ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ “ಮಾನ್ಯಳ ಆತ್ಮದ ಅಳಲು”

ಕಾವ್ಯ ಸಂಗಾತ ಡಾ. ಹೆಚ್. ನಟರಾಜ್ ಆರ್ಯ “ಮಾನ್ಯಳ ಆತ್ಮದ ಅಳಲು” ನಾನುಕತ್ತಲಲ್ಲಿ ಸತ್ತವಳಲ್ಲ—ನನ್ನೊಳಗೆಒಂದು ಚಿಕ್ಕ ಬೆಳಕುಇನ್ನೂ ಉಸಿರಾಡುತ್ತಿತ್ತು. ನನ್ನ ಉಸಿರಲ್ಲಿಮತ್ತೊಂದು ಉಸಿರಿನ ನಡುಗು,ಹೃದಯದ ತಾಳದಲ್ಲಿನಾಳೆಯೊಂದುಭಯದಿಂದ ಕಂಪುತ್ತಿತ್ತು. ನನ್ನನ್ನು ಕೊಂದದ್ದುಕತ್ತಿಯಲ್ಲ—ಜಾತಿಯೆಂಬಮನಸ್ಸಿನ ಕಾಯಿಲೆ. ಅಪ್ಪಾ…ಪ್ರೀತಿ ತಪ್ಪೇ?ಮಾನವನಂತೆ ಬದುಕಲುಕನಸು ಕಾಣುವುದುಪಾಪವೇ?ನೀವು ಕೊಂದದ್ದುದೇಹವಲ್ಲ—ಗರ್ಭದ ಬೆಳಕು. ಅಲ್ಲಿಒಂದು ಬದುಕುಬೀಜವಾಗಿಯೇಕುಸಿದಿತ್ತು. ಹೇಳಿ—ಆ ಉಸಿರಿಗೆಯಾವ ಜಾತಿ?ಆ ಕನಸಿಗೆಯಾವ ಗೋಡೆ?ತಾಯಿಯ ಕಣ್ಣೀರಿಗೂನಿಯಮ ಇದೆಯೆ? ದೌರ್ಜನ್ಯಕ್ಷಣದ ಕೋಪವಲ್ಲ—ತಲೆತಲಾಂತರದಿಂದಹರಿದು ಬಂದಕತ್ತಲ ರಕ್ತ. ಇದಕ್ಕೆ ಔಷಧಿಕತ್ತಿಯಲ್ಲ—ಮನಸ್ಸು ಎಚ್ಚರಗೊಳ್ಳುವಜಾಗೃತಿ. ಮಾನ, ಧರ್ಮ, ಸಂಪ್ರದಾಯದ ಹೆಸರಿನಲ್ಲಿನಾವುಬಂಧನಗಳನ್ನೇಹಾರವೆಂದುಧರಿಸಿಕೊಂಡೆವು. ತಪ್ಪಿಗೆಕಾನೂನು ಇದೆ,ನ್ಯಾಯ ಇದೆ,ಶಿಕ್ಷೆ ಇದೆ—ಆದರೆಜೀವ ಕತ್ತರಿಸುವಅಧಿಕಾರಯಾರಿಗೂ ಇಲ್ಲ. ಅವಳ ಕಣ್ಣಲ್ಲಿನಿನ್ನ ಮಗಳ ಭಯ,ಅವನ ಉಸಿರಲ್ಲಿನಿನ್ನ ಮಗನನಾಳೆ. ನನಗೆ ನ್ಯಾಯ ಸಿಕ್ಕಿತು—ಆದರೆನನ್ನ ಮಗನಿಗೆಬೆಳಗ್ಗೆ ಬರಲಿಲ್ಲ.ಸೂರ್ಯೋದಯಕ್ಕೂಅನುಮತಿ ಬೇಕಾಯಿತೇ? ನನ್ನ ಆತ್ಮಕ್ಕೆ ಶಾಂತಿ ಸಿಗುವುದುಒಂದು ದಿನ—ಈ ಸಮಾಜಕನ್ನಡಿ ನೋಡಿಕೊಂಡುತನ್ನನ್ನೇ ಪ್ರಶ್ನಿಸಿದಾಗ. ಆ ದಿನನಮ್ಮಂಥ ಆತ್ಮಗಳುಕತ್ತಲಲ್ಲ—ಭಯದಲ್ಲಲ್ಲ—ಮಾನವೀಯತೆಯ ಬೆಳಕಿನಲ್ಲಿನಿಶ್ಶಬ್ದವಾಗಿಅಳದೆನಗುತ್ತೇವೆ.

