ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ದಾರಿಹೋಕರ ತಡೆದು
ಇದ್ದದೆಲ್ಲವ  ಕಸಿದು
ಮಡದಿ ಮಕ್ಳಳನು
ಸಲಹಿದೆ ಸಂತಸದಿ

ಎಷ್ಟು ದಿನಗಳು ಹೀಗೆ
ಕಳೆದವು ಅಂಧಕಾರದಿ
ಬಂದರಲ್ಲಿಗೆ ನಾರದರು
ಅರಿವಿನ ಬೆಳಕು ನೀಡಲು

ತಿಳಿಯ ಹೇಳಲು ಕೇಳದೆ
ಮಂಕುಬಡಿದು ಬುದ್ದಿಗೆ
ನೀನು ಮಾಡಿದ ಪಾಪಕೆ
ಸತಿ-ಸುತರು ಭಾಗಿಗಳೇನು

ಅಪಾರ ಭರವಸೆಯು
ನಿನಗೆ ಮಕ್ಕಳು ಹೆಂಡಿರಲಿ
ನಕ್ಕು ಸಾಗಿದೆ ಮನೆಯ ಕಡೆ
ಸಿಗಲಿಲ್ಲ  ನಿನ್ನ ಮಾತಿಗಲ್ಲಿ  ಬೆಲೆ

ಗರ ಬಡಿದವರಂತೆ
ನಿರ್ಲಿಪ್ತ, ನಿರ್ಲೇಪವು
ಮನವು ಶಾಂತಿಯೆಡೆಗೆ
ತನುವಿನ ಕೋಪವಿರದೆ

ಮುನಿಯ ಎದುರಿಗೆ
ಬಂದು ನಿಂತೆ ಕ್ಷಮೆಗಾಗಿ
ಕಣ್ಣೀರು ಹರಿಯಿತಲ್ಲಿ
ಕಣ್ಣು ತೆರೆಸಿದ ಪ್ರಸಂಗ

ಹಿಡಿದೆ ನೀನು ಮುಕ್ತಿ ಮಾರ್ಗ
ರಾಮನಾಮ ಹಿಂದು ಮುಂದೆ
ಜಪಿಸುತಲಿ ಲೋಕಬಾಧೆಯ
ಮರೆವು, ತನ್ನರಿವಿನ ನಿಲುವು

ಪಾಪಿಗೂ ಉದ್ಧಾರವಿದೆ ಇಲ್ಲಿ
ಅಂತರಂಗದ ಅರಿವಿನ ಶುದ್ಧತೆ
ತನ್ನ ತಪ್ಪುಗಳನು ತಾನೇ ತಿದ್ದಿ
ತನ್ನೊಳಗಿನ ಶಕ್ತಿಗೆ ಆಹ್ವಾನ

ಪ್ರಪಂಚದ ಪರಿವೆಯಿಲ್ಲದೆ
ಹಸಿವು ತೃಷೆ, ಶಯನಗಳು
ಮರೆತು ಹೋಗಿ ಕುಳಿತುದಕೆ
ಹುತ್ತ ಬೆಳೆದು ಕಾಯ ಮಾಯ

ಮರಳಿ ಬಂದ ನಾರದರಿಗೆ
ಗುರುತು ಸಿಗದೆ ಹುಡುಕಿ ಸುಸ್ತು
ಸುತ್ತಲೂ ಮೆಲ್ಲದನಿಯ ರಾಮ
ತಿರುಗಿ ಬಾರಿ ಬಾರಿಗೆ ಮರಾ

ದಿಗ್ಭ್ರಮೆ ಮುನಿಗೆ ಚಣವು
ಈ ಪರಿವರ್ತನೆ, ಇನ್ನೇನು
ಇಂದಿನಿಂದ ನೀನು ವಲ್ಮೀಕ
ಬರೆ ನೀನು ರಾಮಾಯಣವ

ಹರಸಿ ಹೋದರು ನಾರದರು
ಒರೆದನೊಂದು ಮಹಾಕಾವ್ಯ
ಶ್ರೀರಾಮ ಕಥೆಯ ಅದ್ಭುತ
ಅಂದು ಇಂದು ಎಂದಿಗೂ..


About The Author

Leave a Reply

You cannot copy content of this page

Scroll to Top