ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ನನ್ನವರು ಸಾಯುವುದು
 ಗುಂಡಿನಿಂದಲ್ಲ
ಎದೆ ಹಣೆ ಸೀಳಿದ್ದು
ಪಿಸ್ತೂಲು ಬಂದೂಕಿನಿಂದಲ್ಲ.
ರುಂಡ ಮುಂಡ ಕತ್ತರಿಸಿದ್ದು
ಚಾಕು ಲಾಂಗುಗಳಲ್ಲ.
ಸತ್ಯವಂತ ಸಾಯುವುದು
ದುಷ್ಟ ಹಂತಕರಿಂದಲ್ಲ.
ಸಜ್ಜನ ಹೇಡಿಗಳಿಂದ

ಅವರು ಇದ್ದಾಗ ಬೆಂಬಲಿಸಲಿಲ್ಲ.
ಬೆನ್ನು ತಟ್ಟಿ ಕೈಜೋಡಿಸಲಿಲ್ಲ.
ಸತ್ತಾಗ ಬಿಕ್ಕಿ ಬಿಕ್ಕಿ ಅಳುತ್ತೇವೆ.
ಮಾನವ ಸರಪಳಿ ಪ್ರತಿಭಟನೆ.
ಟಿವಿ ಪತ್ರಿಕೆಯಲ್ಲಿ ಭಾರಿ ಸುದ್ಧಿ
ಆಕ್ರೋಶ ಅಬ್ಬರ
ಹಂತಕರ ಹಿಡಿಯಲು ಸಮಿತಿ
ಸರಕಾರ ಮಲಗುತ್ತದೆ.
ಕೊಳಕು ವ್ಯವಸ್ಥೆ ನಾವೂ ಮಲಗುತ್ತೇವೆ .

ಸತ್ಯವಂತ ಸಾಯುತ್ತಾನೆ.
ಬದುಕಿನಿದ್ದಕ್ಕೂ ಹೋರಾಡುತ್ತಾನೆ
ಸತ್ಯ ಶಾಂತಿ ಹಕ್ಕಿಗಾಗಿ.
ಇದ್ದಾಗಲೂ ಒಬ್ಬಂಟಿಗ
ಸತ್ತಾಗಲೂ ಒಬ್ಬನೇ
ಸಾವು ಬೆನ್ನು ಬಿಡಲಿಲ್ಲ.
ಸತ್ತವರಿಗೆ ಸಂತನ ಪಟ್ಟ ಕಟ್ಟಿ.
ಕೊರಳಲ್ಲಿ ಬೋರ್ಡ್ ಹಾಕುತ್ತೇವೆ.

ಅವರು ಸಾಯುವುದು ಗುಂಡಿನಿಂದಲ್ಲ.
ನಮ್ಮ ಉದಾಸೀನ ಮೌನದಿಂದ.


About The Author

13 thoughts on “ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು””

  1. ಹೌದು… ನಿಜ
    ವಾಸ್ತವದ ಕನ್ನಡಿಯನ್ನು ತೋರಿಸಿ ದ್ದೀರಿ

  2. ಮಲ್ಲಿಕಾರ್ಜುನ ಶೆಟ್ಟರ

    ಎಷ್ಟು ಅದ್ಭುತ ಅನುಭವದ ಕವನ ಕಾವ್ಯ

  3. ರವೀಂದ್ರ ಲಠ್ಠೆ

    ಸತ್ಯ ಹೇಳುವುದೇ ಪಾಪವೆನಿಸಿದೆ ನಿಮ್ಮ ಕವನ ಓದಿ

  4. ಸಾಯುವುದು ಗುಂಡಿನಿಂದಲ್ಲ ಉದಾಸೀನದಿಂದ ಎಂಬುದು ನಿಜಕ್ಕೂ ಸತ್ಯವಾದ ಮಾತು .

  5. ವಿಜಯಲಕ್ಷ್ಮಿ ಹಂಗರಗಿ ಶಹಾಪುರ

    ನಿಜಕ್ಕೂ ಸತ್ಯವಾದ ಸಂಗತಿ ನೇರ, ದಿಟ್ಟ ನುಡಿ

  6. ಗೀತಾ ಪಾಟಿಲ ಹುಬ್ಬಳ್ಳಿ

    ಅತ್ಯುತ್ತಮ ಕವನ ಸರ್
    ಪ್ರಕಟ ಮಾಡಿದ ಮಧು ಸರ್ ಗೆ ನಮಸ್ಕಾರ

  7. ಕಾಮ್ರೇಡ್ ಸುಜಾತ ಕೋಲಾರ

    ಕ್ರಾಂತಿಕಾರಿ ಚಳವಳಿಯ ಅಸಹಾಯಕ ಕವನ ಸರ್ ಲಾಲ್ ಸಲಾಂ

Leave a Reply

You cannot copy content of this page

Scroll to Top