ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಹಿಳಾದಿನ ವಿಶೇಷ

ಅವಳೆಂದರೆ.. ವಿನುತಾ ಹಂಚಿನಮನಿ ಬಿತ್ತಿರುವದ ಬೆಳೆಯುವ ಭೂಮಿ ಧರಣಿ ಕಸವಿರಲಿ ವಿಷವಿರಲಿ ಬೀಜದ ಭ್ರೂಣ ಅಂಕುರಿಸಲು ಒಡಲ ಕೊಡುವ ರಮಣಿ ಜೀವಜಲ ಎರೆಯುವ ಅಮೃತ ವರ್ಷಿಣಿ ಮೇಲು ಕೀಳೆನಿಸದೆ ಪಾಪ ತೊಳೆಯುವ ಜಾಹ್ನವಿ ತಪ್ಪುಗಳ ಒಪ್ಪಿ ಒಪ್ಪಿಕೊಳ್ಳುವ ಮಹಾಮಾಯಿ ಎಲ್ಲವನೂ ತನ್ನದಾಗಿಸಿಕೊಳ್ಳುವ ನೀಲಮಯಿ ಸೂರ್ಯ ಚಂದ್ರ ತಾರೆಯರಿಗೆ ಅಂಗಳವಾಗಿರುವ ಅನಂನ ಆಗಸದಂತ ವಿಶಾಲಮನದ ಪ್ರೇಮಮಯಿ ಕೆಡುಕ ಧಿಕ್ಕರಿಸಿ ಸುಡುವ ಮೋಹಿನಿ ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ಕರುಣಾಮಯಿ ಅಸುರ ಮರ್ಧಿನಿ ಅಗ್ನಿ ಸ್ವರೂಪಿಣಿ ಜಗದ ಎಲ್ಲ ತೇಜಸ್ಸಿಗೆ ಕಾರಣೀಭೂತಳು ಚುಂಬಕ ಗುರುತ್ವ ಶಕ್ತಿಯ ಶಕ್ಕಿರೂಪಿಣಿ ಅವಳೆಂದರೆ ಸಾಕ್ಷಾತ್ ಪಂಚಭೂತಾಯಿ ರಕ್ತವ ಹಾಲಾಗಿಸಿ ಉಣಿಸುವಾಕಿ ಶಕ್ತಿಯ ಬೆವರಾಗಿಸಿ ಸೇವೆಗೈಯುವಾಕಿ ಮುಕ್ತ ಇಹ ಪರಕೆ ಬೇಕಿರುವಾಕಿ ಸೃಷ್ಟಿ ಕಾರ್ಯದಲಿ ಚತುರ್ಮುಖ ಬ್ರಹ್ಮನಂತೆ ಪೋಷಿಸುವಲ್ಲಿ ಕರುಣಾಳು ವಿಷ್ಣುವಿನಂತೆ ಕ್ಷಮಿಸುವಲ್ಲಿ ಸಹನಶೀಲೆ ಧರಿತ್ರಿಯಂತೆ ರವಿಚಂದ್ರರಿಂದ ಬೆಳಕ ಪಡೆದ ತಾರೆಗಳಂತಲ್ಲ ಅವಳ ವ್ಯಕ್ತಿತ್ವ ತನ್ನನು ತಾನು ಉರಿಸಿ ಬೆಳಗುವ ದೀಪ್ತಿ ********

ಮಹಿಳಾದಿನ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ನಾವು ನಿಮ್ಮ ಹಾಗಲ್ಲ ಸೌಜನ್ಯ ದತ್ತರಾಜ ಹೌದು ಖಂಡಿತಾ ನಾವು ನಿಮ್ಮ ಹಾಗಲ್ಲ ಪ್ರೀತಿಯಲ್ಲಿ ಸೋಲುವವರೂ ಸಂಸಾರವನ್ನು ಲೆಕ್ಕಾಚಾರದಲಿ ನಡೆಸುವವರು