ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಧಕಾರದ ಮಧ್ಯೆ
 ದೀಪದಂತೆ ಬೆಳಗುವ,
ಜೀವನದ ದಾರಿಗೆ
 ದಿಕ್ಕು ತೋರಿಸುವ ಬೆಳಕು
ಆದರ್ಶ,

ಮನಸ್ಸಿನ ಮೌನದಲ್ಲಿ
ಮೂಡುವ ನಿಶ್ಶಬ್ದ ಶ
ಕ್ತಿಯ ಸಂಕೇತ.
ಲಾಭದ ಲೆಕ್ಕವಿಲ್ಲದೆ
ನಡೆಯುವ ಪಥ,
ಭಯದ ನೆರಳನ್ನೂ
 ಮೀರಿ ನಿಲ್ಲುವ ಧೈರ್ಯ,
ಆದರ್ಶ.

ಸತ್ಯದ ಮಾತಿಗೆ  ಸೋಲುವ
ಬೆಲೆ ಕೊಡುವ  ಅನರ್ಘ್ಯ
ಹೃದಯಕ್ಜೆ ದೃಢ ನಿರ್ಣಯ
ಹೋರಾಟಕ್ಕೆ ಎದೆಗೊಟ್ತು
ನಿಲ್ಲುವ ಅಸೀಮ ಬಲ
ಆದರ್ಶ.

ಕಷ್ಟದ ಕಲ್ಲುಬಂಡೆಗಳ
ಮೇಲೆ ನಡೆದು,
ನೋವಿನ ಮುಳ್ಳುಗಳ
ಸಹಿಸಿಕೊಂಡು, ಉಂಡು
ನ್ಯಾಯದ ದಾರಿಗೆ ತಡೆಗೋಡೆ
ಮಾನವತೆಯ
ಜೀವಂತ ರೂಪ.
ಆದರ್ಶ

ಖರೀದಿಯಾಗದು,
 ಹುದ್ದೆಗೂ ಸೀಮಿತವಲ್ಲ,
ಪ್ರತಿ ಸಣ್ಣ ಕಾರ್ಯದಲ್ಲೂ
ನೈತಿಕತೆಯ ಸುವಾಸನೆ
ಹರಡುವ ಗುಣ.
ಬಿದ್ದಾಗ ಎತ್ತಿಕೊಳ್ಳುವ
ಸೋತಾಗ ಧೈರ್ಯ ತುಂಬುವ
ನೋಟದಲ್ಲಿ,
ಅನ್ಯಾಯದ ಎದುರು
ಮೌನ  ಮುರಿಯುವ
 ಅಸ್ತಿತ್ವ ತೋರುತ ನಿಲುವುದು.
ಆದರ್ಶ

ಸಾವಿರ  ಜ ನಕೆ ಪ್ರೇರಣೆ,
ಸತ್ಯ ಶುದ್ಧ ಚಿಂತನೆ
ಸಮಾಜದ ಭವಿಷ್ಯ
ನಿರ್ಮಾಣ.
ಸುಳ್ಳಿನ ಸೌಲಭ್ಯವಲ್ಲ,
ಸತ್ಯದ ಕಠಿಣತೆ
ಉಸಿರಾಗಿಸಿಕೊಳ್ಳುವುದೇ
ಆದರ್ಶ


About The Author

Leave a Reply

You cannot copy content of this page

Scroll to Top