ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ರೇಮಾಸಂ ಡಾ.ರೇಣುಕಾತಾಯಿ.ಎಂ.ಸಂತಬಾ ಸುಳ್ಳು ಶಬ್ದಗಳ ಪೋಣಿಸಿ ಸರಮಾಲೆ ಹಾಕದಿರು ಗೆಳೆಯ/ ಪೊಳ್ಳು ಮಾತಿನಲಿ ಸಿಲುಕಿಸಿ ಬಲೆಯ ಬೀಸದಿರು ಗೆಳೆಯ// ಚಂದಿರ ನಕ್ಕಾನು ನಕ್ಷತ್ರಗಳನು ಪಿಡಿದು ಮುಡಿಸುವ ಪರಿಗೆ/ ವಾಸ್ತವಕ್ಕೆ ಮರಳು ಹಗಲುಗನಸು ಕಾಣದಿರು ಗೆಳೆಯ// ಎದೆಯ ಹೊಲದಲಿ ಪ್ರೀತಿ ಬಿತ್ತಲು ಬೇಕೆನು ಕಾಣಿಕೆ/ ಧನವೇ ಮನವನು ಗೆಲ್ಲುವದೆಂದು ತಿಳಿಯದಿರು ಗೆಳೆಯ// ವಾಸ್ತವಿಕತೆ ಕನ್ನಡಿಯನು ಗಮನಿಸಿ ನೋಡಲಾರೆಯೇನು/ ಪ್ರೇಮದಲಿ ಮಿಂದ ಕಣ್ಣ ದೃಷ್ಟಿ ಬದಲಿಸಿದಿರು ಗೆಳೆಯ// ಉಷೆಯಿಂದ ನಿಶೆಯವರೆಗೆ ನಿನ್ನ ನೆನೆಯುವಳು ನೆನಪಿಲ್ಲವೇ/ ಪರರ ನಶೆಯಲಿ ರೇಮಾಸಂನು ಮರೆಯದಿರು ಗೆಳೆಯ// *****************************

ಕಾವ್ಯಯಾನ Read Post »

ಕಾವ್ಯಯಾನ

ಶಿಶುಗೀತೆ

ಕಾಡಿನಿಂದ ನಾಡ ಪ್ರವಾಸ. ಸುಜಾತಾ ಗುಪ್ತ ಜಿಂಕೆ ಮರಿ ಜಿಂಕೆ ಮರಿ ನೀ ನನ್ನ ಮುದ್ದು ಮರಿ ನಾಡಿಗೋಗೋಣ ಬರ್ತೀಯಾ ನಾವ್ ನಾಡಿಗೋಗೋಣ ಬರ್ತೀಯಾ ಆನೆ ಮರಿ ಆನೆ ಮರಿ ನೀ ನಾಡಿಗೇಕ್ ಹೋಗ್ತೀಯ ನಾಡಿಗೋಗಿ ಏನ್ಮಾಡೋದು ನಾವ್ ಏನ್ಮಾಡೋದು.. ಶಸ್ತ್ರಧಾರಿಯಾಗಿ ಬರಲು ಮನುಜನಂದು ಹೆದರಿ ಬೆದರಿ ಪೊದೆಗಳಲ್ಲಿ ಅಡಗಿದೆವು ಸ್ವಚ್ಛಂದದೆ ಇಂದು ನಾಡು ಸುತ್ತೋಣ ನಾವ್ ನಾಡು ಸುತ್ತೋಣ.. ನಾ ಬರಲ್ಲಪ್ಪ, ಅಮ್ಮ ಕಳಿಸಲ್ಲ ಬಾಣಧಾರಿ ಬೇಟೆಗಾರ ಇಹನಲ್ಲಿ ನಂಗ್ ಭಯ ನಾ ಬರಲ್ಲ ನಾಡಿಗೆ ನಾನೆಂದೂ ಬರಲ್ಲ.. ಹೆದರಿ ಬೇಡ ಜಿಂಕೆ ಮರಿ ಕರೋನ ರಕ್ಕಸಕೆದರಿ ಮನುಜ ಮನೆಯ ಬಂಧಿ ಆಗಿಹ ಬೇಡ ನಿಂಗೆ ಭಯ ನಾಡ ಸುತ್ತಿ ಅಂದ ಚಂದ ನೋಡುವ.. ಬೇಗ ರೆಡಿಯಾಗು ಜಿಂಕೆ ಮರಿ ಮೊಬೈಲು, ಕ್ಯಾಮೆರಾ ಹಿಡಿದು ಹೊರಡುವ ಸ್ವಾರ್ಥಿ ಮನುಜರ ಭಾವಚಿತ್ರ ತೆಗೆದು ನಕ್ಕು ನಲಿಯುವ.. ಮತ್ತೆ ಮತ್ತೆ ಬಾರದಿಂತ ಒಂದು ಸುದಿನ ಭಯವ ಮರೆತು ನೀ ಬರಲು ನಾಡ ಸುತ್ತಿ ಬರುವ ನಾವ್ ಧೀಮಂತರೆನಿಸೋಣ ನಾವ್.. ಜಿರಾಫೆ,ಒಂಟೆ ,ಮೊಲ ಬಂದರು ಕುಟುಂಬದೊಂದಿಗೆ ಪ್ರವಾಸಕೆಂದು ನಾಡಿಗೆ, ಊರು ಖಾಲಿ, ನಾಡು ಖಾಲಿಯೆಂದು ರಸ್ತೆ ಸುತ್ತಿ, ಗೃಹ ಖೈದಿಗಳ ನೋಡಿ ಕಿಲಕಿಲನೆ ನಗಲೆಂದು ಬಂದರು.. *********

ಶಿಶುಗೀತೆ Read Post »

ಕಾವ್ಯಯಾನ

ಕಾವ್ಯಯಾನ

ಚರಿತ್ರೆ ಚಿರನಿದ್ರೆ ದೇವು ಮಾಕೊಂಡ ಜಗದ ಬಲೆ ಬಲೆಯೊಳಗಿನ ಮುಸುಕು ಸಿಕ್ಕಿಸಿಕೊಂಡ ಬದುಕ ಕೊಂಡಿ ಕಳಚಲು ಯತ್ನಿಸುವ ವೈರಾಗಿ ರಾತ್ರಿ ಹೆದರುತ್ತದೆ ಹೊರಬರಲು ಹಗಲ ಬಯಲು ನರ್ತನಕ್ಕೆ ಅನುಗಮನ ನಿಗಮನದರಿವು ಏಕಮುಖಗೊಂಡಿದೆ ಗೊಂದಲ ಜಗದಿ ದಿನ ದಿನ ನಂಬಿಕೆಗಳೆ ಬೋಣಿಗೆ ಮಾಡುವಾಗ ಬೋದಿಗೆ ಶಾಸನ ಮೌನ ಮಾತಾಗಿದೆ ಮಹಾಸತಿ ಕಲ್ಲುಗಳು ಮನಸು ತೇವ ಮಾಡಿ ನಕ್ಕು ಮತ್ತೆ ಮತ್ತೆ ಶರಣಾಗುತ್ತಿವೆ ಅಂಧಗೋಪುರಕ್ಕೆದರಿ ನೀರವರಾತ್ರಿ ದಮನಿತ ದೀಪಗಳುರಿಸುವಾಗ ವಿಲೋಮಗಾಳಿ ಜನಜನಿತ ಅವಮಾನಿತ ! ತನ್ನೊಳಗಿನ ತನ್ನದರಿವು ಹುಡುಕುವ ಆಗುಂತಕನೊಬ್ಬ ನಿನ್ನೆ ಸತ್ತ ಹೆಣದ ಮುಂದೆ ನಿಂತ ಬೈರಾಗಿ ಕಣ್ಣೀರು ಹಾಕಲು ಹೇಸುತ್ತಿದ್ದ ನಾಳೆಯ ನಗಾರಿಗಳ ದನಿ ನಂಬಿ ಜಡಜಗದ ಬಲೆಗೆ ಬಿದ್ದ ಜೀನಗಂಬ ಮೂಕಗೊಂಡಿದೆ ಕಾವ್ಯಶಾಸನ ಲ್ಯಾವಿಕಟ್ಟಿ ಕೆರೆ ಕಟ್ಟಿಸಿ ಬಾವಿ ತೋಡಿಸಿ ಹಂಸರೆಕ್ಕೆ ಮುರಿದು ಒಳಗೆ ಒಗೆದು ಮೇಲೊಂದು ಶಾಸನ ಕೆತ್ತಿ ಫಲಕವಿಟ್ಟು ಅಕ್ಷರಗಳು ನೇತಾಡುತ್ತಿವೆ ತೇವಗೋಡೆಯಲಿ ‘ಸತ್ಯಂ ಶಿವಂ ಸುಂದರಂ’ ‘ಅಹಿಂಸಾ ಪರಮೋ ಧರ್ಮಂ’ ಶಾಂತಿ ಅಗೋಚರ ಚರಿತ್ರೆ ಚಿರನಿದ್ರೆ **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆಗಬಹುದು. ಎಂ.ಆರ್.ಅನಸೂಯ ಆಗಬಹುದು ಧುಮ್ಮಿಕ್ಕುವ ಕಣ್ಣೀರು ಕೇವಲ ಕಣ್ಣಂಚಿನ ಕಂಬನಿ ಮಲಗಬಹುದು ಕೆರಳಿ ನಿಲ್ಲುವ ದ್ವೇಷ ಮೊಂಡಾದ ಮಚ್ಚಾಗಿ ಮರಗಟ್ಟಬಹುದು ಬೆಂಕಿಯುಗುಳುವ ಕೋಪವೂ ಕೊರೆವ ಹಿಮಗಡ್ಡೆಯಾಗಿ ಇಳಿಯಬಹುದು ಉಕ್ಕಿ ಹರಿವ ಉನ್ಮಾದವೂ ನೆರೆಯಿಳಿದ ನದಿಯಾಗಿ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ ಎಸ್ ಮಕಾನದಾರ. ಗಲ್ ಗಲ್ ಗಜ್ಜೆಯ ನಾದ ಹೊಮ್ಮಿಸುತ ಮನದ ಅಂಗಳದಲಿ ಒಮ್ಮೆ ಓಡಾಡಿ ಬಿಡು ಕತ್ತಲು ತುಂಬಿದ ಮನೆಯ ಮೂಲೆ ಮೂಲೆಯಲೂ ನಗುವ ತೂರಾಡಿ ಬಿಡು ಸೂರ್ಯ ಚಂದ್ರ ನಕ್ಷತ್ರಗಳ ಬೆಳಕೇಕೆ ನಿನ್ನ ಕಣ್ಣ ಬೆಳದಿಂಗಳು ಸಾಕು ಬೆಳಕ ಹಬ್ಬಕೆ ಬಾಗಿಲು ಕಿಟಕಿಗಳಾಚೆ ಇರಲಿ ಆ ಮುಗಿಲ ತಾರೆಯರು ಬಾಚಿಕೊಳ್ಳುತ್ತೇನೆ ಒಲವನ್ನೊಮ್ಮೆ ತೂರಾಡಿ ಬಿಡು ಬಾಳನಂದನಕ್ಕಿಗ ಚೈತ್ರ ಬಂದಾಗಿದೆ ಹಸಿರು ಬಳ್ಳಿಯ ತುಂಬ ಆಸೆಗಳ ಒಸಗೆ ಮೊಗ್ಗು ಹೂವಾಗಿ ಅರಳಿ ನಲಿಯುವ ಕಾಲ ತೋಳ ತೆಕ್ಕೆಯಲಿ ಒಲಾಡಿ ಬಿಡು ಹೃದಯ ಸಿಂಹಾಸನದಲಿ ನೀನೇ ಮಹಾರಾಣಿ ಯಾವ ದಾಳಿಗೂ ನಾನು ಹೆದರಲಾರೆನು ಎದೆ ಹಿಗ್ಗಿ ಹಾಡುವ ಹಾಡು ಕಿವಿಗೊಟ್ಟು ಕೇಳುತ್ತಾ ಪ್ರೀತಿಯ ಮತ್ತಲಿ ತೇಲಾಡಿ ಬಿಡು ಕನವರಿಕೆಯ ಕದ ತೆರೆದು ಕರಿ ನೆರಳ ಪರದೆ ಸರಿಸಿ ನೋಡು ಜಗವನೊಮ್ಮೆ ಎಷ್ಟು ಸುಂದರ ನೀ ಹೆಜ್ಜೆ ಇಟ್ಟಲ್ಲೆಲ್ಲಾ ಹೊನ್ನ ಸಾಲಿನ ಬೆಳೆಯು ಮಕಾನ ಎದೆ ಹೊಲದ ತುಂಬ ನಲಿದಾಡಿ ಬಿಡು ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಚ್ಚಿಟ್ಟ ನೆನಪುಗಳು ವೀಣಾ ರಮೇಶ್ ನೀ ಬರುವೆಯೆಂದು ಕಾಯುತ್ತಿದ್ದೆ……. ಒಡಲಸೆರಗಲಿ ಅದುಮಿಟ್ಟ ಬಯಕೆಗಳು ತಬ್ಬಲಿಯಾದ ನಿನ್ನ ಕನಸುಗಳ ಜೊತೆ ನನ್ನ ಕನಸುಗಳು ಕಾಡುವುದು ಬಸಿರಾಗದ ಆಸೆಯ ಕುಡಿಗಳು, ,ಹಸಿಯಾಗಿ, ಹುಲ್ಲುಜಾಡಿನಲಿ ಕಳೆಗೂಡಾದ ಬದುಕು ಹೊಸಕಿ.. ನೀ ಬರುವೆಯೆಂದು ಕಾಯುತ್ತಿದ್ದೆ …… ಹಾಕಿದ ಏಳು ಹೆಜ್ಜೆಗಳು ಬಿಸಿಯ ಕೆಂಡದ ಮೇಲಿನ ಅವಳ ತಪ್ಪಿನ ನಡೆಗಳು ಹೊಸಿಲ ಮೇಲೆ ಜಾಡಿಸಿ ಒದ್ದ ಸೇರಿನ ಜೊತೆ ಕನಸುಗಳ ಒದ್ದೋಡಿಸಿದೆ ಸರಕಾಗಿದೆ ನಿನ್ನ ಮೌಲ್ಯಗಳು, ಬಿಕರಿಯಾಗುತ್ತಿದೆ ಕನಸುಗಳು,…. ಬೆತ್ತ ಲಾಗಬೇಡ ಬತ್ತಿದ ಕನಸುಗಳಿಗೆ, ಮನಸು ಹರಿದ ಪುಟಗಳ ಮತ್ತೆ ಸೇರಿಸಿ ಸಂಬಂಧಗಳ ದಾರದಿಂದ ಬಿಗಿದು,ನಿನ್ನ ಕನಸುಗಳ ಬಸಿರಿಗೆ ಮೆಲುವಂಗಿ ಹೊದಿಸು ,ನೀ ಕಟ್ಟುವ ಕನಸಿಗೆ ಪ್ರೀತಿಯ ದೇಣಿಗೆ ನಾ ನೀಡುವೆ, ಮಾತು ಮೌನದಲ್ಲೆ ಅಡಗಿಸಿ ಪದಗಳು ಸ್ಪರ್ಶ ವಿಲ್ಲದೆ ಎದೆಯಲಿ ಬಚ್ಚಿಟ್ಟು ನೆನಪುಗಳು ನೀ ಇಲ್ಲದೆ ಒದ್ದಾಡಿವೆ….. ಅಲ್ಲೊಂದು ಇಲ್ಲೊಂದು ಕರಗಿಬಿದ್ದ ನೀರಹನಿಯೊಂದು ಚಿಗುರೊಡೆದ ಹಸಿರೊಂದು ಬಸಿರಾಗುವ ಕನಸಿಗೆ, ನೀಳಗೆನ್ನೆಯ ಮೇಲೆ ತುಸು ಹರಿದು ಎದೆಯ ತಂಪಾಗಿಸಿದ ಕಣ್ಣೀರ ಹನಿ ತಂದು, ಹೊಸ ಮನ್ವಂತರದ ಪರ್ವದಲ್ಲೊಂದು ಬದಲಾಯಿಸಿದ ಬದುಕಿನ ಗತಿ ಹಚ್ಚಿದ ಕನಸಿನ ಹಣತೆಗೆ ಬಾಳ ಸಮತೆಯಲಿ ಉರಿವ ದೀಪವಾಗಿ, ನಿನ್ನೊಡಲ ಕಾಂತಿಗೆ ಬೆಳಕಾಗುವೆ ನಾ ಕಾಯುತ್ತಿರುವೆ. ನೀ …ಬಂದೆ ಬರುವೆಯೆಂದು….. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ಜಹಾನ್ ಆರಾ ಎಚ್. ಕೋಳೂರು ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ನೇರಭಾವಕ್ಕೆ ತೂಕ ಕಡಿಮೆ ಸಾಗರದ ಆಳಗಲವಂತೆ ಆಗಸದ ಅನೂಹ್ಯವಂತೆ ನಾಜೂಕಂತೆ, ಸುಲಭವು ಅಲ್ಲವಂತೆ ಬಿಡಿ ಬಿಡಿ ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ನಾನು ಬರೆದದ್ದು ಅವನೊಪ್ಪನು ಇವ ಬರೆದದ್ದು ಮತ್ತೋರ್ವನೊಪ್ಪನು ಅವರು ಬರೆದದ್ದು… ನಾ ಒಪ್ಪಬೇಕಂತೆ!!! ಭಾವ ಭಕುತಿ ಅವರಿಗೆ ಬಿಟ್ಟದು. ಇಲ್ಲಿ ಜರೂರಾಗಿ ಹೇಳಬೇಕಾದ ನಿಯಮ ಕಡಿಮೆ ಪದಗಳ ಪೋಣಿಕೆ ಹೆಚ್ಚು ಭಾವ ಭಾರ ತುರುಕುವಿಕೆ ಶಬ್ಧ ಮಣಿಗಳ ದರ್ಪಣದಲಿ ನಿಂತರೂ ಪಾಶ್ಚಾತ್ಯ ಸಿಂಗಾರದ ಪ್ರತಿಬಿಂಬ ಬಿಡಿ ಬಿಡಿ ಹೇಳಿದೆಲ್ಲಾ ಕವಿತೆಯಾಗುದಿಲ್ಲ ನೇರ ಭಾವಕ್ಕೆ ತೂಕ ಕಡಿಮೆ ತಕ್ಕಡಿಯಲ್ಲಿ ಒದ್ದಾಡುತ್ತಿದ್ದ ಕವಿತೆಯಿಂದ ಅವ ಕವಿತ್ವ ಹೊರಹಾಕಿದ ಅರೆ! ತೂಕ ಸರಿಯಾಗಬೇಕು ಸತ್ವಕ್ಕೆ ಸ್ವಲ್ಪ ಮೇಕಪ್ ಬೇಕು ನಾನು ಮಾಡಿದರಾಗದು ಅವರಾದರೆ ಮಾಡಬಹುದಂತೆ ಈಗ ಭಾವವೂ ಕಸದಬುಟ್ಟಿ ಸೇರಿತು ‘ವ್ಹಾ! ಎಂತಹ ಕವಿತೆ’ ಎಂದವನೆ ಮತ್ತೆ ಮತ್ತೆ ತೂಕಕಿರಿಸಿದ ತಡಕಾಡಿ ತಮ್ಮಿಸಿ ಅತ್ತಿತ್ತ ಕಲಿತಿದ್ದನ್ನು ಸ್ಮರಿಸಿ ನನ್ನ ಮುಂದೆ ವಾಂತಿ ಮಾಡಿ “ಕ್ಷಮಿಸಿ, ಹೇಳಿದೆಲ್ಲಾ ಕವಿತೆಯಾಗುದಿಲ್ಲ” ಎಂದು, ಗುಜರಿ ಅಂಗಡಿಯವ ಬಾಗಿಲು ಹಾಕಿಕೊಂಡ ತನ್ನತನವೇ ಕಳಚಿ ಉಸಿರುಗಟ್ಟಿದ ಕವಿತೆ ರಕ್ತಸಿತವಾಗಿ ಚೂರಿಯಿಂದಾದ ಗಾಯಗಳನ್ನು ನಾಲಿಗೆಯಿಂದ ನೆಕ್ಕಿದಂತೆ ಕುಂಯ್ಯಿ ಎನ್ನದೆ ನನ್ನ ಕಡತ ಸೇರಿತು. ಮತ್ತದೇ ಗುಡುಗು “ಬಿಡು ಬಿಡು ಬರೆದದ್ದಲ್ಲಾ ಕವಿತೆಯಾಗುದಿಲ್ಲ” *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅರಿವು ಶಿವಲೀಲಾ ಹುಣಸಗಿ ಚಿಂತೆಯನು ಬಿಡುಮನವೇ ಕಾಯ್ವನೊಬ್ಬನಿಹನೆಮಗೆ! ಕಲ್ಲರಳಿ ಹೂವಾಗಿ ನಿಂತಿಹುದಿಲ್ಲಿ ಕಂಬನಿಯ ಮಿಡಿಯದೆ ಮೌನದಲಿ ಸ್ವೀಕರಿಸು ನಿನ್ನಾಸೆ ಬಳ್ಳಿ ಚಿಗುರೊಡೆದು ಹಬ್ಬಲಿ ಕರಳ ಬಳ್ಳಿ…….. ದೇಹವಿದು ನಶ್ವರವು ಬಾಳಿಕೆ ಬರದು ಆತ್ಮವಿದು ಶಾಶ್ವತವು ಕಂಗಳಿಗೆ ಕಾಣದು ಎಲುಬಿನಹಂದರದಲ್ಲಿ ವ್ಯಾಮೋಹ ಇಲ್ಲ ಬದಿಗೊತ್ತಿ ಚಿತ್ತವಿರಿಸು ಮುಕ್ತಿಯಲಿ…… ಉಸಿರಿನಲ್ಲೊಂದಾಗಿ ಕಾಯಕದಿ ನೆಲೆಸಿ ಕರ್ಮವೊಂದೇ ನಮಗೆ ಕೈಲಾಸ ಫಲಾಫಲಗಳು ನಿನ್ನಲ್ಲೇ ನೆಲೆಸಿ ಭಿಕ್ಷೆ ನೀಡೆಮಗೆ ಮುಕ್ತಿಯ ಕರುಣಿಸಿ…… ಜೀವಿಗಳೆದೆಯಲಿ ಕಿರಣಚಿಮ್ಮಿಸಿ ನಲಿವೆಂಬ ಹೂವನರಳಿಸಿ ಕಂಗಳೆದೆಯಲಿ ಬಿಂಬವಿರಿಸಿ ಭಾವದಾಚೆಯೆನ್ನ ಮುಕ್ತ ಗೊಳಿಸಿ…… *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಭಾವ ರಂಗವಲ್ಲಿ ಶಾಲಿನಿ ಆರ್. ಬೆರಳೊಳಿಡಿದ ಮರುಳಿಗೆ ಹುಡಿ ಒಡಮೂಡಿ ಅಂಗಳದಲಿ ನಲವಿಸುತಿದೆ, ಮನದ ಭಾವವೆಲ್ಲ ಮುದದಿ ಮೂಡಿ ಅರಳಿ ಮೆಲ್ಲಗೆ ರಂಗವಲ್ಲಿ ಇಲ್ಲಿ, ಎಳೆದ ಪ್ರತಿ ಗೆರೆ ಗೆರೆಯಲು ಅವನದೆ ಪ್ರೇಮದಮಲು ಅಂಕುಡೊಂಕಿನ ವೈಯಾರದಲು ಗೆರೆ ಬಿಂಕ ತೋರಿ ಅಣಕಿಸಲು ಅರಳಿತ್ತು ಮೋಡಿಗಾರ ರಂಗವಲ್ಲಿ ಇಲ್ಲಿ, ಗೆರೆಯಿಂದ ಗೆರೆಯ ಬಳಸಿ ಒಲವನೆಲ್ಲ ಸುತ್ತಿ ಬಳಸಿ ಮನವದು ಸೃತಿಸಿ ಶೃತಿಸಿ ಸ್ಪುರಿಸಿತಾಗ ನಗೆಯ ರಂಗವಲ್ಲಿ ಇಲ್ಲಿ, ನೀಲನಲಿ ನೀಲವಾಗಿ ತೇಲುತಿದೆ ಮನ ಪರಿಮಳಿಪ ಗಂಧವಾಗಿ ತೀಡುತಿದೆ ಭಾವ ಇಟ್ಟ ಪ್ರತಿ ಗೆರೆಗಳು ಸರಸದಿ ಬೆಸೆವ ಪರಿಗೆ ಲಜ್ಜೆವರಿತು ನಾಚುತಿದೆ ರಂಗವಲ್ಲಿ ಇಲ್ಲಿ, ಕ್ಷಣದ ಕಣ್ಣ ನೋಟಕೆ ಸರಸರನೆ ಹರಿದು ಮನದ ಎಲ್ಲ ಭಾವಕೆ ಬಂಧಿಯಾಗಿ ಬೇಡಿದಷ್ಟು ನಿಂದು ಗಾಢವಾಗಿ ಮೂಡುತಿದೆ ರಾಗದೊಲವ ರಂಗವಲ್ಲಿ ಇಲ್ಲಿ, ಆತ್ಮಕೊಲಿದವನ ನೇಹಕೆ ಬೆರಳ ಸ್ಪರ್ಶ ಮಾಟಕೆ ಕವನವಾಗಿ ಪದದೊಳಗೆ ಒಂದಾಗಿ ಮೂಡಿದೆ ಭಾವಲಹರಿ ರಂಗವಲ್ಲಿ ಇಲ್ಲಿ, ಮನ ಮನಗಳ ದ್ವಂದ್ವಗಳನಳಿಸಿ ಸುಸಂಬಂಧಗಳ ಉಳಿಸಿ ಮರೆಸಿ ಬೆಸೆವ ಸಾಂಸ್ಕೃತಿಕ ಪರಿಕಾರದ ಪ್ರತೀಕ ಶುಭಕೋರುವ ಸಿರಿ ರಂಗವಲ್ಲಿ ಇಲ್ಲಿ… ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜಗದ ಜ್ಯೋತಿ ರೇಮಾಸಂ ದಂಡಿ ಕಟ್ಟದೇ ಮಾಡಿಕೊಂಡೆಯಲ್ಲ ಕೊರಳಿಗೆ ತಾಳಿಯನೂ ಬಿಗಿಯಲಿಲ್ಲ ಮೈಗೆ ಅರಿಶಿಣ ಮೆತ್ತಿಕೊಳ್ಳಲಿಲ್ಲ ಮದುವೆಯ ಹಂದರವು ಹರಿವಿರಲಿಲ್ಲ ಹೊಸ ಇತಿಹಾಸವ ಸೃಷ್ಟಿಸಿಬಿಟ್ಟೆಯಲ್ಲ ಸಮಾನತೆಗಾಗಿ ಧರಣಿ ಹೂಡದೆ ಹೆಣ್ಣೆಂದು ಅವಕಾಶವಾದಿಯಾಗದೆ ಅಲ್ಲಮರ ಮಂಟಪದ ಜ್ಯೋತಿಯಾದೆ ಉಡತಡಿ ಉಡುಗೊರೆಯಾಗಿ ಉದಯಿಸಿದೆ ಕದಳಿಗೆ ಕರ್ಪುರದಂತೆ ಅರ್ಪಿತಳಾದೆ ನೀ ಶರಣ ಚಳುವಳಿಯ ಚೇತನ ಅಲ್ಲಮರ ಸಮ ಸಂವೇದನಶೀಲಳು ಅನುಭಾವಿಯುಕ್ತ ಮೇರು ಸಾಹಿತಿ ವಿಶಿಷ್ಟ ವೈಚಾರಿಕ ಮೌಲಿಕ ವಚನಗಾರ್ತಿ ಕನ್ನಡದ ಪ್ರಥಮ ಬಂಡಾಯ ಕವಯತ್ರಿ ಸಾರಿದೆ ಜಗದ ಕಣ್ಣು ಬೆತ್ತಲಾಗಿದೆ ಮನವು ಚಂಚಲದಿ ಬೆತ್ತಲಾಗಿದೆ ಇಷ್ಟ ಕಾಮ್ಯಗಳಡಿ ಸಿಕ್ಕಿಕೊಂಡಿದೆ ಭೌತಿಕ ಭೋಗದ ಬಂಧನದಲಿದೆಯಂದೆ ಜಗದ ಬೆತ್ತಲ ನೀ ಸ್ವತಃ ತೋರಿದೆ ಭೋಗ ಜೀವನದ ಬಲಿದಾನ ಕರ್ಮಠ ಯೋಗಿಣಿಯಾಗಿ ಸಾಧನ ಯೋಗಾಂಗ ತ್ರಿವಿಧಿಯ ಅನುಷ್ಠಾನ ಅಲ್ಲಮರಿಂದ ಧೀರ ನುಡಿಯ ತಾಯಿಯ ನಮನ ಅಕ್ಕ ನೀ ವೈರಾಗ್ಯ ನಿಧಿ ಜ್ಞಾನ ಘನ ವಿರತಿ ಘನ ಚನ್ನಮಲ್ಲಿಕಾರ್ಜುನೊಬ್ಬನೇ ಪುರುಷನೆಂದವಳು ಮಿಕ್ಕವರೆಲ್ಲ ಎನಗೆ ಸ್ತ್ರೀ ಸಮಾನರೆಂದವಳು ಕೇಶಾಂಬರವು ಜಗದ ಜನರ ಹಂಗಿಗೆಂದವಳು ಗಟ್ಟಿಗಿತ್ತಿ ಸಾದ್ವಿ ಅಕ್ಕಮಹಾದೇವಿಯಾದಳು ಅಕ್ಕ ವಿಶ್ವ ಸ್ತ್ರೀ ಕುಲದ ಜ್ಯೋತಿಯಾಗಿಹಳು ***********

ಕಾವ್ಯಯಾನ Read Post »

You cannot copy content of this page