ಡಾ. ಹೆಚ್. ನಟರಾಜ್ ಆರ್ಯ “ಮಾನ್ಯಳ ಆತ್ಮದ ಅಳಲು” Read Post »

ಕಾವ್ಯಯಾನ

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ದೇಹ ನಶ್ವರ ಆತ್ಮ ನಿಜದಲಿ ಕೆಡಬಹುದೇ ಕಣ್ಣು ಕಟ್ಟು ಕನಸು ಬಟ್ಟೆಯಲಿ ಕಟ್ಟಬಹುದೆ ಹುಣಿವೆ ಚಂದ್ರನ ಬೆಳಕು ಉಕ್ಕಿದೆ ಸಾಗರಬೆಳದಿಂಗಳ ಬೊಗಸೆಯಲಿ ತುಂಬಬಹುದೇ ಅರಳಿದ ಹೂ ಮುದದಿ ಮುಡಿಯುತ್ತೇನೆಗಂಧವನು ಬೆರಳಿನಲಿ ಹಿಡಿಯಬಹುದೇ ತೂಗಾಡುವ ಮರವ ಹಬ್ಬಿ ನಿಂತಿದೆ ಬಳ್ಳಿಗಾಳಿಯನು ತೋಳಿನಲಿ ತಬ್ಬಬಹುದೇ ಅರುಣಾಳ ಕೊಂದು ಖುಷಿಪಡಬಹುದುಅವಳ ಆಸೆಗಳ ಶಸ್ತ್ರದಿ ಕೊಲ್ಲಬಹುದೇ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ

ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ಅವರ ಕವಿತೆ”ನಿನ್ನೊಳಿದೆ ನನ್ನ ಹೃದಯ”

ಕಾವ್ಯ ಸಂಗಾತಿ ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ “ನಿನ್ನೊಳಿದೆ ನನ್ನ ಹೃದಯ” ನಿನ್ನ ನೋಡದೆ ನಾ ಹೇಗಿರಲಿ,ನನ್ನೊಲವಿನ ಗೆಳತಿನಿನ್ನೊಳಿದೆ ನನ್ನ ಮನಸ್ಸು……..ಅರ್ಥವಾಗದಿಹದೇ ನಿನ್ನೊಲವಿನ ಗೆಳೆಯನಹೃದಯಾಂತರಾಳದ ವೇದನೆಯು ನಿನಗೆನಿನ್ನದೆ ಮಧುರ ನೆನಪು ಪ್ರತಿ ಕ್ಷಣ ಕ್ಷಣವುನನ್ನೆದೆಯ ವೀಣೆಯ ಮೀಟುತಿದೆ….. ಅಂದು ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲಿಚಂದ್ರಮುಖಿ ಚಕೋರಂಗೆಯೇ ನಾಚುವಂತೆಸಿಂಗರಿಸಿಕೊಂಡು ಬಳಿಬಂದು ಎನ್ನ ಬಳಸಿಎದೆಗಪ್ಪಿ ಚುಂಬಿಸಿ ಪ್ರೇಮಬಂಧನದಿ ಬಂಧಿಸಿದಆ ಘಳಿಗೆಯನ್ನು ಮರೆಯಲಾದೀತೆ ಗೆಳತಿಈ ಜನ್ಮದಿಂದ ಸಪ್ತಜನ್ಮದವರೆಗೂ….. ಕಾಯ ನನ್ನದು ಪ್ರಾಣ ನಿನ್ನದು ಒಲವೇಹೃದಯ ನನ್ನದು ಬಡಿತ ನಿನ್ನದೆ ಚಲುವೇದೂರವಾಗಬೇಡ ನೀ ತಾಳಲಾರೆನು ನಾಈ ಸುಡುವ ವಿರಹದೂರಿಯಿಂದದೂರವಾದರೆ ನೀನು ಬರಿದಾದ ಕಡಲಂತೆನನ್ನ ಬದುಕು…….. ನನ್ನ ಬದುಕು……. ನಾನು ಬಡವನಾದರೂ ಪ್ರೀತಿಗೆ ಬಡತನವಿಲ್ಲನನ್ನ ಮನದಿ ಪ್ರೇಮಸಿರಿಯೇ ಇರುವದುನೀನೀ ದೀನನ ಬಾಳಿನ ಜ್ಯೋತಿಯೆಂದುಹರುಷದಿ ಹಕ್ಕಿಯಂತೆ ಹಾರಾಡುತ್ತಿರುವೆಮರೆಯಾದರೆ ನೀ ಮಣ್ಣಲ್ಲಿ ಮಣ್ಣಾಗುವೆ ನಾನಿನ್ನೊಳಿದೆ ನನ್ನ ಹೃದಯ………. ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ

ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ಅವರ ಕವಿತೆ”ನಿನ್ನೊಳಿದೆ ನನ್ನ ಹೃದಯ” Read Post »

ಕಾವ್ಯಯಾನ

ಭಾರತಿ‌ ಅಶೋಕ್ “ಆನು ಒಲಿದಂತೆ”

