ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಮಾನ ಉಳಿಸಿ ದ್ವೇಷ
ಅಳಿಸಲು ಕಾಲವಿನ್ನು ಬೇಕೇನು?
ಪ್ರಾಣ ಹುಡುಕಿ ಕೊಂದವರಿಗೆ
ಅಣ್ವಸ್ತ್ರದ ಬಳಕೆಯ ಅಗತ್ಯವೇನು?

ನೊಂದ ಆ ಜೀವಗಳು ಶಾಂತಿ
ಬಯಸಿ ಪ್ರತಿಭಟಿಸಿದ್ದು ತಪ್ಪೇನು?
ಕೊಂದ ಪಾಪವು, ನೊಂದ ಹೆತ್ತವರ
ಮನಸ್ಸಿನಾಳದ ಘಾಸಿಯನು ಅಳಿಸಿತ್ತೇ?

ಹೊಗೆ, ಶಬ್ದ, ಬೆಂಕಿ, ಸೈರನ್‌
ದ್ರೋನ್ ಕ್ಷಿಪಣಿಗಳ ನರ್ತನ ನಿಲ್ಲಿಸಿ,
ಹಗೆ ಹಳೆಯ ಬಿಟ್ಟು ನಗೆಯ ಸೂಸಿರಿ,
ಕೈಯ ಕುಲುಕಿ, ಶಾಂತಿಯ ಮರು ಸ್ಥಾಪಿಸಿ.!


About The Author

Leave a Reply

You cannot copy content of this page

Scroll to Top