ ಆಕಾಶವಾಣಿಃ, ಸಂಪ್ರತಿ ವಾರ್ತಾಹ ಶ್ರೂಯಂತಾಂ, ಪ್ರವಾಚಕಾಃ ಬಲದೇವಾನಂದ ಸಾಗರಃ ಅಂದಾಗ, ಸರಿಯಾಗಿ ಆರುಮುಕ್ಕಾಲು…. ಆ ಮಾರಾಯ ಬಲದೇವಾನಂದ ಸಾಗರಾಹ ಗೆ ಹುಷಾರು ತಪ್ಪುತ್ತಲೇ ಇರಲಿಲ್ಲವೇನೋ.  ಒಂದೂ ದಿನ ತಪ್ಪದ ಹಾಗೆ ಸಂಸ್ಕೃತ ವಾರ್ತೆ ಕೇಳಿಸುತ್ತಿದ್ದರು. ನಂತರ ಚಿಂತನ, ಆಮೇಲೆ ಪ್ರದೇಶ ಸಮಾಚಾರ ಹೀಗೆ ರೇಡಿಯೋ ಕಾರ್ಯಕ್ರಮಗಳು ಮುಂದುವರಿಯುತ್ತಿರುವಾಗ ನನಗೂ ಹಾಸಿಗೆಗೂ ಇರುವ ಅಂಟು ನಿಧಾನವಾಗಿ ಬಿಡಿಸಿಕೊಳ್ಳುತ್ತಿತ್ತು. ಅಂಟು ಅಂದರೆ ಅದೊಂದು ನೀಳ್ಗತೆ. ಇಲ್ಲಿ ಸ್ವಲ್ಪ polished ಭಾಷೆಯಲ್ಲಿ ಹೇಳ್ತೇನೆ. ಬಾಲ್ಯದಲ್ಲಿ ನಾನು bedwetting ಮಾಡಿಕೊಳ್ಳುವ ಹವ್ಯಾಸ ಇತ್ತು; ಹವ್ಯಾಸ ಅನ್ನುವುದಕ್ಕೆ ಅದೇನು ಫೋಟೋಗ್ರಫಿ, ಪಕ್ಷಿವೀಕ್ಷಣೆ, ಚಾರಣ ಇಂತಹದ್ದೇನಲ್ಲ. ನಿತ್ಯವೂ ತಪ್ಪದೇ ನಡೆಯುತ್ತಿದ್ದರಿಂದ ಹಾಗಂದಿದ್ದು. ನನ್ನ ಬಾಲ್ಯದಲ್ಲಿ ಕನಸು ನನಸಾಗುತ್ತಿದ್ದುದು ಉಂಟು. ಅದು ಈ ಹವ್ಯಾಸದ ಮೂಲಕವಷ್ಟೇ! ನಿತ್ಯವೂ ನಾನು ಹೊರಗೆಲ್ಲೋ ಹೋಗಿ ಸೂಸು ಮಾಡಿಬಂದಿರುತ್ತಿದ್ದೆ. ಎಚ್ಚರವಾದಾಗ ಎಂದಿನಂತೆ ಎಡವಟ್ಟಾಗಿರುತ್ತಿತ್ತು!! ಕನ್ನಡಕ್ಕೆ ಅನುವಾದಿಸಿದರೆ ಆ ಬಾಲ್ಯದ ಸಂಕೋಚ ಮತ್ತೆ ಮರಳಿಬಿಡುವುದಲ್ಲಾಂತ ಈ ರೀತಿ ಪಾಲಿಶ್ ಮಾಡಿದ್ದೇನಷ್ಟೇ. ಸಧ್ಯಕ್ಕೆ ಈ ಕತೆ ಇಲ್ಲಿಗೇ ನಿಂತಿರಲಿ. ಅಮ್ಮನ ಹೊರಗಿನ ಕೆಲಸಗಳೆಲ್ಲ ಮುಗಿದು  ಅಡುಗೆ ಮನೆಗೆ ಬಂದು ರೊಟ್ಟಿ ಮಾಡಲು ಅಣಿ ಮಾಡಿಕೊಳ್ಳುತ್ತಿದ್ದರು. ಅಮ್ಮನ ತಿಂಡಿ ಅಂದರೆ ಅದು ರೊಟ್ಟಿಯೇ. ಅಪ್ಪಿತಪ್ಪಿ ಉಪ್ಪಿಟ್ಟೋ ಚಿತ್ರಾನ್ನವೋ ಆದರೆ ಆ ದಿನ ಅಮ್ಮನ ಆರೋಗ್ಯ ಸರಿಯಿಲ್ಲ ಅಂತ ಅರ್ಥ, ಅಥವಾ ಬೆಳಗಿನ ಗ್ರಹಚಾರ ನೆಟ್ಟಗಿಲ್ಲ ಅಂತ ಇನ್ನೊಂದು ಅರ್ಥ.  ರೊಟ್ಟಿಯ ಹೊರತಾಗಿ ಬೇರೆ ಯಾವುದೇ ತಿಂಡಿಯನ್ನೂ ನಾನೂ ನನ್ನ ಕೊನೆಯ ಸೋದರಮಾವನೂ ಒಕ್ಕೊರಲಿನಿಂದ ನಿರಾಕರಿಸುತ್ತಿದ್ದೆವು. ಅದರಲ್ಲೂ ಅಕ್ಕಿರೊಟ್ಟಿಯೇ ಆಗಬೇಕು. ಅಪರೂಪಕ್ಕೆ ಒಮ್ಮೊಮ್ಮೆ ಅಕ್ಕಿಹಿಟ್ಟು ಖಾಲಿಯಾಗಿ ಮುದ್ದೆ ಮಾಡಲು ಯಥೇಚ್ಛವಾಗಿರುತ್ತಿದ್ದ ರಾಗಿ ಹಿಟ್ಟಿನ ರೊಟ್ಟಿಯೇನಾದರೂ ಆಯ್ತೋ, ಅದಕ್ಕೂ ಗ್ರಹಚಾರ ಬಿಡಿಸುತ್ತಿದ್ದೆವು. ರೊಟ್ಟಿಗೆ ನಿತ್ಯವೂ ತೆಂಗಿನಕಾಯಿ ಚಟ್ನಿ, ಮುಂಗಾರಿನಲ್ಲಾದರೆ  ತಿಂಗಳ ಹುರುಳಿಯ ಕಾಯಿ ಫಲ್ಯ, ಆಲೂಗಡ್ಡೆ ಫಲ್ಯ. ಅಮ್ಮನ ಆ ಒಂದು ರೊಟ್ಟಿ ತಿಂದರೆ ಮಧ್ಯಾಹ್ನ ಊಟದ ಅಗತ್ಯವಿರುತ್ತಿರಲಿಲ್ಲ. ಹಾಗಾಗಿ ಸ್ಕೂಲ್ ನ ಮಧ್ಯಾಹ್ನದ ಊಟದ ಸಮಯದಲ್ಲಿ ಅದೆಷ್ಟು ಒತ್ತಾಯಿಸಿದರೂ, ಗೆಳೆಯರ ಜೊತೆಯಲ್ಲಿ ಆಟ ಆಡುವುದಕ್ಕೆ ಜಾರಿಕೊಳ್ತಿದ್ದೆ. ಹಾಗೆ ಆಟ ಆಡುವಾಗ, ಕಳ್ಳ ಪೊಲೀಸ್ ಆಟವೇನಾದರೂ ಆಗಿದ್ದು, ಗುಡ್ಡದಂತೆ ಇದ್ದ ನಮ್ಮ ಊರಿನ ಕೆಳಭಾಗದಲ್ಲಿದ್ದ ಸ್ಕೂಲ್ ನಿಂದ ಗುಡ್ಡದ ತುದಿಯಲ್ಲಿದ್ದ ನಮ್ಮ ಮನೆಯ ಸಮೀಪ ಬಂದದ್ದೇನಾದರೂ ಆಗಿದ್ದರೆ ಅಂತಹ ಮಧ್ಯಾಹ್ನ ಊಟಕ್ಕೆ. ಇಲ್ಲಾಂದ್ರೆ ಚಕ್ಕರ್. ಒತ್ತಾಯಗಳಿಗೆ ಮಣಿಯದ ನನ್ನನ್ನು ಬದಲಾಯಿಸಲಾಗದೇ  ಅಮ್ಮನೇ ಒಂದರ್ಧ ರೊಟ್ಟಿಯನ್ನು ಬ್ಯಾಗಿನೊಳಗೆ ಹಾಕಿ ಸ್ಕೂಲಿಗೆ ಕಳಿಸ್ತಿದ್ದರು. ಅಮ್ಮನ ಅಡುಗೆ ಅಂದರೆ ಅದು ಖಾರಾ ಬಾಂಬು! ಓಹೋ, ಆ ಖಾರಾಪುಡಿಯನ್ನು ತಯಾರಿ ಮಾಡಿಕೊಳ್ಳುವುದಂತೂ ಅಮ್ಮನ ಸಂಪ್ರದಾಯ. ಮೆಣಸಿನಕಾಯಿ ಹೆಕ್ಕಿ ಅದನ್ನು ಬಿಸಿಲಿನಲ್ಲಿ ಹದವಾಗಿ ಒಣಗಿಸಿ ಆಮೇಲೆ ಮೆಲು ಉರಿಯಲ್ಲಿ ಹುರಿದು ಪುಡಿಮಾಡಿಸುತ್ತಿದ್ದ ಪ್ರಕ್ರಿಯೆ, ನಮ್ಮ ರಕ್ಷಣಾ ಇಲಾಖೆಯ ಮದ್ದುಗುಂಡುಗಳ ತಯಾರಿಕೆಯ ಹಾಗೆ ಇರುತ್ತಿತ್ತು. ಇನ್ನು ಉಳಿದ ಸಂಬಾರ ಪದಾರ್ಥಗಳ ಏರ್ಪಾಡು ಅಂದರೆ ಅದು ಬಿಡಿ, ಬಜೆಟ್ ಮಂಡಿಸುವುದಕ್ಕೂ ಸಹ ಹಣಕಾಸು ಸಚಿವರು ನನ್ನ ಅಮ್ಮನ ರೀತಿಯ ತಯಾರಿ ಮಾಡಿಕೊಳ್ಳಲಾರರು!  ಅಮ್ಮನ ಆ ಖಾರಾಬಾಂಬಿಗೆ ನಾವು ಎಷ್ಟು ಒಗ್ಗಿಹೋಗಿದ್ದೆವೆಂದರೆ ಯಾರಾದರೂ ನೆಂಟರು ಬಂದರೆ ಅವರ ಮೇಲಿನ ಕಾಳಜಿಯಿಂದ ಅಮ್ಮ ಸ್ವಲ್ಪ ಖಾರ ಕಡಿಮೆ ಮಾಡಿದರೂ ಅವರ ಬೆವರಿಳಿಯುತ್ತಿರುತ್ತಿತ್ತು. ನಾವು ಬೇರೆ ಮನೆಗಳಲ್ಲಿ ಊಟ ಮಾಡುವಾಗ ಉಪ್ಪಿನ ಕಾಯಿ ಇದ್ದರಷ್ಟೇ ಅಮ್ಮನ ಬಾಂಬಿಗೆ ತುತ್ತಾದ ನಮ್ಮ ನಾಲಿಗೆಗೆ ಬೇರೆಯವರ ಸಾಂಬಾರಿನ ರುಚಿ ಹೊಂದಿಸಿಕೊಳ್ಳಬಹುದಾಗಿತ್ತು. ಅಮ್ಮನ ಇನ್ನೊಂದು ವೈಖರಿಯೆಂದರೆ ಕಾಲಕ್ಕೆ ತಕ್ಕಂತೆ, ಋತು ಬದಲಾದ ಹಾಗೆ ಅಮ್ಮನ ತರಕಾರಿ ಪದಾರ್ಥಗಳೂ ಬದಲಾಗುತ್ತಿದ್ದವು. ಒಂದೇ ರೀತಿಯ ತರಕಾರಿಯನ್ನು ಯಾವತ್ತೂ ಪುನರಾವರ್ತಿಸುತ್ತಿರಲಿಲ್ಲ. ಸೊಪ್ಪು ಹೊಂದಿಸುವುದಕ್ಕಂತೂ ಅರ್ಧ ಮೈಲಿ ಸುತ್ತಿ ಬರುತ್ತಿದ್ದರು. ಇನ್ನು ಅಣಬೆ ಅಂದರೆ ಮುಂಜಾವಿನಲ್ಲಿಯೇ ಹೊರಟು ಒಂದು ಬುಟ್ಟಿ ಅಣಬೆ ಹೊಂದಿಸಿ ತಂದಿಟ್ಟಿರುತ್ತಿದ್ದರು. ಸೀಗೆಸೊಪ್ಪು, ನುಗ್ಗೆಸೊಪ್ಪು, ಬಸಳೆಸೊಪ್ಪು, ಬಿದಿರಿನ ಕಳಲೆ, ಗದ್ದೆಬದುಗಳಲ್ಲಿ ಇರ್ತಿದ್ದ ಕಹಿಎಣಿಗೆ ಸೊಪ್ಪು. ಹಲಸಿನ ಬಡುಕು, ಹಲಸಿನ ಬೀಜ, ಇವು ಕೆಲವೇ ಕೆಲವು.  ಇನ್ನು ತರಕಾರಿಗೆ ತಕ್ಕಂತೆ ಹೊಂದುವ ಕಾಳುಗಳು. ಅವೂ ಸಹ ಎರಡು ದಿನಕ್ಕೆ ಪುನರಾವರ್ತನೆಯಾಗುತ್ತಿರಲಿಲ್ಲ. ಇಷ್ಟೆಲ್ಲಾ ಆಹಾರ ವೈವಿಧ್ಯತೆಯಿರುತ್ತಿದ್ದರಿಂದ ನಮಗೆ ಅನಾರೋಗ್ಯ ಅನ್ನುವುದೇ ಗೊತ್ತಿರಲಿಲ್ಲ. ಅಪರೂಪಕ್ಕೆಂದು ಜ್ವರವೋ, ಕೆಮ್ಮೋ ಆದರೆ ನಮ್ಮ ಊರಿನ ಪಕ್ಕದಲ್ಲಿರುವ ಶೆಟ್ಟಿಹಳ್ಳಿಯ ಸಂತಮರಿಯಮ್ಮನ ಆಸ್ಪತ್ರೆ. ಅಲ್ಲಿ ಒಂದು ಕ್ಯಾನ್ ನಲ್ಲಿ ಇರಿಸುತ್ತಿದ್ದ ಕೆಮ್ಮಿನ ಸಿರಪ್, ಅಥವಾ ಬಿಸಿನೀರಿನಲ್ಲಿ ಸದಾ ಕುದಿಸುತ್ತಿದ್ದ ಆ ಗಾಜಿನ ಸಿರಿಂಜುಗಳಲ್ಲಿ ಮೇಲಿನ ತುದಿಗೆ ಒಂದೆರಡು ಹನಿಯಂತೆ ಎಳೆದು ಚುಚ್ಚುತ್ತಿದ್ದ ಇಂಜೆಕ್ಷನ್ನು, ಅದೂ  ಯುಗಾದಿ, ದೀಪಾವಳಿಯ ಹಾಗೆ ವರ್ಷಕ್ಕೊಂದೋ ಅಥವಾ ಎರಡೋ ಅಷ್ಟೇ!  