ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಗವಿದು ನಮ್ಮದು ಸೊಗಸಿದೆ ಕಾಣಲು
ಖಗಗಳ ಕಂಡು ಗಗನದಿ..

ಮೂಡುವ ನೇಸರ ಬಾಡದ ಚೇತನ
ಕಾಡಿನ ಹಸಿರು ನಂದನ ..

ನೀಲಿಯ ಕಡಲಿದೆ ನಾಲೆಯ ಹರಿವಿದೆ
ಕಾಲನ ನಡೆಯು ಸಂತತ ..

ಹರಿಯುವ ನದಿಗಳು ಕರೆಯುವ ಹಸುಗಳು
ಸುರಿಸುವ ನೋಟ ಸುಂದರ

ಕೆಂಪಿನ ಹೂಗಳು ಕಂಪನು ಪಸರಿಸಿ
ತಂಪನು ನೀಡಿ ಸಾನಂದ..

ಬಣ್ಣದ ಕುಸುಮವು ಕಣ್ಣನು ತುಂಬುತ
ಬಣ್ಣಿಸೆ ಕವನ ಹೊಳಪಂತೆ..

ಮಿಗಗಳು ಕೋಟಿಯ ಅಗಣಿತ ಲೆಕ್ಕದಿ
ಮಿಗಿಲಾದ ಸೃಷ್ಟಿ ವಿಸ್ಮಯ

ಜೀವಿಗೆ ಬಾಳಲು ನಾವಿಹ ಭೂಮಿಯೆ
ತಾವಿದು ಸಗ್ಗ ನಮಗೆಲ್ಲ..

ಮಾನವ ಶ್ರೇಷ್ಠನು ದಾನವನಾದರೆ
ಕಾನನ ರಾಜ್ಯ ತಪ್ಪದು..

——–

ಗುಣಾಜೆ ರಾಮಚಂದ್ರ ಭಟ್

About The Author

Leave a Reply

You cannot copy content of this page

Scroll to Top