ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತರಹಿ ಗಜಲ್
( ಸಾನಿ ಮಿಸ್ರಾ ಗೋವಿಂದ ಹೆಗಡೆ ಸರ್ ಅವರದ್ದು
 ಮನವನು ಚೂರೂ ಕಲಕದಿದ್ದರೆ ಅದೆಂಥ ಕವಿತೆ,,,)

ಹಳೆಯ ನೆನಪೊಂದ ಕೆದಕದಿದ್ದರೆ ಅದೆಂಥ ಕವಿತೆ
ಮನವನು ಚೂರೂ ಕಲಕದಿದ್ದರೆ ಅದೆಂಥ ಕವಿತೆ

ಬರೀ ಪದ, ಪ್ರಾಸಗಳ ಆಟ ಬರವಣಿಗೆಯೇ
ಭಾವನೆಯೊಂದನು ಬಡಿದೆಬ್ಬಿಸದಿದ್ದರೆ ಅದೆಂಥ ಕವಿತೆ

ತನ್ನ ಗಾಯವನೇ  ಗುನುಗುತಿದ್ದರೆ ಹಾಡಾಗುವುದೇ
ಅನ್ಯರ ನೋವ  ಸಂತೈಸದಿದ್ದರೆ  ಅದೆಂಥ ಕವಿತೆ

ಚಂದ್ರ ತಾರೆ , ಮಳೆ , ಬಿಸಿಲು, ಭೂಮಿ , ಬಾನು
ಪ್ರಕೃತಿ ಹಾಳೆಯಲಿ ಹೊಳೆಯದಿದ್ದರೆ ಅದೆಂಥ ಕವಿತೆ

ತಲ್ಲಣಿಸುತಿದೆ ಜಗವು ವಿಕೃತ , ವಿಕಾರಗಳಿಂದ
ಮರೆತ ಮಾನವತೆ ಮರಳಿಸದಿದ್ದರೆ ಅದೆಂಥ ಕವಿತೆ

ಒಡೆದು ಹೋಳಾಗುತಿದೆ ಮನುಕುಲ ಧರ್ಮದ ಹೆಸರಲಿ
ಮನುಜರೆದೆಯಲಿ ಪ್ರೀತಿ ಬಿತ್ತದಿದ್ದರೆ ಅದೆಂಥ ಕವಿತೆ

ಅಹಂಕಾರದ ಬೇಡಿಯಿಂದ ಮುಕ್ತವಾಗಲಿ ಆತ್ಮ ‘ವಾಣಿ’
ಅರಿವಿಗೆ ಜಡಿದ ಅಗುಳಿ ಸಡಿಲಿಸದಿದ್ದರೆ ಅದೆಂಥ ಕವಿತೆ

ವಾಣಿ ಯಡಹಳ್ಳಿಮಠ

About The Author

2 thoughts on “ವಾಣಿ ಯಡಹಳ್ಳಿಮಠ ಅವರ‌ ತರಹಿ ಗಜಲ್”

  1. SangeetaD ChiChure Aland

    ನೈಜ ವಿಚಾರಗಳು, ಬದುಕಿನ ಮೌಲ್ಯ, ಸಾರ್ಥಕ ಜೀವನ ಇನ್ನು ಮುಂತಾದ ಮೌಲ್ಯವನ್ನು ವಾಣಿ ಮೆಡಂ ಅವರು ತಮ್ಮ ಕವಿತೆಯಲ್ಲಿ ಬರೆದಿದ್ದಾರೆ. ಕವಿತೆಯನ್ನು ಓದಿ ಮನಸ್ಸು ತೃಪ್ತವಾಯಿತ್ತು

Leave a Reply

You cannot copy content of this page

Scroll to Top