ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಲೋಕದ ಡೊಂ(ಕೊಂ)ಕು”ಎಮ್ಮಾರ್ಕೆ ಕವಿತೆ

ಕಾವ್ಯ ಸಂಗಾತಿ “ಲೋಕದ ಡೊಂ(ಕೊಂ)ಕು” ಎಮ್ಮಾರ್ಕೆ ಕವಿತೆ ತನು ಮನ ಸಂತೈಸಿಕೊಂಡುಸುಮ್ಮನಿರಬೇಕಷ್ಟೇ ಇಲ್ಲಿ,ಮುಖಕ್ಕಿಂತ ಮುಖವಾಡವಮುದ್ದಿಸುವವರೇ ಹೆಚ್ಚು ಲೋಕದ ಡೊಂಕು ತಿದ್ದುವಹುದ್ದೆಗಳೆಲ್ಲವು ಖಾಲಿ ಇಲ್ಲಿ,ಕೊಂಕು ಮಾತಿನ ರೂಪದಿಸಿಗುವ ಸಂಬಳವೇ ಹೆಚ್ಚು ಮುಂಗಡದ ಜೊತೆ ಜೊತೆಗೆಕೈಗಡವ ನೀಡುವರು ಇಲ್ಲಿ,ಇಷ್ಟಾದರೂ ಈ ನೌಕರಿಯಬೇಡ ಎನುವವರೇ ಹೆಚ್ಚು ದಂತಕಥೆಗಳು ಕಣ್ಮುಂದಿವೆಬೇತಾಳ ಬೆನ್ನ ಹಿಂದೆ ಇಲ್ಲಿ,ಹೊತ್ತ ವಿಕ್ರಮಗರಿಗಿಂತಲೂಹೂತ ಅಕ್ರಮಗಳೇ ಹೆಚ್ಚು ಅಂಕು ಡೊಂಕುಗಳೇ ಮನೆಮನಗಳ ಸಿಂಗರಿಸಿವೆ ಇಲ್ಲಿ,ಲೋಕೋದ್ಧಾರ ಬಯಸದೇಹುಟ್ಟಿದ ಹುಳುಗಳೇ ಹೆಚ್ಚು ದೂರು ಇಲ್ಲ ದೂರುವರಿಲ್ಲದರ್ಬಾರು ನಡೆದಿದೆ ಇಲ್ಲಿ,ಕಾರ್ಯದ ಭಾರಕ್ಕಿಂತಲೂಕಾರುಬಾರುಗಳೇ ಹೆಚ್ಚು ನಾನು ನಾನಾಗುವುದ ಬಿಟ್ಟುಎಲ್ಲರೊಳಗೊಂದಾದೆ ಇಲ್ಲಿ,ಮಂಕುತಿಮ್ಮನ ತುಸುಮತಿಗೆಮಂಕು ಕವಿದಿಹುದೇ ಹೆಚ್ಚು ಎಮ್ಮಾರ್ಕೆ

“ಲೋಕದ ಡೊಂ(ಕೊಂ)ಕು”ಎಮ್ಮಾರ್ಕೆ ಕವಿತೆ Read Post »

ಅನುವಾದ

ಅಶ್ವಥಿಯವರಮಲಯಾಳಂ ಕವಿತೆ “ಮನಸ್ಸು!” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ.

ಅನುವಾದ ಸಂಗಾತಿ ಮನಸ್ಸು ಮಲಯಾಳಂ ಮೂಲ: ಅಶ್ವಥಿಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.   ಮನ——ಯಾವುದೇ ಸಮಯದಲ್ಲಿಯೂ… ಜೇಡರ ಬಲೆ ಕಟ್ಟಿರುವಒಂದು ‘ಮನಸ್ಸು’ನನಗೆ ಉಂಟು…! ನೀನು ನನ್ನ ಬಾಳಿನಿಂದಹೋದ ಮೇಲೆತೆರೆದು ನೋಡಲುಉದಾಸಿನ ಮಾಡಿರುವ ಮನಸ್ಸು..! ಒಮ್ಮೆ ತೆರೆದುನೋಡಬೇಕು ಎಂದು‘ಆಸೆ’ ಹೊಂದಿದಾಗ ಎಲ್ಲಾನೀನು ಕೊನೆದಾಗಿ ಹೇಳಿದನುಡಿಯು ನೆನಪಿಗೆಬರುತ್ತದೆ…! ‘ಎಲ್ಲಾ ಮರೆಯಬೇಕು…’..! ಸರಿ…..,ನೀನೇ ಇಲ್ಲಾದೇಇರುವಾಗ ನನಗೆಯಾವ‘ ನೆನಪು’ಗಳು……?!! ಮಲಯಾಳಂ ಮೂಲ: ಅಶ್ವಥಿಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.

ಅಶ್ವಥಿಯವರಮಲಯಾಳಂ ಕವಿತೆ “ಮನಸ್ಸು!” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ. Read Post »

ಕಾವ್ಯಯಾನ

“ತಾಯಿ ದೇವರಲ್ಲವೇ?” ಲೇಖನ ವನಜ ಮಹಾಲಿಂಗಯ್ಯ

ಜೀವನ ಸಂಗಾತಿ ವನಜ ಮಹಾಲಿಂಗಯ್ಯ “ತಾಯಿ ದೇವರಲ್ಲವೇ?” ಒಂದು ಪುಟ್ಟ ಕುಟುಂಬ ತಂದೆ ತಾಯಿ ಅಣ್ಣ ತಂಗಿ. ತಂದೆ ತಕ್ಕಮಟ್ಟಿಗೆ ಆಸ್ತಿ ಮಾಡಿ ಮಕ್ಕಳನ್ನು ಓದಿಸಿ  ಚನ್ನಾಗಿಯೇ ಬೆಳೆಸಿರುತ್ತಾರೆ.    ತಂದೆಒಂದುವ್ಯಾಪಾರದಲ್ಲಿತೊಡಗಿರುತ್ತಾರೆ.ಯಾವುದಕ್ಕೂ ಕೊರತೆಯಿಲ್ಲದೆ ಆ ಕುಟುಂಬ ಖುಷಿಯಲ್ಲಿರುತ್ತದೆ.ಮಗಳನ್ನು ಒಂದು ಒಳ್ಳೆಯ ಕುಟುಂಬದ ಹುಡುಗನಿಗೆ ಮದುವೆ ಮಾಡಿ ಕೊಡುತ್ತಾರೆ. ಮನೆಯ ಯಜಮಾನನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಮರಣ ಹೊಂದುತ್ತಾರೆ. ತಾಯಿ ಮಗ ಮನೆಯಲ್ಲಿ ಇಬ್ಬರೇ ಉಳಿಯುತ್ತಾರೆ.ತಾಯಿ ಮಗನನ್ನು ಮದುವೆ ಮಾಡಲು ಪ್ರಸ್ತಾಪಿಸುತ್ತಾರೆ. ಮಗನು ಸಹ ಒಪ್ಪಿಕೊಳ್ಳುತ್ತಾನೆ . ಮಗನು ತಂದೆಯ ವ್ಯಾಪಾರದ ಕಡೆ ಗಮನಹರಿಸಿ ಜವಾಬ್ದಾರಿಯಿಂದಲೇ ದುಡಿಯುತ್ತಿರುತ್ತಾನೆ.ಒಂದು ಒಳ್ಳೆಯ ಸಂಬಂಧದಿಂದ ಹೆಣ್ಣು ತಂದು ತಾಯಿ ಮಗನಿಗೆ ಮದುವೆಯನ್ನು ಮಾಡುತ್ತಾರೆ. ಪ್ರತಿದಿನ ಮಗ ತನ್ನ ಕೆಲಸದ ಕಡೆ ಹೆಚ್ಚಿನ ಗಮನಹರಿಸಿ ಚನ್ನಾಗಿಯೆ ದುಡಿಯುತ್ತಿರುತ್ತಾನೆ. ಮನೆಯಲ್ಲಿ  ಮನೆಯ ಕೆಲಸದ ನಂತರ ಖಾಲಿ ಕೂತಿದ್ದ  ಅವನ ಹೆಂಡತಿಗೆ ಅತ್ತೆಯ ಬಗ್ಗೆ ಏನೋ ಒಂದು ತರಹದ ತಾತ್ಸಾರ ಮನೋಭಾವ. ಪ್ರತಿದಿನ ಅತ್ತೆಯೊಂದಿಗೆ ಜಗಳ ಮಾಡಿ ಗಂಡ ಮನೆಗೆ ಬಂದ ತಕ್ಷಣ ಅವನಿಗೆ ಒಂದಕ್ಕೆ ಹತ್ತು