ನಾವು ಮನೆ ಒಳಗೆ ಮಹಾಭಾರತವೇ ನಡೆಯುತ್ತಿದ್ದರೂ ಮಂದಿ ಎದುರು ಮುಗುಳ್ನಗುವವರು ನಾವು ದೇಶ ದೇಶಾಂತರದ ರಾಜಕಾರಣಕ್ಕೂ ಮೊದಲು ಮನೆಮಂದಿಗಾಗಿ ಹೋರಾಡುವವರು ಬಡಿದಾಡುವವರು ನಾವು ದುಃಖವೆಷ್ಟೇ ಇದ್ದರೂ ತುಟಿಯ ರಂಗು ಕಣ್ಣಿನ ಕಾಡಿಗೆ ಕಡಿಮೆ ಆಗದಂತೆ ನೋಡಿಕೊಳ್ಳುವವರು ನಾವು ನಾವೇ ಶ್ರೇಷ್ಠವೆಂಬ ಹೆಮ್ಮೆ ನಮಗೆಂದಿಗೂ ಇಲ್ಲ ಆದರೂ ಹೆಣ್ತನದ ಸಂಭ್ರಮ ಅಷ್ಟು ಸುಲಭಕ್ಕೆ ದಕ್ಕುವಂತಹದ್ದಲ್ಲ ಹೌದು ಖಂಡಿತಾ ನಾವು ನಿಮ್ಮ ಹಾಗಲ್ಲ ********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಬೆಳಕಿನ ರಂಗೋಲಿ ಅಂಜನಾ ಹೆಗಡೆ ಏಳಯ್ಯ ಹನುಮಂತ ಎಷ್ಟು ನಿದ್ರೆ…. ಬಚ್ಚಲೊಲೆಯ ಮಸಿಬೂದಿ ಟೂತ್ ಪೌಡರ್ ಆಗಿ ಹೊಳೆವ ಹಲ್ಲು ಕೊರಳಗುಂಟ ಸುತ್ತಿಕೊಂಡ ಲಕ್ಷ್ಮಿತಾಳಿ ಸೆರಗೊಳಗೆ ಸೇರಿಸುತ್ತಾ ದೇವರನ್ನೆಬ್ಬಿಸುತ್ತಾಳೆ ಅಜ್ಜಿ ಅವಳ ಗಂಟಲು ನಡುಗುವುದಿಲ್ಲ ಹೂ ಬಿಡಿಸುತ್ತಿದ್ದಾಳೆ ಅಮ್ಮ ಒಲೆಯ ಮೇಲೆ ಕುದಿವ ನೀರಿನ ಶಾಖ ಅವಳ ಎದೆಗೆ ಇಳಿಯುವುದಿಲ್ಲ ಜೀನ್ಸ್ ಪ್ಯಾಂಟ್ ಸರಿಪಡಿಸುತ್ತ ಮೊಮ್ಮಗಳು ಬಣ್ಣದ ರಂಗೋಲಿ ಬಿಡಿಸುತ್ತಿದ್ದಾಳೆ ಅವಳ ನಗು ಮಾಸುವುದಿಲ್ಲ ಮಾರುತಿ ಮಂದಿರದ ಎದುರು ಕೈ ಮುಗಿದು ನಿಂತವಳ ಕೆಂಪು ನೈಲ್ ಪೋಲಿಶ್ ಹೊಳೆಯುತ್ತಿದೆ ಕಣ್ಣುಮುಚ್ಚಿ ಪ್ರಸಾದಕ್ಕೆ ಕೈಚಾಚಿದ್ದಾಳೆ ನವಗ್ರಹಗಳ ಸುತ್ತುವ ನುಣುಪಾದ ಪಾದಗಳು ಹೈ ಹೀಲ್ಸ್ ಮರೆತಿವೆ “ಚಪ್ಪಲಿಗಳನ್ನು ಸ್ಟ್ಯಾಂಡ್ನಲ್ಲಿಯೇ ಬಿಡಿ” ಚಪ್ಪಲಿರಾಶಿಯ ಮಧ್ಯದಲ್ಲಿ ಚಿಲ್ಲರೆ ಎಣಿಸುವವ ತಣ್ಣಗೆ ಕುಳಿತಿದ್ದಾನೆ…. ಜಗವ ಕಾಯುವ ಗತ್ತಿನಲ್ಲಿ ರಾತ್ರಿಪಾಳಿಯ ಕೆಲಸ ಮುಗಿಸಿ ಮೇಕಪ್ ಅಳಿಸುತ್ತ ಅವಳು ಮೆಲ್ಲಗೆ ಗುನುಗುತ್ತಾಳೆ…. ಮೆರೋ ಮನ ರಾಮ ಹೀ ರಾಮ ರಟೆ ಪಕ್ಕ ಕೂತು ಕೀಬೋರ್ಡ್ ಮೇಲೆ ಕೈಯಾಡಿಸುವವ ನೆನಪಾಗಿ ಬಂದು ತಲೆ ಸವರಿದ್ದಾನೆ ಕನಸಿನ ರಂಗೋಲಿ…. ಕೆನ್ನೆಮೇಲೊಂದು ಕರುಳಿನೊಳಗೊಂದು ಬಣ್ಣಬಣ್ಣದ ಎಳೆ ಏಳು ರಾಮನ ಬಂಟ ಬೆಳಗಾಯಿತು…. *****

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಹೆಣ್ಣು ಮಾಯೆಯಲ್ಲ ರೇಖಾ ವಿ.ಕಂಪ್ಲಿ ಹೆಣ್ಣು ಮಾಯೆಯಲ್ಲ ಹೆಣ್ಣು ನಿನ್ನ ಛಾಯೆಯೂ ಅಲ್ಲ ಹೆಣ್ಣು ಕಣ್ಣಿಗಬ್ಬವು ಅಲ್ಲ ಹೆಣ್ಣು ಕಾಮ ತೃಷೆಯೂ ಅಲ್ಲ ಹೆಣ್ಣು ಬರೀ ತಾಯಿಯಲ್ಲ ಹೆಣ್ಣು ಹೊನ್ನ ಆಶಿಸುವವಳಲ್ಲ ಹೆಣ್ಣು ಹಣದ ಬೆನ್ನು ಅಲ್ಲ ಹೆಣ್ಣು ಮಂದಾರ ಪುಷ್ಪವಲ್ಲ ಹೆಣ್ಣು ಚೆಂದದ ಗೊಂಬೆಯಲ್ಲ ಹೆಣ್ಣು ಮುನಿಯುವ ಮಾರಿಯಲ್ಲ ಹೆಣ್ಣು ನಿನ್ನ ಅಡಿಯಾಳು ಅಲ್ಲ ಹೆಣ್ಣು ನಿನ್ನ ಬದಲಿಸುವ ಕಣ್ಣು ಹೆಣ್ಣು ಶಕ್ತಿ ತುಂಬುವ ಆಂತಾಯ೯ ಶಕ್ತಿಯೊಂದು ಗಂಡಾದರೇ ಜಗದ್ಯುಕ್ತಿಯಾದವಳೇ ಹೆಣ್ಣು ***********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಮುಖವಾಡ ದಾಕ್ಷಾಯಣಿ ನಾಗರಾಜ ಮತ್ತೆ ಮುಸ್ಸಂಜೆಯಲಿ ಮುಸುಕಿನ ಗುದ್ದಾಟ ಆಗಷ್ಟೇ ಮುದ್ದೆಯಾದ ಹಾಸಿಗೆಯಲಿ ನಲುಗಿದ ಹೂಗಳ ಅಘ್ರಾಣಿಸಿ ತಡಕಾಡುತ್ತೇನೆ ಒಂದಷ್ಟಾದರೂ ನಿನ್ನ ಪ್ರೀತಿ ಘಮಲು ಉಳಿದಿದೆಯೇ ? ಪ್ರತಿಸಾರಿಯಂತೆಯೇ, ರವಷ್ಟು ಕೂಡ ಮುಲಾಜಿಲ್ಲದೆ ರಾಚುತ್ತದೆ ಮೂಗಿಗೆ ತುಸು ಕಾಮ ಮತ್ತಷ್ಟು ಗೆದ್ದೆನೆಂಬ ನಿನ್ನ ಅಹಂ,, ಜಾರಿದ ಕಣ್ಣಹನಿಗೆ ಜತನದಿಂದ ನಗುವಿನ ಮುಖವಾಡ ತೊಡಿಸಿಬಿಡುತ್ತೇನೆ ನೀನಿಲ್ಲದ ಮತ್ತೊಂದು ಮುಸ್ಸಂಜೆಯಲಿ ಮುಖವಾಡ ಕಳಚಿಟ್ಟು ನಿಂದಿಸುತ್ತೇನೆ ಹೇ ನಿರ್ದಯಿ ಬದುಕೇ ಅದೆಷ್ಟು ಮುಖವಾಡಗಳ ತೊಡಿಸುವೆ? ಜಾರಿಸುತ್ತಾ ಕಂಬನಿಗಳ ,,,, *******

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ವಿಪ್ಲವದ ಪತಂಗ ಶೃತಿ ಮೇಲುಸೀಮೆ ವಯಸ್ಸಿನ್ನೂ ಹದಿನಾಲ್ಕು ಎತ್ತ ನೋಡಿದರೂ ಹರಡಿರದ ಮೈ.. ಸಿನಿಮಾ ಮೋಡಿಯೋ ಹದಿವಯಸ್ಸಿನ ಮಂಕೋ ಆಗಿತ್ತಂತೆ ಪ್ರೇಮ.. ಶಾಲೆಗೆ ಬಿಟ್ಟು ಬಿಟ್ಟು ಬರೋ ಚಾಳಿ ಶುರುವಾಯಿತು ಶಾಲೆ ಹೋಗಲ್ಲ ಅನ್ನೋ ಖಯಾಲಿ.. ಬಂಧು ಒಬ್ಬನಿದ್ದನಂತೆ ಬಾಂಧವ್ಯ ಬೆಸೆಯಲು ಸಾಕಿತ್ತು ಇಷ್ಟು ಹೆತ್ತವರಿಗೆ ಊದಿಸಿದರು ವಾಲಗವ ಅಕ್ಷರದ ಬೆಲೆ ತಿಳಿಯದ ಹಿರೀಕರು ಯಾರಿಗೂ ಗೊತ್ತಾಗದಂತೆ ಮದುವೆ ಆಗಿಯೇ ಹೋಯಿತು ಕಗ್ಗತ್ತಲಲ್ಲಿ ತಿಳಿದೂ ತಿಳಿಯದೆ ಬಿದ್ದಿದ್ದಾಗಿತ್ತು ಸಂಸಾರದ ಸುಳಿಗೆ.. ಈಗೇನಿದ್ರೂ ದುಡಿತ ಬಿಡುವಿಲ್ಲದ ಗಳಿಗೆ.. ಹಸಿದ ಮೈ ನೀಡಿಸಿತ್ತು ಹದನ ಚಟದ ವಸ್ತುವಾಗಿದ್ದಳು ಅಡಿಗಡಿಗೆ.. ಬದುಕಿನ ನೊಗ ಎಳೆಯಬೇಕಿತ್ತು ಪುಸ್ತಕ ಹೋರುವ ಹೆಗಲಿಲಿ ಮೃದು ವದನ ಹೊದ್ದಿತ್ತು ಭಾರ ಅಗಸನ ಬಟ್ಟೆ ಕತ್ತೆಯ ಬೆನ್ನಿಗೆನ್ನುವಂತೆ ಆಡುವ ಕೂಸಿಗೆ ಕಾಡುವ ಕೂಸು, ಕೊಂಕಳಲ್ಲಿ ಇರುಳಿನಲಿ ಕೊರಳಲಿ ದಾರ ಕಟ್ಟಿದ ಕೈ, ಹಿಂದೆ ತಬ್ಬಿದ್ದ ಕೈ, ಸೀರೆ ಕೊಡಿಸಿದ್ದ ಕೈ, ಮುದ್ದು ಮಾಡಿ ತುತ್ತು ನೀಡಿದ ಕೈ, ಕುಡಿತಕ್ಕೆ ಬಿದ್ದ ಕೈ, ದುಡ್ಡು ತಾ ತವರಿಂದ ಎಂದು ಬೆನ್ನಿಗೆ ಬಾಸುಂಡೆ ನೀಡಿ ನಡುರಾತ್ರಿಯಲಿ ಹೊರಹಾಕಿತ್ತು.. ಕಿವಿಯಲಿ ಹರಡಿತ್ತು ಬುದ್ಧಿ ಮಾತಿನ ದನಿ ನಾ ಮಾಡಿದ್ದು ತಪ್ಪೆಂದು ಅರಿತ ಕಣ್ಣು, ಸಂತೈಸುತ್ತಿತ್ತು ಮನವನು ಆಗಿದ್ದಾಗಿದೆ ಒಡಲಲಿದ್ದ ಹೆಣ್ಣನಾದರು ತಿದ್ದಿ ಬೆಳೆಸೋಣವೆಂದು… ಗೊತ್ತಿದ್ದು ಗೊತ್ತಿದ್ದು ಮತ್ತೇ ಮತ್ತೇ ಕೂಪಕ್ಕೆ ತಳ್ಳದೆ ಇನ್ನಾದರೂ ತಿದ್ದಿ ನೆಡೆಯುತ ಪೆದ್ದು ಮುದ್ದು ಹೃದಯಕೆ ತಿಳಿ ಹೇಳುತಾ ಬೆಳೆಸೋಣ.. **********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಗೆಳತಿ ಕೇಳೆ ದೀಪಿಕಾಬಾಬು ಗೆಳತಿ ಕೇಳೆ, ಎಲ್ಲರಂತಲ್ಲ ನನ್ನವನು, ನನ್ನವನು ನನಗಾಗಿ ಇರುವವನು..! ತನ್ನ ಹಣೆಯ ಬರಹ ಬರೆದುಕೊಳ್ಳಲಾಗದೆ ಬೇರೆಯೆಲ್ಲರ ವಿಧಿ ಲಿಖಿತ ಬರೆಯುತ್ತ, ಸೃಷ್ಟಿಸಿದ ಮಗಳಾದ ಸರಸ್ವತಿಯನ್ನು ವರಿಸಿದ ಮೂರು ಶಿರವುಳ್ಳ ಬ್ರಹ್ಮನಂತಲ್ಲ, ಕಣೆ ಗೆಳತಿ ನನ್ನವನು..! ಸ್ಮಶಾನದ ಅಧಿಪತಿಯಾಗಿ ಭಸ್ಮ ಬಳಿದುಕೊಂಡು ಕೈಲಾಸನಾಥನೂ ಎನಿಸಿಕೊಂಡು ಪಾರ್ವತಿಯನ್ನು ವಿವಾಹವಾಗಿ ಗಂಗೆಯನ್ನು ಶಿರದಲ್ಲಿ ಮುಡಿದಿಹ ಶಂಕರನಂತಲ್ಲ , ಕಣೆ ಗೆಳತಿ ನನ್ನವನು..! ಶಾಂತ ಸಾಗರದಲ್ಲಿ ಸರ್ಪದ ಮೇಲೆ ಆಯಾಗಿ, ಲೋಕದ ಬಗ್ಗೆ ಚಿಂತಿಸದೆ ಮಲಗಿರುವ, ಶ್ರೀ ಮಹಾಲಕ್ಷ್ಮಿಯು ಕಾಲೊತ್ತಿ ಸೇವೆಗೈದರು ಪದ್ಮಳ ಅಂದಕ್ಕೆ ಮನಸೋತ ವಿಷ್ಣುವಿನಂತಲ್ಲ, ಕಣೆ ಗೆಳತಿ ನನ್ನವನು..! ನವಮಾಸ ಹೊತ್ತು ಹೆತ್ತು ಹಾಲುಣಿಸಿದ ಹೆತ್ತ ತಾಯಿಯ ಶಿರವನ್ನು ಮಾತೃ ವಾತ್ಸಲ್ಯ ಮರೆತು ಕಟುಕನಂತೆ ಕಡಿದು ಹಾಕಿದ ಪರಶುರಾಮನಂತಲ್ಲ, ಕಣೆ ಗೆಳತಿ ನನ್ನವನು..! ಯಾರೋ ಮೂರ್ಖನೊಬ್ಬನ ಮಾತಿಗೆ ಕಿವಿಗೊಟ್ಟು ತನ್ನ ನಂಬಿ ಬಂದ ಮಡದಿಯನ್ನು ಶಂಕಿಸಿ ತುಂಬು ಗರ್ಭಿಣಿಯ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಲ್ಲಿ ಬಿಟ್ಟುಬರಲು ಆಜ್ಣಾಪಿಸಿದ ಶ್ರೀರಾಮನಂತಲ್ಲ, ಕಣೆ ಗೆಳತಿ ನನ್ನವನು…! ರಾಜ್ಯಗಳ ಆಸೇಗೆ, ತನ್ನ ಸ್ಪಾರ್ಥಕ್ಕೆ ಮಡಿದು ಪಗಟೆಯ ಆಟದಲ್ಲಿ  ಪತ್ನಿಯನ್ನು ಅಡವಿಟ್ಟು ಸೋತು, ತುಂಬಿದ ಸಭೆಯಲ್ಲಿ ಅವಳ ವಸ್ತ್ರ ಅಪಹರಣ ಮಾಡುವಾಗ ಶಿಕಂಡಿಗಳಂತೆ ತಲೆ ತಗ್ಗಿಸಿ ಕೂತ ಪಂಚ ಪಾಂಡವರಂತಲ್ಲ, ಕಣೆ ಗೆಳತಿ ನನ್ನವನು…! ನೀಲಿ ವರ್ಣದ ಸ್ತ್ರೀ ಲೋಲ ಎನಿಸಿರುವ ಹದಿನಾರು ಸಾವಿರ ಮಡದಿಯರೊಂದಿಗೆ ಕ್ರೀಡೆ ಆಡುವ ಕಪಟ ನಾಟಕದಾರಿ ಎಲ್ಲದರ ಸೂತ್ರಧಾರ ಪರಮಾತ್ಮ ಎಂದು ಪೂಜಿಸುವ ಶ್ರೀಕೃಷ್ಣ ನಂತಲ್ಲ, ಕಣೆ ಗೆಳತಿ ನನ್ನವನು…! ಗೆಳತಿ ಕೇಳು ಅವರಿವರಂತಲ್ಲ ನನ್ನವನು ಅವನಂತಿಲ್ಲ ಯಾರು ಅವನೇ ನನ್ನವನು, ನಾನು ಮೆಚ್ಚಿದವನು, ಈ ಆಧುನಿಕ ಜಗದವನು, ಉತ್ತಮ ಪುರುಷೋತ್ತಮನು.!! *******

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಹೆಣ್ಣಿನ ಸ್ವಗತ ಪ್ರೊ.ಕವಿತಾ ಸಾರಂಗಮಠ ಹೆಣ್ಣಿನ ಸ್ವಗತ ಹೆತ್ತವರಿಗೆ ಸಾಲವಾದೀತೆಂದು ಓದು ತ್ಯಜಿಸಿ ಸದಾ ನಗು ಬೀರುವಳು..! ವರದಕ್ಷಿಣೆ ಭಾರವಾದೀತೆಂದು ಮನ ಹಿಡಿಸದ ಮದುವೆಗೊಪ್ಪಿ ಸದಾ ನಗು ಬೀರುವಳು..! ಗೌರವ ಹಾಳಾದೀತೆಂದು ಕುಡುಕ ಪತಿಯೊಂದಿಗೆ ರಾಜಿಯಾಗಿ ಸದಾ ನಗು ಬೀರುವಳು..! ಇಲ್ಲ ಸಲ್ಲದ ಅಪವಾದಗಳೆಂದು ಒಡನಾಡಿಗಳೊಂದಿಗೆ ಹೊಂದಿಕೊಂಡು ಸದಾ ನಗು ಬೀರುವಳು..! ಸಮಾಜದಿ ಗಾಳವಾಗಬಾರದೆಂದು ಶೀಲಾಪಹರಣಗೊಂಡು ಆತ್ಮಹತ್ಯೆಗೆ ಶರಣಾದರೂ ನಗು ಬೀರುವಳು..! ಊರ್ಮಿಳೆ,ಅಹಲ್ಯೆ, ಸೀತೆಯರಿಗೆ ಅಪವಾದ ತಪ್ಪಲಿಲ್ಲ ,ನಾನಾವ ಲೆಕ್ಕವೆಂದು ಸದಾ ನಗು ಬೀರುವಳು..! ಅಸಹಜ ನಗುವ ಕಂಡು ದೇವರೂ ನಕ್ಕಾನೆಂದು ಸದಾ ನಗು ಬೀರುವಳು..! ನೀನೆಷ್ಟೇ ಕಷ್ಟ ಕೊಟ್ಟರೂ ನಾ ಅಳಲೇ ಇಲ್ಲೆಂದು ಅಣುಕಿಸುವಂತೆ ಸಾವಲ್ಲೂ ನಗು ಬೀರುವಳು..! ********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಕಾವ್ಯಯಾನ

ಮಾಂತ್ರಿಕಳೆಂದು.. ವಿಜಯಶ್ರೀ ಹಾಲಾಡಿ ಮೊದಮೊದಲ ಮಳೆಹನಿಗೆಅವಳು ಕರಗಲಿಲ್ಲಹನಿಯೇ ಕರಗಿತುಮಳೆಧಾರೆಯೇನು …ಕಡಲನ್ನೇ ನುಂಗಿನೊಣೆಯುವ ತಾಕತ್ತಿನವಳು ! ಬೇಡವೆಂದು ದೂಡಿದ್ದಾಳೆಅರಸಿ ಬಂದದ್ದೆಲ್ಲವನ್ನುಕೊನೆಗೆ ಜಗವೆಂಬ ಜಗವನ್ನೂ ..ಕಾವ್ಯವನ್ನು ಮಾತ್ರಹುಡುಕಿ ಹೋಗಿದ್ದಾಳೆಹುಡುಕುತ್ತಲೇ ತಿರುಗಿದ್ದಾಳೆ ಅಲೆಮಾರಿಗೇನು ..ನಿರಾಳ ಬೀದಿಗಳೇಆಲಯಗಳೇತೊರೆಯೇ ಹಳ್ಳಗಳೇ …ಕಡಿದು ಪರ್ವತದಿಣ್ಣೆ ಕೊರಕಲುಗಳನಡುವೆ ಯಾತ್ರೆ ಹೊರಟುಬೇಡವೆಂದು ಕೈಬಿಟ್ಟುಸಂತೆಮಾಳದಲ್ಲಿಸಂಜೆ ಮಾಡಿಕೊಂಡುಇರುಳು ಚಂದ್ರನ ಕೆಳಗೆಕವಿತೆ ಬರೆಯುತ್ತಿದ್ದಳಂತೆಬೆಳಗಿನವರೆಗೂಲಾಂದ್ರ ಹಚ್ಚಿಟ್ಟುಗುಡಾರದಲ್ಲಿ ಗುಡಿ-ಗುಡಿಯ ಸೇದುತ್ತಕೂದಲು ಬಿರಿಹೊಯ್ದುಕನಸು ಚೆಲ್ಲಿತೆಂದುಆಯ್ದು ಕೂತಿದ್ದಳಂತೆ ಊರ ಜನ ಮಾಂತ್ರಿಕ-ಳೆಂದು ಅಡ್ಡಬೀಳಲುಅಂಗಲಾಚಲು ಶುರು-ವಿಟ್ಟುಕೊಂಡಾಗಓ ಅದೇ ಬೆಟ್ಟದಕೆಳಗೆ ನದಿಯ ಗುಂಟನಡೆದುಹೋದಳಂತೆಮತ್ತಿನ್ಯಾರೂಕಾಣಲಿಲ್ಲವಂತೆ ! ****** ಚಿತ್ರಕೃಪೆ:ವಿಜಯಶ್ರೀ ಹಾಲಾಡಿ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರೀತಿಯ ಸಾಲಗಾರನಾಗಿ ಬಿಟ್ಟಿದೆ ಮೂಗಪ್ಪ ಗಾಳೇರ ನೀನು ಬಿಟ್ಟು ಹೋದ ಮೇಲೆ ಬಿಕ್ಕಿಬಿಕ್ಕಿ ಅಳಬೇಕೆನಿಸಿದಾಗ…….. ನಾನು ಅಳದೆ ಮುಗುಳುನಕ್ಕು ಸುಮ್ಮನಾಗಿ ಬಿಡುತ್ತಿದ್ದೆ; ಯಾಕೆ ಗೊತ್ತಾ ……? ನೀನು ಬಿಟ್ಟು ಹೋದ ನೆನಪುಗಳು ನನ್ನ ಹೃದಯದ ಅಂಗಳದಲ್ಲಿ ಅರಳಿದ ಹೂಗಳಾಗಿಯೇ ಉಳಿದಿವೆ ಹಾಗಾಗಿ ನಾನು ಅತ್ತರೆ…… ಆ ಕಣ್ಣೀರಿನ ಬಿಸಿ ತಾಕಿದಡೆ ಹೂವುಗಳು ಬಾಡಬಹುದೆಂಬ ಭಯ ವಷ್ಟೇ ನನ್ನ ನಸುನಗೆ ಕಾರಣ…….! ನೀನು ಹೋದ ಮೇಲೆ ಒಂಟಿ ಜೀವನ ಗತಿಯೆಂದು ಖಾಲಿಯಾದ ಬಾಟಲಿ ಹಿಡಿದು ಯಾರು ಇಲ್ಲದ ಬೀದಿಯಲ್ಲಿ ಸುತ್ತುತ್ತೇನೆ ಎಂದುಕೊಂಡಿದ್ದೆ……! ಊ.. ಊಂ… ಹಾಗಾಗಲಿಲ್ಲ ಇಲ್ಲಿ ಒಂಟಿಯಾಗಿ ನೀಲಿ ನಭದಲ್ಲಿ ತೇಲುತ್ತಿದ್ದ ಚಂದಿರ ನನ್ನ ಜೊತೆಯಾದ ಆಗೊಮ್ಮೆ-ಈಗೊಮ್ಮೆ ಪಳಪಳನೆ ಹೊಳೆದು ಮರೆಯಾಗುವ ನಕ್ಷತ್ರಗಳು ನಿನ್ನ ನೆನಪುಗಳು ಬಂದಾಗಲೆಲ್ಲ ಮೋಹಿಸಿ ಮರೆಯಾಗುವ ಔಷಧಿಯಾಗಿ ಬಿಟ್ಟಿವೆ………! ಜೊತೆಯಲ್ಲಿ ಇಟ್ಟ ನಮ್ಮಿಬ್ಬರ ಹೆಜ್ಜೆಗಳು ನನ್ನ ಹೃದಯದ ಕೋಣೆಯನ್ನು ಚಿದ್ರ ಚಿದ್ರ ಮಾಡಬಹುದೆಂದು ಕೊಂಡಿದ್ದೆ ಅದು ಸಾಧ್ಯವಾಗಲಿಲ್ಲ ಯಾಕೆಂದರೆ……? ಆ ಹೆಜ್ಜೆಗಳ ಹುಡುಕಾಟದಲ್ಲಿದ್ದ ನಾನು ಕಡಲ ದಂಡೆಯ ಮರಳಿನ ಮೇಲೆ ಬರೆದ ಕವಿತೆಯ ಸಾಲುಗಳು ನಿನ್ನ ಹೆಜ್ಜೆಗಳ ಸಾಲ ಮರುಪಾವತಿಸುತಿವೆ…… ಇನ್ನೆಲ್ಲಿ ಹೆಜ್ಜೆಗಳ ಚಿದ್ರ ಚಿದ್ರ ನಾದ….‌‌.. ನೀನು ಅಂದುಕೊಂಡಂತೆ ಇಲ್ಲಿ ಯಾವ ಬದಲಾವಣೆಗಳು ಆಗಿಲ್ಲ ಆಗಿರುವುದು ಒಂದೇ ಅದು ನನ್ನ ಕವಿತೆಯ ಸಾಲು ಪ್ರೀತಿಯ ಸಾಲಗಾರನಾಗಿ ಬಿಟ್ಟಿದೆ……….! ***********

ಕಾವ್ಯಯಾನ Read Post »

You cannot copy content of this page