ನಾವು ಮಳೆಯಲ್ಲಿ ನೆನೆಯುವುದು ಧೂಳು ಕೊಳಕಿನಲ್ಲಿ ಆಟವಾಡುತ್ತಿದ್ದಕ್ಕೆ ಶೀತ ನೆಗಡಿ ಅನ್ನುವುದು ಆಗ್ಗಾಗ್ಗೆ ತೋರ್ಪಡಿಸಿಕೊಳ್ಳುತ್ತಿತ್ತು. ಹಾಲಿಗೆ ಒಂದಿಷ್ಟು ಮೆಣಸಿನ ಪುಡಿ, ಇನ್ನೊಂದಿಷ್ಟು ಅರಿಶಿನ ಹಾಕಿ ಬಿಸಿಯಾಗಿ ಕುಡಿದರೆ ಅದೇ ಮದ್ದು. ಅದಕ್ಕಿಂತ ಹೆಚ್ಚಿನ ಶುಶ್ರೂಷೆಯ ಅಗತ್ಯವಿರಲಿಲ್ಲ.  ಆದರೆ ಅಮ್ಮನ ನಿತ್ಯದ ಖಾರಾಬಾಂಬಿನ ಜೊತೆಯಲ್ಲೇ, ಪ್ರತಿಶನಿವಾರವೂ ಕೊತಕೊತ ಕುದಿಯುತ್ತಿದ್ದ ನೀರಿನ ಅಭ್ಯಂಜನ. ಅದಂತೂ ಲಾವಾರಸವೇ ಮೈಮೇಲೆ ಹರಿದ ಹಾಗಿರುತ್ತಿತ್ತು. ನಾನಂತೂ ಶನಿವಾರದ ಸ್ನಾನ ತಪ್ಪಿಸಿಕೊಳ್ಳುವುದಕ್ಕೆ ತುದಿಗಾಲಿನಲ್ಲಿರುತ್ತಿದ್ದೆ. ಆಗುತ್ತಿರಲಿಲ್ಲ. ಓಹೋ, ಮೈಯೆಲ್ಲಾ ಸುಟ್ಟು ಹೊಗೆ ಬರುವ ಹಾಗೆ ಮಾಡಿಬಿಡುತ್ತಿದ್ದರು.  ಅಲ್ಲಿಗೆ ಮಿಕ್ಕ ಖಾಯಿಲೆಗಳೆಲ್ಲ ಅದರಿ ಅಲ್ಲಾಡಿ ಬೆದರಿ ಬೆಂಡಾಗಿ ಹೋಗಿಬಿಡಬೇಕಿತ್ತಷ್ಟೇ! ಅಮ್ಮನ ಜೊತೆಗಿನ ಈ ದಿನಗಳಲ್ಲಿ ಅಂಗನವಾಡಿಯ ಸಮಯದಲ್ಲಿ ಆಂಟಿಯೂ ಇದ್ದರು. ನಾನು ಒಂದನೇ ಕ್ಲಾಸಿನಲ್ಲಿದ್ದಾಗ ಅವರ ಮದುವೆಯಾಯ್ತು. ಅದಾದ ನಂತರ ಏಳನೇ ಕ್ಲಾಸಿನ ತನಕ ಅಮ್ಮನ ಜೊತೆಯಲ್ಲಿಯೇ ಇದ್ದೆ. ಅಮ್ಮನ ಜೊತೆಯಿದ್ದು ಅದೆಷ್ಟು ಅವಲಂಬಿತನಾಗಿದ್ದೆ ಅಂದರೆ, ನನಗೆ ಬಾಗಿ ನನ್ನ ಕಾಲು ತೊಳೆದುಕೊಳ್ಳುವುದಕ್ಕೇ ಬರುತ್ತಿರಲಿಲ್ಲ. ನಾಲ್ಕನೇ ಕ್ಲಾಸಿನಲ್ಲಿ ನನ್ನ ಇಮ್ಮಡಿಗಳನ್ನು ಉಜ್ಜಿ ತೊಳೆಯುವುದಕ್ಕೆ ಕಲಿತಿದ್ದು. ಅಷ್ಟೇ ಯಾಕೆ, ಮೂಗಿನ ಸಿಂಬಳ ತೆಗೆಯುವುದು ಹೇಗೆ ! ಅಂತಲೂ ಗೊತ್ತಿರಲಿಲ್ಲ. ಅಮ್ಮನ ಆ ಆರೈಕೆ ಕಾಳಜಿಗಳು ಮುಂದೆ ನಾನು ಹಾಸ್ಟೆಲ್ ಸೇರಿದ ದಿನಗಳಲ್ಲಿ  ವಿಪರೀತ ಹಿಂಸೆ ಅನುಭವಿಸುವ ಹಾಗೂ ಮಾಡಿದವು. ಆದರೆ ಬಾಲ್ಯದ ಅಮ್ಮನ ಆ ಆಹಾರ ಪದ್ಧತಿಯು ನನ್ನ ಆರೋಗ್ಯವನ್ನು ಏರುಪೇರಾಗದಂತೆ ಇರಿಸಿತ್ತು. ಒಂದು ಸಾರ್ತಿ ಹಾಸನದಲ್ಲಿದ್ದಾಗ ಟೈಫಾಯ್ಡ್ ಆಗಿ ಆಸ್ಪತ್ರೆ ದಾಖಲಾಗಿದ್ದ ಒಂದೇ ಘಟನೆ. ಅದು ಬಿಟ್ಟು ನಾನು ಈವರೆಗೆ ಬೇರೆ ಖಾಯಿಲೆ ಅಂತ ಡಾಕ್ಟರನ್ನು ನೋಡಿಲ್ಲ. ಇನ್ನು ದೇಶಬಿಟ್ಟ ನಂತರವಂತೂ, ಒಂದು ದಿನ ಡ್ರೈವರ್ ಲೈಸಿನ್ಸ್ ಪಡೆಯುವುದಕ್ಕೆ ಕಡ್ಡಾಯವಾಗಿ ನಡೆಸಬೇಕಾದ ತಪಾಸಣೆಗೆಂದು ಆಸ್ಪತ್ರೆಗೆ ಹೋಗಿದ್ದು; ಆಮೇಲೆ ಒಂದು ಸಾರ್ತಿ ರಾಶಿ ಹಿಮ ಸುರಿದಿದ್ದ ಚಳಿಗಾಲದಲ್ಲಿ ಕೆಮ್ಮಾಗಿ ನಿರ್ಲಕ್ಷಿಸಿದ್ದಕ್ಕೆ ಅದು ಜ್ವರಕ್ಕೆ ತಿರುಗಿ ಒಂದು ದಿನ ಆಸ್ಪತ್ರೆಗೆ ಹೋಗಿದ್ದೆ. ಅದು ಬಿಟ್ಟರೆ ಹತ್ತು ವರ್ಷಗಳಲ್ಲಿ ಆಸ್ಪತ್ರೆಯ ಮುಖ ನೋಡಬೇಕಾದ ಅಗತ್ಯವೇ ಬಂದಿಲ್ಲ ನನಗೆ. ಹಾಂ, ಸದಾ ಕಂಪ್ಯೂಟರ್ ಮುಂದೆಯೇ ನನ್ನ ಕೆಲಸವಾಗಿರುವುದರಿಂದ, ಮೊದಲ ಕೆಲವು ವರ್ಷಗಳ ಸಿಆರ್‌ಟಿ ಮಾನಿಟರುಗಳ ಕೃಪೆಯಿಂದಾಗಿ ದೃಷ್ಟಿ ನೆಟ್ಟಗೆ ಮಾಡಿಕೊಳ್ಳುವುದಕ್ಕೆಂದು ಕನ್ನಡಕ ಕಡ್ಡಾಯವಾಗಿಬಿಟ್ಟಿದೆ! ಅದಕ್ಕಂತೂ ಪ್ರತಿ ಎರಡು ವರ್ಷಕ್ಕೊಮ್ಮೆ ರಾಜಾಸೀಟಿನ ಮೇಲೆ ಕೂತು ಆ ಡಾಕ್ಟರು ತಿರುಗಿಸುವ ಲೆನ್ಸುಗಳ ಮೂಲಕ ನೋಡಿ ನನಗೆ ಓದಲು ಬರ್ತದೋ ಇಲ್ಲವೋ ಅಂತ ಅವರ ಮುಂದೆ ಸಾಬೀತುಪಡಿಸಬೇಕಾಗ್ತದೆ. ಆದರೆ ಸಣ್ಣಪುಟ್ಟ ಖಾಯಿಲೆಗಳಿಗೆ ನಾನು ಇಂದೂ ಸಹ ಅಮ್ಮನ ಆ ಮನೆ ಔಷಧಿಗಳನ್ನೇ ಅನುಸರಿಸ್ತೇನೆ, ಖಾರಾಬಾಂಬು, ಹೊಗೆಯಾಡಿಸುವಂತಹ ಆ ಅಭ್ಯಂಜನ ಸ್ನಾನ ಇವೆರಡನ್ನು ಹೊರತುಪಡಿಸಿ! *********

ಅಂಕಣ Read Post »

ಅಂಕಣ ಸಂಗಾತಿ

ಹೊತ್ತಾರೆ

ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ಅಕ್ಕಯ್ಯನೆಂಬ ಯಶೋಧೆ ನಾನು ಆಗತಾನೇ ಬೈಕಿನಿಂದಿಳಿದು ಹೆಲ್ಮೆಟ್ ತೆಗೆಯುತ್ತಿದ್ದೆ. ಹೊಲದ ಕಡೆ ಹೊರಟಿದ್ದ ರಂಗಪ್ಪಣ್ಣ ನನ್ನನ್ನು ನೋಡಿ ತಕ್ಷಣ ಗುರುತಿಸಲಾಗದೇ, ಹಾಗೆಯೇ ಸ್ವಲ್ಪ ಹೊತ್ತು ನಿಂತರು. “ ಓಹೋಹೋಹೋಹೋ… ಏನ್ ಅಳಿಮಯ್ಯಾ, ಅಪ್ರೂಪದಂಗೆ….. ಎಷ್ಟೊಂದ್ ವರ್ಷ ಆಗಿತ್ತಲ್ಲ ನಿಮ್ಮನ್ನ ನೋಡಿ, ಹಾಂ?” ಅಂತ ತನ್ನದೇ ರಾಗದಲ್ಲಿ ರಂಗಪ್ಪಣ್ಣ ಮಾತಾಡಿಸಿ ಹೆಗಲಮೇಲೆ ಹೊತ್ತಿದ್ದ ನೇಗಿಲನ್ನೂ ಇಳಿಸದಂತೆ ಹಾಗೆಯೇ ನೋಡುತ್ತಾ ನಿಂತರು. “ಏನ್ ಮಾಡೋದು ರಂಗಪ್ಪಣ್ಣ? ಹೊಟ್ಟೆಪಾಡು, ಊರುಬಿಟ್ಟು ಊರಿಗೆ ಹೋದ ಮೇಲೆ ಅಪರೂಪವೇ ಆಗಬೇಕಲ್ಲ” ಎನ್ನುತ್ತಾ, ನಾನು ಅವರಿದ್ದ ಕಡೆ ನಡೆದು, ಊರಲ್ಲಿದ್ದಾಗ ಮಾತನಾಡುವ ಧಾಟಿಯಲ್ಲಿಯೇ ಸ್ವಲ್ಪ ದೈನ್ಯತೆಯಿಂದ ಹೇಳಿದೆ. ಊರಲ್ಲಿರುವಾಗ ನಾನು ಚಡ್ಡಿ ಹಾಕಿ ಗೋಲಿ, ಬುಗುರಿಗಳನ್ನು ಆಡುತ್ತಿದ್ದ ವಯಸ್ಸು. ಆಗೆಲ್ಲ ರಂಗಪ್ಪಣ್ಣನಂತಹವರು ನಮ್ಮನ್ನು ಚಿಕ್ಕವರಾಗಿ ನೋಡಿ ಮಾತನಾಡಿಸಿದ್ದವರು, ಇದ್ದಕ್ಕಿದ್ದ ಹಾಗೆಯೇ ಗೌರವದಿಂದ ನೀವು, ತಾವು, ಹೇಗಿದ್ದೀರಾ ಅಂದರೆ ಅದು ಅಷ್ಟಾಗಿ ಸ್ವಾಭಾವಿಕವೆನಿಸುತ್ತಿರಲಿಲ್ಲ. ಯಾವ ಕಾರಣಕ್ಕಾಗಿ ಗುಣವಿಶೇಷಣವನ್ನು ಸೇರಿಸಿದಂತೆ ಗೌರವಿಸುತ್ತಿದ್ದಾರಿವರು ಅನ್ನಿಸಿ ಇರಿಸುಮುರಿಸೆನಿಸಿತು. “ಏನೋ, ಚೆನ್ನಾಗಿದಿಯೇನಪ್ಪಾ ಒಟ್ನಲ್ಲಿ? ಯಾವ್ದೋ ದೂರುದ್ ದೇಶಕ್ ಹೋದೆ ಅಂತ ಕೇಳಿದ್ದೆ” “ಹುಂ, ನಾನ್ ಚೆನ್ನಾಗಿದ್ದೀನಿ ನೀವೆಲ್ಲ ಚೆನ್ನಾಗಿದ್ದೀರಲ್ಲ? ಬರ್ತಿದ್ದ ಹಾಗೇ ಊರು ಬದಲಾಗಿರುವುದು ಗೊತ್ತಾಗುತ್ತೆ. ಅಲ್ಲಿ ಹಲಸಿನ ಮರ ಇಲ್ಲ, ಇಲ್ಲಿ ಕರಿಬೇವಿನ ಗಿಡ ಇಲ್ಲ, ಇನ್ನು ಆ ಮೂರು ಮನೆಗಳು ಹೊಸದಾಗಿ ಕಟ್ಟಿರೋದು” ಎನ್ನುತ್ತಾ ಸುತ್ತ ಕೈಯಾಡಿಸಿದೆ. ಅಷ್ಟರಲ್ಲಿ ಪಕ್ಕದ ಮನೆಯ ಜಗುಲಿ ಮೇಲೆ ಕುಳಿತು ಮಾತನಾಡುತ್ತಿದ್ದ ಮೂರ್ನಾಲ್ಕು ಜನ, ನಮಗೆ ಮರೆಯಾಗಿದ್ದವರಲ್ಲಿ ಒಬ್ಬರು ನಮ್ಮ ಕಡೆ ಇಣುಕಿ… “ಯಾವಾಗ್ ಬಂದ್ಯಪ್ಪಾ, ಬಾರೋ ಈ ಕಡೀಕೆ” ಅಂದರು. “ಈಗತಾನೇ ಬರ್ತಿದ್ದೀನಿ. ರಂಗಪ್ಪಣ್ಣ ನೋಡಿ ನಿಂತುಕೊಂಡ್ರು. ಮಾತಾಡಿಸ್ತಿದ್ದೆ” ಅಷ್ಟರಲ್ಲಿ ರಂಗಪ್ಪಣ್ಣ, “ಸರಿ, ಇರ್ತಿಯಾ ಒಂದೆರಡು ದಿನಾ ಇಲ್ಲ ಈಗ್ಲೇ ಬಂಡಿ ತೆಗಿತೀಯಾ? ಹೊಲ್ತಾಕ್ ಹೋಗಬೇಕು. ಕೆಲ್ಸ ಮುಗಿಸಿ ಬತ್ತೀನಿ. ಸಿಕ್ತಿಯಲ್ಲಾ? ಬಾ ಮತ್ತೆ ನಮ್ಮನೆ ಕಡೀಕೆ” ಅಂದರು. “ ಇಲ್ಲ, ಹೀಗೇ ಎಲ್ಲರನ್ನೂ ನೋಡಿ ಹೊರಟುಬಿಡ್ತೀನಿ ರಂಗಪ್ಪಣ್ಣ. ಕೆಲಸ ಜಾಸ್ತಿಯಿದೆ ಈ ಸಾರ್ತಿ. ಮತ್ತೆ ಮುಂದಿನ ವರ್ಷ ಬಿಡುವು ಮಾಡ್ಕೊಂಡು ಬಂದಾಗ ಒಂದೆರಡು ದಿನ ಇರೋ ಪ್ಲಾನ್ ಮಾಡ್ತೀನಂತೆ. ನೀವು ಹೊರಡಿ, ನೇಗಿಲು ಹೊತ್ಕೊಂಡು ಎಷ್ಟೊತ್ತು ನಿಂತ್ಕೊಂಡಿರ್ತಿರಾ” ಅಂದೆ. “ ಸರಿ ಬತ್ತಿನಪ್ಪಾ, ಹಿಂಗ್ ಬಂದ್ ಹಂಗ್ ಹೋಯ್ತೀಯಾನ್ನು? ಇನ್ನು ಮಾತೆತ್ತಿದ್ರೆ ಮುಂದಿನವರ್ಷ ಅಂತೀಯ. ಹೆಂಗೋ ಚೆನ್ನಾಗಿರು. ಬರ್ಲಾ?” “ಆಗಲಿ, ಸಿಗ್ತೀನಿ ಮತ್ತೆ” ಅಷ್ಟರಲ್ಲಿ ಜಗುಲಿಯ ಮೇಲಿದ್ದವರೆಲ್ಲಾ ಒಮ್ಮೆ ಇಣುಕಿಯಾಯ್ತು. ಇನ್ನು ನಾನು ಅಲ್ಲಿಗೇ ಹೋಗಿ “ಚೆನ್ನಾಗಿದ್ದೀರಾ ಎಲ್ಲರೂ?” ಅಂದೆ. “ನಾವೆಲ್ಲ ಇದ್ಹಂಗೇ ಇದೀವಿ, ನಮ್ದೇನೂ ಹೊಸಾದಿಲ್ಲ. ಅದೇ ಹಳೇದು ಊರಲ್ಲಿ, ನಿನ್ ಸಮಾಚಾರ ಹೇಳಪ್ಪಾ” ಅಂದವರೇ, ಒಬ್ಬೊಬ್ಬರೂ ನನ್ನನ್ನು ವಿಚಾರಿಸಿಕೊಂಡರು, ಎಲ್ಲಿದ್ದೀನಿ, ಏನು ಕೆಲಸ, ಎಷ್ಟು ಸಂಬಳ, ದೂರದೇಶದ ಸಂಪಾದನೆ ನಮ್ಮ ದೇಶದ ಎಷ್ಟು ರೂಪಾಯಿಗೆ ಸಮ.. ಹೀಗೆ ತಮ್ಮ ಕುತೂಹಲ ಇರುವುದನ್ನೆಲ್ಲಾ ಕೇಳುತ್ತಾ ಮಾತು ಮುಂದುವರಿಸಿದರು. ಅಷ್ಟರಲ್ಲಿ ಫೋನ್ ರಿಂಗಾಯಿತು. ಯಾವುದೋ ಗೊತ್ತಿಲ್ಲದ ನಾಲ್ಕಂಕಿಯ ನಂಬರು. ಫೋನ್ ರಿಸೀವ್ ಮಾಡದೇ ಹಾಗೆಯೇ ಕಟ್ ಮಾಡಿದೆ. “ಅಲ್ಲೆಲ್ಲೇ!… ನೋಡ್ರಲೇ, ರಾಜಣ್ಣನ ಇಟ್ಕಂಡವ್ನೆ ಫೋನಲ್ಲಿ… ಇನ್ನೂ ನೆನಪೈತಾ ಇಲ್ಲಿಂದೆಲ್ಲಾ? ಹಳೇ ಪಿಚ್ಚರೆಲ್ಲ ನೋಡ್ತೀಯಾ ಅನ್ನು” ಅಂದರು. “ನಾನೂ ನಿಮ್ ತರಾನೇ ಕನ್ನಡದವನೇ ಅಲ್ವಾ? ನಿಮ್ಮ ಜೊತೆಯಲ್ಲೇ ಭಾನುವಾರ ನಾಲಕ್ ಗಂಟೆಗೆ ಬರೋ ಬ್ಲಾಕ್ ಅಂಡ್ ವೈಟ್ ಸಿನಿಮಾ, ಮತ್ತೆ ವಿಸಿಪಿ ತಂದು ನೋಡ್ತಿದ್ದ ಸಿನಿಮಾ.. ಇವೆಲ್ಲ ಹೆಂಗ್ ಮರೆಯಕ್ಕಾಗುತ್ತೆ? ಆ ಮಟ್ಟಿಗೆ ಮರೆವು ಬಂದ್ರೆ ನನ್ನನ್ನೇ ನಾನು ಮರೆಯುವಂಥಾ ಯಾವುದೋ ಖಾಯಿಲೆ ಬಂದಿದೆ ಅಂತಲೇ ಅರ್ಥ” ಅಂದೆ. ಮಾತು ಹಾಗೆಯೇ ಇನ್ನೂ ಸುಮಾರು ಹತ್ತು ಹದಿನೈದು ನಿಮಿಷ ಮುಂದುವರಿಯಿತು. ಅಲ್ಲಿಯವರೆಗೂ ಜಗುಲಿಯ ಮೇಲೆ ಕೂತಿದ್ದವರ ಜೊತೆ ಮಾತನಾಡುತ್ತಾ ಒಂದೇ ಕಡೆ ಇದ್ದವನನ್ನು ನಿಂಗಪ್ಪಮಾವನ ಮನೆ ಅತ್ತೆ ನಾನು ಬಂದು ಮಾತನಾಡುತ್ತಿದ್ದು ನೋಡಿದವರೇ ಟೀ ಮಾಡಿ ತಂದು, “ಚೆನ್ನಾಗಿದಿಯೇನಪ್ಪಾ? ನಾವೆಲ್ಲಾ ಜ್ಞಾಪಕದಲ್ಲಿದ್ದೀವಾ” ಅನ್ನುತ್ತಾ ಟೀ ಮುಂದೆ ಹಿಡಿದರು. “ನಾನು ಟೀ ಕುಡಿಯಲ್ಲ… ಇಷ್ಟೊತ್ತಲ್ಲಿ ಯಾಕ್ ಮಾಡಾಕ್ ಹೋದ್ರಿ ಅತ್ತೆ, ಎಲ್ಲಿ ಒಂಚೂರ್ ಕೊಡಿ” ಅಂತ ಒಂದು ಗ್ಲಾಸ್ ನಿಂದ ಇನ್ನೊಂದಕ್ಕೆ ಅರ್ಧದಷ್ಟು ಸುರಿದು ಸ್ವಲ್ಪವೇ ಹಿಡಿದು ನಿಂತೆ. ಹಾಗೆ ತಿರುಗುತ್ತಲೇ ಜಗುಲಿಯ ತುದಿಯಲ್ಲಿ ಒಂದು ಮುಖ ನನ್ನನ್ನೇ ದಿಟ್ಟಿಸುತ್ತಾ ನಿಂತಿದೆ. “ಅಕ್ಕಯ್ಯಾ!!! ನೀನ್ ಯಾವಾಗಿಂದ ನಿಂತಿದ್ದಿಯಾ ಇಲ್ಲಿ “ ಅನ್ನುತ್ತಲೇ, ಸರಸರನೆ ಟೀ ಹೀರಿ ಗ್ಲಾಸ್ ಹಾಗೆಯೇ ಇರಿಸಿ ಬರ್ತೀನಿ ಮತ್ತೆ ಅಂದವನೇ, ಅಕ್ಕಯ್ಯನ ಕಡೆ ದೌಡಾಯಿಸಿದೆ. “ನೋಡ್ತಾನೆ ಇದಿನಿ, ಈಗ ತಿರುಗ್ತಾನಾ, ಈಗ ತಿರುಗ್ತಾನಾ ಅಂತ ಆಗ್ಲಿಂದಾ… ಮರೆತೇ ಹೋದಂಗಾಗಿ ಮನೆ ಕಡೆ ಬರದೇ ಹೋದರೆ ಅಂತ ಕಾಯ್ತಾ ಇದಿನಿ ಕಾಣಪ್ಪಾ… ದೊಡ್ಡೋವರಾಗಿದ್ದೀರಾ ಈಗ, ನಾವೆಲ್ಲಾ ಕಾಣುಸ್ತೀವಾ ನಿಮ್ ಕಣ್ಣಿಗೆ?” ಅನ್ನುವ ತನ್ನದೇ ಸ್ವಂತಿಕೆಯ ಆಕ್ರಮಣಕಾರಿ ಚುಚ್ಚುಮಾತು ಬಿಸಾಕಿದರು ಅಕ್ಕಯ್ಯ. ಅಕ್ಕಯ್ಯನೆಂದರೆ ನನ್ನ ತಾಯಿಗಿಂತಲೂ ಹಿರಿಯ ಆದರೆ ನನ್ನ ಅಜ್ಜಿಗಿಂತ ಕಿರಿಯ ಜೀವ. ಬಂಡೆಕೊಪ್ಪಲು ಅವರ ತವರಾದ್ದರಿಂದ ಕೊಪ್ಪಲು ಅಕ್ಕಯ್ಯ ಅಂತಲೇ ಕರೆಯುತ್ತಿದ್ದೆವು. ಅಕ್ಕಯ್ಯನೆಂದರೆ ನನ್ನ ಓರಗೆಯಿಂದ ಶುರುವಾಗಿ ನನಗಿಂತಲೂ ಹದಿನೈದು ವರ್ಷ ಚಿಕ್ಕ ವಯಸ್ಸಿನ ನನ್ನ ಮಾವನ ಮಕ್ಕಳೆಲ್ಲರಿಗೂ ಅವರು ಅಕ್ಕಯ್ಯನೇ… ನಾನು ಚಿಕ್ಕ ಮಗುವಾಗಿದ್ದಾಗಿನ ನನ್ನ ಜೀವನದ ಚಿತ್ರವನ್ನು ಅಕ್ಕಯ್ಯನಷ್ಟು ಸವಿಸ್ತಾರವಾಗಿ ಕ್ಷಣಕ್ಷಣವನ್ನೂ ಎಳೆಯಾಗಿ ಇನ್ಯಾರೂ ಹೇಳಿಲ್ಲ, ಹೇಳಲಾರರೂ ಕೂಡ. ನಾವು ಬೆಳೆಯುತ್ತಿದ್ದ ವಯಸ್ಸಿನಲ್ಲಿ ಅಮ್ಮ ಅಜ್ಜಿಯರ ಜೊತೆ ಇದ್ದಷ್ಟೇ ಹೊತ್ತು ಅಕ್ಕಯ್ಯನ ಜೊತೆಯೂ ಇರುತ್ತಿದ್ದೆವು. ಅಕ್ಕಯ್ಯನಿಗೆ ಸ್ವಂತ ಮನೆ ಅಂತ ಇದ್ದರೂ, ಹೆಚ್ಚಾಗಿ ನಮ್ಮ ಮನೆಯಲ್ಲಿಯೇ ಇರುತ್ತಿದ್ದರು. ಕೆಲಸಗಳಲ್ಲೂ ನಮ್ಮ ಮನೆಯವರ ಹಾಗೆಯೇ ಎಲ್ಲದಕ್ಕೂ ಜೊತೆಯಾಗಿದ್ದವರು. ಮದುವೆಯಾದ ಒಂದು ವರ್ಷದೊಳಗೇ ಅವರ ಪತಿ ತೀರಿಕೊಂಡರಂತೆ. ಆ ಕೊರಗಿನಲ್ಲೇ ಇದ್ದ ಗರ್ಭಿಣಿ ಅಕ್ಕಯ್ಯನಿಗೆ ಹುಟ್ಟಬೇಕಾದ ಮಗುವೂ ಜೀವವಿಲ್ಲದೇ ಹುಟ್ಟಿತ್ತಂತೆ. ವಿಧಿಯ ಆ ಎರಡು ದೊಡ್ಡ ಪೆಟ್ಟುಗಳು, ಆಕೆಯ ಏಕತಾನತೆಯ ನೋವು ಮರೆಯುವುದಕ್ಕಾಗಿಯೋ ಏನೋ, ನಮ್ಮೆಲ್ಲರನ್ನೂ ತನ್ನ ಮಕ್ಕಳಂತೆಯೇ ಪ್ರೀತಿಯಿಂದ ನೋಡುತ್ತಿದ್ದರು ಅಕ್ಕಯ್ಯ. ಹಿರಿಯ ವಯಸ್ಸಿನವರಾದರೂ, ಸೋದರಮಾವಂದಿರು, ಅಮ್ಮ ಅಕ್ಕ ಎಲ್ಲ ಕರೆಯುವ ಹಾಗೆಯೇ ಕೊಪ್ಪಲು “ಅಕ್ಕಯ್ಯ” ಎನ್ನುವ ಹೆಸರು ನಮಗೂ ರೂಢಿಯಾಗಿತ್ತು. ಅಂಥಾ ಅಕ್ಕಯ್ಯ ಇದ್ದಕ್ಕಿದ್ದ ಹಾಗೆಯೇ ನನ್ನನ್ನು ನೋಡಿ “ಎಲಾ ಇವನಾ ನನ್ನನ್ನು ಹುಡುಕಿಕೊಂಡು ಓಡಿ ಬರಬೇಕಾದವನು, ಜಗುಲಿ ಮೇಲೆ ಸಿಕ್ಕವರ ಜೊತೆ ಮಾತಾಡುತ್ತಾ ಕೂತುಕೊಂಡಿದಾನಲ್ಲ” ಅನ್ನುವ ಕೋಪವನ್ನು ಮುಖದಲ್ಲಿ ಆಗಲೇ ಧರಿಸಿಯಾಗಿತ್ತು. “ಅಯ್ಯೋ, ಈಗತಾನೇ ಬಂದಿದಿನಲ್ಲ ಅಕ್ಕಯ್ಯ, ಊರಿಗೆ ಬಂದು ನಿನ್ನನ್ನು ವಿಚಾರಿಸದೇ ಹೋಗೋಕಾಗುತ್ತಾ, ಅದೇನ್ ತಮಾಷೆನಾ?” ಅಂದವನೇ ಅಕ್ಕಯ್ಯನಿಗಿಂತ ಮೊದಲೇ ದಾಪುಗಾಲಿಡುತ್ತಾ ಅಕ್ಕಯ್ಯನ ಮನೆಯ ಕಡೆ ಹೊರಟೆ. ಅಕ್ಕಯ್ಯನ ಮನೆ ಬಾಗಿಲು ಮುಂದೆ ಬಂದು ಹಾಗೆಯೇ ನಿಂತೆ…. ಹಳೆಯ ಚಿತ್ರಗಳೆಲ್ಲ ಒಮ್ಮೆಲೇ ತಲೆಯಲ್ಲಿ ಮಿಂಚಿದಂತಾಗಿ ಮುಗುಳ್ನಗೆಯನ್ನಷ್ಟೇ ಮುಖದ ಮೇಲಿರಿಸಿಕೊಂಡು ಅಕ್ಕಯ್ಯನನ್ನೂ ನೋಡುತ್ತಾ ಹಾಗೆಯೇ ನಿಂತೆ… ನಗುವಾಗಲೀ ಅಳುವಾಗಲೀ ಅಕ್ಕಯ್ಯನ ಬಳಿ ಅದನ್ನು ಬಚ್ಚಿಡುವಷ್ಟು ನಾಟಕವನ್ನು ಅಕ್ಕಯ್ಯನ ಮುಂದೆಯೇ ಎಂದೂ ನಾನು ಮಾಡಲಾಗುವುದಿಲ್ಲ. ಯಾಕೆ ಅಂದರೆ ಅಕ್ಕಯ್ಯನೇ ಹೇಳುವ ಹಾಗೆ ಗೇಣುದ್ದ ಇದ್ದವನಾಗಿನಿಂದ ಹೈಸ್ಕೂಲು ತಲುಪುವ ತನಕ ಅವರ ಕಣ್ಣೆದುರಲ್ಲೇ ಬೆಳೆದಿದ್ದ ನನಗೆ ವಯಸ್ಸು ಎಷ್ಟೇ ಆದರೂ ಅಕ್ಕಯ್ಯನ ಕಣ್ಣುತಪ್ಪಿಸುವಂತಹ ನಟನೆ ನನ್ನ ಅನುಭವಕ್ಕೆ ನಿಲುಕಲಾಗದ್ದು. ನಿಂತಿದ್ದವನನ್ನೇ ಮತ್ತೆ ದಿಟ್ಟಿಸಿ, “ನೋಡು, ನೋಡು, ಊದಪ್ಪಾ… ಇಲ್ಲೇ ಮಂಡಿಹಾಕಿ ತೆವುಳ್ತಾ ಇದ್ದೆ, ಇಲ್ಲೇ ಕೂತ್ಕಂಡು ಚೌಕಾಬಾರಾ ಆಡಿದ್ದೆ, ಬೆಳೆದಿದ್ದಿಯಾ ಅಂತ ಈಗ ನಗಾಡ್ತೀಯೇನಾ ಊದಪ್ಪಾ?” “ಅದಲ್ಲ ಅಕ್ಕಯ್ಯ ಅಂತ ತಾಳಲಾರದೇ ಮುಗುಳ್ನಗೆಯನ್ನು ಜೋರು ನಗೆಯಾಗಿಯೇ ಪರಿವರ್ತಿಸಿ, ನಾನು ಎಷ್ಟು ಬೆಳೆದಿದ್ದೀನಿ ಅಂತ ನನಗೇ ಗೊತ್ತಿರಲಿಲ್ಲವಲ್ಲಾ… ನಿನ್ನ ಮನೆಯ ಬಾಗಿಲು ಮುಂದೆ ನಿಂತಾಗಲೇ ಅದರ ವ್ಯತ್ಯಾಸ ಕಾಣ್ತಾ ಇರೋದು. ಅದಕ್ಕೇ ಹಾಗೆ ನಕ್ಕೆ” ಅಂದೆ. “ಹೂಂ ಕನಪ್ಪಾ, ಗಳಾ ಬೆಳ್ಕಂಡಂಗೆ ಬೆಳ್ಕಂಡಿದಿಯಾ. ನನ್ ಬಾಗ್ಲು ನಿನ್ಹಂಗೇ ಬೆಳೆಯಕ್ಕಿಲ್ಲವಲ್ಲಾ, ಹುಶಾರಾಗಿ ನೋಡ್ಕಂಡ್ ಬಾರೋ ಮಾರಾಯ, ಏಟ್ ಗೀಟ್ ಮಾಡ್ಕಂಡು ಮತ್ತೆ ನನಗೆ ಯೋಚ್ನೆ ಹತ್ತಿಸ್ಬ್ಯಾಡ” ಅಂದರು. ಮನೆ ಮುಂದೆ ನಿಂತವನೇ ಹಾಗೆಯೇ ಒಂದು ನಿಮಿಷ ಸುತ್ತ ಗಮನಿಸುತ್ತಾ ನಿಂತೆ… ಬಾಗದೇ ಇದ್ದರೆ ಮೇಲಿನ ಅರ್ಧ ಬಾಗಿಲು ಕಾಣುತ್ತಿರಲೇ ಇಲ್ಲ. ಮನೆಯ ಮಾಳಿಗೆಯ ತುದಿ ನನಗೆ ಕಣ್ಣಿನ ಎತ್ತರಕ್ಕೆ ಇದೆ. ಮನೆಯಲ್ಲಿ ಏನೂ ಬದಲಾವಣೆಯಾಗಿಲ್ಲ… ಇದ್ದ ಹಾಗೆಯೇ ಇದೆ.. ಅದೇ ಹೆಂಚು. ಅದೇ ಮಾಳಿಗೆ. ನೆಲಕ್ಕೆ ಊತುಹೋಗಿರುವುದೇನೋ ಎಂದು ಅನುಮಾನಿಸುವಷ್ಟು ಚಿಕ್ಕದೆನಿಸುತ್ತಿತ್ತು. “ಎಷ್ಟೊತ್ತ್ ನೋಡಿದ್ರೂ ಅಷ್ಟೇ ಬಾರಪ್ಪಾ… ನೀನ್ ಬಂದಿದಿಯಾ ಅಂತ ಏನ್ ಬೆಳೆಯಾದಿಲ್ಲ ಮನೆ” ಅಂದಿದ್ದೇ ಚಾಪೆಯನ್ನು ಹಾಸಿ ಕೂರುವುದಕ್ಕೆ ರೆಡಿ ಮಾಡಿದರು ಅಕ್ಕಯ್ಯ. ಅರ್ಧಕ್ಕಿಂತಲೂ ಹೆಚ್ಚು ಬಾಗಿ ದೇಗುಲದ ಗರ್ಭಗುಡಿಗೆ ತಲುಪುವ ಪೂಜಾರಿಯ ಭಂಗಿಯಲ್ಲಿ ಒಳಗೆ ಹೊಕ್ಕೆ… ಒಳಗೆ ಹೋಗಿ ನಿಂತರೂ… ಸರಿಯಾಗಿ ತಲೆಯ ಮೇಲೆ ಅರ್ಧ ಇಂಚಿನಷ್ಟೇ ಅಂತರ. ನಡುವೆ ಇರುವ ಅಟ್ಟದ ಗಳುಗಳು ತಲೆಗೆ ಅಡ್ಡಲಾಗುವಂತಿದ್ದವು… “ಅಕ್ಕಯ್ಯ ಇಲ್ನೋಡು… ಈ ಗೋಡೆಯಷ್ಟು ಎತ್ತರ ಇದ್ದೆ ಮೊದಲು… ಆಮೇಲೆ ಈ ಗೋಡೆಯಷ್ಟು ಇದ್ದೆ. ಈಗ ನೋಡಿದರೆ ಅಟ್ಟವನ್ನೇ ಹೊತ್ಕೊಂಡಿದೀನಿ ಅನ್ನುವಷ್ಟು ಬೆಳೆದಿದಿನಿ, ಅಲ್ವಾ?” ಎನ್ನುತ್ತಾ ಮನೆಯೊಳಗೆ ಕಾಲಿಡುತ್ತಲೇ ಎಡಬದಿಗೆ ಸಿಕ್ಕ ಎರಡೂವರೆ ಅಡಿಯ ಅಡ್ಡಗೋಡೆ, ಮೂರೂವರೆ ನಾಲ್ಕಡಿಯಷ್ಟಿದ್ದು ಅಡುಗೆ ಮನೆಯನ್ನು ಬೇರ್ಪಡಿಸಿದ್ದ ಇನ್ನೊಂದು ಗೋಡೆಯನ್ನು ತೋರಿಸಿದೆ. “ಅಲ್ವಾ ನೋಡು ಮತ್ತೆ… ಅನ್ನ ತಟ್ಟೆಗೆ ಹಾಕಿದರೆ, ಇಲ್ಲ್ ಜಾಗ ಐತೆ ಇಲ್ಲಿಗೂ ಹಾಕು… ಅಲ್ಲಿ ಖಾಲಿ ಕಾಣ್ತದೆ ಅಲ್ಲಿಗೂ ಹಾಕು… ತುಪ್ಪ ಎಲ್ಲಿ? ಅಂತಿದ್ದೆ .. ತುಪ್ಪ ಇಲ್ಲದಿದ್ರೆ ಊರೆಲ್ಲ ಒಟ್ಟು ಮಾಡ್ತಿದ್ದೆ… ತಿನ್ತಾ ಇದ್ದ ಮೂರು ತುತ್ತಿಗೆ ಇಡೀ ತಟ್ಟೆ ಅನ್ನವನ್ನೆಲ್ಲ ಕಲಸಿ ಬೇರೆಯವರಿಗೆ ಪ್ರಸಾದ ಕೊಡ್ತಾ ಇದ್ದೆ. ಬೆಳೀದೇ ಇನ್ನೇನಾಗ್ತೀಯಪ್ಪಾ… ಇದ್ಯಾವುದಾದ್ರೂ ಗೊತ್ತಿರ್ತದಾ ನಿಂಗೆ… ಅನ್ನ ಹೋಗ್ಲಿ, ರೊಟ್ಟಿ, ಅದೂ ದೊಡ್ಡದೇ ಆಗಬೇಕು ಒಂಚೂರು ಮುರೀದೇ ಇರೋ ರೌಂಡಾಗಿರೋದು… ಅದರ ಮೇಲೆ ಬೆಣ್ಣೆಯಿಲ್ಲದಿದ್ದರೆ ಮತ್ತೆ ಗೊಳೋ ಅಂತಾ ಇದ್ದೆ! ಹಬ್ಬ ಅಂತ ಕಿವಿಗೆ ಬೀಳದ ಹಾಗೆ ನೋಡ್ಕೋಬೇಕಾಗಿತ್ತು ಕಣಾ ನಿಂಗೆ. ಹಬ್ಬ ಅಂದರೆ ಅದರ ಹಿಂದೆಲೇ ಬರ್ತಾ ಇದ್ದೆ ಪಾಯಸ ಎಲ್ಲಿ ಅಂತ. ಒಂದು ದಿನ ಎರಡು ದಿನಕ್ಕೆ ಮುಗಿತಾ ಇರಲಿಲ್ಲ. ವಾರವೆಲ್ಲಾ ಆಗಬೇಕಾಗಿತ್ತು ಪಾಯಸ. ಕೊನೆಕೊನೆಗೆ ನೀನು ರಚ್ಚೆಹಿಡಿಯೋದು ತಾಳಲಾರದೇ ಅನ್ನ ಬಸಿದ ಗಂಜಿಗೇ ಚೂರು ಬೆಲ್ಲ ಬೆರೆಸಿ ಅದನ್ನೇ ಪಾಯಸ ಅಂತಾ ಸಮಾಧಾನ ಮಾಡ್ತಾ ಇದ್ದೋ. ಇನ್ನ ಗಿಣ್ಣು ಮಾಡಿದರೆ ಒಂದು ಬೇಸಿನ್ನು ನಿನಗೇ ಅಂತಾನೇ ಕಾಯಿಸಬೇಕಾಗಿತ್ತು. ತುಂಡು ಮಾಡಿ ಕೊಟ್ಟರೆ ಅದಕ್ಕೂ ರಂಪ ಮಾಡ್ತಾಯಿದ್ದೆ. ಒಂದ್ ಕೂದಲೆಳೆಯಷ್ಟೂ ಹೆಚ್ಚು ಕಮ್ಮಿ ಆಗಂಗಿರಲಿಲ್ಲ. ನಾವು ಮೂರ್ನಾಲ್ಕು ಜನ ಸುತ್ತ ಇದ್ದರೂ ಅಳದ ಹಾಗೆ ನೋಡ್ಕೋಳೋಕಾಗಲ್ಲ ಅಂತ ನಿಮ್ಮ ಮಾವಂದಿರು ನಮಗೇ ಬೈಯ್ತಾ ಇದ್ದರು. ಒಂದಾ ಎರಡಾ ನಿನ್ನ ಹಟಾ? ಅಯ್ಯಪ್ಪಾ… ನಾವೆಲ್ಲ ಇದ್ದರು ಎಲ್ಲರಿಗೂ ಸುಸ್ತಾಗಿಸಿರುವಿಯಲ್ಲೋ ಮಾರಾಯಾ! ಒಂದೊಂದ್ ಸಲ ನಾನೆಂಗೋ ನಿಭಾಯಿಸಿದಿನಿ.. ನಿಮ್ಮಕ್ಕ, ನಿಮ್ಮಮ್ಮ (ತಾಯಿಯೇ ಅಕ್ಕ, ಅಜ್ಜಿ ಅಮ್ಮ). ನಿಮ್ಮಮ್ಮಂಗೆ ಅವರ ಮಕ್ಕಳೂ

ಹೊತ್ತಾರೆ Read Post »

You cannot copy content of this page