ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನ್ನದಾತಗ ಸುಖಾ ಅನ್ನೋದು ಎಲ್ಲೈತಿ ಹೇಳರಿ
ಕಂಗಾಲಾದ ಮಣ್ಣಿನ ಮಗನ ಕಷ್ಟ ಸುಖಾ ಕೇಳರಿ

ಹುಬ್ಬ ಹಾರಿಸಿ ನೋಡುವ್ಹಂಗ ಕಬ್ಬು ಬೆಳದಾನರಿ
ಕಬ್ಬಿನ ಬಿಲ್ ಕಮ್ಮಿ ಕೊಡ್ತಾರ ಕುಂತ ಅಳತಾನರಿ

ಬೀದಿಗಿಳಿದು ಹೋರಾಡುವಂತ ಪರಿಸ್ಥಿತಿ ಬಂದೈತಿ
ಭರವಸೆ ಇಟ್ಟ ರೈತನ ಬದುಕು ಬೆಂಕ್ಯಾಗ ನಿಂತೈತಿ

ಸರ್ಕಾರ ಕೂಡ ಕಂಡು ಕಂಡು ಕಣ್ಮುಚ್ಚಿ ಕುಂತೈತಿ
ಮಾತಿನ್ಯಾಗ ರೈತನೇ ದೇಶದ ಬೆನ್ನೆಲುಬ ಅಂತೈತಿ

ಹರಿಸಿದ ಬೆವರು,ಸುರಿಸಿದ ಕಣ್ಣೀರಿನ‌ ಕಥಿ ಕೇಳರಿ
ಅನ್ನದಾತಗ ಬೆಂಬಲ ನೀಡಿ ಜೊತೆಯಲಿ ಬಾಳರಿ

ಅನ್ನದಾತೋ ಸುಖೀಭವ ಅನ್ನೋದೆಲ್ಲ ಸುಳ್ಳೆ ಐತಿ
ಅನ್ನದಾತೋ ದುಃಖೀಭವ ಅನ್ನೋದೀಗ ಖರೆ ಐತಿ


About The Author

Leave a Reply

You cannot copy content of this page

Scroll to Top