ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಹೊಸ ಹೊತ್ತಿ-ಗೆ” ಕವಿತೆ, ಸುಮತಿ ನಿರಂಜನ

ಕಾವ್ಯ ಸಂಗಾತಿ ಸುಮತಿ ನಿರಂಜನ “ಹೊಸ ಹೊತ್ತಿ-ಗೆ” ಕವಿತೆ, ಇಷ್ಟು ಬೇಗ ಮುಗಿಯಿತೇಈ ಹೊತ್ತಿಗೆ?ದಿನಕೊಂದು ಪುಟವೆಂದುಪಟಪಟನೆ ಹಾರಿ ಹೋದವುಕೇಳಬಹುದೇ ಎಲ್ಲೆಂದು ?ಓದಲಾದೀತೇ ಎಲ್ಲವನು ?ಮುದುಡಿದ ನಾಯಿಕಿವಿಗಳುಖಾಲಿ ಕೆಲವು ಹಾಳೆಗಳುಕೆಲವು ಕಪ್ಪು ಕ್ಷಣಗಳುಕಣ್ಣೀರ ಕಲೆಗಳು ಕೆಲವುಕಸ್ತೂರಿ ಕಣಗಳು.. ಕಣಕ ಒಂದೇ ಎಲ್ಲರಿಗು ಆದರೆಹೂರಣವೆ ಬೇರೆ ಬೇರೆಬೇರೆ ಪರಿವಿಡಿ ಬೇರೆ ವಿಷಯಬೇರೆಯೇ ಆದಿ ಬೇರೆಯೇ ಅಂತ್ಯ!ತಿರುವಿ ಹಾಕಲಿಕ್ಕಿಲ್ಲ ಮತ್ತೊಮ್ಮೆಈ ರೂಲು ಮಾತ್ರ ಎಲ್ಲರಿಗು ಒಂದೇ !ಹೊತ್ತಿಗೆಯ ಕೊನೆಗೆಹಾಕಲೇಬೇಕು ರದ್ದಿಗೆ…ಹೊರುವವರು ಯಾರೆಸತ್ತ ಪುಸ್ತಕದ ಹೊರೆ ? ತುಸುವೆ ತೆರೆದಿದೆ ಕದವುಹಾರಿ ಬರಲಿವೆ ಇತ್ತಗರಿಗೆದರಿ ಪುಟಗಳುಗರಿಗರಿ ಹೊಸ ಘಮಲುಹೊತ್ತು, ಏನಿದೆ, ಏನಿಲ್ಲಹೊತ್ತಿಗೆಯ ಒಳಗೆ ?ಏನು ಬರೆದಿದೆಯೋಯಾರು ಬರೆದಿಹರೋಉಳಿದಿಹುದೇ ನನಗಾಗಿಒಂದಿಷ್ಟು ಖಾಲಿ ಜಾಗಗೀಚಿ ಪುಟಗಳ ಮಧ್ಯೆಇಡುವೆನೊಂದು ನವಿಲುಗರಿನೋಡಬೇಡವೇ ಇಡುವುದೆ ಮರಿ ? ಸುಮತಿ ನಿರಂಜನ

“ಹೊಸ ಹೊತ್ತಿ-ಗೆ” ಕವಿತೆ, ಸುಮತಿ ನಿರಂಜನ Read Post »

ಕಾವ್ಯಯಾನ

“ವರುಷ ತಂದಿತ್ತೇ ಹರುಷ?”ಹಮೀದ್ ಹಸನ್ ಮಾಡೂರು.

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು. “ವರುಷ ತಂದಿತ್ತೇ ಹರುಷ?” ಹೊಸತಾದರೇನು-ಬರುವ ಹೊಸ ವರುಷ,ಹಳೇತಾದರೇನು-ಕಳೆದೋದ ಪ್ರತಿ ನಿಮಿಷ,ಹೊತ್ತು ತರಲಾರದೆಂದು-ನಿಮಗದು,ಹೊಸ ಹೊಸ ಹರುಷ,! ಬೇವರ ಇಳಿಸಿ ಮೈ ಬಗ್ಗಿಸಿ-ದುಡಿಯಲಾಗದವನೇ ಮಹಾ ದಡ್ಡಬಡಿಸಲಾರದವನು ಅನ್ನ-ಹಸಿವು ನೀಗಿಸಲಾರದ ಶತ ಹೆಡ್ಡ,ಮಸ್ತಕದೊಳು ಏನಿಲ್ಲ ಖಾಲಿ-ಬೆಳೆಸಿದರೇನು ದೇಹ ಗಾತ್ರ ದೊಡ್ಡ.!? ಹಮೀದ್ ಹಸನ್ ಮಾಡೂರು.

“ವರುಷ ತಂದಿತ್ತೇ ಹರುಷ?”ಹಮೀದ್ ಹಸನ್ ಮಾಡೂರು. Read Post »

ಕಾವ್ಯಯಾನ

“ಮುಲಾಮು” ಕವಿತೆ ವಾಣಿ ಯಡಹಳ್ಳಿ ಮಠ

ಕಾವ್ಯ ಸಂಗಾತಿ ವಾಣಿ ಯಡಹಳ್ಳಿ ಮಠ “ಮುಲಾಮು” ಕವಿತೆ ಕೆಲ ನೋವುಗಳ ಗಾಯ ಕಾಣಿಸುವುದಿಲ್ಲಕೆಲ ಶಿಕ್ಷೆಗಳಿಗೆ ಕಾರಣಗಳಿರುವುದಿಲ್ಲಪ್ರೀತಿ ಹುಟ್ಟಲು ನೆಪವು ಬೇಕಿಲ್ಲದ ಹಾಗೆಯೇಅಗಲಿಕೆಗೆ ಯಾವ ತಪ್ಪುಗಳೂ ಕಾರಣವಾಗುವುದಿಲ್ಲ ಕೆಲವರು ಜೀವನ ಪರ್ಯಂತ ಜೊತೆಗುಳಿಯುವುದಿಲ್ಲವಷ್ಟೇಅವರ ನೆನಹು ಮುಲಾಮಿನಂತಿರುತ್ತದೆಯಷ್ಟೇ ವಾಣಿ ಯಡಹಳ್ಳಿ ಮಠ

“ಮುಲಾಮು” ಕವಿತೆ ವಾಣಿ ಯಡಹಳ್ಳಿ ಮಠ Read Post »

You cannot copy content of this page

Scroll to Top