ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಸಿನೆಮಾ

“ಕಹಿ ಕಾಫಿ – ಸಿಹಿ ನಗು” ಕಿರು ಚಿತ್ರದ ಸ್ಕ್ರಿಪ್ಟ್,ವಿಜಯ್‌ ಅಮೃತರಾಜ್‌ ಅವರಿಂದ

ಸಿನಿ ಸಂಗಾತಿ ವಿಜಯ್‌ ಅಮೃತರಾಜ್‌ “ಕಹಿ ಕಾಫಿ – ಸಿಹಿ ನಗು” ಕಿರು ಚಿತ್ರದ ಸ್ಕ್ರಿಪ್ಟ್, ದೃಶ್ಯ: 1. ರಂಗಸ್ಥಳ: ಕಾಫಿ ಕೆಫೆ. (ಕೆಫೆಯ ಟೇಬಲ್. ಸಿರಿ ತನ್ನ ಕಾಫಿಯನ್ನು ಹಿಡಿದಿದ್ದಾಳೆ. ವಿಜಯ ತುಂಟ ನಗುವಿನೊಂದಿಗೆ ಆಕೆಯ ಕಾಫಿಗೆ ಕೈ ಹಾಕುತ್ತಾ ಕೆಣಕುತ್ತಿದ್ದಾನೆ.) ಸಿರಿ: ಓಹ್! ವಿಜಯ! ನೀವು ನನ್ನ ಕಾಫಿಯನ್ನು ಮುಟ್ಟುವ ಸಾಹಸ ಮಾಡಿದರೆ, ಈ ಕಾಫಿ  ಕಹಿಯಂತೆ ,ನಿಮ್ಮ ಮುಂದಿನ ಪರಿಸ್ಥಿಯೂ ಕಹಿಯಾಗುತ್ತೆ ನೋಡು! ( ನಸು ನಕ್ಕಳು) ವಿಜಯ: (ಸಿರಿ ನಸು ನಕ್ಕಿದ್ದನ್ನು ಗಮನಿಸಿ) ಸಿರಿ, ಆ ಧಮ್ಕಿ ನಿಮ್ಮ ಕೋಪದ ಕಹಿಯೋ ಅಥವಾ ಹಾಸ್ಯದ ಖಾರವೋ? ಗೊತ್ತಿಲ್ಲ ಆದರೆ ಈಗ ನನಗೆ ಒಂದು ಗಾದೆ ನೆನಪಾಗುತ್ತಿದೆ, “ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ” ಎಂಬಂತೆ, ನನಗೆ ನಿಮ್ಮ ನಗುವಿನ ಮೇಲೂ ಆಸೆ, ಈ ಕಾಫಿಯ ಕಹಿಯ ಮೇಲೂ ಪ್ರೀತಿ! ಗೊತ್ತಾ ಏನಿವಾಗ? ಸಿರಿ: ಈಗ…ಏನಾ? ನಿಮ್ಮ ಕಪ್‌ನಲ್ಲಿ ಡೈನೋಸಾರ್ ಮೊಟ್ಟೆಯ ಸಿಪ್ಪೆ ಸಿಕ್ಕಿತೇ? ವಿಜಯ: ಇಲ್ಲ, ನನ್ನ ಕಹಿ ಕಾಫಿ ನನ್ನನ್ನು ನೋಡಿ ಗೊಣಗುತ್ತಿದೆ: “ನಾನು ಇಲ್ಲಿ ವಿಜಯನ ಅಪ್ರಬುದ್ಧ ಹಾಸ್ಯಕ್ಕೆ ಸಾಕ್ಷಿಯಾಗುವ ಶಿಕ್ಷೆ ಅನುಭವಿಸುತ್ತಿದ್ದೇನೆ! ಬೇಗ ನನ್ನ ಕುಡಿದು ನನ್ನ ಕಷ್ಟ ಮುಗಿಸಿ ಅಂತಾ!” ಸಿರಿ: (ಟಿಶ್ಯೂ ಪೇಪರ್ ತೆಗೆದುಕೊಂಡು) ವಿಜಯ, ಆ ಕಾಫಿಯ ಕಷ್ಟ ನೋಡಲು ನನಗೂ ಕಷ್ಟವಾಗುತ್ತಿದೆ. ಇಲ್ಲವಾದರೆ, “ಹತ್ತು ಸಲ ಹೇಳಿದ ಮಾತು ಕಲ್ಲಾಗಿ ಹೋದೀತು” ಎಂಬಂತೆ, ಆ ಕಹಿಯೆಲ್ಲ ನಿಮ್ಮ ಮಾತುಗಳಿಗೆ ಸೇರಿ ನಮ್ಮ ಸಂಭಾಷಣೆಯನ್ನೇ ಕಹಿ ಮಾಡಿಬಿಡುತ್ತೆ ಗೊತ್ತಾ?. ವಿಜಯ: (ತನ್ನ ಕಪ್ ಎತ್ತಿ ಸಿರಿ ಕಡೆಗೆ ಒಡ್ಡುತ್ತಾ) ಸರಿ! ಕವಿ ಡಿ.ವಿ.ಜಿ. ಅವರ ಕಗ್ಗ ಹೇಳುವಂತೆ: “ಬಾಳ ಪಥವಿದು, ನಗುತ ನಗುತ ನಡೆ”. ನಿಮ್ಮ ಕೈಯಿಂದ ಆ ಕಪ್ ಅನ್ನು ಒಂದುಸಲ ಮುಟ್ಟಿ ಜೊತೆಗೆ ಒಂದು ಸಿಹಿ ಮಾತು ಹೇಳಿದರೆ ಅದು ಆ ಕ್ಷಣವೇ ಸಿಹಿಯಾಗುತ್ತದೆ! ನಿಮ್ಮ ಕೈಯಿಂದ ಆ ಕಹಿ ಕಾಫಿಗೆ ಮುಕ್ತಿ ಸಿಗಲಿ, ಸಿರಿ!.. ಸರಿ ನಾ?. ಸಿರಿ: (ನಗುವನ್ನು ತಡೆಯಲಾಗದೆ, ಕಪ್ ಮುಟ್ಟಿ) ಸರಿ ಕಹಿ ಕಾಫಿ, ಈಗ ನೀನು “ಹೂವಿನಾಸರೆ ಗೂಡೆಗೆ ಸರಿ” ಎಂಬಂತೆ, ನನ್ನ ನಗುವಿನ ಆಸರೆಯಿಂದ ವಿಜಯನ ಮಾತಿನಷ್ಟೇ ಸಿಹಿಯಾಗು!. (ಸಿರಿ ದೂರ ಸರಿಯುತ್ತಾಳೆ. ವಿಜಯ ತನ್ನ ಕಾಫಿ ಮುಗಿಸುತ್ತಾನೆ.) ವಿಜಯ: (ಕುವೆಂಪು ಅವರ ಸಾಲುಗಳನ್ನು ನೆನಪಿಸಿಕೊಂಡು) ನೋಡಿದಿರಾ?‌ಸಿರಿ,  ನಿಮ್ಮ ನಗು, ಅದು “ಎಲ್ಲಿಯ ಆಸೆ, ಎಲ್ಲಿಯ ನಗುವು, ಬಾಳಿನ ಹೊಸ ಬೆಳಕು” ತಂದಿದೆ. ನನ್ನ ಕಪ್ ಖಾಲಿಯಾದರೂ ನಿಮ್ಮ ಕಿಲ ‌ಕಿಲ ನಗು ಈ ಕಪ್ ತುಂಬಿ ತುಳುಕುವಂತೆ ಮಾಡಿದೆ. ( ಬಿಲ್ ಬರುತ್ತದೆ – ₹ 340) ಸಿರಿ: ವಿಜಯ, ಕಾಫಿ ಕಹಿ ಇತ್ತು, ನಿಮ್ಮ ಮಾತು ಸಿಹಿ ಇತ್ತು. ಆದರೆ ಬಿಲ್ ಮಾತ್ರ “ಸತ್ತ ಮೇಲೆ ಸಂತೆ” ಎಂಬಂತೆ, ಊಹೆಗೂ ಮೀರಿದ ಕಹಿಯಾಗಿದೆ! ವಿಜಯ: ಮ್ಯಾನೇಜರ್‌, ಒಂದು ನಿಮಿಷ. ನಾವು ನಗುವಿನ ಮೂಲಕ ಕಾಫಿಯನ್ನು ಸಿಹಿಯಾಗಿ ಪರಿವರ್ತಿಸಿದ್ದೇವೆ. ಇನ್ನು ಕಾಫಿ ಕಹಿಯಲ್ಲ. ಹಾಗಾಗಿ, ನೀವು ನಮಗೆ ಕಹಿಯ ಕಾಫಿಗೆ ಹಾಕಿದ ದರವನ್ನು ಬದಲಾಯಿಸಿ, ಸಿಹಿಯಾದ ಕಾಫಿಯ ದರ ಮಾತ್ರ ಹಾಕಿ!. ಮ್ಯಾನೇಜರ್: (ನಗುತ್ತಾ) ಸಾರ್, ನಮ್ಮ ಕೆಫೆಯಲ್ಲಿ “ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಯುವುದು” ಆದರೆ ತಮಾಷೆಗೆ ನಿಮ್ಮಿಬ್ಬರಿಗೆ ₹ 40 ರಿಯಾಯಿತಿ ಕೊಡುತ್ತೇನೆ. ವಿಜಯ: (ಸಿರಿ ಕಡೆ ತಿರುಗಿ) ನೋಡಿದಿರಾ? ನಿಮ್ಮ ನಗು ಬಿಲ್‌ನ ಕಹಿಯನ್ನು ಕೂಡ ಸೋಲಿಸಿತು!. (ಹಣ ಪಾವತಿಸಿ, ಕೆಫೆಯಿಂದ ಹೊರಡುತ್ತಾರೆ.) – ವಿಜಯ ಅಮೃತರಾಜ್.

