ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಅವತ್ತು ಇದೇ ಹಾದಿಯಲ್ಲಿ
ಪುರುಷ ಕಣ್ಣಿನ ನೇತ್ರ ಚೆಲುವೆ
ನಿಟ್ಟಿಸಿರು ಬಿಟ್ಟು ಹಂಬಲಿಸಿದ್ದು
ಸೆರಗೊಡ್ಡಿ ಬೇಡಿದ್ದು
ಕಣ್ಣಿಗೆ ಕಾಣಲಿಲ್ಲವೇನು ?

 ಅಳುವ ಮೋರೆಯೊಳಗೆ  ಅವಳ ಕನಸ್ಸು
ಸೋತು ಕಣ್ಣು ರೆಪ್ಪೆಯೊಳಗೆ
ಹುಡುಕಿ ನಲಿಯುವ ಸೊಗಸು
ಕಾಣದ ಕೈಗಳು
ಚಿವುಟಿ ಒಗೆದಿದ್ದವು
ಕರುಣೆ ಬರಲಿಲ್ಲವೇನು ?

ಜಾನಕಿಯ ಒಲವು ರಾಮನ ಗೆಲುವು
ಹೊಟ್ಟೆಯೊಳಗೆ ಕಂದಮ್ಮಗಳು
ಕಾನನದ ಪಯಣದಲಿ ಒಂಟಿ
ಕರ್ಕಶ ಶಬ್ದ ಪ್ರಾಣಿ ಪಕ್ಷಿಗಳಂತೆ
ಬಿಟ್ಟು ಹೊರಟು ಹೋದ ಸೌಮಿತ್ರಿ
ದುಃಖ ಬರಲಿಲ್ಲವೇನು ?

ಪೌರುಷ ಮೃದು ಹೃದಯಿದುಷ್ಯಂತ
ಬರೀ ಹೆಸರಿಗೆ
ಬಿಕ್ಕುವ ಮನದಲಿ ಕಳೆದು ಹೋದ ಉಂಗುರ ಜಲದ ಮತ್ಸ್ಯಕ್ಕೆಆಹಾರ
ಅರಿವಾಗಲಿಲ್ಲವೇನು ?

ಹೊಟ್ಟೆಯೊಳಗಿನ ಕಂದ
ತನ್ನದೆಂದು ತಿಳಿಯದ ಪ್ರೇಮಿ ದುಷ್ಯಂತ
ಶಕುಂತಲೆಯ ನಿತ್ಯ ರೋಧನ
ಕಳೆದು ಸವೆಸಿದ ಇರುಳು ರಾತ್ರಿ
ಸತಿ ತನ್ನವಳೆಂದು
ಎಚ್ಚರವಾಗಲಿಲ್ಲವೇನು ?

ತಾಯಿಗೆ ಸಮ ಪಾಂಚಾಲಿ  
ಕೊಳಕು ತೊಡೆಯ ತೋರಿಸಿ
ಅವಮಾನಿಸಿದ ಭೂಪ  
ಕೌರವ ದುಶ್ಯಾಸನ
ತಾಯೊಲವಿನ ಕಿಂಕರತ್ವ.
ಅರ್ಥವಾಗಲಿಲ್ಲವೇನು ?



ಡಾ ಸಾವಿತ್ರಿ ಕಮಲಾಪೂರ

About The Author

Leave a Reply

You cannot copy content of this page

Scroll to Top