ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಎಚ್ಚರವಾಗಿದ್ದರೂ ಏಳದೆ! ಧಾಮಿನಿ ಅವಳು ಮಲಗೇ ಇದ್ದಾಳೆ… ಬೆಳಗು ಮುಂಜಾನೆದ್ದು ರಂಗೋಲಿ ಹಾಕುತ್ತಿದ್ದವಳು ಇವತ್ತೇನೋ ನೀರು ಹಾಕಿದರೆ ಸೂರ್ಯನ ಮುಖಕ್ಕೇ ರಾಚುವಷ್ಟು ಸಮಯವಾಗಿದ್ದರೂ ಮಲಗೇ ಇದ್ದಾಳೆ. ಹಾಗಂತ ರಾತ್ರಿಯೆಲ್ಲ ಕ್ರೀಡೆಯಾಡಿರಲಿಲ್ಲ ಲೀಲೆಯಾಡಿದಂತ ಕಸಸೂ ಕಂಡಿರಲಿಲ್ಲ, ಶತಮಾನವಾಗಿದ್ದರೂ. ಹಾಗಂತ ಮೈಮರೆತು ಮಲಗಿರಲಿಲ್ಲ ಎಲ್ಲದರಿಂದ ವಿಮುಖವಾದವಳೂ ಅಲ್ಲ ಬದುಕೇ ಎಲ್ಲದರಿಂದ ದೂರ ಸರಿದಿದೆ ಸುಮ್ಮನೆ ಮಲಗೇ ಇದ್ದಾಳೆ ವೇಳೆ ಸರಿದಿದ್ದರೂ. ಹಾಗಂತ ಕೆಲಸವಿಲ್ಲದೇ ಏನಿಲ್ಲ ಶುರು ಮಾಡಿದರೆ ಅತ್ತಿತ್ತ ತಿರುಗಲೂ ಪುರುಸೊತ್ತಿಲ್ಲ ಒಂದೊಂದು ಘಳಿಗೆ ಮುಂದಕ್ಕೋಗುತ್ತಿದ್ದರೂ ಮಲಗೇ ಇದ್ದಾಳೆ. ಹಾಗಂತ ಹೇಳುವವರು ಕೇಳುವವರು ಇಲ್ಲವೇನು ? ಇಲ್ಲದೇ ಏನು ! ಇವಳೇ ಎಲ್ಲರ ದೂರ ತಳ್ಳಿ ನಿಡುಸುಯ್ದಿದ್ದಾಳೆ. ಬೆನ್ನು ತಿರುಗಿಸಿ ಮಲಗೇ ಇದ್ದಾಳೆ ಕ್ಷಣ ಕ್ಷಣವೂ ಓಡುತ್ತಿದ್ದರೂ. ನಿರ್ಲಿಪ್ತ ಮುಖ, ಕಣ್ಣು ಮರೆಮಾಡಿಕೊಂಡ ಕೈ, ಹರಡಿದ ಕೂದಲು, ಅಸ್ತವ್ಯಸ್ತ ಬಟ್ಟೆ, ಮಲಗಿರುವ ರೀತಿ, ಇವೆಲ್ಲವೂ ಕವಿಯ ಕಣ್ಣಿಗೆ ಬಿದ್ದರೆ ಒಂದು ಸುಂದರ ಕವಿತೆ ಒಬ್ಬ ಕಲಾಕಾರ ನೋಡಿದರೆ ಒಂದು ಸುಂದರ ಚಿತ್ರ ಒಬ್ಬ ರಸಿಕ ನೋಡಿದರೆ ಒಂದು ಸುಂದರ ಹಾಡು ಅವಳು ಮಲಗೇ ಇದ್ದಾಳೆ ಎಚ್ಚರವಾಗಿದ್ದರೂ ಏಳದೇ… ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಲೆಕ್ಕವಿಟ್ಟವರಿಲ್ಲ.. ಮಧುಸೂದನ ಮದ್ದೂರು ಭೂತಗನ್ನಡಿಯಲಿ ಇತಿಹಾಸ ಗರ್ಭ ಕೆದಕಿದಾಗ ಕಂಡುಂಡ ಸತ್ಯಗಳು ಮಿಥ್ಯೆಗಳವೆಷ್ಟೋ ಲೆಕ್ಕವಿಟ್ಟವರಿಲ್ಲ.. ರಾತ್ರಿ ರಾಣಿಯರ ಪಲ್ಲಂಗದಲ್ಲಿ ಕರಗಿದ ಸಾಮ್ರಾಜ್ಯಗಳೆಷ್ಟೋ ? ಉರುಳಿದ ಕೋಟೆ ಕೊತ್ತಲಗಳೆಷ್ಟೋ? ಸಾಮ್ರಾಜ್ಯ ಮುಕುಟ ಮಣಿಗಳೆಷ್ಟೋ? ತರಗಲೆಯಾದ ತಲೆಗಳೆಷ್ಟೋ? ಲೆಕ್ಕವಿಟ್ಟವರಿಲ್ಲ… ಮಣ್ಣಿನಾಸೆಯ ಹಪಹಪಿಕೆಯಲಿ ಹರಿದ ರಕುತದ ಕಾಲುವೆಗಳೆಷ್ಟೋ? ಆ ಕಾಲುವೆಗಳಲ್ಲಿ ಮುಗಿಲು ಮುಟ್ಟಿದ ವಿಧವೆಯರ ಗೋಳಿನ ಕಣ್ಣೀರ ಉಪ್ಪು ಕದಡಿ ಹರಿದ ನದಿಗಳೆಷ್ಟೋ? ಉಪ್ಪುಪ್ಪು ಕಡಲುಗಳೆಷ್ಟೋ? ಲೆಕ್ಕವಿಟ್ಟವರಿಲ್ಲ…. ಅಂಗವಿಹಿನರಾದವರ ಆರ್ತನಾದ ನಿರ್ವಂಶವಾಗಲೆಂಬ ಹಿಡಿಶಾಪವಿಟ್ಟು ಹೂಳಿಟ್ಟು ಎರಚಿದ ದೂಳಿನ ಗುಡ್ಡೆ ಗಳೆಷ್ಟೋ ಲೆಕ್ಕವಿಟ್ಟವರಿಲ್ಲ… ಹೆಣ್ಣು ಹೊನ್ನು ಮಣ್ಣಿನ ಮಾಯೆಯ ಪರಿಧಿಯಲ್ಲಿ ಕಾಲನ ತೆಕ್ಕೆಗೆ ನಿಲುಕದ ಇತಿಹಾಸದ ಪುಟಗಳೆಷ್ಟೋ..? ಕಣ್ಣಾಲಿಗೆ ನಿಲುಕುತ್ತಿಲ್ಲ.. ನಿಲುಕುವುದೂ ಇಲ್ಲ…. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ. ಹೇಮಗಂಗಾ ನನ್ನ ತೊರೆದು ಹೋಗುವುದೇ ಹಿತವೆಂದಾದರೆ ಹೇಳಿ ಹೋಗು ಕಾರಣ ನನ್ನ ಮರೆತು ಬಾಳುವುದೇ ಸುಖವೆಂದಾದರೆ ಹೇಳಿ ಹೋಗು ಕಾರಣ ‘ನಿನ್ನ ಹೊರತು ಬೇರಾರೂ ಬೇಕಿಲ್ಲ’ವೆಂದೇ ಈ ತನಕ ಕನವರಿಸುತ್ತಿದ್ದೆ ನನ್ನ ಅಸೀಮ ಒಲವೇ ಈಗ ಬೇಡವೆಂದಾದರೆ ಹೇಳಿ ಹೋಗು ಕಾರಣ ಕಂಡ ಕನಸುಗಳಿಗೆ ರಂಗು ಬಳಿದು ರೆಕ್ಕೆ ಮೂಡಿಸಿದವನು ನೀನು ನನ್ನ ಸಾಂಗತ್ಯವೇ ಇ‌ಷ್ಟವಿಲ್ಲವೆಂದಾದರೆ ಹೇಳಿ ಹೋಗು ಕಾರಣ ದಿಕ್ಕು ಬದಲಿಸಿದ ನಿನ್ನ ನಿಗೂಢ ನಡೆ ಊಸರವಳ್ಳಿಯನ್ನು ನೆನಪಿಸಿದೆ ನನ್ನ ಸಂಗವೇ ಬೇಡದ ಹೊರೆಯೆಂದಾದರೆ ಹೇಳಿ ಹೋಗು ಕಾರಣ ‘ ಹೇಮ’ ಳ ಪ್ರೀತಿ ನಶೆಯೇ ಸಾಕೆಂದು ಮಧುಶಾಲೆಗೆ ಬೆನ್ನು ತಿರುವಿದ್ದೆ ನನ್ನ ಶಾಶ್ವತ ವಿದಾಯವೇ ಹೊಸಬದುಕೆಂದಾದರೆ ಹೇಳಿ ಹೋಗು ಕಾರಣ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೌನ ಪ್ರತಿಭಾ ಹಳಿಂಗಳಿ ನಾ ಹೊದ್ದಿರುವೆ ಮೌನದ ಕಂಬಳಿಯನು ಉಸಿರು ಕಟ್ಟಿದಂತಿದೆ ಒಳಗೊಳಗೆ ಜೋರಾಗಿ ಕಿರುಚಬೇಕೆಂದಿರುವೆ ಸರಿಪಡಿಸಿಕೊಳ್ಳುತ ಗಂಟಲನ್ನು. ಒಳಗೂ,ಹೊರಗೂ ತಾಕಲಾಟ ತರತರನಾದ ಭಾವಗಳ ಎರಿಳಿತ ಮನದ ಕದ ತಟ್ಟುತಿರಲು. ಅತ್ತು ಸುಮ್ಮನಾಗುವೆ ಒಮ್ಮೆ ಜಗದ ಆಗು,ಹೋಗುಗಳಲ್ಲಿ ಮಂಡಿ ಉರಿ ಕುಳಿತಿರಲೂ ಬಂದು ನನ್ನ ಮುಂದೆ. ಶಬ್ದವೂ ನಿಲುಕುತ್ತಿಲ್ಲ ತಲೆಯೆತ್ತಿ ನೋಡಬೇಕೆನಿಸಿತು ಒಮ್ಮೆ. ನೋಡಲಾರೆನು ಎಂದುಸುರಿತು ಹುದುಗಿಸುತ ತಲೆ ಕಂಬಳಿಯೊಳಗೆ ಮರೆಯಲಾರದೆ ಮೌನ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೋಗಿಲೆ ಸುಜಾತಾ ಗುಪ್ತಾ ಮಾಮರದ ಕೊಗಿಲೆಯೇ ಒಲವಿನ ಯಾವ ಭಾವವಿಲ್ಲಿ ಇಹುದೆಂದು.. ಕೊರಳೆತ್ತಿ ರಾಗಾಲಾಪಿಸುವೆ ಏತಕೀ ವ್ಯರ್ಥಾಲಾಪನೆ.. ಇನಿಯನಾ ಬಾಹುಬಂಧನದಲ್ಲಿ ಜಗಮರೆತು ನಾನಿರಲು ಅಂದು ನಿನ್ನ ಕುಹೂ ಕುಹೂ ರಾಗಕೆ ನನ್ನ ಮನ ಪಲ್ಲವಿ ಹಾಡಿತ್ತು.. ಇನಿಯ ಸನಿಹದಲಿರಲಂದು ಜೀವನದೆ ನಾದಮಯ ಉಸಿರಿರಲು.. ನಿನ್ನ ಕಂಠದಾ ಸಿರಿ ಆಗಿತ್ತು ನನ್ನೆದೆಗೆ ಒಲವಿನ ರಾಗಸುಧೆ.. ಇಂದು ನೀನೂ ನಾನೂ ಒಂಟಿ ಪ್ರೇಮ ಯಾನದೆ.. ಪುರ್ರೆಂದು ಹಾರಿಹೋಯಿತೇನು ನಿನ್ನೊಲವಿನ ಜೋಡಿ,ಭರಿಸದೆ ಆಲಾಪಿಸುತಿರುವೆಯಾ ಈ ವಿರಹ ಗೀತೆ.. ನಿನ್ನೀ ಕಂಠದಿಂದ ವಿರಹಗೀತೆ ನಾ ಕೇಳಲಾರೆ.. ಒಲವಿನ ಖಜಾನೆಯ ಮುತ್ತುಗಳ ನಾ ಹೊರ ಚೆಲ್ಲಿದರೆ ಎಂದೂ.. ಶೂನ್ಯತೆಯಲಿ ನಾ ಭವ್ಯತೆಯ ಸೃಷ್ಟಿಸಲಾರೆ.. ಶ್ರುತಿ ತಪ್ಪಿದ ವಿರಹಗೀತೆ ನಾ ಒಲ್ಲೆ ಹೇ ಕೋಗಿಲೇ ಸಾಕು ಮಾಡು ಈಗಲೇ.. ನೀ ಕಣ್ಮರೆಯಾಗಿ ಹೋಗೇ ಕೂಡಲೇ.. ಮರುಕಳಿಸದಿರಲೆನ್ನ ಪ್ರೇಮಭಾವ… ***************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಂಧಿ ನಾನಲ್ಲ ವೀಣಾ ರಮೇಶ್ ನಿನ್ನ ನೆನಪುಗಳೇ ನನ್ನ ಬಂಧಿಸಿರುವಾಗ ಈ ಗ್ರಹಬಂಧನ ನನ್ನನೇನೂ ಕಾಡಲಿಲ್ಲ ಹುಡುಕುವ ಪದಗಳು ಬಾವನೆಗಳಲೇ ಬಂಧಿಸಿರುವಾಗ ನಾ ಬಂಧಿ ಅನ್ನಿಸಲಿಲ್ಲ ಎದೆಯ ಬಡಿತದ ಪ್ರತಿ ಸದ್ದಲ್ಲೂ ಕಾವಲಿರಿಸಿದ,ನಿನ್ನುಸಿರು ಈ ಗ್ರಹಬಂಧನ ನನಗೆ ಹಿಂಸೆ ಅನ್ನಿಸಲಿಲ್ಲ ನಿನ್ನ ನೆನಪುಗಳೇ ನನ್ನ ಜೊತೆಯಿರುವಾಗ ಪ್ರತಿ ಮೂಲೆಗೂ ನನ್ನ ಕರೆದೊಯ್ಯುವಾಗ ನಾ ಬಂಧಿ ಅಂತ ಅನ್ನಿಸಲಿಲ್ಲ ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಸ್ವಸ್ಥ ಅಭಿಪ್ರಾಯ –ನೂರುಲ್ಲಾ ತ್ಯಾಮಗೊಂಡ್ಲು ವಟಗುಡುವ ಕಪ್ಪೆಗಳಂತಿರುವ ಕೆಲ ಮೂರ್ಖ ಆಂಕರರು; ನೋಟಿನಲಿ ಮೈಕ್ರೊ ಚಿಪ್ಪುಕಂಡುಕೊಂಡ ವಿಜ್ಞಾನ ದೇವಿ ಪುರುಷರು ! -ಎಂದಿನಂತೆ ವಟಗುಡುವುದೇ ಅವರ ಕೆಲಸವೆಂದು ನಾನೂ ಸುಮ್ಮನಿರಲಾರದೆ ಕಪ್ಪಗೆ ಜಿನುಗುವ ಬಿಸಿಲು ಮಳೆಯ ಹಾಗೆ ಒಂದೆರಡು ಕವಿತೆಯ ತುಣುಕುಗಳನ್ನು ಹಾಳೆಯ ಮೇಲೆ ಹರಿಸುತ್ತೇನೆ ನನಗೆ ಗೊತ್ತಿದೆ ಮತ್ತೆ ಎಲ್ಲರಿಗೂ ಗೊತ್ತಿರುವ ವಿಷಯವೇ ; ಈ ಶತಮಾನದ ಪೆಂಡಮಿಕ್ ರೋಗ ! ‘ಕೊರೊನಾ’ ಚೈನಾದಿಂದ ವಕ್ಕರಿಸಿದ್ದೆಂದು ಆದರೆ , ಅದು ನಮ್ಮ ದೇಶದ ಸರಹದ್ದುಗಳನ್ನು ದಾಟಿದ್ದು ಹೇಗೆಂದು ಗುಪ್ತಾಚಾರದವರಿಗೆ ತಲೆ ಬಿಸಿಯ ವಿಷಯ ಪಾಪ ಅವರೇನೊ ತಲೆಕೆಡಿಸಿಕೊಂಡಂತಿಲ್ಲ ! ಹಾಗೆ ತಲೆ ಕೆದರಿ ಕೊಂಡಿದ್ದರೆ ಒಂದು ಕೋಮಿನವರಿಗೆ ವರ್ಣ ಬೇಧದ ಕ್ವಾರಂಟೈನ್ ಗಳನ್ನು ರಚಿಸಲಿಕ್ಕೆ ಅವಕಾಶ ಕೊಡುತ್ತಿರಲಿಲ್ಲ ನನ್ನ ಬೃಹತ್ ಪ್ರಜಾಸತ್ತಾತ್ಮಕ ದೇಶದಲಿ ಇಂಥ ಅಮಾನವೀಯ ಕೃತ್ಯಗಳನ್ನು ಖಂಡಿಸದ ಆಶಾಢಭೂತಿ ನಾಯಿಗಳು ಆಂಕರುಗಳ ನಡುವೆ ಫೋಸು ಕೊಟ್ಟು ಚಪ್ಪಾಳೆ ಹೊಡೆಯುತ್ತಾರೆ ಮನೆ ದೀಪ ಆರಿಸಿ ಹೊರಗಿನ ಕತ್ತಲಿಗೆ ಮೇಣ ಉರಿಸಿ, ಕರಗುವ ಮೇಣ ದಂತೆ ಕಿಟಕಿಯಲೇ ಕರಗಿಹೋಗುತ್ತಾರೆ… ************************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವಿಧಾಯ ಹೇಳುತ್ತಿದ್ದೇವೆ ದೇವವರ್ಮ ಮಾಕೊಂಡ(ದೇವು) ಮಧುರ ಸ್ಪರ್ಷವಿತ್ತ ನೆನಪುಗಳು ಮುಳುಗುತ್ತಿವೆ ಕಣ್ಣುಗಳ ಮುಂದೆ ಹಾದು ಹೋಗುತ್ತಿವೆ ದಿನ ದಿನ ಕಳೆದ ಘಟನೆಗಳು ಭಯವಿದೆ ನನಗೀಗ ನೂರಾರು ವರುಷಗಳಿಂದ ಪಕ್ಕೆಲುಬುಗಳಲಿ ಬಚ್ಚಿಟ್ಟಿದ್ದ ನೆನಪುಗಳು ಅಭದ್ರಗೊಳ್ಳುತ್ತಿವೆ ಎಂದು ಹೇರಳವಾಗಿರುವ ಸಿಡಿಲು ಮಳೆ ಹನಿಗಳಿಂದ ನಾನು ಏಕಾಂಗಿಯಾಗಿದ್ದೇನೆ ಸ್ವರ್ಗದ ಹಾದೀಲಿ ದುಃಖಗಳ ಗುರುತ್ವಾಕರ್ಷಣೆಯ ತುದಿಗೆ ಒರಗಿಕೊಂಡು ನಾನೀಗ ಕಳೆದು ಹೋದ ಜೋತಿರ್ವರ್ಷಗಳ ಮೆಲಕು ಹಾಕುತ್ತ ನಿಂತಿರುವೆ ಲಿಖಿತ ಡೈರಿಗಳು ಶೀರ್ಷಿಕೆ ರಹಿತ ಪದ್ಯಗಳು ರಾತ್ರಿ ಮಂಡಿಸಿದ ಕನಸುಗಳು ಕಳೆದುಕೊಂಡು ಬರಿ ಅರೆಬರೆ ತಿದ್ದಿದ ನಂಬಿಕೆ ಹದೀಸ್ ಪುರಾಣಗಳ ನಡುವೆ ನಿಂತಿದ್ದೇನೆ ನೋಡಿ ವರ್ಷಕ್ಕೊಂದೆರಡು ಸಲ ತ್ರಿವರ್ಣ ಧ್ವಜದ ಕೆಳಗೆ ಮಸುಕಾದ ಹೆಜ್ಜೆಗುರುತುಗಳು ಉಸಿರು ಕಟ್ಟಿದ ಗಂಟಲಿಂದ ಬರುವ ಶುಭಾಶಯ ಸಹಾನುಭೂತಿಗಳು ಮಿನುಗುತ್ತಿವೆ ಮರುದಿನ ಮತ್ತೆ ಅಸಮ ಉಸಿರು ಎದೆಬಡಿತ ! ಬನ್ನಿ ನೋಡಬನ್ನಿ ನಾವು ಎಷ್ಟೊಂದು ನಿಧಾನವಾಗಿ ಎಷ್ಟೊಂದು ಅಭಾರವಾಗಿ ಸಾಯುತ್ತಿದ್ದೇವೆ ಗಲ್ಲಿಯಲಿ ಕನಸು ಕಂಡ ಆತ್ಮಗಳು ಷಹರನಲಿ ಅಳಿಯುತ್ತಿವೆ ಭಯ ಬೆನ್ನುಮೂಳೆ ಸುತ್ತುವಾಗ ಖುಷಿಯನ್ನು ರಕ್ತನಾಳ ಸುಡುತ್ತಿದೆ ಹೀಗೆ… ದಿನೇ ದಿನೆ ವಿಧಾಯ ಹೇಳುತ್ತಿದ್ದೇವೆ ನಾವು ನೋಡಬನ್ನಿ ನೀವು ——–

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆಸ್ಪತ್ರೆಗಳು ಸಿ ವಾಣಿ ರಾಘವೇಂದ್ರ ರೋಗಗಳ ಭೀತಿ ಮನ-ಮನೆಗಳಲ್ಲಿ ಆಸ್ಪತ್ರೆಗಳಲ್ಲಿ ಮೂರು ನಾಲ್ಕು ರೋಗಗಳು ನೂರಾರು ರೋಗಿಗಳಲ್ಲಿ ಬಿಡದು ರೋಗಗಳು ಮೊಲೆ ಹಾಲುಗಳನ್ನು ನವಜಾತ ಶಿಶುಗಳನ್ನು ಎಲ್ಲ ಕಲೆತ ಜಗದ ವೈದ್ಯರು ಒಟ್ಟಾಗಿ ಚಿಕಿತ್ಸೆ ನೀಡಿದರೂ ಮತ್ತಷ್ಟು ಅಸಾಧ್ಯ ರೋಗಗಳು ರೋಗ ನಾಶವಾಗುವ ತನಕ ಆಸ್ಪತ್ರೆಗಳು ರೋಗಿ ನಾಶವಾಗುವ ತನಕ ರೋಗಗಳು *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನಸಿನೊಳಗೊಂದು ಕನಸು ಹುಳಿಯಾರ್ ಷಬ್ಬೀರ್ ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಿಜವಾಗಿಯೂ ನಾವು ಬಡವರು ಎಂದು ನೀವು ಕರೆದವರು ದಲಿತರು ಶ್ರಮಿಕರು ಅಲ್ಪ ಸಂಖ್ಯಾತರು ನೀವು ಹಾಕಿದ ಚೌಕಗಳೊಳಗೆ ನಡೆಸಲ್ಪಡುವ ಚದುರಂಗದ ದಾಳಗಳು.. ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಾನು ಮಾತಾಡುವಾಗ ನಿಮ್ಮ ಕಿವಿ ಗಬ್ಬುನಾತದ ಸಂಡಾಸಿನೊಳಗೆ ಕೂತು ತುಕ್ಕು ಹಿಡಿದ ತಗಡಿನ ಮೇಲಿನ ಅತೃಪ್ತ ಸಾಲುಗಳಲ್ಲಿ ಕಣ್ಣು ಹೂತು ಸೋತು ಹೋದ ನಿಮ್ಮ ಪಂಚೇಂದ್ರಿಯಗಳ ಪ್ರಜ್ಞಾವಂತಿಕೆಗೆ ಅಕಾಲಿಕ ಆಮಶಂಕೆ….! ಈ ಅಯೋಮಯದೊಳಗೆ ನಿಮಗೆ ಬಿತ್ತಂತೆ ಒಂದು ಕನಸು ನಿಮ್ಮದೇ ಮಗು ದಿಢೀರನೇ ಬಾಗಿಲು ಒದ್ದು ಕಟ್ಟಿದ “ಉಚ್ಚೆ ” ನುಗ್ಗಿಸಿ ಹಿಂಡಿದ ನಿಮ್ಮ ಮುಖದ ಬೆವರಲ್ಲಿ ಬೆರೆಸಿ ಉಪ್ಪೊಳಗೆ ಉಪ್ಪಾದಂತೆ. ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಾವು ಬಡವರು ಕತ್ತಲೆಯ ಕಂಬಳಿಯನ್ನು ಹಾಸಿ ಹೊದ್ದು ಮಕ್ಕಳಿಗೂ ಹೊದಿಸಿದವರು ಖೋಟಾ ಬೌದ್ಧಿಕತೆಯ ಬಿಟ್ಟಿ ಬೆಳಕಿನಲ್ಲಿ ಹೇಳ ಹೆಸರಿಲ್ಲದೆ ಕೊಚ್ಚಿ ಹೋದವರು.. ಖುಲ್ಲಾ ಆಗಿರುವ ಅಟ್ಟದಲ್ಲಿ ಮರ್ಯಾದೆಗೆಟ್ಟು ಆಟವಾಡುತ್ತಿರುವ ಇಲಿಗಳ ಸದ್ದು ಬಂದರೂ ಬರಬಹುದು ತಿಂದು ತೇಗುವುದಕ್ಕೆ ದಾಸೀಮಯ್ಯನ ಇನ್ನೊಂದು ಬೆಕ್ಕು ಕದ್ದು… ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ… ! *******

ಕಾವ್ಯಯಾನ Read Post »

You cannot copy content of this page