“ಕಹಿ ಕಾಫಿ – ಸಿಹಿ ನಗು” ಕಿರು ಚಿತ್ರದ ಸ್ಕ್ರಿಪ್ಟ್,ವಿಜಯ್‌ ಅಮೃತರಾಜ್‌ ಅವರಿಂದ Read Post »

ಕಾವ್ಯಯಾನ

ಮನುಷ್ಯನೇಕೆ ಹೀಗೆ? ಎಮ್ಮಾರ್ಕೆ

ಕಾವ್ಯ ಸಂಗಾತಿ ಎಮ್ಮಾರ್ಕೆ ಮನುಷ್ಯನೇಕೆ ಹೀಗೆ? ಯಾವುದೊಂದು ಬದಲಾಗಿಲ್ಲಮನುಷ್ಯನನ್ನು ಹೊರತು,ಎಷ್ಟು ಹೇಳಿದರೂ ಸಾಲದಲ್ಲಈ ಬಲುಬುದ್ಧಿಯ ಕುರಿತು ಹಕ್ಕಿಯಂತೆ ಹಾರಲು ಕಲಿತುಮೀನಿನಂತೆ ಈಜಲೂ ಬಲ್ಲ,ಮಂಗಳನ ಅಂಗಳದಿ ಇಳಿದುಎಲ್ಲವ ಕಂಡುಹಿಡಿದಿಹನಲ್ಲ ಮೋಡ ಬಿತ್ತನೆ ಮಾಡಿಹನಲ್ಲಮೌಢ್ಯತೆಯ ಬಿಡಲೇ ಇಲ್ಲ,ವಿಜ್ಞಾನ,ತಂತ್ರ ಬೆಳೆದಿವೆಯಲ್ಲಮಾಟ ಮಂತ್ರ ನಿಂತೇ ಇಲ್ಲ ಏನೆಲ್ಲ ಮನುಷ್ಯ ಮಾಡಿದನಲ್ಲಮನುಷ್ಯನಂತೆ ಬದುಕೇ ಇಲ್ಲ,ಹೊರಗಣ್ಣು ತೆರೆದು ನಿಂತಿಹನಲ್ಲಒಳಗಣ್ಣವು ಮುಚ್ಚಿವೆಯಲ್ಲ ಮನುಷ್ಯತ್ವವನೇ ಮರೆತಿಹೆವಲ್ಲಮಂಗನ ಜೊತೆ ಬೆರೆತಿಹೆವಲ್ಲ,ಈ ಜನ್ಮ‌ ದೊಡ್ಡದು ಅನತಾರಲ್ಲದಡ್ಡರಂತೆಯೇ ಬದುಕಿಹೆವಲ್ಲ ಎಮ್ಮಾರ್ಕೆ

ಮನುಷ್ಯನೇಕೆ ಹೀಗೆ? ಎಮ್ಮಾರ್ಕೆ Read Post »