ಕಾವ್ಯ ಸಂಗಾತಿ ಭಾರತಿ‌ ಅಶೋಕ್ “ಆನು ಒಲಿದಂತೆ” ನೀನೊಲಿದಬೇಡನಿಗೆ ಹೊರತಲ್ಲ ಎನ್ನ ಬಕುತಿಮೂದಳದ ಬಿಲ್ವ ಎಲೆಗಳಹೊರತು ಕೊಡಲಿಲ್ಲ ಶಕುತಿ ಭವಣೆಯಲಿ  ಹಣ್ಣಾದ ಮನವುನೀನಿತ್ತ ಬದುಕಿಗೆ ಮಣಿದ ಕಾಯಕೊಡಲೇನಿದೆ ಉಸಿರುಸಿರಿಗು ಶಿವ’ನ ಹೊರತಾದ ಸೊಲ್ಲು ಅಲ್ಲೆಲ್ಲೊ ಗುಡಿಯೊಳಗೆಹುಡುಕುತಿಹ ಮಂದಿನೀನು ನನ್ನವರ ಜೊತೆ ಗುಡಿಸಲೊಳಗೆ ಬಂಧಿ.ಚಿಂದಿ ಕೌದಿಯೊಳಗೆ ದಿನವೂಏಕಾದಶಿಯ ಮಂದಿಕೊಡಲೇನಿದೆ  ಬಯಲ ಸೂರ್ಯನ ಹೊರತು ಇಂದು ಶಿವರಾತ್ರಿಕಣ್ಣ ಹನಿಗಳ ತುಂಬಾನಿನ್ನವೇ ಬಿಂಬಅಲ್ಲೇ ಅರ್ಚನೆಗೈವೆ,ಕಣ್ಣೀರಲೇ ಮಹಾ ಮಜ್ಜನಕೊಡಲೇನಿದೆ ಹಸಿವ ಬಿತ್ತಿಬದುಕ ಸುಟ್ಟ ಬೂದಿಯ ಹೊರತು ನನ್ನವರಕರುಳ ಕೂಗೇ ಮಹಾ ಮಂತ್ರಾರ್ಚನೆಕಂಗಳ ಗುಳಿಯಲಿ ಆಸೆಯ ಹೊಳಪಿತ್ತಕರುಳಿನ ಜೊತೆಗಾರ ನಿನಗೆಕೊಡಲೇನಿದೆ ಹಸಿವಿನ ಹೊರತು ಶಿವರಾತ್ರಿ ಭಾರತಿ ಅಶೋಕ್

ಭಾರತಿ‌ ಅಶೋಕ್ “ಆನು ಒಲಿದಂತೆ” Read Post »

ಕಾವ್ಯಯಾನ

ಪ್ರೊ. ರಾಜೇಶ್ವರಿ ಶೀಲವಂತ ಪುಣೆ ಅವರ ಕವಿತೆ “ಪ್ರೀತಿ”

ಕಾವ್ಯ ಸಂಗಾತಿ ಪ್ರೊ. ರಾಜೇಶ್ವರಿ ಶೀಲವಂತ ಪುಣೆ ಪ್ರೀತಿ ನನ್ನ ಪ್ರೀತಿಗಾಗಿಕಾಯಬೇಕಿಲ್ಲ ನೀನುಬೂದಿ ಮುಚ್ಚಿದ ಕೆಂಡನಿನ್ನ ನೆನಪಲ್ಲಿ ನಾನು ಯಾವುದೇ ಅಂತಸ್ತಿಲ್ಲವಯಸ್ಸಿನ ಬಂಧನವಿಲ್ಲಬಡತನ ಸಿರಿತನದ ಅರಿವಿಲ್ಲಉಚ್ಛ ನೀಚ ಭೇದವಿಲ್ಲ ಇಬ್ಬರ ಮನಗಳ ಬೆಸುಗೆಇದಕ್ಕೆ ಬೇಕಿಲ್ಲ ಒಪ್ಪಿಗೆಅವಿರತ ಭಾವನೆಗಳ ತೃಪ್ತಿಗೆಪರಸ್ಪರ ಕಾತರವೇ ಅಪ್ಪುಗೆ ಇರುವುದೆಲ್ಲ ಒಲುಮೆಭಾವಗಳ ಚಿಲುಮೆವಾತ್ಸಲ್ಯದ ಆರುಮೆತೋರಿಕೆಗಲ್ಲ ಈ ನಲುಮೆ ನಿನ್ನಯ ಅವ್ಯಕ್ತ ಪ್ರೀತಿನಿರಂತರ ಆಸರೆಯ ಆಸಕ್ತಿಆಶಿಸುವೆ ನಿನ್ನಿಂದ ನಾನೆಂದುಅಂದು ಇಂದೂ ಎಂದೆಂದು . ಪ್ರೊ. ರಾಜೇಶ್ವರಿ ಶೀಲವಂತ ಪುಣೆ.

ಪ್ರೊ. ರಾಜೇಶ್ವರಿ ಶೀಲವಂತ ಪುಣೆ ಅವರ ಕವಿತೆ “ಪ್ರೀತಿ” Read Post »

You cannot copy content of this page

Scroll to Top