ಸೇರಿಸಿ ಹೇಳುವುದು, ಆದರೆ ಮಗನಿಗೆ ತಾಯಿಯ ಮೇಲೆ ಅಪಾರವಾದ ಪ್ರೀತಿ , ಗೌರವ. ಅವನು ಹೆಂಡತಿಗೆ ನೀನು ಹೊಂದಾಣಿಕೆ ಮಾಡಿಕೊಂಡು ಹೋಗು ಅಮ್ಮ ವಯಸ್ಸಾದವರು ಅವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ನಾನಲ್ಲದೇ ನನ್ನಮ್ಮನನ್ನು ಯಾರು ನೋಡಿಕೊಳ್ಳುತ್ತಾರೆಂದು ತಿಳಿ ಹೇಳಿ ತನ್ನ ಕೆಲಸಕ್ಕೆ ಹೋಗುತ್ತಿದ್ದ. ಆದರೆ ಅವನ ಹೆಂಡತಿ ಮಾತ್ರ ಅತ್ತೆಗೆ ಹಿಂಸೆ ಮಾಡುತ್ತಿದ್ದಳು.ಊಟ ಕೊಡದೆ  ತಿಂಡಿ ಕೊಡದೆ ಅವರನ್ನುಹಸಿವಿನಿಂದ ನರಳಿಸುತ್ತಿದ್ದಳು.ವಯಸ್ಸಾದ ತಾಯಿ ಹಸಿವಿನಿಂದ ಅರೋಗ್ಯ ಕೆಟ್ಟು ಹಾಸಿಗೆ ಹಿಡಿದು , ನಿದ್ದೆ ಮಾಡುವಾಗ ಏನೇನೋ ಬಡಬಡಿಸುತ್ತಿದ್ದಳು.ಪಾಪ ಮಗ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ಔಷದೋಪಚಾರ ಮಾಡಿಸುತ್ತಿದ್ದ ,ಆದರೆ  ತನ್ನ ಕೆಲಸದ ಒತ್ತಡದಿಂದ ಹೆಂಡತಿ ಏನು ಮಾಡುತ್ತಾಳೆಂದು  ಗಮನಹರಿಸಲಿಲ್ಲ.  ಒಂದು ದಿನ ಹೆಂಡತಿ ರೀ ನಿಮ್ಮ ಅಮ್ಮ ನಿದ್ದೆಯಲ್ಲಿ ಏನೇನೋ ಮಾತನಾಡುತ್ತಾರೆ ಅವರಿಗೆ ತಲೆ ಸರಿಯಿಲ್ಲ ಅನ್ನಿಸುತ್ತೆ, ಮಾನಸಿಕ ಅಸ್ಪತ್ರೆಗೆ ಸೇರಿಸೋಣ ಅಂದಳು. ಆಗ ಮಗ ಹೆಂಡತಿಗೆ ನಿನಗೆ ತಲೆ ಕಟ್ಟಿದೆ ಅಮ್ಮನಿಗಲ್ಲ ಅಂದ. ಅದರೂ ಅವಳು ಗಂಡನಿಗೆ ಒತ್ತಾಯ ಮಾಡಿ ನೀವೇನು ಬರಬೇಡಿ ನಾನೆ ಕರೆದುಕೊಂಡು ಹೋಗುವೆ ಅಂತ ಹೇಳಿ ಅತ್ತೆಯನ್ನು ಕರೆದುಕೊಂಡು ಹೋಗಿ ವೃದ್ಧಾಶ್ರಮಕ್ಕೆ ಸೇರಿಸಿ ಬಂದಳು. ಸಂಜೆ ಬಂದು ಗಂಡನಿಗೆ,  ಡಾಕ್ಟರ್ ಹೇಳಿದರು ಅತ್ತೆ  ಗುಣವಾಗುವವರೆಗೆ ಆಸ್ಪತ್ರೆಯಲ್ಲಿಯೇ ಇರಬೇಕಂತೆ, ನಾವುಗಳು ಪದೇ ಪದೇ ಹೋಗಬಾರದಂತೆ, ಅವರೆ ಕಾಲ್ ಮಾಡಿ ತಿಳಿಸುತ್ತಿರುತ್ತಾರಂತೆಅಂತ ಹೇಳಿದಳು.  ಕುರುಡು ಪ್ರೀತಿಯನ್ನು ಅರಿಯದ ಅವನು ಹೌದಾ ಏನಾದರಾಗಲಿ ಅಮ್ಮ ಗುಣವಾಗಿ ಬೇಗ ಮನೆ ಬಂದರೆ ಸಾಕು. ಅವರನ್ನು ಬಿಟ್ಟಿರಲು ಸಾಧ್ಯವಿಲ್ಲ ಅಂದು ತನ್ನ ಕೆಲಸದಲ್ಲಿ ನಿರತನಾದ. ಹೀಗೆ ದಿನ ,ತಿಂಗಳುಗಳು ಕಳೆದವು. ಮಗನ ವ್ಯಾಪಾರದಲ್ಲಿ ಕುಂಠಿತವಾಗುತ್ತಾ ಬಂತು. ಗಾಡಿ, ಕಾರು ಸೈಟು ಎಲ್ಲವನ್ನೂ ಮಾರಿಬಿಟ್ಟ. ಇವೆಲ್ಲವು ಇಲ್ಲವಾದ ಮೇಲೆ ಹೆಂಡತಿ ಗಂಡನೊಡನೆ ಜಗಳಮಾಡಿಕೊಂಡು ಮನೆ ಬಿಟ್ಟು ಹೋದಳು.ಅಗ ನೆನಪಾಗಿದ್ದು ಮಾತ್ರ ಅಮ್ಮ ಅಮ್ಮ ಅಮ್ಮ.ಅವಳಿರುವುದುಯಾವ ಆಶ್ರಮ  ಗೊತ್ತಿಲ್ಲ  ಅಮ್ಮನ ಪೋಟೋ ಹಿಡಿದು ಹುಡುಕುತ್ತಾ ಹೋದ. ಕೊನೆಗೆ ಒಂದು ಆಶ್ರಮದಲ್ಲಿ ಹೇಳಿದರು ನಿಮ್ಮ ತಾಯಿಯನ್ನು ಒಬ್ಬ ವ್ಯಕ್ತಿ ಅವರ ಮನೆಗೆ ಕರೆದೊಯ್ದರು  ಅಂತ. ಅವರ ವಿಳಾಸ ಪಡೆದು ಹೋದ. ಅಲ್ಲಿ ಮನೆಯ ಹತ್ತಿರ ಬಾಗಿಲು ಬಡಿದ ಒಬ್ಬ ವ್ಯಕ್ತಿ ಬಂದು ಬಾಗಿಲು ತೆಗೆದ. ಯಾರು ಬೇಕು ಅಂದ. ಇವನು ಒಳಗೆ ಕಣ್ಣಾಡಿಸಿದ ಒಬ್ಬ  ವಯಸ್ಸಾದ ಮಹಿಳೆ ಬೆಳ್ಳಿ ತಟ್ಟೆ ಯಲ್ಲಿ ಊಟಮಾಡುತ್ತಿದ್ದಳು. ಮನೆಯ ಯಜಮಾನ ಕೇಳಿದ ಯಾರು ಬೇಕಪ್ಪಾ ಅಂತ. ಅವನಿಗೆ ಮಾತು ಬರುತ್ತಿಲ್ಲ, ಓಡಿ ಹೋಗಿ ಅವಳ ಕಾಲಿಗೆ ಬಿದ್ದು ಕ್ಷಮಿಸಮ್ಮ ಎನ್ನುತ್ತಾ ಗೋಳಾಡಿದ. ತಾಯಿಗೆ ಏನೂಂತ ಗೊತ್ತಾಗಲೇ ಇಲ್ಲ. ಆಗ ಮನೆಯ ಯಾಜಮಾನನಿಗೆ ಹೇಳಿದ  ನನ್ನ ತಾಯಿ ಇವರು ಕಳಿಸಿಕೊಡಿ ನನ್ನ ಜೊತೆ ಅಂದ. ಆ ಯಜಮಾನ ಇಲ್ಲಪ್ಪ ಆಗಲ್ಲ, ನನಗೆ ತಂದೆ ತಾಯಿ ಯಾರೂ ಇಲ್ಲ, ಈ ತಾಯಿಯನ್ನುನಾನು ನನ್ನತಾಯಿಯೆಂದು  ಕರೆದು ಕೊಂಡು ಬಂದೆ,  ಈ ಮಹಾತಾಯಿ ಬಂದ ಮೇಲೆ ನನ್ನ ಬದುಕೇ ಬದಲಾಯಿತು,  ಇವತ್ತು ನಾನು ಇಷ್ಟೊಂದು  ಚನ್ನಾಗಿರುವೆ ಕಾರು ಬಂಗಲೆ ಎಲ್ಲವೂ ಈ ತಾಯಿಯ ಕಾಲ್ಗುಣ , ಈಕೆ ದೇವತೆ ನಾನು ಕಳಿಸುವುದಿಲ್ಲ ಅಂದ.   ನಾನು ನನ್ನ ಮನೆಯಲ್ಲಿ ಎಲ್ಲವನ್ನು ಕಳೆದುಕೊಂಡೆ, ಈಗ ನನ್ನ ಹತ್ತಿರ ಏನೂ ಇಲ್ಲ, ನನಗೆ ಏನೂ ಬೇಡ ,ನಾನು ನನ್ನ ತಾಯಿಯ ಸೇವೆ ಮಾಡುತ್ತಾ ಇಲ್ಲಿಯೇ ಇರಬಹುದಾ ಎಂದಾಗ ತಾಯಿ ಮಗನನ್ನು ತಬ್ಬಿಕೊಂಡಳು. ಯಜಮಾನ ಒಪ್ಪಿಕೊಂಡ.ಮಕ್ಕಳನ್ನು  ಹೊತ್ತು ಹೆತ್ತು, ಚಿಕ್ಕಂದಿನಿಂದ ಅವರ ಎಲ್ಲಾ ನಿತ್ಯಕಮ ೯ಗಳನ್ನು  ಸ್ವಚ್ಛ ಮಾಡಿ, ವಯಸ್ಸಿಗೆ ಬರೋ ತನಕ ಸಮಯಕ್ಕೆ ಸರಿಯಾಗಿ  ಊಟ ತಿಂಡಿ, ಬಟ್ಟೆ, ಒಳಿತು ಕೆಡಕು ಎಲ್ಲವನ್ನು ತಾಳ್ಮೆಯಿಂದ ನಿರ್ವಹಿಸಿ ತನ್ನನ್ನು ತಾನು ಸವೆಸಿಕೊಂಡ  ತಾಯಿ ಹೃದಯ ಕ್ಕೆ ಘಾಸಿಮಾಡುವ ಮಕ್ಕಳ ಸಂಖ್ಯೆ ಅತಿಯಾಗಿದೆ. ಇದಕ್ಕೆ ಮುಕ್ತಿ ಇಲ್ಲವೇ? ತಾಯಿ ದೇವರೆನ್ನುವುದು ಸುಳ್ಳಲ್ಲ  ಅಸೆ ಇಲ್ಲದೆ ಮಕ್ಕಳಿಗೋಸ್ಕರ ಬದುಕುವುದೇ ಅವಳು.ಯಾರೂ ತಾಯಿಯನ್ನ ದಿಕ್ಕರಿಸಬೇಡಿ.ಹೆಂಡತಿಯನ್ನು ನಿಮ್ಮಂತೆ ಮಾಡಿಕೊಳ್ಳಿ ಅವಳಂತೆ ನೀವು ಹೋಗಬೇಡಿ. ಹೆಂಡತಿಗೆ ಕೊಡುವ ಪ್ರೀತಿ ಹೆಂಡತಿಗೆ ಕೊಡಿ. ತಾಯಿಗೆ ಕೊಡುವ ಗೌರವ, ಪ್ರೀತಿ, ರಕ್ಷಣೆ ಮಗನೇ ಕೊಡಬೇಕಲ್ಲವೇ ? ಆಗ ಮಾತ್ರ ನೀವುಗಳು ಮಾಡುವ   “”Mothers day”” ಗೆ  ಆಥ೯ವಿದೆ. ವನಜ ಮಹಾಲಿಂಗಯ್ಯ.

“ತಾಯಿ ದೇವರಲ್ಲವೇ?” ಲೇಖನ ವನಜ ಮಹಾಲಿಂಗಯ್ಯ Read Post »

You cannot copy content of this page

Scroll to Top