ಕಾವ್ಯಯಾನ

“ಪೊಡವಿ ಸಗ್ಗ” ಏಳೆ ಕವನ-ಗುಣಾಜೆ ರಾಮಚಂದ್ರ ಭಟ್

ಕಾವ್ಯ ಸಂಗಾತಿ ಗುಣಾಜೆ ರಾಮಚಂದ್ರ ಭಟ್ “ಪೊಡವಿ ಸಗ್ಗ” ಏಳೆ ಕವನ-*ಛಂದಸ್ಸು: ಏಳೆ:೫೪೩/543/ ಜಗವಿದು ನಮ್ಮದು ಸೊಗಸಿದೆ ಕಾಣಲುಖಗಗಳ ಕಂಡು ಗಗನದಿ.. ಮೂಡುವ ನೇಸರ ಬಾಡದ ಚೇತನಕಾಡಿನ ಹಸಿರು ನಂದನ .. ನೀಲಿಯ ಕಡಲಿದೆ ನಾಲೆಯ ಹರಿವಿದೆಕಾಲನ ನಡೆಯು ಸಂತತ .. ಹರಿಯುವ ನದಿಗಳು ಕರೆಯುವ ಹಸುಗಳುಸುರಿಸುವ ನೋಟ ಸುಂದರ ಕೆಂಪಿನ ಹೂಗಳು ಕಂಪನು ಪಸರಿಸಿತಂಪನು ನೀಡಿ ಸಾನಂದ.. ಬಣ್ಣದ ಕುಸುಮವು ಕಣ್ಣನು ತುಂಬುತಬಣ್ಣಿಸೆ ಕವನ ಹೊಳಪಂತೆ.. ಮಿಗಗಳು ಕೋಟಿಯ ಅಗಣಿತ ಲೆಕ್ಕದಿಮಿಗಿಲಾದ ಸೃಷ್ಟಿ ವಿಸ್ಮಯ ಜೀವಿಗೆ ಬಾಳಲು ನಾವಿಹ ಭೂಮಿಯೆತಾವಿದು ಸಗ್ಗ ನಮಗೆಲ್ಲ.. ಮಾನವ ಶ್ರೇಷ್ಠನು ದಾನವನಾದರೆಕಾನನ ರಾಜ್ಯ ತಪ್ಪದು.. ——– ಗುಣಾಜೆ ರಾಮಚಂದ್ರ ಭಟ್

“ಪೊಡವಿ ಸಗ್ಗ” ಏಳೆ ಕವನ-ಗುಣಾಜೆ ರಾಮಚಂದ್ರ ಭಟ್ Read Post »

ಕಾವ್ಯಯಾನ

“ನೀತಿ ನಿಯಮ” ಹಮೀದ್ ಹಸನ್ ಮಾಡೂರು

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನೀತಿ ನಿಯಮ” ಹಗೆಯ ಸಾಧಿಸ ಬೇಡ,ಜಿದ್ದಿಗೆ ಹೊರಳಾಡ ಬೇಡ,ತಗ್ಗಿ ಮುನ್ನಡೆದರೆ ಜಯವಿದೆ,! ಶತ್ರುತ್ವವೆಂದೂ ಬೇಡ,ಸಂಶಯಕ್ಕೆ ಎಡೆಯು ಬೇಡ,ಅರಿತು ಬಾಳಿದಾಗ ಜಯವಿದೆ,! ಮಿತ್ರತ್ವವೇ ಮುತ್ತಿನ ಹಾರ,ದುಷ್ಟ ಶಕ್ತಿಗಳ ಅದು ಸಂಹಾರ,ಬೆರೆತು ಬಾಳಲು ನಮಗೆ ಜಯವಿದೆ.! ದೇವನೆಂದೂ ಗೊಂದಲವಲ್ಲ,ಧರ್ಮವೆಂದೂ ಕಚ್ಚಾಡಿ ಕೊಳ್ಳಲಲ್ಲ,ನೀತಿ ನಿಯಮ ಪಾಲಿಸಲು ಜಯವಿದೆ.! ಹಮೀದ್ ಹಸನ್ ಮಾಡೂರು.

“ನೀತಿ ನಿಯಮ” ಹಮೀದ್ ಹಸನ್ ಮಾಡೂರು Read Post »

You cannot copy content of this page

Scroll to Top